ಅಯೋಧ್ಯೆಯಿಂದ ಕಾಶಿಗೆ ‘ರಾಮಜ್ಯೋತಿ’ ತರಲಿದ್ದಾರೆ ವಾರಣಾಸಿಯ ಇಬ್ಬರು ಮುಸ್ಲಿಂ ಮಹಿಳೆಯರು

ಈ ಮುಸ್ಲಿಂ ಮಹಿಳೆಯರ ಅಯೋಧ್ಯೆಯ ಪ್ರಯಾಣಕ್ಕೆ ಕಾಶಿಯ ದೊಮ್ರಾಜ್ ಓಂ ಚೌಧರಿ ಮತ್ತು ಪಾತಾಳಪುರಿ ಮಠದ ಮಹಂತ್ ಬಾಲಕ್ ದಾಸ್ ಚಾಲನೆ ಮಾಡಲಿದ್ದಾರೆ. ಜ್ಯೋತಿಯನ್ನು ಮಹಂತ್ ಶಂಭು ದೇವಾಚಾರ್ಯರು ಅಯೋಧ್ಯೆಯಲ್ಲಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಇವರಿಬ್ಬರು ಭಾನುವಾರ ರಾಮಜ್ಯೋತಿಯೊಂದಿಗೆ ಅಯೋಧ್ಯೆಯ ಪವಿತ್ರ ಮಣ್ಣು ಮತ್ತು ಸರಯೂ ನದಿಯಿಂದ ಪವಿತ್ರ ನೀರನ್ನು ತರಲಿದ್ದಾರೆ.

ಅಯೋಧ್ಯೆಯಿಂದ ಕಾಶಿಗೆ ‘ರಾಮಜ್ಯೋತಿ’ ತರಲಿದ್ದಾರೆ ವಾರಣಾಸಿಯ ಇಬ್ಬರು ಮುಸ್ಲಿಂ ಮಹಿಳೆಯರು
ರಾಮ ಮಂದಿರ
Follow us
|

Updated on: Jan 06, 2024 | 8:07 PM

ಅಯೋಧ್ಯೆ ಜನವರಿ 06: ರಾಮ ಮಂದಿರದ (Ram mandir) ಉದ್ಘಾಟನೆಗೂ ಮುನ್ನ ವಾರಣಾಸಿಯಿಂದ (Varanasi) ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಎಂಬ ಇಬ್ಬರು ಮುಸ್ಲಿಂ ಮಹಿಳೆಯರು ಕಾಶಿಗೆ ‘ರಾಮಜ್ಯೋತಿ’ ತರಲು ಅಯೋಧ್ಯೆಗೆ (Ayodhya)ಪ್ರಯಾಣ ಬೆಳೆಸಿದರು. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ಭಗವಾನ್ ರಾಮನ ಆತ್ಮವನ್ನು ಸಂಕೇತಿಸುವ ಜ್ಯೋತಿಯನ್ನು ಮುಸ್ಲಿಂ ಪ್ರದೇಶಗಳ ಮೂಲಕ ಭಗವಾನ್ ರಾಮನು ತಮ್ಮ ಪೂರ್ವಜ ಮತ್ತು ಪ್ರತಿಯೊಬ್ಬ ಭಾರತೀಯನ ಡಿಎನ್‌ಎ ಒಂದೇ ಎಂಬ ಸಂದೇಶವನ್ನು ರವಾನಿಸುತ್ತದೆ.

ಇವರಿಬ್ಬರ ಅಯೋಧ್ಯೆಯ ಪ್ರಯಾಣಕ್ಕೆ ಕಾಶಿಯ ದೊಮ್ರಾಜ್ ಓಂ ಚೌಧರಿ ಮತ್ತು ಪಾತಾಳಪುರಿ ಮಠದ ಮಹಂತ್ ಬಾಲಕ್ ದಾಸ್ ಚಾಲನೆ ಮಾಡಲಿದ್ದಾರೆ. ಜ್ಯೋತಿಯನ್ನು ಮಹಂತ್ ಶಂಭು ದೇವಾಚಾರ್ಯರು ಅಯೋಧ್ಯೆಯಲ್ಲಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಇವರಿಬ್ಬರು ಭಾನುವಾರ ರಾಮಜ್ಯೋತಿಯೊಂದಿಗೆ ಅಯೋಧ್ಯೆಯ ಪವಿತ್ರ ಮಣ್ಣು ಮತ್ತು ಸರಯೂ ನದಿಯಿಂದ ಪವಿತ್ರ ನೀರನ್ನು ತರಲಿದ್ದಾರೆ.

ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಯಾರು?

ಬಿಎಚ್‌ಯುನಿಂದ ಸಂಘರ್ಷ ನಿರ್ವಹಣಾ ವಿಷಯದಲ್ಲ ಪದವೀಧರರಾದ ನಜ್ನೀನ್ ಅನ್ಸಾರಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪಿಎಚ್‌ಡಿ ಮಾಡಿದ ನಜ್ಮಾ ಪರ್ವಿನ್ ಅವರು ಏಕತೆ ಮತ್ತು ಶಾಂತಿಯನ್ನು ಉತ್ತೇಜಿಸಲು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ. ಭಗವಾನ್ ರಾಮನ ಭಕ್ತಿಯ ಸುತ್ತ ಕೇಂದ್ರೀಕೃತವಾಗಿರುವ ಬಲಪಂಥೀಯ ಸಂಘಟನೆಯಾದ ರಾಮಪಂಥ್‌ನ ಭಾಗವಾಗಿ ಇಬ್ಬರೂ ರಾಮಭಕ್ತಿ (ರಾಮನ ಮೇಲಿನ ಭಕ್ತಿ) ಅನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ.

ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಜ್ನೀನ್, “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ. ರಾಮ ನಮ್ಮ ಪೂರ್ವಜ. ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಾಯಿಸಬಹುದು ಆದರೆ ಪೂರ್ವಜರನ್ನು ಅಲ್ಲ. ಮೆಕ್ಕಾ ಮುಸ್ಲಿಮರಿಗೆ ಇದ್ದಂತೆ, ಅಯೋಧ್ಯೆ ಹಿಂದೂಗಳಿಗೆ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇರುವವರಿಗೆ ಪವಿತ್ರ ಸ್ಥಳವಾಗಿದೆ.

17 ವರ್ಷಗಳಿಂದ ರಾಮಭಕ್ತಿಯಲ್ಲಿ ತೊಡಗಿಸಿಕೊಂಡಿರುವ ನಜ್ಮಾ ವಾರಣಾಸಿ ಮೂಲದ ಹಿಂದೂ-ಮುಸ್ಲಿಂ ಸಂವಾದ ಕೇಂದ್ರದ ಮೂಲಕ ಸರ್ವಧರ್ಮ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

2006 ರಲ್ಲಿ, ವಾರಣಾಸಿಯ ಸಂಕಟ್ ಮೋಚನ್ ದೇವಸ್ಥಾನದಲ್ಲಿ ಭಯೋತ್ಪಾದಕರು ಬಾಂಬ್ ದಾಳಿ ಮಾಡಿದಾಗ, ನಜ್ನೀನ್ ಮತ್ತು ನಜ್ಮಾ ಅವರು 70 ಮುಸ್ಲಿಂ ಮಹಿಳೆಯರೊಂದಿಗೆ ಕೋಮು ಸೌಹಾರ್ದತೆಯನ್ನು ಪುನಃಸ್ಥಾಪಿಸಲು ಹನುಮಾನ್ ಚಾಲೀಸಾವನ್ನು ಪಠಿಸಿದರು. ಅಂದಿನಿಂದ ರಾಮನವಮಿ ಮತ್ತು ದೀಪಾವಳಿಯಂದು ನೂರಾರು ಮುಸ್ಲಿಂ ಮಹಿಳೆಯರೊಂದಿಗೆ ಶ್ರೀರಾಮ ಆರತಿಯನ್ನು ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ:ರಾಮಮಂದಿರ ಉದ್ಘಾಟನೆ: ಭದ್ರತೆಗಾಗಿ ಉಡುಪಿ ವಿಜ್ಞಾನಿ ಮನೋಹರ್ ಬೈನಾಕ್ಯುಲರ್ ಬಳಕೆ! 

ರಾಜೀವ್ ಶ್ರೀಗುರೂಜಿ, ಮಹಂತ್ ಶಂಭು ದೇವಾಚಾರ್ಯ ಮತ್ತು ಮಹಂತ್ ಬಾಲಕ ದಾಸ್ ನೇತೃತ್ವದ ರಾಮ ಪರಿವಾರ ಭಕ್ತಿ ಆಂದೋಲನವು ಜನವರಿ 22 ರಂದು ಪಾತಾಳಪುರಿ ಮಠದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಚಾಲನೆ ನೀಡಿತು. ನಜ್ನೀನ್ ಮತ್ತು ನಜ್ಮಾ ಅವರು ವಾರಣಾಸಿ ಮತ್ತು ಇತರ ಜಿಲ್ಲೆಗಳ ಜನರಿಗೆ ರಾಮಜ್ಯೋತಿಯನ್ನು ಒಯ್ಯುವರು. ಜನವರಿ 7 ರಂದು ವಾರಣಾಸಿಯ ಲಮಾಹಿ ಗ್ರಾಮದ ಸುಭಾಷ್ ಭವನದಲ್ಲಿ ಮುಸ್ಲಿಂ ಸಮುದಾಯದಿಂದ ವಿಶೇಷ ಸ್ವಾಗತದೊಂದಿಗೆ ಜೌನ್‌ಪುರ ಮತ್ತು ವಾರಣಾಸಿಯ ವಿವಿಧ ಸ್ಥಳಗಳಲ್ಲಿ ರಾಮಜ್ಯೋತಿ ವಾಪಸಾತಿಯನ್ನು ಸ್ವಾಗತಿಸಲಾಗುವುದು ಎಂದು ಶ್ರೀಗುರೂಜಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ