AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ಹಬ್ಬದ ದಿನ ಬಾಗಲಕೋಟೆಯ ಬೀಳಗಿ ಪಟ್ಟಣದ ರೈತರ ಎಕ್ಕೆ ಎಲೆ, ಜಕನೇರನ ಕಟ್ಟೆ ಭವಿಷ್ಯ

ಕರ್ನಾಟಕದಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು (ಏ.09) ರಾಜ್ಯದ ಅನೇಕ ಊರುಗಳಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಜರಗುತ್ತವೆ. ಯುಗಾದಿ ಹಬ್ಬದ ದಿನ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ರೈತರು ಎಕ್ಕೆ ಎಲೆ ಭವಿಷ್ಯ ಹೇಳುತ್ತಾರೆ.

ರವಿ ಹೆಚ್ ಮೂಕಿ, ಕಲಘಟಗಿ
| Edited By: ವಿವೇಕ ಬಿರಾದಾರ|

Updated on: Apr 09, 2024 | 9:53 AM

Share
Karnataka News in Kannada: Bagalkot Bilagi Farmers ekke ele Bhavishya

ಕರ್ನಾಟಕದಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು (ಏ.09) ರಾಜ್ಯದ ಅನೇಕ ಊರುಗಳಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಜರಗುತ್ತವೆ.

1 / 9
Karnataka News in Kannada: Bagalkot Bilagi Farmers ekke ele Bhavishya

ಯುಗಾದಿ ಹಬ್ಬದ ದಿನ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ರೈತರು ಎಕ್ಕೆ ಎಲೆ ಭವಿಷ್ಯ ಹೇಳುತ್ತಾರೆ.

2 / 9
Karnataka News in Kannada: Bagalkot Bilagi Farmers ekke ele Bhavishya

ಯುಗಾದಿ ಅಮವಾಸ್ಯೆ ದಿನದಂದು ಎಕ್ಕೆ ಎಲೆ ಜಕನೇರನ ಕಟ್ಟೆ ನಿರ್ಮಾಣ ಮಾಡಿ. ಯುಗಾದಿ ಪಾಡ್ಯದ ದಿನ ರೈತರು ಭವಿಷ್ಯ ಹೇಳುತ್ತಾರೆ.

3 / 9
Karnataka News in Kannada: Bagalkot Bilagi Farmers ekke ele Bhavishya

ಮಣ್ಣಿನ ಐದು ಅಡಿ ಚೌಕಾಕಾರದ ಕಟ್ಟೆ ನಿರ್ಮಾಣ ಮಾಡುತ್ತಾರೆ. ಇದಕ್ಕೆ ಕಟ್ಟೆಗೆ ಜಕನೇರನ ಕಟ್ಟೆ ಎಂದು ಕರೆಯುತ್ತಾರೆ.

4 / 9
Karnataka News in Kannada: Bagalkot Bilagi Farmers ekke ele Bhavishya

ಈ ಕಟ್ಟೆಯ ಮೇಲೆ ಚಿಕ್ಕದಾದ ರಂದ್ರಗಳನ್ನು ಮಾಡಿ, ಅದರಲ್ಲಿ 27 ತರಹದ ಧಾನ್ಯಗಳನ್ನು ಹಾಕಿ, ಚರಣದ ಪ್ರಕಾರ ಎಕ್ಕೆ ಎಲೆ ಇಟ್ಟು ಪ್ರಯೋಗ ಮಾಡುತ್ತಾರೆ.

5 / 9
Karnataka News in Kannada: Bagalkot Bilagi Farmers ekke ele Bhavishya

ಕಟ್ಟೆ ‌ಮೇಲಿನ ರಂದ್ರದೊಳಗಿನ ಯಾವ ಧಾನ್ಯ ಉಬ್ಬುತ್ತದೆಯೋ, ಅದು ಸಮೃದ್ದಿಯಾಗಿ ಬೆಳೆಯುತ್ತದೆ ಎಂದು ಅರ್ಥ.

6 / 9
Karnataka News in Kannada: Bagalkot Bilagi Farmers ekke ele Bhavishya

ಎಕ್ಕೆ ಎಲೆಗಳ ತೇವಾಂಶದ ಮೇಲೆ ಈ ವರ್ಷ ಎಷ್ಟು ಪ್ರಮಾಣ ಮಳೆಯಾಗಲಿದೆ ಎಂದು ರೈತರು ತಿಳುದುಕೊಳ್ಳುತ್ತಾರೆ.

7 / 9
Karnataka News in Kannada: Bagalkot Bilagi Farmers ekke ele Bhavishya

ಜಕನೇರನ ಕಟ್ಟೆ ಯಾವ ಭಾಗದಲ್ಲಿ ಬಿರುಕು ಬಿಡುತ್ತದೆ ಆ ಭಾಗದಲ್ಲಿ ಭೂಕಂಪ ಆಗಲಿದೆ ಎಂದು ನಂಬಲಾಗಿದೆ. ಈ ಬಾರಿ ಕಟ್ಟೆಯ ಈಶಾನ್ಯ ಭಾಗದಲ್ಲಿ ಬಿರುಕು ಬಿಟ್ಟಿದೆ. ಈಶಾನ್ಯ ಭಾಗದಲ್ಲಿ ಭೂಕಂಪ ಸಂಭವಿಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

8 / 9
Karnataka News in Kannada: Bagalkot Bilagi Farmers ekke ele Bhavishya

ಮಣ್ಣು ಹಾಗೂ ಬೆಂಡಿನಿಂದ ಕುಂಟೆ, ರಂಟೆ, ಕೂರಿಗೆ, ಮಣ್ಣಿನ ಬಸವಣ್ಣ, ಮಡಿಕೆ, ತಕ್ಕಡಿ, ಮಣ್ಣಿನ ಮಗ್ಗ ನಿರ್ಮಾಣ ಮಾಡಿ ರೈತರು ಕಟ್ಟೆ ಸುತ್ತಲೂ ಇಡುತ್ತಾರೆ.

9 / 9
Ravi H Mooki
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us