AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2024: ಗಣೇಶ ಚತುರ್ಥಿ ಈ ಬಾರಿ ಯಾವಾಗ ಆಚರಿಸಲಾಗುತ್ತದೆ? ಮೂರ್ತಿ ಪ್ರತಿಷ್ಠಾಪನೆ-ವಿಸರ್ಜನೆಯ ಸಮಯ, ನಿಯಮ ತಿಳಿಯಿರಿ

ಇನ್ನು ಕೆಲವೇ ದಿನಗಳಲ್ಲಿ ಶ್ರಾವಣ ಮುಗಿಸಿ ಭಾದ್ರಪದ ಮಾಸದೊಳ್​ ಪ್ರವೇಶಿಸುತ್ತೇವೆ. ಇದರಿಂದಾಗಿ ಮೋದಕ ಪ್ರಿಯ ಗಣೇಶನ ಜನ್ಮದಿನವಾದ ವಿನಾಯಕ ಜನ್ಮದಿನವನ್ನು ಆಚರಿಸಲು ಹಿಂದೂಗಳು ಸಿದ್ಧರಾಗಿದ್ದಾರೆ. ಈ ಲೇಖನದಲ್ಲಿ ಗಣಪತಿ ನವರಾತ್ರಿ ಅಥವಾ ಗಣೇಶ ಉತ್ಸವ ಯಾವಾಗ ಪ್ರಾರಂಭವಾಗುತ್ತದೆ? ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸರಿಯಾದ ವಿಧಾನ ಮತ್ತು ನಿಯಮಗಳನ್ನು ತಿಳಿಯೋಣ..

ಸಾಧು ಶ್ರೀನಾಥ್​
| Edited By: |

Updated on:Aug 27, 2024 | 11:41 AM

Share
Ganesh Chaturthi 2024: ವಿನಾಯಕ ಚೌತಿ ಉತ್ಸವವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ 4 ನೇ ದಿನದಂದು ಆಚರಿಸಲಾಗುತ್ತದೆ. ಈ ವಿನಾಯಕ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಬ್ಬ ಆರಂಭವಾಗುತ್ತದೆ ಮತ್ತು ನೀರಿನಲ್ಲಿ ಮುಳುಗಿಸುವುದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

Ganesh Chaturthi 2024: ವಿನಾಯಕ ಚೌತಿ ಉತ್ಸವವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ 4 ನೇ ದಿನದಂದು ಆಚರಿಸಲಾಗುತ್ತದೆ. ಈ ವಿನಾಯಕ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಬ್ಬ ಆರಂಭವಾಗುತ್ತದೆ ಮತ್ತು ನೀರಿನಲ್ಲಿ ಮುಳುಗಿಸುವುದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

1 / 6
ವಿನಾಯಕ ಚೌತಿ ದಿನಾಂಕ, ಪೂಜೆಯ ಶುಭ ಸಮಯ: ವೈದಿಕ ಪಂಚಾಂಗದ ಪ್ರಕಾರ, ವಿನಾಯಕ ಚೌತಿಯು ಶುಕ್ರವಾರ, ಸೆಪ್ಟೆಂಬರ್ 6, 2024 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7, ಶನಿವಾರ, ಸಂಜೆ 5.37 ಕ್ಕೆ ಕೊನೆಗೊಳ್ಳುತ್ತದೆ. ಇದರಿಂದಾಗಿ ಈ ವರ್ಷ ವಿಗ್ರಹ ಪ್ರತಿಷ್ಠಾನವನ್ನು ಸೆ. 7ರಂದು ಆಚರಿಸಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು 8ನೇ ತಾರೀಖಿನಂದು ಆಚರಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಉದಯ ತಿಥಿ ಪ್ರಕಾರ, ಸೆಪ್ಟೆಂಬರ್ 7 ರ ಶನಿವಾರದಿಂದ ಗಣೇಶ ಹಬ್ಬ ಪ್ರಾರಂಭವಾಗಲಿವೆ. ಈ ದಿನ ವಿನಾಯಕನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.

ವಿನಾಯಕ ಚೌತಿ ದಿನಾಂಕ, ಪೂಜೆಯ ಶುಭ ಸಮಯ: ವೈದಿಕ ಪಂಚಾಂಗದ ಪ್ರಕಾರ, ವಿನಾಯಕ ಚೌತಿಯು ಶುಕ್ರವಾರ, ಸೆಪ್ಟೆಂಬರ್ 6, 2024 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7, ಶನಿವಾರ, ಸಂಜೆ 5.37 ಕ್ಕೆ ಕೊನೆಗೊಳ್ಳುತ್ತದೆ. ಇದರಿಂದಾಗಿ ಈ ವರ್ಷ ವಿಗ್ರಹ ಪ್ರತಿಷ್ಠಾನವನ್ನು ಸೆ. 7ರಂದು ಆಚರಿಸಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು 8ನೇ ತಾರೀಖಿನಂದು ಆಚರಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಉದಯ ತಿಥಿ ಪ್ರಕಾರ, ಸೆಪ್ಟೆಂಬರ್ 7 ರ ಶನಿವಾರದಿಂದ ಗಣೇಶ ಹಬ್ಬ ಪ್ರಾರಂಭವಾಗಲಿವೆ. ಈ ದಿನ ವಿನಾಯಕನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.

2 / 6
Ganesh idol Sthapana or installation timings: ಮೂರ್ತಿ ಪೂಜೆಗೆ ಶುಭ ಮುಹೂರ್ತ: ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7ರಂದು ಬೆಳಗ್ಗೆ ಆಚರಿಸಬೇಕು. ಇದಲ್ಲದೆ, ದೇವತಾರಾಧನೆಗೆ ಶುಭ ಮುಹೂರ್ತವು ಬೆಳಿಗ್ಗೆ 11.04 ರಿಂದ ಮಧ್ಯಾಹ್ನ 1.34 ರವರೆಗೆ ಇರುತ್ತದೆ. ವಿನಾಯಕನ ವಿಗ್ರಹವನ್ನು ಪೂಜಿಸಲು ಭಕ್ತರಿಗೆ ಒಟ್ಟು 2 ಗಂಟೆ 30 ನಿಮಿಷಗಳ ಸಮಯವಿರುತ್ತದೆ.

Ganesh idol Sthapana or installation timings: ಮೂರ್ತಿ ಪೂಜೆಗೆ ಶುಭ ಮುಹೂರ್ತ: ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7ರಂದು ಬೆಳಗ್ಗೆ ಆಚರಿಸಬೇಕು. ಇದಲ್ಲದೆ, ದೇವತಾರಾಧನೆಗೆ ಶುಭ ಮುಹೂರ್ತವು ಬೆಳಿಗ್ಗೆ 11.04 ರಿಂದ ಮಧ್ಯಾಹ್ನ 1.34 ರವರೆಗೆ ಇರುತ್ತದೆ. ವಿನಾಯಕನ ವಿಗ್ರಹವನ್ನು ಪೂಜಿಸಲು ಭಕ್ತರಿಗೆ ಒಟ್ಟು 2 ಗಂಟೆ 30 ನಿಮಿಷಗಳ ಸಮಯವಿರುತ್ತದೆ.

3 / 6
Ganesh idol immersion timings:  ಗಣೇಶನ ನಿಮಜ್ಜನ (ವಿಸರ್ಜನೆ) ಸಮಯ : ಗಣೇಶ ಹಬ್ಬವು ಸೆಪ್ಟೆಂಬರ್ 7 ಶನಿವಾರದಂದು ಪ್ರಾರಂಭವಾಗುತ್ತದೆ. ಈ ಬಾರಿಯ ಗಣೇಶ ಹಬ್ಬಗಳು ಸೆಪ್ಟೆಂಬರ್ 17ರ ಮಂಗಳವಾರ ಅನಂತ ಚತುರ್ದಶಿ ದಿನ  ಮುಗಿಯಲಿದೆ. ಗಣೇಶ ಮೂರ್ತಿಯನ್ನು ಮನೆಯಲ್ಲಿಟ್ಟು 10 ದಿನಗಳ ಕಾಲ ಪೂಜಿಸುವವರು ಅನಂತ ಚತುರ್ದಶಿಯಂದು ವಿನಾಯಕನನ್ನು ನೀರಿನಲ್ಲಿ (ನಿಮಜ್ಜನ, ವಿಸರ್ಜನೆ) ಮುಳುಗಿಸುತ್ತಾರೆ.

Ganesh idol immersion timings: ಗಣೇಶನ ನಿಮಜ್ಜನ (ವಿಸರ್ಜನೆ) ಸಮಯ : ಗಣೇಶ ಹಬ್ಬವು ಸೆಪ್ಟೆಂಬರ್ 7 ಶನಿವಾರದಂದು ಪ್ರಾರಂಭವಾಗುತ್ತದೆ. ಈ ಬಾರಿಯ ಗಣೇಶ ಹಬ್ಬಗಳು ಸೆಪ್ಟೆಂಬರ್ 17ರ ಮಂಗಳವಾರ ಅನಂತ ಚತುರ್ದಶಿ ದಿನ ಮುಗಿಯಲಿದೆ. ಗಣೇಶ ಮೂರ್ತಿಯನ್ನು ಮನೆಯಲ್ಲಿಟ್ಟು 10 ದಿನಗಳ ಕಾಲ ಪೂಜಿಸುವವರು ಅನಂತ ಚತುರ್ದಶಿಯಂದು ವಿನಾಯಕನನ್ನು ನೀರಿನಲ್ಲಿ (ನಿಮಜ್ಜನ, ವಿಸರ್ಜನೆ) ಮುಳುಗಿಸುತ್ತಾರೆ.

4 / 6

ವಿಗ್ರಹ ಪ್ರತಿಷ್ಠಾಪನೆಗೆ ಸರಿಯಾದ ನಿಯಮ: ಶುಭ ಮುಹೂರ್ತದಲ್ಲಿ ಮನೆಯ ಉತ್ತರ ಅಥವಾ ಆಗ್ನೇಯ ದಿಕ್ಕಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಲಭಾಗದಲ್ಲಿ ಸೊಂಡಿಲು ಇರುವ (ಬಲಮುರಿ) ವಿನಾಯಕನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅದೇ ಸಮಯದಲ್ಲಿ ಗಣೇಶನು ಕುಳಿತ ಭಂಗಿಯಲ್ಲಿರಬೇಕು.

ವಿಗ್ರಹ ಪ್ರತಿಷ್ಠಾಪನೆಗೆ ಸರಿಯಾದ ನಿಯಮ: ಶುಭ ಮುಹೂರ್ತದಲ್ಲಿ ಮನೆಯ ಉತ್ತರ ಅಥವಾ ಆಗ್ನೇಯ ದಿಕ್ಕಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಲಭಾಗದಲ್ಲಿ ಸೊಂಡಿಲು ಇರುವ (ಬಲಮುರಿ) ವಿನಾಯಕನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅದೇ ಸಮಯದಲ್ಲಿ ಗಣೇಶನು ಕುಳಿತ ಭಂಗಿಯಲ್ಲಿರಬೇಕು.

5 / 6
ಆ ವಿನಾಯಕ ಮೂರ್ತಿಯಲ್ಲಿ ಪವಿತ್ರ ಜನಿವಾರ ಇರಬೇಕು. ಇಲಿಯೂ ಇರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಸ್ವಚ್ಛ ಮತ್ತು ಪವಿತ್ರವಾಗಿರಬೇಕು. ಗಣೇಶನ ಮೂರ್ತಿಯ ಮುಖವು ಪಶ್ಚಿಮಕ್ಕೆ ಇರಬೇಕು. ಗಣೇಶನನ್ನು ವಿಸರ್ಜಿಸುವುದಕ್ಕೂ ಮುನ್ನ ವಿಗ್ರಹವನ್ನು ಅಪ್ಪಿತಪ್ಪಿಯೂ ಅಲುಗಾಡಿಸಬಾರದು.

ಆ ವಿನಾಯಕ ಮೂರ್ತಿಯಲ್ಲಿ ಪವಿತ್ರ ಜನಿವಾರ ಇರಬೇಕು. ಇಲಿಯೂ ಇರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಸ್ವಚ್ಛ ಮತ್ತು ಪವಿತ್ರವಾಗಿರಬೇಕು. ಗಣೇಶನ ಮೂರ್ತಿಯ ಮುಖವು ಪಶ್ಚಿಮಕ್ಕೆ ಇರಬೇಕು. ಗಣೇಶನನ್ನು ವಿಸರ್ಜಿಸುವುದಕ್ಕೂ ಮುನ್ನ ವಿಗ್ರಹವನ್ನು ಅಪ್ಪಿತಪ್ಪಿಯೂ ಅಲುಗಾಡಿಸಬಾರದು.

6 / 6

Published On - 11:05 am, Sat, 24 August 24

ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?
ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ