AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ ಎರಡಲ್ಲ, ಬರೋಬ್ಬರಿ 167 ಕೋಟಿ ರೂ. ಕೊಟ್ಟು ರಾಜಾ ರವಿ ವರ್ಮನ ಚಿತ್ರ ಖರೀದಿಸಿದ ಔಷಧಿ ಕಿಂಗ್​ ಸೈರಸ್ ಪೂನಾವಾಲಾ

ರಾಜಾ ರವಿ ವರ್ಮನ(Raja Ravi Verma) ಕುಂಚದಲ್ಲಿ ಮೂಡಿ ಬಂದಿರುವ ಯಶೋಧ ಮತ್ತು ಕೃಷ್ಣ ಇರುವ ಚಿತ್ರವನ್ನು ಔಷಧಿ ಕಿಂಗ್ ಸೈರಸ್ ಪೂನಾವಾಲಾ ಬರೋಬ್ಬರಿ 167 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ  ಭಾರತೀಯ ಕಲಾಕೃತಿಯಾಗಿದೆ. ಕೈಗಾರಿಕೋದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಎಸ್ ಪೂನವಲ್ಲಾ ಈ ಆಯಿಲ್ ಪೇಂಟಿಂಗ್ ಖರೀದಿಸಿದ್ದಾರೆ.

ಒಂದಲ್ಲ ಎರಡಲ್ಲ, ಬರೋಬ್ಬರಿ 167 ಕೋಟಿ ರೂ. ಕೊಟ್ಟು ರಾಜಾ ರವಿ ವರ್ಮನ ಚಿತ್ರ ಖರೀದಿಸಿದ ಔಷಧಿ ಕಿಂಗ್​ ಸೈರಸ್ ಪೂನಾವಾಲಾ
ಚಿತ್ರImage Credit source: News 9
ನಯನಾ ರಾಜೀವ್
|

Updated on: Apr 02, 2026 | 11:36 AM

Share

ನವದೆಹಲಿ, ಏಪ್ರಿಲ್ 02: ರಾಜಾ ರವಿ ವರ್ಮನ(Raja Ravi Verma) ಕುಂಚದಲ್ಲಿ ಮೂಡಿ ಬಂದಿರುವ ಯಶೋಧ ಮತ್ತು ಕೃಷ್ಣ ಇರುವ ಚಿತ್ರವನ್ನು ಔಷಧಿ ಕಿಂಗ್ ಸೈರಸ್ ಪೂನಾವಾಲಾ ಬರೋಬ್ಬರಿ 167 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ  ಭಾರತೀಯ ಕಲಾಕೃತಿಯಾಗಿದೆ. ಕೈಗಾರಿಕೋದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಎಸ್ ಪೂನವಲ್ಲಾ ಈ ಆಯಿಲ್ ಪೇಂಟಿಂಗ್ ಖರೀದಿಸಿದ್ದಾರೆ.

ಯುರೋಪಿಯನ್ ತಂತ್ರ ಮತ್ತು ಭಾರತೀಯ ಸಂವೇದನೆಯನ್ನು ತಮ್ಮ ಚಿತ್ರಕಲೆಯಲ್ಲಿ ಮಿಶ್ರಣ ಮಾಡಿದ್ದಕ್ಕಾಗಿ ಹೆಸರುವಾಸಿಯಾದ ವರ್ಮಾ, 1890 ರ ದಶಕದಲ್ಲಿ ‘ಯಶೋದ ಮತ್ತು ಕೃಷ್ಣ’ ಎಂಬ ಶೀರ್ಷಿಕೆಯ ಈ ವರ್ಣಚಿತ್ರವನ್ನು ರಚಿಸಿದ್ದರು ಅದರಲ್ಲಿ ಅವರ ಸಹಿ ಕೂಡ ಇದೆ.

ಈ ವರ್ಣಚಿತ್ರವು 80 ಕೋಟಿ ರೂ.ನಿಂದ 120 ಕೋಟಿ ರೂ.ವರೆಗೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ಅದು ಅಂದಾಜು ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ. ತಿರುವಾಂಕೂರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ವರ್ಮಾ ಆಧುನಿಕ ಭಾರತೀಯ ಕಲೆಯ ಪಿತಾಮಹ ಎಂದೇ ಕರೆಯುತ್ತಾರೆ, ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಎಷ್ಟು ಕೌಶಲ್ಯದಿಂದ ಬಿಡಿಸುತ್ತಾರೆಂದರೆ ಅದು ಪೇಂಟಿಂಗ್ ಎಂದೇ ಗೊತ್ತಾಗುವುದಿಲ್ಲ.

ಮತ್ತಷ್ಟು ಓದಿ: ಬೆಂಗಳೂರಿನ ಗೋಡೆಗಳ ಮೇಲೆ ಕಲಾವಿದರ ಕೈಚಳಕ: ಕತೆ ಹೇಳುತ್ತವೆ ಒಂದೊಂದು ಚಿತ್ರಗಳು

ದೆಹಲಿ ಮೂಲದ ಸ್ಯಾಫ್ರನ್‌ಆರ್ಟ್ ಹರಾಜು ಸಂಸ್ಥೆಯು ತನ್ನ ಸ್ಪ್ರಿಂಗ್ ಲೈವ್ ಸೇಲ್ನ ಭಾಗವಾಗಿ ಏಪ್ರಿಲ್ 1 ರಂದು ಈ ವರ್ಣಚಿತ್ರವನ್ನು ಹರಾಜಿಗೆ ಹಾಕಿತ್ತು. ಕಳೆದ ವರ್ಷ ಸೆಪ್ಟೆಂಬರ್ 27 ರಂದು, ಭಾರತೀಯ ಕಲಾವಿದ ವಾಸುದೇವ್ ಎಸ್. ಗೈತೊಂಡೆ ಅವರ ಅಮೂರ್ತ ಚಿತ್ರಕಲೆ ಅಂದಾಜು ಬೆಲೆಗಿಂತ ಮೂರು ಪಟ್ಟು ಹೆಚ್ಚು ಮಾರಾಟವಾಗಿತ್ತು. ಅದು 67 ಕೋಟಿ ರೂ.ಗೆ ಮಾರಾಟವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ