AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಸೌದಿ ಅರೇಬಿಯಾ ಮಸೀದಿಗಳ ಒಳಗೆ ಇಫ್ತಾರ್ ನಿಷೇಧ? ಸತ್ಯಾಸತ್ಯತೆ ಏನು?

ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಮಸೀದಿಗಳಲ್ಲಿ ಇಫ್ತಾರ್ ನಡೆಯುವುದಿಲ್ಲ, ಕ್ರೌನ್ ಪ್ರಿನ್ಸ್ ಸಲ್ಮಾನ್ ನಿಷೇಧ ಹೇರಿದ್ದಾರೆ. ನಮಾಜ್ ಸಮಯದಲ್ಲಿ ಧಾರ್ಮಿಕ ಪ್ರವಚನಗಳನ್ನು ಕಡಿಮೆ ಮಾಡುವಂತೆ ಇಮಾಮ್‌ಗಳಿಗೆ ಆದೇಶಿಸಲಾಗಿದೆ ಎಂಬ ಟ್ವೀಟ್ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಫ್ಯಾಕ್ಟ್ ಚೆಕ್

Fact Check: ಸೌದಿ ಅರೇಬಿಯಾ ಮಸೀದಿಗಳ ಒಳಗೆ ಇಫ್ತಾರ್ ನಿಷೇಧ? ಸತ್ಯಾಸತ್ಯತೆ ಏನು?
ವೈರಲ್ ಟ್ವೀಟ್​​ನ ಫ್ಯಾಕ್ಟ್ ಚೆಕ್
ರಶ್ಮಿ ಕಲ್ಲಕಟ್ಟ
|

Updated on: Feb 28, 2024 | 7:57 PM

Share

ಬೆಂಗಳೂರು ಫೆಬ್ರವರಿ 28: ಸೌದಿ ಅರೇಬಿಯಾದ (Saudi Arabia) ಮಸೀದಿಗಳಲ್ಲಿ ಇನ್ನು ಮುಂದೆ ಇಫ್ತಾರ್ (Iftar) ನಡೆಯುವುದಿಲ್ಲ. ಧಾರ್ಮಿಕ ಪ್ರವಚನಗಳನ್ನು ಕಡಿಮೆ ಮಾಡಲು ಇಮಾಮ್‌ಗಳನ್ನು ಕೇಳಲಾಯಿತು. ಹೀಗೆ ನಿಷೇಧ ಹೇರಿದ್ದು ಕ್ರೌನ್ ಪ್ರಿನ್ಸ್ ಸಲ್ಮಾನ್ (Crown Prince Salman) ಎಂದು ಇತ್ತೀಚೆಗೆ ಟಿವಿ ಪತ್ರಕರ್ತ ಪ್ರಖಾರ್ ಶ್ರೀವಾಸ್ತವ ಅವರು ಎಕ್ಸ್ ನಲ್ಲಿ ಬರೆದಿದ್ದು, ಅದು ವೈರಲ್ ಆಗಿತ್ತು. “ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಮಸೀದಿಗಳಲ್ಲಿ ಇಫ್ತಾರ್ ನಡೆಯುವುದಿಲ್ಲ, ಕ್ರೌನ್ ಪ್ರಿನ್ಸ್ ಸಲ್ಮಾನ್ ನಿಷೇಧ ಹೇರಿದ್ದಾರೆ. ನಮಾಜ್ ಸಮಯದಲ್ಲಿ ಧಾರ್ಮಿಕ ಪ್ರವಚನಗಳನ್ನು ಕಡಿಮೆ ಮಾಡುವಂತೆ ಇಮಾಮ್‌ಗಳಿಗೆ ಆದೇಶಿಸಲಾಗಿದೆ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.

ಸೌದಿ ಅರೇಬಿಯಾದಲ್ಲಿ ಹೀಗೊಂದು ಆದೇಶ ನೀಡಲಾಗಿದೆಯೇ? ಇದರ ಸತ್ಯಾಸತ್ಯತೆ ಏನು ಎಂದು ಹುಡುಕಿದಾಗ DFRAC ಫ್ಯಾಕ್ಟ್ ಚೆಕ್ ಸುದ್ದಿ ಸಿಕ್ಕಿದೆ.

ಫ್ಯಾಕ್ಟ್ ಚೆಕ್

DFRAC ತಂಡವು ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ ನವ ಭಾರತ್ ಟೈಮ್ಸ್ ಮತ್ತು ಗಲ್ಫ್ ನ್ಯೂಸ್‌ನಿಂದ ಕೆಲವು ಮಾಧ್ಯಮ ವರದಿಗಳನ್ನು ಕಂಡುಹಿಡಿದಿದೆ. ಮಾಧ್ಯಮ ವರದಿಗಳ ಪ್ರಕಾರ, ರಂಜಾನ್‌ನಲ್ಲಿ ಸೂರ್ಯಾಸ್ತದ ಸಮಯದಲ್ಲಿ ನೀಡಲಾಗುವ ಇಫ್ತಾರ್ ಮಸೀದಿಗಳ ಒಳಗೆ ನಡೆಯಬಾರದು ಮತ್ತು ಬದಲಿಗೆ ಅಂಗಳದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ನಡೆಸಬೇಕು. ಮಸೀದಿ ಸ್ವಚ್ಛವಾಗಿಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ.

ಇದಲ್ಲದೆ, ರಂಜಾನ್‌ನಲ್ಲಿ ನೀಡಲಾಗುವ ತರಾವೀಹ್ ಪ್ರಾರ್ಥನೆಯ ಸಮಯವನ್ನು ಹೆಚ್ಚಿಸುವುದನ್ನು ತಪ್ಪಿಸಲು ಮತ್ತು ಆರಾಧಕರಿಗೆ ಪ್ರಯೋಜನಕಾರಿಯಾದ ಧರ್ಮೋಪದೇಶಗಳನ್ನು ನೀಡಲು ಇಮಾಮ್‌ಗಳನ್ನು ಒತ್ತಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವಿಶೇಷವಾಗಿ ಉಪವಾಸದ ನಿಯಮಗಳು ಮತ್ತು ಪವಿತ್ರ ತಿಂಗಳ ರಂಜಾನ್‌ನ ಅರ್ಹತೆಗಳನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಅಕ್ರಮ ಗಣಿಗಾರಿಕೆ ಪ್ರಕರಣ: ಅಖಿಲೇಶ್ ಯಾದವ್​​ಗೆ ಸಿಬಿಐ ಸಮನ್ಸ್

ವೈರಲ್ ಟ್ವೀಟ್ ತಪ್ಪು ಮಾಹಿತಿಯಿಂದ ಕೂಡಿದ್ದು

ಮಸೀದಿಗಳನ್ನು ಸ್ವಚ್ಛವಾಗಿಡಲು ಇಫ್ತಾರ್ ಕೂಟಗಳನ್ನು ನಡೆಸಬಾರದು ಮತ್ತು ರಂಜಾನ್‌ನಲ್ಲಿ ನೀಡಲಾಗುವ ತರಾವೀಹ್ ನಮಾಝಿನ ಸಮಯವನ್ನು ಹೆಚ್ಚಿಸುವುದನ್ನು ತಪ್ಪಿಸಲು ಇಮಾಮ್‌ಗಳನ್ನು ಒತ್ತಾಯಿಸಲಾಗಿದೆ ಎಂಬ ಟ್ವೀಟ್ ತಪ್ಪು ಮಾಹಿತಿಯಿಂದ ಕೂಡಿದ್ದಾಗಿದೆ ಎಂಬುದು ಇಲ್ಲಿ ಸ್ಪಷ್ಟ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ