ದೇವಸ್ಥಾನದ ಕಸ ಗುಡಿಸಿದ ಕಂಗನಾ ರನೌತ್ ಮೇಲೆ ಟೀಕಾಪ್ರಹಾರ: ಯಾಕೆ?
Kangana Ranaut: ನಟಿ ಕಂಗನಾ ರನೌತ್ ಇತ್ತೀಚೆಗಷ್ಟೆ ಪೊರಕೆ ಹಿಡಿದು ದೇವಾಲಯ ಸ್ವಚ್ಛ ಮಾಡಿದ್ದಾರೆ. ಆದರೆ ಇದರಿಂದಾಗಿ ತೀವ್ರ ಟೀಕೆ ಹಾಗೂ ಟ್ರೋಲ್ಗೆ ಗುರಿಯಾಗಿದ್ದಾರೆ. ಕಾರಣವೇನು?
Updated on: Jan 21, 2024 | 9:56 PM

ಕಂಗನಾ ರನೌತ್ ತಮ್ಮನ್ನು ತಾವು ಹಲವು ಬಾರಿ ಸನಾತನಿಯೆಂದು ಹೇಳಿಕೊಂಡಿದ್ದಾರೆ. ಅಪ್ಪಟ ಹಿಂದೂ ಎಂದು ಕರೆದುಕೊಳ್ಳುತ್ತಾರೆ.

ಬಿಜೆಪಿಯ ಅಪ್ಪಟ ಬೆಂಬಲಿಗರೂ ಆಗಿರುವ ಕಂಗನಾ ರನೌತ್, ಹಿಂದೂ ಧರ್ಮದ ಬಗ್ಗೆ ಅವಕಾಶ ಸಿಕ್ಕಾಗೆಲ್ಲ ಜ್ಞಾನ ನೀಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಇತ್ತೀಚೆಗಷ್ಟೆ ನಟಿ ಕಂಗನಾ ರನೌತ್ ಅಯೋಧ್ಯೆಯ ಹನುಮಾನ್ ದೇವಾಲಯದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಕಂಗನಾ ರನೌತ್, ದುಬಾರಿ ರೇಷಿಮೆ ಸೀರೆ ತೊಟ್ಟು, ಕಣ್ಣಿಗೆ ದುಬಾರಿ ಕನ್ನಡಕ, ಮೈಮೇಲಿ ಲಕ್ಷಾಂತರ ಮೌಲ್ಯದ ಆಭರಣ ಧರಿಸಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ನಟಿ ಕಂಗನಾ ರನೌತ್ ಸ್ವತಃ ಪೊರಕೆ ಹಿಡಿದು ದೇವಾಲಯ ಸ್ವಚ್ಛತೆ ಮಾಡಿದರು. ಅದರ ವಿಡಿಯೋ ವೈರಲ್ ಆಗಿದ್ದು ಕಂಗನಾ ನಡೆಗೆ ಟೀಕೆ ವ್ಯಕ್ತವಾಗಿದೆ.

ಕಂಗನಾ, ತಮ್ಮ ಶ್ರೀಮಂತಿಕೆ ತೋರಲು ಸ್ವಚ್ಛತಾ ಕಾರ್ಯ ಮಾಡಿದ್ದಾರೆಯೇ ಹೊರತು, ಭಕ್ತೆಯಾಗಿ ಮಾಡಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.

ಕಂಗನಾ ರನೌತ್ಗೆ ಟೀಕೆ, ಟ್ರೋಲ್ ಹೊಸದೇನೂ ಅಲ್ಲ. ಈ ಹಿಂದೆ ತಮ್ಮ ಹೇಳಿಕೆಗಳಿಗೆ ಹಲವು ಬಾರಿ ಕಂಗನಾ ಟೀಕೆಗೆ ಒಳಗಾಗಿದ್ದಾರೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




