AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 6 ರನ್​​ಗಳನ್ನು ನೀಡಿ..ಎಲ್ಲಾ ವಿವಾದ ಕೊನೆಗೊಳ್ಳುತ್ತೆ ಎಂದ ಬೆನ್ ಸ್ಟೋಕ್ಸ್

IPL 2023 Kannada: ರವಿ ಬಿಷ್ಣೋಯ್ ಕ್ರೀಸ್​ ಅನ್ನು ಬೇಗನೆ ಬಿಡುತ್ತಿದ್ದಾರೆ. ಇದಾಗ್ಯೂ ನಾನ್ ಸ್ಟ್ರೈಕ್​ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಸಹ ಇದ್ದಾರೆಯೇ?

TV9 Web
| Edited By: |

Updated on: Apr 12, 2023 | 3:30 PM

Share
IPL 2023: ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೊನೆಯ ಎಸೆತದಲ್ಲಿ ಜಯ ಸಾಧಿಸಿತ್ತು. ಆದರೆ ಈ ಪಂದ್ಯವನ್ನು ಟೈ ಮಾಡಿಕೊಳ್ಳುವ ಉತ್ತಮ ಅವಕಾಶ ಆರ್​ಸಿಬಿ ಮುಂದಿತ್ತು. ಆದರೆ ನಾನ್​ ಸ್ಟ್ರೈಕ್​ನಲ್ಲಿ ರವಿ ಬಿಷ್ಣೋಯ್ ಅವರನ್ನು ರನೌಟ್ ಮಾಡುವಲ್ಲಿ ಹರ್ಷಲ್ ಪಟೇಲ್ ವಿಫಲರಾಗಿದ್ದರು.

IPL 2023: ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೊನೆಯ ಎಸೆತದಲ್ಲಿ ಜಯ ಸಾಧಿಸಿತ್ತು. ಆದರೆ ಈ ಪಂದ್ಯವನ್ನು ಟೈ ಮಾಡಿಕೊಳ್ಳುವ ಉತ್ತಮ ಅವಕಾಶ ಆರ್​ಸಿಬಿ ಮುಂದಿತ್ತು. ಆದರೆ ನಾನ್​ ಸ್ಟ್ರೈಕ್​ನಲ್ಲಿ ರವಿ ಬಿಷ್ಣೋಯ್ ಅವರನ್ನು ರನೌಟ್ ಮಾಡುವಲ್ಲಿ ಹರ್ಷಲ್ ಪಟೇಲ್ ವಿಫಲರಾಗಿದ್ದರು.

1 / 6
ಒಂದು ವೇಳೆ ರವಿ ಬಿಷ್ಣೋಯ್ ಕೊನೆಯ ಎಸೆತದ ವೇಳೆ ರನೌಟ್ ಆಗಿದ್ದರೆ ಪಂದ್ಯವು ಸೂಪರ್​ ಓವರ್​ನತ್ತ ಸಾಗುತ್ತಿತ್ತು. ಆದರೆ ಹೀಗೆ ಸಿಕ್ಕ ಅವಕಾಶದಲ್ಲಿ ಆರ್​ಸಿಬಿ ವೇಗಿ ಸಂಪೂರ್ಣವಾಗಿ ವಿಫಲರಾಗಿದ್ದರು. ಇದಾಗ್ಯೂ ನಿರ್ಣಾಯಕ ಹಂತದಲ್ಲಿ ಹರ್ಷಲ್ ಪಟೇಲ್ ಅವರು ಮಂಕಡ್ ರನೌಟ್​ಗೆ ಮುಂದಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಒಂದು ವೇಳೆ ರವಿ ಬಿಷ್ಣೋಯ್ ಕೊನೆಯ ಎಸೆತದ ವೇಳೆ ರನೌಟ್ ಆಗಿದ್ದರೆ ಪಂದ್ಯವು ಸೂಪರ್​ ಓವರ್​ನತ್ತ ಸಾಗುತ್ತಿತ್ತು. ಆದರೆ ಹೀಗೆ ಸಿಕ್ಕ ಅವಕಾಶದಲ್ಲಿ ಆರ್​ಸಿಬಿ ವೇಗಿ ಸಂಪೂರ್ಣವಾಗಿ ವಿಫಲರಾಗಿದ್ದರು. ಇದಾಗ್ಯೂ ನಿರ್ಣಾಯಕ ಹಂತದಲ್ಲಿ ಹರ್ಷಲ್ ಪಟೇಲ್ ಅವರು ಮಂಕಡ್ ರನೌಟ್​ಗೆ ಮುಂದಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

2 / 6
ಈ ಚರ್ಚೆಗಳ ನಡುವೆ ಖ್ಯಾತ ಕಮೆಂಟೇಟರ್ ಹರ್ಷ ಬೋಗ್ಲೆ ಮಾಡಿರುವ ಟ್ವೀಟ್ ಕೂಡ ವೈರಲ್ ಆಗಿದೆ. ರವಿ ಬಿಷ್ಣೋಯ್ ಕ್ರೀಸ್​ ಅನ್ನು ಬೇಗನೆ ಬಿಡುತ್ತಿದ್ದಾರೆ. ಇದಾಗ್ಯೂ ನಾನ್ ಸ್ಟ್ರೈಕ್​ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಸಹ ಇದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್​ ಸಿಎಸ್​ಕೆ ತಂಡದ ಸ್ಟಾರ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಪ್ರತಿಕ್ರಿಯಿಸಿದ್ದಾರೆ.

ಈ ಚರ್ಚೆಗಳ ನಡುವೆ ಖ್ಯಾತ ಕಮೆಂಟೇಟರ್ ಹರ್ಷ ಬೋಗ್ಲೆ ಮಾಡಿರುವ ಟ್ವೀಟ್ ಕೂಡ ವೈರಲ್ ಆಗಿದೆ. ರವಿ ಬಿಷ್ಣೋಯ್ ಕ್ರೀಸ್​ ಅನ್ನು ಬೇಗನೆ ಬಿಡುತ್ತಿದ್ದಾರೆ. ಇದಾಗ್ಯೂ ನಾನ್ ಸ್ಟ್ರೈಕ್​ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಸಹ ಇದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್​ ಸಿಎಸ್​ಕೆ ತಂಡದ ಸ್ಟಾರ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಪ್ರತಿಕ್ರಿಯಿಸಿದ್ದಾರೆ.

3 / 6
ಹರ್ಷ ಬೋಗ್ಲೆ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬೆನ್ ಸ್ಟೋಕ್ಸ್, ಇದು ಅಂಪೈರ್​ಗಳ ನಿರ್ಧಾರಕ್ಕೆ ಬಿಟ್ಟಂತಹ ವಿಷಯ. ಆದರೆ ನಾನ್​ ಸ್ಟ್ರೈಕರ್​ ಬೇಗನೆ ಕ್ರೀಸ್ ಬಿಟ್ಟು ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸಿದಾಗ 6 ರನ್​ಗಳ ಪೆನಾಲ್ಟಿ ನೀಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಈ ಸಮಸ್ಯೆಗೆ ಪರಿಹಾರ ಕಾಣಬಹುದು ಎಂಬುದು ಬೆನ್​ ಸ್ಟೋಕ್ಸ್ ಇಂಗಿತ.

ಹರ್ಷ ಬೋಗ್ಲೆ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬೆನ್ ಸ್ಟೋಕ್ಸ್, ಇದು ಅಂಪೈರ್​ಗಳ ನಿರ್ಧಾರಕ್ಕೆ ಬಿಟ್ಟಂತಹ ವಿಷಯ. ಆದರೆ ನಾನ್​ ಸ್ಟ್ರೈಕರ್​ ಬೇಗನೆ ಕ್ರೀಸ್ ಬಿಟ್ಟು ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸಿದಾಗ 6 ರನ್​ಗಳ ಪೆನಾಲ್ಟಿ ನೀಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಈ ಸಮಸ್ಯೆಗೆ ಪರಿಹಾರ ಕಾಣಬಹುದು ಎಂಬುದು ಬೆನ್​ ಸ್ಟೋಕ್ಸ್ ಇಂಗಿತ.

4 / 6
ಅಂದರೆ ಬೌಲರ್​ ಚೆಂಡೆಸೆಯುವ ಮುನ್ನವೇ ನಾನ್ ಸ್ಟ್ರೈಕರ್ ಕ್ರೀಸ್ ಬಿಟ್ಟರೆ, ಎದುರಾಳಿ ತಂಡಕ್ಕೆ 5 ರನ್ ನೀಡಬೇಕು. ಅಥವಾ ಬ್ಯಾಟಿಂಗ್ ತಂಡದ 5 ರನ್​ ಕಡಿತಗೊಳಿಸಬೇಕು. ಇದರಿಂದ ಮಂಕಡ್ ರನೌಟ್​ಗೆ ಅವಕಾಶವೇ ನಿರ್ಮಾಣವಾಗುವುದಿಲ್ಲ. ಅಷ್ಟೇ ಅಲ್ಲದೆ ಇದರಿಂದ ನಾನ್ ಸ್ಟ್ರೈಕರ್ ಬೇಗನೆ ಓಡುವುದು ಕೂಡ ತಪ್ಪುತ್ತದೆ. ಹಾಗೆಯೇ ವಿವಾದ ಕೂಡ ಇರುವುದಿಲ್ಲ ಎಂದು ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.

ಅಂದರೆ ಬೌಲರ್​ ಚೆಂಡೆಸೆಯುವ ಮುನ್ನವೇ ನಾನ್ ಸ್ಟ್ರೈಕರ್ ಕ್ರೀಸ್ ಬಿಟ್ಟರೆ, ಎದುರಾಳಿ ತಂಡಕ್ಕೆ 5 ರನ್ ನೀಡಬೇಕು. ಅಥವಾ ಬ್ಯಾಟಿಂಗ್ ತಂಡದ 5 ರನ್​ ಕಡಿತಗೊಳಿಸಬೇಕು. ಇದರಿಂದ ಮಂಕಡ್ ರನೌಟ್​ಗೆ ಅವಕಾಶವೇ ನಿರ್ಮಾಣವಾಗುವುದಿಲ್ಲ. ಅಷ್ಟೇ ಅಲ್ಲದೆ ಇದರಿಂದ ನಾನ್ ಸ್ಟ್ರೈಕರ್ ಬೇಗನೆ ಓಡುವುದು ಕೂಡ ತಪ್ಪುತ್ತದೆ. ಹಾಗೆಯೇ ವಿವಾದ ಕೂಡ ಇರುವುದಿಲ್ಲ ಎಂದು ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.

5 / 6
ಸದ್ಯ ಬೆನ್ ಸ್ಟೋಕ್ಸ್ ನೀಡಿರುವ ಈ ಅತ್ಯುತ್ತಮ ಸಲಹೆ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಸಲಹೆಯನ್ನು ಮುಂದೆ ಕ್ರಿಕೆಟ್​ ನಿಯಮಗಳಲ್ಲಿ ಅಳವಡಿಸಿದರೆ ಮಂಕಡ್ ರನೌಟ್ ವಿವಾದವೇ ದೂರವಾಗಲಿದೆ ಎಂದು ಅನೇಕರು ಅಭಿಮತ ವ್ಯಕ್ತಪಡಿಸಿದ್ದಾರೆ.

ಸದ್ಯ ಬೆನ್ ಸ್ಟೋಕ್ಸ್ ನೀಡಿರುವ ಈ ಅತ್ಯುತ್ತಮ ಸಲಹೆ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಸಲಹೆಯನ್ನು ಮುಂದೆ ಕ್ರಿಕೆಟ್​ ನಿಯಮಗಳಲ್ಲಿ ಅಳವಡಿಸಿದರೆ ಮಂಕಡ್ ರನೌಟ್ ವಿವಾದವೇ ದೂರವಾಗಲಿದೆ ಎಂದು ಅನೇಕರು ಅಭಿಮತ ವ್ಯಕ್ತಪಡಿಸಿದ್ದಾರೆ.

6 / 6
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್