Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬೌಲರ್​ಗಳ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಬಿಸಿಸಿಐ

BCCI Relaxes IPL Rules: 2025ರ ಐಪಿಎಲ್‌ನಲ್ಲಿ ಬೌಲರ್‌ಗಳು ಚೆಂಡನ್ನು ಹೊಳಪು ಮಾಡಲು ಉಗುಳು ಬಳಸಲು ಬಿಸಿಸಿಐ ಅನುಮತಿ ನೀಡಿದೆ. ಕೋವಿಡ್ ಸಮಯದಲ್ಲಿ ಜಾರಿಗೆ ತಂದಿದ್ದ ನಿಷೇಧವನ್ನು ಇದೀಗ ಬಿಸಿಸಿಐ ರದ್ದುಗೊಳಿಸಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಷೇಧ ಹಾಗೆಯೇ ಮುಂದುವರೆಯಲಿದೆ.

ಪೃಥ್ವಿಶಂಕರ
|

Updated on: Mar 20, 2025 | 4:07 PM

2025 ರ ಐಪಿಎಲ್ ಆರಂಭಕ್ಕೆ ಇನ್ನೇರಡು ದಿನಗಳು ಬಾಕಿ ಉಳಿದಿರುವಾಗ ಬೌಲರ್​ಗಳು ಖುಷಿ ಪಡುವ ನಿಯಮವೊಂದನ್ನು ಬಿಸಿಸಿಐ ಬದಲಿಸುವ ಕೆಲಸ ಮಾಡಿದೆ. ಕೊರೊನಾ ಸಮಯದಲ್ಲಿ ತಂದಿದ್ದ ನಿಯಮವನ್ನು ರದ್ದುಗೊಳಿಸುವ ಮೂಲಕ ಬೌಲರ್​ಗಳ ಪರ ಬ್ಯಾಟ್ ಬೀಸಿರುವ ಬಿಸಿಸಿಐ, ಇನ್ನು ಮುಂದೆ ಬೌಲರ್​ಗಳು ಚೆಂಡಿನ ಮೇಲೆ ಸಲೈವ ಬಳಕೆಗೆ ಅನುಮತಿ ನೀಡಿದೆ.

2025 ರ ಐಪಿಎಲ್ ಆರಂಭಕ್ಕೆ ಇನ್ನೇರಡು ದಿನಗಳು ಬಾಕಿ ಉಳಿದಿರುವಾಗ ಬೌಲರ್​ಗಳು ಖುಷಿ ಪಡುವ ನಿಯಮವೊಂದನ್ನು ಬಿಸಿಸಿಐ ಬದಲಿಸುವ ಕೆಲಸ ಮಾಡಿದೆ. ಕೊರೊನಾ ಸಮಯದಲ್ಲಿ ತಂದಿದ್ದ ನಿಯಮವನ್ನು ರದ್ದುಗೊಳಿಸುವ ಮೂಲಕ ಬೌಲರ್​ಗಳ ಪರ ಬ್ಯಾಟ್ ಬೀಸಿರುವ ಬಿಸಿಸಿಐ, ಇನ್ನು ಮುಂದೆ ಬೌಲರ್​ಗಳು ಚೆಂಡಿನ ಮೇಲೆ ಸಲೈವ ಬಳಕೆಗೆ ಅನುಮತಿ ನೀಡಿದೆ.

1 / 6
ಮೇಲೆ ಹೇಳಿದಂತೆ 2020 ರಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಿದ್ದ ಕಾರಣ ಬೌಲಿಂಗ್ ವೇಳೆ ಚೆಂಡಿನ ಮೇಲೆ ಎಂಜಲು ಹಚ್ಚುವುದನ್ನು ಐಸಿಸಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಿಷೇದಿಸಿತ್ತು. ಆ ಬಳಿಕ ಈ ನಿಯಮವನ್ನು ಐಪಿಎಲ್​ನಲ್ಲೂ ಜಾರಿಗೆ ತಂದಿದ್ದ ಬಿಸಿಸಿಐ, ಬೌಲರ್​ಗಳು ಚೆಂಡಿನ ಮೇಲೆ ಉಗುಳು ಹಚ್ಚುವುದನ್ನು ರದ್ದುಗೊಳಿಸಿತ್ತು.

ಮೇಲೆ ಹೇಳಿದಂತೆ 2020 ರಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಿದ್ದ ಕಾರಣ ಬೌಲಿಂಗ್ ವೇಳೆ ಚೆಂಡಿನ ಮೇಲೆ ಎಂಜಲು ಹಚ್ಚುವುದನ್ನು ಐಸಿಸಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಿಷೇದಿಸಿತ್ತು. ಆ ಬಳಿಕ ಈ ನಿಯಮವನ್ನು ಐಪಿಎಲ್​ನಲ್ಲೂ ಜಾರಿಗೆ ತಂದಿದ್ದ ಬಿಸಿಸಿಐ, ಬೌಲರ್​ಗಳು ಚೆಂಡಿನ ಮೇಲೆ ಉಗುಳು ಹಚ್ಚುವುದನ್ನು ರದ್ದುಗೊಳಿಸಿತ್ತು.

2 / 6
ವಾಸ್ತವವಾಗಿ ಬೌಲರ್​ಗಳು ಚೆಂಡಿನ ಹೊಳಪನ್ನು ಹೆಚ್ಚಿಸುವ ಸಲುವಾಗಿ ತಾವು ಬೌಲಿಂಗ್ ಮಾಡುವ ವೇಳೆ ತಮ್ಮ ಎಂಜಲನ್ನು ಚೆಂಡಿನ ಮೇಲೆ ಲೇಪನ ಮಾಡುತ್ತಿದ್ದರು. ಎಂಜಲು ಮಾತ್ರವಲ್ಲದೆ ತಮ್ಮ ಬೆವರನ್ನು ಇದಕ್ಕೆ ಬಳಸುತ್ತಿದ್ದರು. ಆದರೆ ಕೊರೊನಾ ಸಮಯದಲ್ಲಿ ಎಂಜಲು ಬಳಸುವುದಕ್ಕೆ ನಿಷೇದ ಹೇರಿದ್ದ ಬಿಸಿಸಿಐ, ಬೆವರು ಬಳಸುವುದಕ್ಕ ಅನುಮತಿ ನೀಡಿತ್ತು.

ವಾಸ್ತವವಾಗಿ ಬೌಲರ್​ಗಳು ಚೆಂಡಿನ ಹೊಳಪನ್ನು ಹೆಚ್ಚಿಸುವ ಸಲುವಾಗಿ ತಾವು ಬೌಲಿಂಗ್ ಮಾಡುವ ವೇಳೆ ತಮ್ಮ ಎಂಜಲನ್ನು ಚೆಂಡಿನ ಮೇಲೆ ಲೇಪನ ಮಾಡುತ್ತಿದ್ದರು. ಎಂಜಲು ಮಾತ್ರವಲ್ಲದೆ ತಮ್ಮ ಬೆವರನ್ನು ಇದಕ್ಕೆ ಬಳಸುತ್ತಿದ್ದರು. ಆದರೆ ಕೊರೊನಾ ಸಮಯದಲ್ಲಿ ಎಂಜಲು ಬಳಸುವುದಕ್ಕೆ ನಿಷೇದ ಹೇರಿದ್ದ ಬಿಸಿಸಿಐ, ಬೆವರು ಬಳಸುವುದಕ್ಕ ಅನುಮತಿ ನೀಡಿತ್ತು.

3 / 6
ಬಿಸಿಸಿಐನ ಈ ನಿಷೇದದಿಂದಾಗಿ ಬೌಲರ್​ಗಳು ಸಾಕಷ್ಟು ಕಷ್ಟಪಡಬೇಕಾಗಿತ್ತು. ಹೀಗಾಗಿ ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಹಲವು ಬೌಲರ್​ಗಳು ಈ ನಿಯಮವನ್ನು ತೆಗೆದು ಹಾಕುವಂತೆ ಬಿಸಿಸಿಐ ಬಳಿ ಬೇಡಿಕೆ ಇಟ್ಟಿದ್ದರು. ಇದೀಗ ಬೌಲರ್​ಗಳ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿರುವ ಬಿಸಿಸಿಐ, ಚೆಂಡಿನ ಮೇಲೆ ಎಂಜಲನ್ನು ಲೇಪನ ಮಾಡುವುದಕ್ಕೆ ಅನುಮತಿ ನೀಡಿದೆ.

ಬಿಸಿಸಿಐನ ಈ ನಿಷೇದದಿಂದಾಗಿ ಬೌಲರ್​ಗಳು ಸಾಕಷ್ಟು ಕಷ್ಟಪಡಬೇಕಾಗಿತ್ತು. ಹೀಗಾಗಿ ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಹಲವು ಬೌಲರ್​ಗಳು ಈ ನಿಯಮವನ್ನು ತೆಗೆದು ಹಾಕುವಂತೆ ಬಿಸಿಸಿಐ ಬಳಿ ಬೇಡಿಕೆ ಇಟ್ಟಿದ್ದರು. ಇದೀಗ ಬೌಲರ್​ಗಳ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿರುವ ಬಿಸಿಸಿಐ, ಚೆಂಡಿನ ಮೇಲೆ ಎಂಜಲನ್ನು ಲೇಪನ ಮಾಡುವುದಕ್ಕೆ ಅನುಮತಿ ನೀಡಿದೆ.

4 / 6
ವಾಸ್ತವವಾಗಿ ಇಂದು ಮುಂಬೈನ ಕೇಂದ್ರ ಕಛೇರಿಯಲ್ಲಿ ಬಿಸಿಸಿಐ, ಎಲ್ಲಾ ಐಪಿಎಲ್ ತಂಡಗಳ ನಾಯಕರ ಸಭೆ ಕರೆದಿದೆ. ಈ ಸಭೆಯಲ್ಲಿ ಮಂಡಳಿಯು ಎಲ್ಲಾ ನಾಯಕರಿಗೆ ಈ ನಿರ್ಧಾರದ ಬಗ್ಗೆ ತಿಳಿಸಿದೆ. ಇದರರ್ಥ ಮಾರ್ಚ್ 22 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಬೌಲರ್‌ಗಳು ಚೆಂಡನ್ನು ಹೊಳಪು ಮಾಡಲು ಎಂಜಲು ಬಳಸುವುದನ್ನು ನಾವು ನೋಡಬಹುದಾಗಿದೆ.

ವಾಸ್ತವವಾಗಿ ಇಂದು ಮುಂಬೈನ ಕೇಂದ್ರ ಕಛೇರಿಯಲ್ಲಿ ಬಿಸಿಸಿಐ, ಎಲ್ಲಾ ಐಪಿಎಲ್ ತಂಡಗಳ ನಾಯಕರ ಸಭೆ ಕರೆದಿದೆ. ಈ ಸಭೆಯಲ್ಲಿ ಮಂಡಳಿಯು ಎಲ್ಲಾ ನಾಯಕರಿಗೆ ಈ ನಿರ್ಧಾರದ ಬಗ್ಗೆ ತಿಳಿಸಿದೆ. ಇದರರ್ಥ ಮಾರ್ಚ್ 22 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಬೌಲರ್‌ಗಳು ಚೆಂಡನ್ನು ಹೊಳಪು ಮಾಡಲು ಎಂಜಲು ಬಳಸುವುದನ್ನು ನಾವು ನೋಡಬಹುದಾಗಿದೆ.

5 / 6
ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಷೇಧ ಹಾಗೆಯೇ ಮುಂದುವರೆಯಲಿದೆ. ಕೊರೊನಾ ಸಾಂಕ್ರಾಮಿಕ ರೋಗ ಮುಗಿದ ನಂತರ, ಐಸಿಸಿ ಇದನ್ನು ಶಾಶ್ವತವಾಗಿ ಜಾರಿಗೆ ತಂದಿತು. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರು ತಮ್ಮ ಬೆವರನ್ನು ಬಳಸಿ ಚೆಂಡನ್ನು ಶೈನಿಂಗ್ ಮಾಡಬಹುದಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲೂ ಈ ನಿಷೇಧವನ್ನು ತೆಗೆದುಹಾಕುವಂತೆ ಬೇಡಿಕೆ ಇದೆಯಾದರೂ ಐಸಿಸಿ ಮಾತ್ರ ಈ ನಿಯಮವನ್ನು ಬದಲಿಸುವ ಮನಸು ಮಾಡಿಲ್ಲ.

ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಷೇಧ ಹಾಗೆಯೇ ಮುಂದುವರೆಯಲಿದೆ. ಕೊರೊನಾ ಸಾಂಕ್ರಾಮಿಕ ರೋಗ ಮುಗಿದ ನಂತರ, ಐಸಿಸಿ ಇದನ್ನು ಶಾಶ್ವತವಾಗಿ ಜಾರಿಗೆ ತಂದಿತು. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರು ತಮ್ಮ ಬೆವರನ್ನು ಬಳಸಿ ಚೆಂಡನ್ನು ಶೈನಿಂಗ್ ಮಾಡಬಹುದಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲೂ ಈ ನಿಷೇಧವನ್ನು ತೆಗೆದುಹಾಕುವಂತೆ ಬೇಡಿಕೆ ಇದೆಯಾದರೂ ಐಸಿಸಿ ಮಾತ್ರ ಈ ನಿಯಮವನ್ನು ಬದಲಿಸುವ ಮನಸು ಮಾಡಿಲ್ಲ.

6 / 6
Follow us
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಪೌರ ಕಾರ್ಮಿಕರ ಜೊತೆ ಸೇರಿ ಕಸ ಆಯ್ದ ರಕ್ಷಕ್ ಬುಲೆಟ್
ಪೌರ ಕಾರ್ಮಿಕರ ಜೊತೆ ಸೇರಿ ಕಸ ಆಯ್ದ ರಕ್ಷಕ್ ಬುಲೆಟ್