AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಶತಮಾನಕ್ಕೊಮ್ಮೆ ನಡೆಯುವ ದೊಡ್ಡ ದ್ಯಾವರ ಉತ್ಸವ

ಕೋಲಾರ ಜಿಲ್ಲೆಯಲ್ಲಿ ಶತಮಾನಕ್ಕೊಮ್ಮೆ ನಡೆಯುವ ದೊಡ್ಡ ದ್ಯಾವರ ಉತ್ಸವ ನಡೆಯುತ್ತದೆ. ಒಂದು ತಲೆ ಮಾರಿನಿಂದ ಮತ್ತೊಂದು ತಲೆ ಮಾರಿನವರಿಗೆ ದೀಪ ಕೊಡುವ, ಕಿವಿ ಚುಚ್ಚುವ, ಹೂ ಮುಡಿಸುವ ವಿಶಿಷ್ಠ ಆಚರಣೆ. ಈ ಆಚರಣೆಯಲ್ಲಿ ಸಚಿವರು, ಶಾಸಕರು, ಹಲವು ಗ್ರಾಮಗಳ ಜನರು ಭಾಗಿಯಾಗಿದ್ದರು.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ವಿವೇಕ ಬಿರಾದಾರ

Updated on: Apr 30, 2025 | 7:36 PM

ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಬುಧವಾರ ತಲೆಮಾರಿಗೊಮ್ಮೆ ನಡೆಯುವ ಬಂಡಿ ದ್ಯಾವರ ಉತ್ಸವ ನಡೆಯಿತು. ಶತಮಾನಕ್ಕೊಮ್ಮೆ ಬಂಡಿದ್ಯಾವರ ಹಾಗೂ ದೀಪ ಕೊಡುವ, ಹೂ ಮುಡಿಸುವ ವಿಶಿಷ್ಠ ಆಚರಣೆ ನಡೆಯುತ್ತದೆ. ಅದರಂತೆ ಕಳೆದ 43 ವರ್ಷಗಳ ಹಿಂದೆ ನಡೆದಿದ್ದ ಉತ್ಸವ ಇಂದು ಆರಂಭವಾಯಿತು.

ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಬುಧವಾರ ತಲೆಮಾರಿಗೊಮ್ಮೆ ನಡೆಯುವ ಬಂಡಿ ದ್ಯಾವರ ಉತ್ಸವ ನಡೆಯಿತು. ಶತಮಾನಕ್ಕೊಮ್ಮೆ ಬಂಡಿದ್ಯಾವರ ಹಾಗೂ ದೀಪ ಕೊಡುವ, ಹೂ ಮುಡಿಸುವ ವಿಶಿಷ್ಠ ಆಚರಣೆ ನಡೆಯುತ್ತದೆ. ಅದರಂತೆ ಕಳೆದ 43 ವರ್ಷಗಳ ಹಿಂದೆ ನಡೆದಿದ್ದ ಉತ್ಸವ ಇಂದು ಆರಂಭವಾಯಿತು.

1 / 7
ಐದು ದಿನಗಳ ಕಾಲ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆದೆ. ಅದರಲ್ಲೂ ಗ್ರಾಮದವರೆಲ್ಲ ಸೇರಿ ಎಲ್ಲಾ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಇದರ ಉದ್ದೇಶ. ಅಲ್ಲದೆ ಮುಂದಿನ ತಲೆಮಾರಿನ ನವ ಜೋಡಿಗೆ ದೀಪ ಕೊಡುವುದು, ಅವರಿಗೆ ಮಕ್ಕಾಳಾಗಿದಿದ್ದರೆ, ಅವರಿಗೆ ಕಿವಿ ಚುಚ್ಚುವುದು, ಹೊಸದಾಗಿ ಮದುವೆಯಾಗಿದ್ದರೆ ಹೂ ಮುಡಿಸುವ ಸಂಪ್ರದಾಯ ಇದಾಗಿದೆ.

ಐದು ದಿನಗಳ ಕಾಲ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆದೆ. ಅದರಲ್ಲೂ ಗ್ರಾಮದವರೆಲ್ಲ ಸೇರಿ ಎಲ್ಲಾ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಇದರ ಉದ್ದೇಶ. ಅಲ್ಲದೆ ಮುಂದಿನ ತಲೆಮಾರಿನ ನವ ಜೋಡಿಗೆ ದೀಪ ಕೊಡುವುದು, ಅವರಿಗೆ ಮಕ್ಕಾಳಾಗಿದಿದ್ದರೆ, ಅವರಿಗೆ ಕಿವಿ ಚುಚ್ಚುವುದು, ಹೊಸದಾಗಿ ಮದುವೆಯಾಗಿದ್ದರೆ ಹೂ ಮುಡಿಸುವ ಸಂಪ್ರದಾಯ ಇದಾಗಿದೆ.

2 / 7
ಅಂದರೆ, ಶತಮಾನದ ಜವಾಬ್ದಾರಿಗಳನ್ನು ಮತ್ತೊಂದು ತಲೆ ಮಾರಿನವರಿಗೆ ಹಸ್ತಾಂತರ ಮಾಡುವುದು ಈ ಬಂಡಿ ದ್ಯಾವರ ಉದ್ದೇಶವಾಗಿದೆ. ಅದರಂತೆ ತಮ್ಮ ಹಳೆಯ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಈ ಬಂಡಿ ದ್ಯಾವರ ಆಚರಣೆ ಮಾಡಲಾಗುತ್ತಿದೆ ಅನ್ನೋದು ಶಾಸಕರ ಹೇಳಿದ್ದಾರೆ.

ಅಂದರೆ, ಶತಮಾನದ ಜವಾಬ್ದಾರಿಗಳನ್ನು ಮತ್ತೊಂದು ತಲೆ ಮಾರಿನವರಿಗೆ ಹಸ್ತಾಂತರ ಮಾಡುವುದು ಈ ಬಂಡಿ ದ್ಯಾವರ ಉದ್ದೇಶವಾಗಿದೆ. ಅದರಂತೆ ತಮ್ಮ ಹಳೆಯ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಈ ಬಂಡಿ ದ್ಯಾವರ ಆಚರಣೆ ಮಾಡಲಾಗುತ್ತಿದೆ ಅನ್ನೋದು ಶಾಸಕರ ಹೇಳಿದ್ದಾರೆ.

3 / 7
ಐದು ದಿನಗಳ ಕಾಲ ನಡೆಯುವ ಬಂಡಿದ್ಯಾವರ ಉತ್ಸವಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು. ಇದೇ ವೇಳೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕುಟುಂಬ ಸಹ ಈ ಆಚರಣೆಯಲ್ಲಿ ಭಾಗವಹಿಸಿದ್ದು, ಸಚಿವರು, ಶಾಸಕರು, ಪರಿಷತ್ ಸದಸ್ಯರು ಈ ಶತಮಾನದ ಹಬ್ಬದಲ್ಲಿ ಭಾಗಿಯಾಗಿದರು. ಈಗಾಗಲೆ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದ್ದು, ಐದು ದಿನಗಳ ಕಾಲ ಗ್ರಾಮದಲ್ಲಿ ವಿವಿಧ ಸಂಪ್ರದಾಯ, ಕಟ್ಟು ಪಾಡುಗಳನ್ನು ಪಾಲನೆ ಮಾಡಲಾಗುತ್ತದೆ.

ಐದು ದಿನಗಳ ಕಾಲ ನಡೆಯುವ ಬಂಡಿದ್ಯಾವರ ಉತ್ಸವಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು. ಇದೇ ವೇಳೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕುಟುಂಬ ಸಹ ಈ ಆಚರಣೆಯಲ್ಲಿ ಭಾಗವಹಿಸಿದ್ದು, ಸಚಿವರು, ಶಾಸಕರು, ಪರಿಷತ್ ಸದಸ್ಯರು ಈ ಶತಮಾನದ ಹಬ್ಬದಲ್ಲಿ ಭಾಗಿಯಾಗಿದರು. ಈಗಾಗಲೆ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದ್ದು, ಐದು ದಿನಗಳ ಕಾಲ ಗ್ರಾಮದಲ್ಲಿ ವಿವಿಧ ಸಂಪ್ರದಾಯ, ಕಟ್ಟು ಪಾಡುಗಳನ್ನು ಪಾಲನೆ ಮಾಡಲಾಗುತ್ತದೆ.

4 / 7
ಗ್ರಾಮದಲ್ಲಿರುವ ದೇವಾಲಯಗಳಿಗೆ ಸುಣ್ಣಬಣ್ಣ ಬಳಿದು ಸಿದ್ದ ಮಾಡಿಕೊಂಡು ಗ್ರಾಮದ ಜನರೆಲ್ಲರೂ ಕೂಡಾ ತಮ್ಮ ತಮ್ಮ ಮನೆಗಳಿಗೆ ಸುಣ್ಣಬಣ್ಣ ಬಳಿದು ಹಬ್ಬಕ್ಕೆ ತಯಾರಿ ಮಾಡಿಕೊಂಡು ಈ ಆರು ದಿನಗಳ ಕಾಲ ಊರಿನ ಹೊರಗಿನವರು, ಕುಲಕ್ಕೆ ಸಂಬಂಧಪಟ್ಟವರು ಎಲ್ಲರೂ ಕೂಡಾ ಗ್ರಾಮಕ್ಕೆ ಬಂದು ಈ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾರೆ.

ಗ್ರಾಮದಲ್ಲಿರುವ ದೇವಾಲಯಗಳಿಗೆ ಸುಣ್ಣಬಣ್ಣ ಬಳಿದು ಸಿದ್ದ ಮಾಡಿಕೊಂಡು ಗ್ರಾಮದ ಜನರೆಲ್ಲರೂ ಕೂಡಾ ತಮ್ಮ ತಮ್ಮ ಮನೆಗಳಿಗೆ ಸುಣ್ಣಬಣ್ಣ ಬಳಿದು ಹಬ್ಬಕ್ಕೆ ತಯಾರಿ ಮಾಡಿಕೊಂಡು ಈ ಆರು ದಿನಗಳ ಕಾಲ ಊರಿನ ಹೊರಗಿನವರು, ಕುಲಕ್ಕೆ ಸಂಬಂಧಪಟ್ಟವರು ಎಲ್ಲರೂ ಕೂಡಾ ಗ್ರಾಮಕ್ಕೆ ಬಂದು ಈ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾರೆ.

5 / 7
ಗ್ರಾಮದವರೆಲ್ಲಾ ಸೇರಿ ಒಂದೆಡೆ ದೀಪಾರಾಧನೆ ಮಾಡುವುದು, ಐದು ದಿನವೂ ಹೊರಗಿನಿಂದ ಬಂದವರು ಗ್ರಾಮದಲ್ಲಿ ನೆಲೆಸಿದ್ದು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ. ಈ ಹಿಂದೆ 43 ವರ್ಷಗಳ ಹಿಂದೆ ನಡೆದಿದ್ದ ಉತ್ಸವದಲ್ಲಿ ಹಲವು ಕಟ್ಟು ಪಾಡುಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಕಳೆದ ವರ್ಷ ನಡೆಯಬೇಕಿದ್ದ ಈ ಬಂಡಿ ದ್ಯಾವರ ಉತ್ಸವವನ್ನ ಈ ಬಾರಿ ಹಮ್ಮಿಕೊಂಡಿದ್ದು ಕಳೆದೊಂದು ವರ್ಷದಿಂದಲೇ ತಯಾರಿ ಮಾಡಿಕೊಳ್ಳಲಾಗಿತ್ತು. ಬಂಡಿ ದ್ಯಾವರ ಜಾತ್ರೆಯನ್ನು ಎಲ್ಲ ಜಾತಿ ಜನಾಂಗದವರು ಸೇರಿ ಮಾಡುತ್ತಾರೆ.

ಗ್ರಾಮದವರೆಲ್ಲಾ ಸೇರಿ ಒಂದೆಡೆ ದೀಪಾರಾಧನೆ ಮಾಡುವುದು, ಐದು ದಿನವೂ ಹೊರಗಿನಿಂದ ಬಂದವರು ಗ್ರಾಮದಲ್ಲಿ ನೆಲೆಸಿದ್ದು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ. ಈ ಹಿಂದೆ 43 ವರ್ಷಗಳ ಹಿಂದೆ ನಡೆದಿದ್ದ ಉತ್ಸವದಲ್ಲಿ ಹಲವು ಕಟ್ಟು ಪಾಡುಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಕಳೆದ ವರ್ಷ ನಡೆಯಬೇಕಿದ್ದ ಈ ಬಂಡಿ ದ್ಯಾವರ ಉತ್ಸವವನ್ನ ಈ ಬಾರಿ ಹಮ್ಮಿಕೊಂಡಿದ್ದು ಕಳೆದೊಂದು ವರ್ಷದಿಂದಲೇ ತಯಾರಿ ಮಾಡಿಕೊಳ್ಳಲಾಗಿತ್ತು. ಬಂಡಿ ದ್ಯಾವರ ಜಾತ್ರೆಯನ್ನು ಎಲ್ಲ ಜಾತಿ ಜನಾಂಗದವರು ಸೇರಿ ಮಾಡುತ್ತಾರೆ.

6 / 7
ಒಟ್ಟಾರೆಯಾಗಿ ಶತಮಾನಕ್ಕೊಮ್ಮೆ ನಡೆಯುವ ಈ ಬಂಡಿ ದ್ಯಾವರ ಉತ್ಸವ ಕುಟುಂಬದ ಜವಾಬ್ದಾರಿಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಸಂಪ್ರದಾಯವಾಗಿದೆ. ಊರ ಹಬ್ಬದಂತೆ ಮಾಡಿ ಸಂಬಂಧಗಳನ್ನು ಬೆಸೆಯುವ ಜೊತೆಗೆ ಶಕ್ತಿ ದೇವರುಗಳನ್ನು ಪೂಜಿಸಿ ಶಾಂತಿ ನೆಮ್ಮದಿಗೆ ಬೇಡಿಕೊಳ್ಳುವುದೆ ಬಂಡಿ ದ್ಯಾವರ ಉತ್ಸವದ ವಿಶೇಷ.

ಒಟ್ಟಾರೆಯಾಗಿ ಶತಮಾನಕ್ಕೊಮ್ಮೆ ನಡೆಯುವ ಈ ಬಂಡಿ ದ್ಯಾವರ ಉತ್ಸವ ಕುಟುಂಬದ ಜವಾಬ್ದಾರಿಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಸಂಪ್ರದಾಯವಾಗಿದೆ. ಊರ ಹಬ್ಬದಂತೆ ಮಾಡಿ ಸಂಬಂಧಗಳನ್ನು ಬೆಸೆಯುವ ಜೊತೆಗೆ ಶಕ್ತಿ ದೇವರುಗಳನ್ನು ಪೂಜಿಸಿ ಶಾಂತಿ ನೆಮ್ಮದಿಗೆ ಬೇಡಿಕೊಳ್ಳುವುದೆ ಬಂಡಿ ದ್ಯಾವರ ಉತ್ಸವದ ವಿಶೇಷ.

7 / 7
Follow us
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ