ವಿಭಜನೆಯು ಭಾರತದ ಆತ್ಮಕ್ಕೆ ಆದ ಹೊಡೆತ, ಆ ನೋವನ್ನು ಮರೆಯಲಾಗದು; ಧರ್ಮೇಂದ್ರ ಪ್ರಧಾನ್
Story of India’s Partition Exhibition at Bhubaneswar; ‘ಭಾರತ ವಿಭಜನೆಯ ಕಥೆ’ ವಿಷಯದ ವಸ್ತುಪ್ರದರ್ಶನವನ್ನು ಒಡಿಶಾದ ಭುವನೇಶ್ವರದಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು. ಆಗಸ್ಟ್ 14 ರಿಂದ 18 ರವರೆಗೆ ಆಯೋಜಿಸಲಾಗಿರುವ ಈ ಪ್ರದರ್ಶನಕ್ಕೆ ಭೇಟಿ ನೀಡುವಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಜನರನ್ನು ವಿನಂತಿಸಿದ್ದಾರೆ.

ಭುವನೇಶ್ವರ: ಒಡಿಶಾದ (OdiSha) ಭುವನೇಶ್ವರದಲ್ಲಿ ಸೋಮವಾರ ವಿಭಜನೆ ಸಂಸ್ಮರಣಾ ದಿನದ (Partition Horrors Remembrance Day) ನಿಮಿತ್ತ ‘ಭಾರತ ವಿಭಜನೆಯ ಕಥೆ (Story of India’s Partition)’ ವಿಷಯದ ವಸ್ತುಪ್ರದರ್ಶನವನ್ನು ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಭಜನೆಯು ಭಾರತದ ಆತ್ಮಕ್ಕೆ ನೀಡಿದ ಹೊಡೆತವಾಗಿದೆ. ಅದರ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ದ್ವೇಷ ಮತ್ತು ವಿಭಜನೆಯ ಬೆಂಕಿ ಅಸಂಖ್ಯಾತ ಜನರ ಜೀವನವನ್ನು ನಾಶಪಡಿಸಿದೆ. ವಿಭಜನಾ ಸಂಸ್ಮರಣಾ ದಿನವು ವಿಭಜನೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ಎಲ್ಲರ ಹೋರಾಟ ಮತ್ತು ತ್ಯಾಗಕ್ಕೆ ನಮನ ಸಲ್ಲಿಸುವ ಸಂದರ್ಭವಾಗಿದೆ ಎಂದರು.
ಸಂಕುಚಿತ ಮನೋಭಾವ ಮತ್ತು ಸ್ವಾರ್ಥದ ರಾಜಕಾರಣದಿಂದ ಜನರು ನೋವು ಅನುಭವಿಸಬೇಕಾಯಿತು ಮತ್ತು ದೇಶವು ಬೆಲೆ ತೆರಬೇಕಾಯಿತು ಎಂದು ಪ್ರಧಾನ್ ಹೇಳಿದರು. ಇಂದಿನ ಮತ್ತು ಭವಿಷ್ಯದ ಪೀಳಿಗೆ ವಿಭಜನೆಯ ನೋವಿನ ಮಾಹಿತಿ ದೊರೆಯುವಂತೆ ಮಾಡುವುದಕ್ಕಾಗಿ ಭುವನೇಶ್ವರದಲ್ಲಿ ‘ಭಾರತ ವಿಭಜನೆಯ ಕಥೆ’ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ. ವಸ್ತುಪ್ರದರ್ಶನದಿಂದ ಸಾಮಾಜಿಕ ಸೌಹಾರ್ದತೆ ಮತ್ತು ಏಕತೆಯ ಭಾವನೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಇತಿಹಾಸವು ಕನ್ನಡಿ ಇದ್ದಂತೆ. ಅದು ಭವಿಷ್ಯದ ಮಾರ್ಗದರ್ಶಿಯೂ ಹೌದು. ಅದನ್ನು ಅರ್ಥಮಾಡಿಕೊಳ್ಳದ, ಅದನ್ನು ಅಧ್ಯಯನ ಮಾಡದ ಅಥವಾ ತಿಳಿದುಕೊಳ್ಳಲು ಪ್ರಯತ್ನಿಸದ ಸಮಾಜವು ಭವಿಷ್ಯದಲ್ಲಿ ತತ್ತರಿಸುವ ಸಾಧ್ಯತೆಗಳು ಬಹಳಷ್ಟಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಇತಿಹಾಸದ ಪುಟಗಳಲ್ಲಿ ಅಡಗಿರುವ ವೀರ ಸೇನಾನಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನ್ ಹೇಳಿದರು.
‘ಭಾರತ ವಿಭಜನೆಯ ಕಥೆ ವಸ್ತು ಪ್ರದರ್ಶನ ಉದ್ಘಾಟಿಸಿದ ಧರ್ಮೇಂದ್ರ ಪ್ರಧಾನ್
At the inauguration of exhibition on ‘Story of India’s Partition’ on the occasion of #PartitionHorrorsRemembranceDay at Bhubaneswar. https://t.co/NTPfETgmSp
— Dharmendra Pradhan (@dpradhanbjp) August 14, 2023
ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಧರ್ಮೇಂದ್ರ ಪ್ರಧಾನ್ ಜನರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ: ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
1947 ರ ಆಗಸ್ಟ್ 14 ರಂದು ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಮಯದಲ್ಲಿ, ದ್ವೇಷ ಮತ್ತು ಹಿಂಸಾಚಾರದಿಂದ ಲಕ್ಷಾಂತರ ಸಹೋದರ ಸಹೋದರಿಯರು ಸ್ಥಳಾಂತರಗೊಳ್ಳಬೇಕಾಯಿತು ಮತ್ತು ಬಲಿಯಾಗಬೇಕಾಯಿತು. ಅದರ ಚಿತ್ರಗಳು ಮತ್ತು ಗಾಯಗಳು ಇನ್ನೂ ಅನೇಕ ಜನರನ್ನು ಕಾಡುತ್ತಿವೆ. ಆ ಕಾಲದಲ್ಲಿ ತ್ಯಾಗ ಮಾಡಿದ ಮತ್ತು ಕಷ್ಟ ಅನುಭವಿಸಿದ ಪೂರ್ವಜರನ್ನು ಈ ಸಂಸ್ಮರಣಾ ಕಾರ್ಯಕ್ರಮದ ರೂಪದಲ್ಲಿ ನೆನಪಿಸಿಕೊಳ್ಳುವ ಸಮಯ ಇದು. ಇಂದು ಆ ಪಾಠಗಳಿಂದ ಸ್ಫೂರ್ತಿ ಪಡೆದುಕೊಳ್ಳಬೇಕು ಮತ್ತು ಭಾರತವನ್ನು ಬಲಿಷ್ಠ, ಹೆಚ್ಚು ಸಮೃದ್ಧ, ಧೈರ್ಯಶಾಲಿ ಮತ್ತು ಸುರಕ್ಷಿತವನ್ನಾಗಿ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಆಗಸ್ಟ್ 14 ರಿಂದ 18 ರವರೆಗೆ ಆಯೋಜಿಸಲಾಗಿರುವ ಈ ಪ್ರದರ್ಶನಕ್ಕೆ ಭೇಟಿ ನೀಡುವಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಜನರನ್ನು ವಿನಂತಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ