Kannada News Photo gallery Lok Sabha Election Karnataka 1st phase voting: Congress table agent wear the guarantee T shirt in Bengaluru
ಕಾಂಗ್ರೆಸ್ ಏಜೆಂಟರಿಂದ ಮತಗಟ್ಟೆ ಬಳಿ ಗ್ಯಾರೆಂಟಿ ಪ್ರಚಾರ: ಮತದಾರರ ಸೆಳೆಯಲು ‘ಚೊಂಬು’ ಟೀಶರ್ಟ್
ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಟೀಮ್ನ ಏಜೆಂಟ್ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆ 2024ರ ಎರಡನೇ ಹಂತದ (ಕರ್ನಾಟಕದ ಮೊದಲ ಹಂತದ) ಮತದಾನ ಇಂದು (ಏ.26) ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜಕಾರಣಿಗಳು, ಚಿತ್ರನಟರು ಮತ್ತು ಕ್ರೀಡಾಪಟುಗಳು ಸೇರಿದಂತೆ ಅನೇಕರು ಮತದಾನ ಮಾಡಿದರು.
1 / 8
ಎಲ್ಲ ತರಹದ ಪ್ರಚಾರ ಕಾರ್ಯಗಳಿಗೆ ತೆರ ಬಿದ್ದಿದೆ. ಆದರೂ ಕೂಡ ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಟೀಮ್ನ ಏಜೆಂಟ್ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.
2 / 8
ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ವಾರ್ಡ್ನ ಮತಗಟ್ಟೆ ಸಂಖ್ಯೆ 194 ಮತ್ತು 195 ಕ್ಕೆ ಕೆಪಿಸಿಸಿ ಸೋಶಿಯಲ್ ಮೀಡಿಯಾ ಟೀಮ್ ಟೀಶರ್ಟ್ ಧರಿಸಿಕೊಂಡು ಬಂದಿದೆ.
3 / 8
ಟೀಶರ್ಟ್ ಮೇಲೆ ಚಂಬು ಪೋಸ್ಟ್ ಚಿತ್ರವಿರುವ ಟಿ ಶರ್ಟ್ ಧರಿಸಿ, ‘ಚೊಂಬೇಶ್ವರನ ಸಹವಾಸ ದಿನವಿಡೀ ಉಪವಾಸವೆಂದು ಬರಹ’ ಇದ್ದು, ಪರೋಕ್ಷವಾಗಿ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.
4 / 8
ಬಿಜೆಪಿ ವಿರುದ್ಧ ಪರೋಕ್ಷವಾಗಿ ಲೇವಡಿ ಮತ್ತು ಗ್ಯಾರೆಂಟಿ ಚಿತ್ರ ಇರುವ ಟೀಶರ್ಟ್ ಧರಿಸುವ ಮೂಲಕ ಪರೋಕ್ಷವಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ.
5 / 8
ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತು ಪುತ್ರಿ ಸೌಮ್ಯ ರೆಡ್ಡಿ ಮತದಾನ ಮಾಡಿದರು. ಸೌಮ್ಯ ರೆಡ್ಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಇವರ ವಿರುದ್ಧ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಕಣದಲ್ಲಿದ್ದಾರೆ.
6 / 8
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಶಾಸಕ ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮ ಪೆರೇಸಂದ್ರ ಗ್ರಾಮದ ಮತಗಟ್ಟೆಗೆ ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದರು. ಮತದಾರರು ತಪ್ಪದೆ ಮತದಾನದಲ್ಲಿ ಬಾಗಿಯಾಗುವಂತೆ ಮನವಿ ಮಾಡಿದರು.
7 / 8
ಗೃಹ ಸಚಿವ ಡಾ ಪರಮೇಶ್ವರ್ ಪತ್ನಿ ಸಮೇತ ಆಗಮಿಸಿ ತುಮಕೂರಿನ ಸಿದ್ದಾರ್ಥ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮತಗಟ್ಟೆ ಸಂಖ್ಯೆ 57 ರಲ್ಲಿ ಮತದಾನ ಮಾಡಿದರು.