AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025ರಲ್ಲಿ ಭಾರತ-ಪಾಕ್ ಯುದ್ಧ ಹೇಗಾಗುತ್ತೆ, ಏನೇನು ಅನಾಹುತ? ಬೆಚ್ಚಿಬೀಳಿಸುತ್ತದೆ 2019ರ ಅಧ್ಯಯನದ ವರದಿ

2019 Routledge research report had predicted India Pakistan war in 2025: ಭಾರತ ಮತ್ತು ಪಾಕಿಸ್ತಾನ ಮಧ್ಯೆ 2025ರಲ್ಲಿ ಯುದ್ಧವಾಗುತ್ತದೆ ಎಂದು 2019ರ ಅಧ್ಯಯನ ವರದಿಯೊಂದು ಅಂದಾಜು ಮಾಡಿತ್ತು. ಭೀಕರ ಉಗ್ರದಾಳಿಯೊಂದರಿಂದ ಯುದ್ಧದ ಕಿಡಿ ಹೊತ್ತಿಕೊಳ್ಳುತ್ತದೆ ಎಂದು ರೂಟ್ಲೆಡ್ಜ್ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿತ್ತು. ಭಾರತ ಮತ್ತು ಪಾಕ್ ನಡುವಿನ ಸಂಘರ್ಷವು ಪರಮಾಣ ಅಸ್ತ್ರ ಬಳಕೆಗೆ ಕಾರಣವಾಗಬಹುದು ಎನ್ನುವ ಭಯಂಕರ ವಿಚಾರವನ್ನು ಈ ವರದಿಯಲ್ಲಿ ಅಂದಾಜಿಸಲಾಗಿದೆ.

2025ರಲ್ಲಿ ಭಾರತ-ಪಾಕ್ ಯುದ್ಧ ಹೇಗಾಗುತ್ತೆ, ಏನೇನು ಅನಾಹುತ? ಬೆಚ್ಚಿಬೀಳಿಸುತ್ತದೆ 2019ರ ಅಧ್ಯಯನದ ವರದಿ
ಭಾರತ ಪಾಕಿಸ್ತಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 09, 2025 | 4:53 PM

ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬಹುತೇಕ ಪೂರ್ಣ ಪ್ರಮಾಣದ ಯುದ್ಧ (India Pakistan war) ಶುರುವಾಗುವ ರೀತಿಯ ಪ್ರಚೋದನಾತ್ಮಕ ಘರ್ಷಣೆಗಳು ನಡೆಯುತ್ತಿವೆ. ಕ್ಷಿಪಣಿಗಳು, ಡ್ರೋನ್​​ಗಳ ದಾಳಿ ಯಥೇಚ್ಛವಾಗಿ ನಡೆದಿವೆ. ಅಚ್ಚರಿ ಎಂದರೆ, ರೂಟ್ಲೆಡ್ಜ್ ಎನ್ನುವ ಬ್ರಿಟಿಷ್ ಪುಸ್ತಕ ಮುದ್ರಣ ಸಂಸ್ಥೆ 2019ರಲ್ಲಿ ಪ್ರಕಟಿಸಿದ ಒಂದು ಸಂಶೋಧನಾ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಸಾಧ್ಯತೆ ಬಗ್ಗೆ ಬರೆಯಲಾಗಿದೆ. ಯುದ್ಧ ಹೇಗೆ ಶುರುವಾಗಬಹುದು, ಹೇಗೆ ವಿಕೋಪಕ್ಕೆ ತಿರುಗಬಹುದು ಎನ್ನುವ ಸಂಗತಿಯನ್ನು ಈ ಅಧ್ಯಯನದಲ್ಲಿ ಎಳೆ ಎಳೆಯಾಗಿ ಬಿಡಿಸಿ ಅಂದಾಜು ಮಾಡಲಾಗಿದೆ.

ರೂಟ್ಲೆಡ್ಜ್ ಸಂಶೋಧನಾ ವರದಿಯಲ್ಲಿ ಹೇಳಿರುವುದೇನು?

2025ರಲ್ಲಿ ಭಾರತದೊಳಗೆ ದೊಡ್ಡ ಮಟ್ಟದ ಉಗ್ರ ದಾಳಿ ಸಂಭವಿಸುತ್ತದೆ. ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಕ್ಕೆ ಕಿಡಿ ಹೊತ್ತಿಕೊಳ್ಳುತ್ತದೆ ಎಂದು 2019ರಲ್ಲೇ ಈ ರೀಸರ್ಚ್ ವರದಿ ಹೇಳಿತ್ತು. ಆರು ವರ್ಷದ ಹಿಂದೆ ಹೇಳಿದ ರೀತಿಯಲ್ಲೇ ಈಗ ಪಹಲ್ಗಾಂ ಉಗ್ರ ದಾಳಿಯು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷದ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿರುವುದು ಕುತೂಹಲ.

ಪರಮಾಣು ಬಾಂಬ್ ದಾಳಿಗಳಾಗುತ್ತವಂತೆ, ಹುಷಾರ್…!

ರೂಟ್ಲೆಡ್ಜ್ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಲಾಗಿದೆ.

ಇದನ್ನೂ ಓದಿ
Image
ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ 15 ಬಿಲಿಯನ್ ಡಾಲರ್​​​ಗೆ ಕುಸಿತ
Image
Operation Sindoor​: ಕೇಂದ್ರ ಸರ್ಕಾರ, ಭಾರತೀಯ ಸೇನೆಗೆ RSS ಅಭಿನಂದನೆ
Image
ಟರ್ಕಿಶ್ ಏರ್​​ಲೈನ್ಸ್ ಜೊತೆ ಸಹಭಾಗಿತ್ವ ಕಡಿದ ಭಾರತೀಯ ಕಂಪನಿ
Image
ಇವತ್ತಿನ ಷೇರುಬಜಾರು ಭಾರತಕ್ಕೆ ಹೊಡೆತ
  • ಉಗ್ರ ದಾಳಿ ಬಳಿಕ ಗಡಿ ಭಾಗದಲ್ಲಿ ಎರಡೂ ಕಡೆಯ ಸೈನಿಕ ತುಕಡಿಗಳ ನಿಯೋಜನೆಯಾಗುತ್ತದೆ.
  • ಪಾಕಿಸ್ತಾನದ ಪಡೆಗಳು ಪಾಕಿಸ್ತಾನ ಭೂಭಾಗದೊಳಗೆ ಪ್ರವೇಶ ಮಾಡುತ್ತವೆ.
  • ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದೆದುರು ಸೋಲುವ ಭೀತಿ ಪಾಕಿಸ್ತಾನಕ್ಕೆ ಬರಬಹುದು. ಪರಿಣಾಮವಾಗಿ 10 ಪರಮಾಣು ಅಸ್ತ್ರಗಳನ್ನು ಭಾರತೀಯ ಟ್ಯಾಂಕುಗಳ ಮೇಲೆ ಬಳಸಬಹುದು.
  • ಪಾಕಿಸ್ತಾನದ ಗಡಿಯೊಳಗೆ ಈ ಅಣ್ವಸ್ತ್ರಗಳನ್ನು ಸಿಡಿಲಾಗುತ್ತದೆ. ಒಂದೊಂದು ಅಸ್ತ್ರವೂ 5 ಕಿಲೋಟನ್​ನಷ್ಟು ಪ್ರಬಲವಾಗಿರುತ್ತವೆ.
  • ಪಾಕಿಸ್ತಾನವು ಇನ್ನೂ 15 ಪರಮಾಣು ಬಾಂಬ್ ಅನ್ನು ಹಾಕಬಹುದು.
  • ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಸೇನಾ ನೆಲೆ ಮತ್ತು ಪರಮಾಣು ಘಟಕಗಳನ್ನು ಗುರಿಯಾಗಿಸಿ 20 ಪರಮಾಣು ಬಾಂಬ್ ಹಾಕಬಹುದು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್

ಈ ಮೇಲಿನವು ಮೊದಲ ಎರಡು ದಿನದಲ್ಲಿ ಸಂಭವಿಸುತ್ತವೆ. 1906ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಭೂಕಂಪ ವೇಳೆ ಸಂಭವಿಸಿದ ಅಗ್ನಿ ಅವಘಡ ಮತ್ತು ಹಿರೋಶಿಮಾದಲ್ಲಿ ಬಿದ್ದ ಬಾಂಬ್ ರೀತಿಯಲ್ಲಿ ಭಯಾನಕ ಅನುಭವವಾಗುತ್ತದಂತೆ. ಆದರೆ, ಇದು ಇಲ್ಲಿಗೆ ನಿಲ್ಲುವುದಿಲ್ಲ. ಮೂರನೇ ದಿನ ಭಾರತವು ಸಂಘರ್ಷ ಮುಂದುವರಿಸುತ್ತದೆ ಎಂದು 2019ರ ರೂಟ್ಲೆಡ್ಜ್ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ನಿಯಂತ್ರಣಕ್ಕೆ ನಿಲುಕದಂತೆ ಹೋಗುವ ಅತಿರೇಕ…

  • ಈ ವರದಿ ಪ್ರಕಾರ ಮೂರನೇ ದಿನ ಭಾರತ ಸಂಘರ್ಷ ಮುಂದುವರಿಸಿದರೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ನೌಕಾ ನೆಲೆ ಮತ್ತು ನಗರ ವಾಯುನೆಲೆಗಳ ಮೇಲೆ 45 ಅಣ್ವಸ್ತ್ರ ಬಾಂಬ್ ಹಾಕಬಹುದು.
  • ಇದಕ್ಕೆ ಪ್ರತಿಯಾಗಿ ಭಾರತವೂ 10 ಬಾಂಬ್ ಹಾಕುತ್ತದೆ. ಮುಂದಿನ ಮೂರು ದಿನದಲ್ಲಿ ಪಾಕಿಸ್ತಾವು ಭಾರತೀಯ ನಗರಗಳನ್ನು ಗುರಿಯಾಗಿಸಿ ತನ್ನೆಲ್ಲಾ 120 ಅಣ್ವಸ್ತ್ರಗಳನ್ನು ಹಾರಿಸಬಹುದು.
  • ಭಾರತವು 70 ಅಣ್ವಸ್ತ್ರ ಪ್ರಯೋಗಿಸಬಹುದು. ತನ್ನಲ್ಲಿ ಉಳಿದಿರುವ 100 ಅಸ್ತ್ರಗಳನ್ನು ಚೀನಾಗೆಂದು ಮೀಸಲಿರಿಸಿಕೊಂಡಿರುತ್ತದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಆರ್​ಎಸ್​ಎಸ್​ ಅಭಿನಂದನೆ

ಅಷ್ಟು ಅಣ್ವಸ್ತ್ರ ಬಿದ್ದರೆ ಏನಾಗಬಹುದು..?

ರೂಟ್ಲೆಡ್ಜ್ ವರದಿ ಪ್ರಕಾರ ಮೇಲೆ ಹೇಳಿದ ರೀತಿಯಲ್ಲಿ ಅಣ್ವಸ್ತ್ರಗಳ ಬಳಕೆಯಾದರೆ 5ರಿಂದ 12 ಕೋಟಿ ಜನರು ಕೂಡಲೇ ಸಾಯಬಹುದು. ಎರಡೂ ದೇಶಗಳ ಪ್ರಮುಖ ನಗರಗಳೆಲ್ಲವೂ ಸಂಪೂರ್ಣ ನಿರ್ನಾಮವಾಗಬಹುದು.

ಇದರ ಪರಿಣಾಮವು ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಜಗತ್ತಿನಾದ್ಯಂತ ಪರಿಸರಕ್ಕೆ ಹಾನಿಯಾಗುತ್ತದೆ. ಹಲವೆಡೆ ಬರ ಪರಿಸ್ಥಿತಿ ಉದ್ಭವಿಸಬಹುದು. ನೂರಾರು ಕೋಟಿ ಜನರಿಗೆ ಸಾವು ಬದುಕಿನ ಪ್ರಶ್ನೆ ಉದ್ಭವಿಸಬಹುದು ಎಂದು ಈ ರಿಸರ್ಚ್ ಸ್ಟಡಿಯಲ್ಲಿ ಅಂದಾಜಿಸಲಾಗಿದೆ.

ಸದ್ಯ, ಉಗ್ರ ದಾಳಿಯಾಗಿರುವುದು, ಅದರಿಂದ ಎರಡು ದೇಶಗಳ ಮಧ್ಯೆ ಯುದ್ಧದ ಸ್ಥಿತಿ ನಿರ್ಮಾಣವಾಗಿರುವುದು ಈ ವರದಿ ಪ್ರಕಾರವೇ ನಡೆದಿದೆ. ಮುಂದಿನ ಘಟನೆಗಳು ಪರಮಾಣು ಅಸ್ತ್ರ ಬಳಕೆ ಹಂತಕ್ಕೆ ಹೋಗದೇ ಇರಲಿ ಎಂದು ಆಶಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Fri, 9 May 25

ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!