AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಗದ ಬಳಕೆ ಕಡಿತಗೊಳಿಸಲು ನಿರ್ಧಾರ; ಕಾಗದದ ಆರ್ಥಿಕ ಬಳಕೆಯ ಕುರಿತು ವರದಿ ಕೇಳಿದ ಲೋಕಸಭೆ

ಜನವರಿ 21 ರೊಳಗೆ ವರದಿಗಳನ್ನು ಒದಗಿಸಲಾಗುವುದು ಮತ್ತು ನಂತರ ಕಾಗದದ ಬಳಕೆಯನ್ನು ಕಡಿತಗೊಳಿಸುವುದು ಲೋಕಸಭೆಯ ಕಾರ್ಯದರ್ಶಿಯ ವಾರ್ಷಿಕ ವರದಿಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಗದ ಬಳಕೆ ಕಡಿತಗೊಳಿಸಲು ನಿರ್ಧಾರ; ಕಾಗದದ ಆರ್ಥಿಕ ಬಳಕೆಯ ಕುರಿತು ವರದಿ ಕೇಳಿದ ಲೋಕಸಭೆ
ಸಂಸತ್ ಭವನ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 19, 2022 | 12:51 PM

Share

ದೆಹಲಿ: ಸಂಸತ್ ವ್ಯವಹಾರಗಳು ಹೆಚ್ಚೆಚ್ಚು ಪರಿಸರಸ್ನೇಹಿ ಆಗಲು ಬಯಸುತ್ತಿರುವಂತೆ ಕಾಗದದ ಆರ್ಥಿಕ ಬಳಕೆಯ ಕುರಿತು ತ್ರೈಮಾಸಿಕ ವರದಿಗಳನ್ನು ಒದಗಿಸುವಂತೆ ಲೋಕಸಭೆಯ (Loksabha) ಸೆಕ್ರೆಟರಿಯೇಟ್ ಕಳೆದ ವಾರ ತನ್ನ ಶಾಖೆಗಳನ್ನು ಕೇಳಿದೆ. 2021 ರ ಕೊನೆಯ ಎರಡು ತ್ರೈಮಾಸಿಕಗಳಿಗೆ ಅಗತ್ಯವಾದ ತ್ರೈಮಾಸಿಕ ವರದಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯ ಶಾಖೆಗಳು, ವಿಭಾಗಗಳು, ಘಟಕಗಳಿಂದ ಸ್ವೀಕರಿಸಲಾಗಿಲ್ಲ ಎಂದು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ, ಇದರಿಂದಾಗಿ ಮುಂದಿನ ಕ್ರಮಕ್ಕೆ ಅಡ್ಡಿಯಾಗುತ್ತಿದೆ, ”ಎಂದು ಲೋಕ ಸಭಾ ಸುತ್ತೋಲೆಯಲ್ಲಿ ಹೇಳಲಾಗಿದೆ. ಜನವರಿ 21 ರೊಳಗೆ ವರದಿಗಳನ್ನು ಒದಗಿಸಲಾಗುವುದು ಮತ್ತು ನಂತರ ಕಾಗದದ ಬಳಕೆಯನ್ನು ಕಡಿತಗೊಳಿಸುವುದು ಲೋಕಸಭೆಯ ಕಾರ್ಯದರ್ಶಿಯ ವಾರ್ಷಿಕ ವರದಿಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಎಲೆಕ್ಟ್ರಿಕ್ ಕಾರುಗಳು, ಬ್ಯಾಟರಿ ಚಾಲಿತ ಗಾಲ್ಫ್ ಕಾರ್ಟ್‌ಗಳು ಮತ್ತು ಎಲ್‌ಇಡಿ ಲ್ಯಾಂಪ್‌ಗಳ ಬಳಕೆಯಿಂದ ಸಂಸತ್ತಿನ ಸಂಕೀರ್ಣವು ಪರಿಸರ ಸ್ನೇಹಿ ಆಗಿದೆ. ಅನೇಕ ಸೂಚನೆಗಳು, ಬುಲೆಟಿನ್‌ಗಳು ಮತ್ತು ವರದಿಗಳು ಈಗ ಆನ್‌ಲೈನ್‌ನಲ್ಲಿ ಪ್ರಕಟವಾಗುವುದರಿಂದ ಈಗಾಗಲೇ ಸಂಸತ್​​ನಲ್ಲಿ ಕಾಗದದ ಬಳಕೆಯನ್ನು ನಿರ್ಬಂಧಿಸಲಾಗಿದೆ. ಶಾಸಕರು ಆನ್‌ಲೈನ್ ನೋಟಿಸ್‌ಗಳನ್ನು ಸಲ್ಲಿಸಲು ಮತ್ತು ಪ್ರಶ್ನೋತ್ತರ ಅವಧಿಗೆ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲು ಹೊಸ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ.

ಈ ಮೊದಲು ಅವರು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿತ್ತು ಅಥವಾ ಲಿಖಿತ ಸೂಚನೆಗಳನ್ನು ಸಲ್ಲಿಸಬೇಕಾಗಿತ್ತು.  ಹೊಸ ಸಂಸತ್ ಕಟ್ಟಡವು ಅನೇಕ ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನೊಳಗೊಂಡಿದೆ. ಡಿಜಿಟಲ್ ಚಾಲಿತ ಸಂಸತ್​​ಗಾಗಿ ಹೊಸ ಇ-ಸಂಸದ್ ಉಪಕ್ರಮವನ್ನು ಸರ್ಕಾರ ಯೋಚಿಸಿದೆ. ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನಕ್ಕೆ ಸುಧಾರಿತ ತಾಂತ್ರಿಕ ಸಾಮರ್ಥ್ಯಗಳನ್ನು ಪರಿಚಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಉಪಕ್ರಮದ ಬಗ್ಗೆ ತಿಳಿದಿರುವ ಸಂಸದರೊಬ್ಬರು ಹೇಳಿದರು. “ಈ ವ್ಯವಸ್ಥೆಯು ಪ್ರಪಂಚದಾದ್ಯಂತದ ಹಲವಾರು ಸಂಸತ್ ಗಳ ಅತ್ಯುತ್ತಮ ಅಭ್ಯಾಸಗಳಿಂದ ಎರವಲು ಪಡೆಯುತ್ತದೆ ಮತ್ತು ಎಸ್ಟೋನಿಯನ್ ಮಾದರಿ ಮತ್ತು ಇತರ ಎರಡು ದೇಶಗಳಿಂದ ಉದಾಹರಣೆಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹೆಸರು ಹೇಳಲು ಬಯಸದ ಸಂಸದರೊಬ್ಬರು ಹೇಳಿದ್ದಾರೆ.

ಇ-ಸಂಸದ್ ಅಂತರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಾದ “ಪರಿಸರ ವ್ಯವಸ್ಥೆಯು ಕೇಂದ್ರೀಕೃತ ಎಲೆಕ್ಟ್ರಾನಿಕ್ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅದು ಎಂಡ್ ಟು ಎಂಡ್ ಮಾಹಿತಿ ಹರಿವನ್ನು ಸುಗಮಗೊಳಿಸುತ್ತದೆ. ಇದು ನ್ಯೂಟ್ರಲ್ ಆಗಿದ್ದು ಮಧ್ಯಸ್ಥಗಾರರ ನಡುವೆ ಸುರಕ್ಷಿತ ವಿನಿಮಯವನ್ನು ಖಚಿತಪಡಿಸಿಕೊಳ್ಳಲು ಮುಕ್ತವಾಗಿದೆ” ಎಂದು ದಾಖಲೆಯೊಂದರಲ್ಲಿ ಹೇಳಿರುವುದಾಗಿ 2021 ಡಿಸೆಂಬರ್20ರಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಯೋಜನೆಯು ಆರಂಭಿಕ ಹಂತದಲ್ಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಹರಿವನ್ನು ಸುಗಮಗೊಳಿಸುವ ಒಂದು ಸಂಯೋಜಿತ ವೇದಿಕೆಯನ್ನು ಸರ್ಕಾರ ನೋಡುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:  ಬಿಜೆಪಿ ಸೇರಿದ ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ; ಈಕೆ ಗಾಯಕಿ, ಪ್ರಾಣಿ ಪ್ರೇಮಿ ಮತ್ತು ಮಹತ್ವಾಕಾಂಕ್ಷಿ ರಾಜಕಾರಣಿ

Published On - 12:35 pm, Wed, 19 January 22

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?