AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಭರ್ಜರಿ ಅಲ್ಲ, ಇದು ಸರ್ಜರಿ ಬ್ಯಾಟಿಂಗ್: ಧೋನಿ ಫುಲ್ ಟ್ರೋಲ್

Chennai Super Kings vs Rajasthan Royals: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 17.1 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: May 21, 2025 | 9:05 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸೋಲನುಭವಿಸಿದೆ. ಈ ಸೋಲಿಗೆ ಒಂದು ಕಾರಣ ಮಹೇಂದ್ರ ಸಿಂಗ್ ಧೋನಿಯ (MS Dhoni) ನಿಧಾನಗತಿಯ ಬ್ಯಾಟಿಂಗ್. ಏಕೆಂದರೆ ಡೆತ್ ಓವರ್​ಗಳ ವೇಳೆ ಬ್ಯಾಟ್ ಬೀಸಿದ ಧೋನಿ ರನ್​ಗಳಿಸಲು ಪರದಾಡಿದ್ದರು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸೋಲನುಭವಿಸಿದೆ. ಈ ಸೋಲಿಗೆ ಒಂದು ಕಾರಣ ಮಹೇಂದ್ರ ಸಿಂಗ್ ಧೋನಿಯ (MS Dhoni) ನಿಧಾನಗತಿಯ ಬ್ಯಾಟಿಂಗ್. ಏಕೆಂದರೆ ಡೆತ್ ಓವರ್​ಗಳ ವೇಳೆ ಬ್ಯಾಟ್ ಬೀಸಿದ ಧೋನಿ ರನ್​ಗಳಿಸಲು ಪರದಾಡಿದ್ದರು.

1 / 5
ಅದರಲ್ಲೂ ತಾನೆದುರಿಸಿದ ಮೊದಲ 6 ಎಸೆತಗಳಲ್ಲಿ ಧೋನಿ ಕಲೆಹಾಕಿದ್ದು ಕೇವಲ 3 ರನ್​ಗಳು. ಇದಾದ ಬಳಿಕ ಒಂದು ಸಿಕ್ಸ್ ಬಾರಿಸಿದರು. ಆ ಬಳಿಕ ಒಂದೇ ಒಂದು ಫೋರ್​ ಬಾರಿಸಲಿಲ್ಲ ಎಂಬುದು ವಿಶೇಷ. ಅಂದರೆ ಮೊದಲ 7 ಎಸೆತಗಳಲ್ಲಿ 9 ರನ್ ಕಲೆಹಾಕಿದ ಧೋನಿ ಆನಂತರ 10 ಎಸೆತಗಳಲ್ಲಿ ಗಳಿಸಿದ್ದು ಕೇವಲ 7 ರನ್​ಗಳು ಮಾತ್ರ.

ಅದರಲ್ಲೂ ತಾನೆದುರಿಸಿದ ಮೊದಲ 6 ಎಸೆತಗಳಲ್ಲಿ ಧೋನಿ ಕಲೆಹಾಕಿದ್ದು ಕೇವಲ 3 ರನ್​ಗಳು. ಇದಾದ ಬಳಿಕ ಒಂದು ಸಿಕ್ಸ್ ಬಾರಿಸಿದರು. ಆ ಬಳಿಕ ಒಂದೇ ಒಂದು ಫೋರ್​ ಬಾರಿಸಲಿಲ್ಲ ಎಂಬುದು ವಿಶೇಷ. ಅಂದರೆ ಮೊದಲ 7 ಎಸೆತಗಳಲ್ಲಿ 9 ರನ್ ಕಲೆಹಾಕಿದ ಧೋನಿ ಆನಂತರ 10 ಎಸೆತಗಳಲ್ಲಿ ಗಳಿಸಿದ್ದು ಕೇವಲ 7 ರನ್​ಗಳು ಮಾತ್ರ.

2 / 5
ನಿರ್ಣಾಯಕ ಹಂತದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುವ ಮೂಲಕ ಧೋನಿ ಕಲೆಹಾಕಿದ್ದು ಕೇವಲ 16 ರನ್​ಗಳು. ಇದಕ್ಕಾಗಿ 17 ಎಸೆತಗಳನ್ನು ತೆಗೆದುಕೊಂಡರು. ಧೋನಿಯ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 200ರ ಗಡಿದಾಟಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಕೋರ್ 187 ರನ್​ಗಳಲ್ಲೇ ಉಳಿಯಿತು.

ನಿರ್ಣಾಯಕ ಹಂತದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುವ ಮೂಲಕ ಧೋನಿ ಕಲೆಹಾಕಿದ್ದು ಕೇವಲ 16 ರನ್​ಗಳು. ಇದಕ್ಕಾಗಿ 17 ಎಸೆತಗಳನ್ನು ತೆಗೆದುಕೊಂಡರು. ಧೋನಿಯ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 200ರ ಗಡಿದಾಟಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಕೋರ್ 187 ರನ್​ಗಳಲ್ಲೇ ಉಳಿಯಿತು.

3 / 5
ಹೀಗಾಗಿಯೇ ಇದೀಗ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಅನ್ನು ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಅಂತಿಮ ಓವರ್​ಗಳ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿರುವ ಧೋನಿ ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಧೋನಿದು ಭರ್ಜರಿ ಅಲ್ಲ, ಸರ್ಜರಿ ಬ್ಯಾಟಿಂಗ್ ಎಂದು ಲೇವಡಿ ಮಾಡಲಾಗುತ್ತಿದೆ.

ಹೀಗಾಗಿಯೇ ಇದೀಗ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಅನ್ನು ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಅಂತಿಮ ಓವರ್​ಗಳ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿರುವ ಧೋನಿ ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಧೋನಿದು ಭರ್ಜರಿ ಅಲ್ಲ, ಸರ್ಜರಿ ಬ್ಯಾಟಿಂಗ್ ಎಂದು ಲೇವಡಿ ಮಾಡಲಾಗುತ್ತಿದೆ.

4 / 5
ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕಳಪೆ ಬ್ಯಾಟಿಂಗ್ ಪರಿಣಾಮ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ ಕೇವಲ 187 ರನ್ ಕಲೆಹಾಕಿತು. ಈ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡವು 17.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕಳಪೆ ಬ್ಯಾಟಿಂಗ್ ಪರಿಣಾಮ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ ಕೇವಲ 187 ರನ್ ಕಲೆಹಾಕಿತು. ಈ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡವು 17.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us