Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಪ್ರಥಮ ಪೂಜಿತ, ಏಕದಂತ, ವಿನಾಯಕ, ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಇಂತಹ ಮಂಗಳಕರ ಸಂದರ್ಭದಲ್ಲಿ ವಿಘ್ನ ವಿನಾಶಕನ ದರ್ಶನ ಮಾಡುವುದು ಅತಿ ಮುಖ್ಯ. ಹಾಗಾದ್ರೆ ಬನ್ನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಧ್ಯಾತ್ಮಿಕತೆಯ ಸ್ಪರ್ಶ ನೀಡಿ ಇಲ್ಲಿರುವ ಪ್ರಸಿದ್ಧ ಗಣಪತಿ ದೇವಸ್ಥಾನದ ಪರಿಚಯ ಮಾಡಿಕೊಡುತ್ತೀವಿ. ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಆತನ ಕೃಪೆಗೆ ಪಾತ್ರರಾಗಿ.

| Updated By: ಸಾಧು ಶ್ರೀನಾಥ್​

Updated on:Sep 07, 2021 | 5:14 PM

1. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ(Basavanagudi Dodda Ganapathi): ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿಯ ದೊಡ್ಡ ಗಣಪತಿ ದೇಸಸ್ಥಾನ ಇತಿಹಾಸ ಪ್ರಸಿದ್ಧ. ಇದು ಒಂದೇ ಕಲ್ಲಿನಲ್ಲಿ ಕೆತ್ತಲಾದ ಏಕಶಿಲಾ ವಿಗ್ರಹವಿದ್ದು ಸುಮಾರು 11 ಅಡಿ ಉದ್ದ ಹಾಗೂ 18 ಅಡಿ ಅಗಲವಿದೆ. ಇದನ್ನು ಕ್ರಿ.ಶ.1536ರಲ್ಲಿ ಐದು ಎಕರೆ ಜಾಗದಲ್ಲಿ ಕೆಂಪೇಗೌಡರು ನಿರ್ಮಿಸಿದ್ದು ಎನ್ನಲಾಗುತ್ತೆ. ಗಣೇಶನ ಹಬ್ಬ, ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತ ಸಾಗರವೇ ಹರಿದು ಬರುತ್ತೆ. ಶಂಖ, ಚಕ್ರ, ಮುರಿದ ದಂತ ಮತ್ತು ಪ್ರಸಾದವನ್ನು ಹಿಡಿದುಕೊಂಡಿರುವ ಚತುರ್ಭುಜ ಗಣಪತಿ ವಿಗ್ರಹವನ್ನು ಆಕರ್ಷತವಾಗಿ ಇಲ್ಲಿ ಕೆತ್ತಲಾಗಿದೆ.

ganesha chaturthi 2021 special famous ganesha temples in bangalore

1 / 5
2. ಕೋರಮಂಗಲದ ಟೆಕ್ಕಿ ಗಣಪ(Koramangala Techie Ganesha): ಕೋರಮಂಗಲದ 1979 ರಲ್ಲಿ ನಿರ್ಮಿಸಲಾದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿರುವ ಬಲಮುರಿ ಗಣಪತಿಗೆ ಟೆಕ್ಕಿ ಗಣೇಶ ಎಂಬ ವಿಶೇಷ ಹೆಸರಿದೆ. ಐಟಿ-ಬಿಟಿ ಕಂಪನಿಗೆ ಇಂಟರ್ ವ್ಯೂವ್ ಹೋಗುವವರು, ಹೊಸ ಕಂಪನಿ ಆರಂಭಿಸುವವರು, ಬಡ್ತಿ, ಅಪ್ರೈಸಲ್ ಸೇರಿದಂತೆ ಉದ್ಯೋಗ ಸಮಸ್ಯೆ ಇರುವವರು ಇಲ್ಲಿ ಪೂಜೆ ಸಲ್ಲಿಸುತ್ತಾರೆ.

ganesha chaturthi 2021 special famous ganesha temples in bangalore

2 / 5
3. ಕಸ್ತೂರಬಾ ರಸ್ತೆಯ ವಾಹನ ಗಣಪ(Traffic Ganesha Temple)
ಬೆಂಗಳೂರಿನ ಕಸ್ತೂರಬಾ ರಸ್ತೆಗೆ ಅಭಿಮುಖವಾಗಿ ವಾಹನ ಗಣಪತಿ ದೇವಸ್ಥಾನವಿದೆ. ಇಲ್ಲಿ ಹೊಸ ವಾಹನಗಳನ್ನು ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ. ಈ ದೇವಸ್ಥಾನ ಸುಮಾರು 600 ವರ್ಷ ಹಳೆಯದು. ಇದು ಮೈಸೂರು ಅರಸ ವಂಶದ ಚಾಮರಾಜ ಒಡೆಯರ್ ಈ ಗಣಪತಿ ಭಕ್ತರಾಗಿದ್ದರು. ತಾವು ಖರೀದಿಸುವ ಹೊಸ ಕಾರುಗಲನ್ನು ಇಲ್ಲಿಯೇ ಪೂಜೆ ಮಾಡಿಸುತ್ತಿದ್ದರಂತೆ.

3. ಕಸ್ತೂರಬಾ ರಸ್ತೆಯ ವಾಹನ ಗಣಪ(Traffic Ganesha Temple) ಬೆಂಗಳೂರಿನ ಕಸ್ತೂರಬಾ ರಸ್ತೆಗೆ ಅಭಿಮುಖವಾಗಿ ವಾಹನ ಗಣಪತಿ ದೇವಸ್ಥಾನವಿದೆ. ಇಲ್ಲಿ ಹೊಸ ವಾಹನಗಳನ್ನು ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ. ಈ ದೇವಸ್ಥಾನ ಸುಮಾರು 600 ವರ್ಷ ಹಳೆಯದು. ಇದು ಮೈಸೂರು ಅರಸ ವಂಶದ ಚಾಮರಾಜ ಒಡೆಯರ್ ಈ ಗಣಪತಿ ಭಕ್ತರಾಗಿದ್ದರು. ತಾವು ಖರೀದಿಸುವ ಹೊಸ ಕಾರುಗಲನ್ನು ಇಲ್ಲಿಯೇ ಪೂಜೆ ಮಾಡಿಸುತ್ತಿದ್ದರಂತೆ.

3 / 5
4. ಜಯನಗರದ ಪವರ್ಫುಲ್ ಗಣೇಶ(Jayanagar Powerful Ganesha)
ಜಯನಗರದ 4ನೇ ಬ್ಲಾಕ್ನಲ್ಲಿರುವ ಪವರ್ಫುಲ್ ಗಣೇಶ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ದರ್ಶನ ಮಾಡುತ್ತಾರೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಇದೊಂದೇ ದೇವಸ್ಥಾನದಲ್ಲಿ ದೇವರಿಗೆ ವಜ್ರದ ಕಿರೀಟ ಮತ್ತು ಆಭರಣಗಳನ್ನು ಹಾಕುವುದನ್ನು ನಾವು ನೋಡ ಬಹುದು. ಅದೂ ಕೂಡ ಹಬ್ಬದ ದಿನಗಳಲ್ಲಿ.

4. ಜಯನಗರದ ಪವರ್ಫುಲ್ ಗಣೇಶ(Jayanagar Powerful Ganesha) ಜಯನಗರದ 4ನೇ ಬ್ಲಾಕ್ನಲ್ಲಿರುವ ಪವರ್ಫುಲ್ ಗಣೇಶ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ದರ್ಶನ ಮಾಡುತ್ತಾರೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಇದೊಂದೇ ದೇವಸ್ಥಾನದಲ್ಲಿ ದೇವರಿಗೆ ವಜ್ರದ ಕಿರೀಟ ಮತ್ತು ಆಭರಣಗಳನ್ನು ಹಾಕುವುದನ್ನು ನಾವು ನೋಡ ಬಹುದು. ಅದೂ ಕೂಡ ಹಬ್ಬದ ದಿನಗಳಲ್ಲಿ.

4 / 5
5. ಮಹಾಲಕ್ಷ್ಮೀ ಲೇಜೌಟ್ನ ಪಂಚಮುಖಿ ಗಣಪ(Jayanagar Powerful Ganesha)
ಮಹಾಲಕ್ಷ್ಮೀ ಲೇಜೌಟ್ನ ಕುಮಾರಸ್ವಾಮಿ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ಬಲಮುರಿ ಸೊಂಡಿಲು ಹೊಂದಿರುವ ಪಂಚಮುಖಿ ಗಣಪತಿ ವಿಗ್ರಹವಿದೆ. ಗಣೇಶನ 32 ಅವತಾರಗಳ ಪೈಕಿ ಪಂಚಮುಖಿ ಅವತಾರವೂ ಒಂದಾಗಿದ್ದು ಇದು ಅತಿ ಪ್ರಭಾವಿ ಅವತಾರ ಎಂದು ಭಕ್ತರು ನಂಬುತ್ತಾರೆ.

5. ಮಹಾಲಕ್ಷ್ಮೀ ಲೇಜೌಟ್ನ ಪಂಚಮುಖಿ ಗಣಪ(Jayanagar Powerful Ganesha) ಮಹಾಲಕ್ಷ್ಮೀ ಲೇಜೌಟ್ನ ಕುಮಾರಸ್ವಾಮಿ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ಬಲಮುರಿ ಸೊಂಡಿಲು ಹೊಂದಿರುವ ಪಂಚಮುಖಿ ಗಣಪತಿ ವಿಗ್ರಹವಿದೆ. ಗಣೇಶನ 32 ಅವತಾರಗಳ ಪೈಕಿ ಪಂಚಮುಖಿ ಅವತಾರವೂ ಒಂದಾಗಿದ್ದು ಇದು ಅತಿ ಪ್ರಭಾವಿ ಅವತಾರ ಎಂದು ಭಕ್ತರು ನಂಬುತ್ತಾರೆ.

5 / 5

Published On - 9:46 am, Fri, 3 September 21

Follow us
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್