Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾವಿಗೆ ಇಳಿದು ನೀರು ಕೊಂಡೊಯ್ಯುವ ಪರಿಸ್ಥಿತಿ, ಅಯ್ಯೋ ಈ ಗ್ರಾಮದ ಜನರ ಸ್ಥಿತಿ ಕೇಳುವವರು ಯಾರು?

ಮಧ್ಯಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಕೊರತೆ ಪದೇ ಪದೇ ಕಾಡುತ್ತದೆ. ಅದರಂತೆ ಘುಸಿಯಾ ಗ್ರಾಮದ ಜನರು ಬತ್ತಿ ಹೋದ ಬಾವಿಗೆ ಇಳಿದು ಅದರಲ್ಲಿ ಇರುವ ಅಲ್ಪಸ್ವಲ್ಪ ನೀರನ್ನು ತುಂಬಿಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

ಬಾವಿಗೆ ಇಳಿದು ನೀರು ಕೊಂಡೊಯ್ಯುವ ಪರಿಸ್ಥಿತಿ, ಅಯ್ಯೋ ಈ ಗ್ರಾಮದ ಜನರ ಸ್ಥಿತಿ ಕೇಳುವವರು ಯಾರು?
ಘುಸಿಯಾ ಗ್ರಾಮದಲ್ಲಿ ನೀರಿನ ಸಮಸ್ಯೆImage Credit source: ANI
Follow us
TV9 Web
| Updated By: Rakesh Nayak Manchi

Updated on:Jun 03, 2022 | 8:43 PM

ಮಧ್ಯಪ್ರದೇಶ: ರಾಜ್ಯದಲ್ಲಿ ನೀರಿನ ಸಮಸ್ಯೆ (Water Problems) ಹೇಗಿದೆ ಎಂಬುದನ್ನು ಈ ವಿಡಿಯೋ (Video) ತೋರಿಸಿಕೊಡುತ್ತದೆ. ಒಂದು ಬಕೆಟ್ ನೀರಿಗಾಗಿ ಘುಸಿಯಾ ಗ್ರಾಮದ ಜನರು ಬಾವಿಗಳು ಮತ್ತು ಕೊಳಗಳಿಗೆ ಇಳಿದು ಕೊಂಡೊಯ್ಯುವ ಪರಿಸ್ಥಿತಿ ಇದೆ. ವಿಡಿಯೋದಲ್ಲಿ ಸಣ್ಣ ಬಾಲಕಿ, ಪುರುಷ ಹಾಗೂ ಮಹಿಳೆಯೊಬ್ಬಳು ಬಾವಿಗೆ ಇಳಿದು ನೀರು ತುಂಬಿಸಿ ಮೇಲೆ ಕೊಂಡೊಯ್ಯುವ ದೃಶ್ಯಾವಳಿಯನ್ನು ಕಾಣಬಹುದು. ಅಷ್ಟೇ ಅಲ್ಲ, ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ಸಣ್ಣ ತಟ್ಟೆ ಹಿಡಿದುಕೊಂಡು ನೀರನ್ನು ಬಕೆಟ್​ಗಳಿಗೆ ಹಾಕುವುದು ಇನ್ನೊಂದು ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ: ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್

ಮಹಿಳೆಯು ಯಾವುದೇ ಹಗ್ಗದ ಸಹಾಯ ವಿಲ್ಲದೆ ಏಣಿಯಲ್ಲಿ ಹತ್ತಿದಂತೆ ಬಾವಿಗೆ ಅಳವಿಡಿಸಿದ ಹಿಡಿಯುವಿಕೆಯನ್ನು ಹಿಡಿದು ಹತ್ತುತ್ತಾರೆ. ಕೊಂಚ ಕೈ ತಪ್ಪಿದರೂ ಸಾಕು ಜೀವ ಹೋಗುವುದು ಅಥವಾ ಸೊಂಟ ಮುರಿಯುವುದು ಖಚಿತ. ಈ ವಿಡಿಯೋವನ್ನು ನೋಡಿದಾಗ ಮಧ್ಯಪ್ರದೇಶದ ಘುಸಿಯಾ ಗ್ರಾಮದಲ್ಲಿನ ನೀರನ ಅಭಾವ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಘುಸಿಯಾ ಭಾಗದ ಜನರ ಇಂಥ ಕಷ್ಟದ ಪರಿಸ್ಥಿತಿಯನ್ನು ಕೇಳುವವರು ಯಾರು?

ಮಧ್ಯಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಕೊರತೆ ಪದೇ ಪದೇ ಕಾಡುತ್ತದೆ. ರಾಜ್ಯ ಸರಕಾರ 2024ರ ವೇಳೆಗೆ ಪ್ರತಿ ಗ್ರಾಮಕ್ಕೂ ನಲ್ಲಿ ನೀರು ಪೂರೈಸುವುದಾಗಿ ಭರವಸೆ ನೀಡಿದೆ. ಆದರೆ ಇನ್ನೂ ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗದಂತಾಗಿದೆ. ಘುಸಿಯಾದಲ್ಲಿ, ಕೋಪಗೊಂಡ ಗ್ರಾಮಸ್ಥರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಈ ವರ್ಷ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಸಮರ್ಥಿಸಿಕೊಂಡ ವಿದೇಶಾಂಗ ಸಚಿವ ಜೈಶಂಕರ್, ಟೀಕೆಗಳಿಗೆ ತಿರುಗೇಟು

“ನಾವು ನೀರನ್ನು ಸಂಗ್ರಹಿಸಲು ಬಾವಿಗೆ ಇಳಿಯಬೇಕಾಗಿದೆ. ಇಲ್ಲಿ ಮೂರು ಬಾವಿಗಳಿವೆ, ಎಲ್ಲಾ ಬಹುತೇಕ ಬತ್ತಿಹೋಗಿವೆ. ಯಾವುದೇ ಕೈ ಪಂಪ್‌ಗಳಲ್ಲಿ ನೀರಿಲ್ಲ. ಸರ್ಕಾರಿ ನೌಕರರು ಮತ್ತು ರಾಜಕೀಯ ಮುಖಂಡರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಈ ಬಾರಿ ನಮಗೆ ಸರಿಯಾದ ನೀರು ಸರಬರಾಜು ಮಾಡುವವರೆಗೆ ನಾವು ಮತ ನೀಡುವುದಿಲ್ಲ ಎಂದು ನಿರ್ಧರಿಸಿದ್ದೇವೆ” ಎಂದು ಮಹಿಳೆಯೊಬ್ಬರು ಸುದ್ದಿ ಸಂಸ್ಥೆ ANIಗೆ ತಿಳಿಸಿದರು.

ವಿಡಿಯೋ ನೋಡಿದ ನೆಟ್ಟಿಜನ್​ಗಳು ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸುವಂತೆ, ಗ್ರಾಮಕ್ಕೆ ತುರ್ತಾಗಿ ಸಹಾಯ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: IND vs SA: ಹೊಸ ಹೇರ್ ಸ್ಟೈಲ್​ನಲ್ಲಿ ಮಿಂಚಿದ ಚಹಾಲ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್

ಭಾರತದ ಕೆಲವೊಂದು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಇಂಥ ನೀರಿನ ಸಮಸ್ಯೆ ಇದ್ದು, ನೀರಿಗಾಗಿ ಜೀವವನ್ನೇ ಪಣಕ್ಕಿಡುವ ಪರಿಸ್ಥಿತಿ ಇದೆ. 2019ರ ಜಾಗತಿಕ ವರದಿಯು ‘ನೀರಿನ ಒತ್ತಡ’, ‘ಅತ್ಯಂತ ಹೆಚ್ಚು’ ಇರುವ 17 ದೇಶಗಳಲ್ಲಿ ಭಾರತವನ್ನೂ ಹೆಸರಿಸಿದೆ. ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಹರಿಯಾಣ ರಾಜ್ಯಗಳು ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿ ಹೇಳಿದೆ.

ದೇಶದ ಮೂರನೇ ಎರಡರಷ್ಟು ಜಿಲ್ಲೆಗಳು ಅಂತರ್ಜಲ ಮಟ್ಟ ಕುಸಿಯುವ ಅಪಾಯದಲ್ಲಿದೆ ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ಭಾರತವು 2050ರ ವೇಳೆಗೆ ತೀವ್ರ ನೀರಿನ ಒತ್ತಡವನ್ನು ಎದುರಿಸಲಿದೆ ಎಂದು ಅಂದಾಜಿಸಲಾಗಿದೆ. 30 ನಗರಗಳು ಹೆಚ್ಚಿನ ಅಪಾಯದ ಮಟ್ಟಕ್ಕೆ ಬೀಳುತ್ತವೆ ಎಂದು ಹೇಳಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Fri, 3 June 22

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ