ಅತ್ಯುತ್ತಮ ನಟ-ನಟಿ ‘ರಾಷ್ಟ್ರ ಪ್ರಶಸ್ತಿ’ ಪಡೆದ ಕನ್ನಡದ ಪ್ರತಿಭಾವಂತ ಕಲಾವಿದರು ಇವರು..

ರಾಷ್ಟ್ರ ಪ್ರಶಸ್ತಿ ಪಡೆಯಬೇಕು ಎಂಬ ಆಸೆ ಬಹುತೇಕ ಎಲ್ಲ ಕಲಾವಿದರಿಗೆ ಇರುತ್ತದೆ. ಆದರೆ ಅಂಥ ಸಾಧನೆ ಸಾಧ್ಯವಾಗುವುದು ಕೆಲವರಿಗೆ ಮಾತ್ರ. ಪ್ರತಿ ವರ್ಷ ನ್ಯಾಷನಲ್​ ಅವಾರ್ಡ್​ ಘೋಷಣೆ ಆದಾಗ ಕನ್ನಡ ಚಿತ್ರರಂಗಕ್ಕೆ ಎಷ್ಟು ಪ್ರಶಸ್ತಿ ಬಂತು ಎಂಬುದನ್ನು ಕುತೂಹಲದಿಂದ ನೋಡುತ್ತಾರೆ ಕನ್ನಡಿಗರು. ಈವರೆಗೂ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದ ಸ್ಯಾಂಡಲ್​ವುಡ್​ ಕಲಾವಿದರ ಬಗ್ಗೆ ಮಾಹಿತಿ ಇಲ್ಲಿದೆ..

|

Updated on: Aug 16, 2024 | 6:52 PM

1973ರಲ್ಲಿ ಕನ್ನಡದ ನಟಿ ನಂದಿನಿ ಭಕ್ತವತ್ಸಲ ಅವರು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದರು. ‘ಕಾಡು’ ಸಿನಿಮಾದಲ್ಲಿನ ಅವರ ನಟನೆಗೆ ಈ ಅವಾರ್ಡ್​ ಲಭಿಸಿತು. ಶ್ರೀಕೃಷ್ಣ ಆಲನಹಳ್ಳಿ ಬರೆದ ‘ಕಾಡು’ ಕಾದಂಬರಿಯನ್ನು ಆಧರಿಸಿ ಸಿದ್ಧವಾದ ಆ ಸಿನಿಮಾಗೆ ಗಿರೀಶ್ ಕಾರ್ನಾಡ್​ ಅವರ ನಿರ್ದೇಶನವಿದೆ.

1973ರಲ್ಲಿ ಕನ್ನಡದ ನಟಿ ನಂದಿನಿ ಭಕ್ತವತ್ಸಲ ಅವರು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದರು. ‘ಕಾಡು’ ಸಿನಿಮಾದಲ್ಲಿನ ಅವರ ನಟನೆಗೆ ಈ ಅವಾರ್ಡ್​ ಲಭಿಸಿತು. ಶ್ರೀಕೃಷ್ಣ ಆಲನಹಳ್ಳಿ ಬರೆದ ‘ಕಾಡು’ ಕಾದಂಬರಿಯನ್ನು ಆಧರಿಸಿ ಸಿದ್ಧವಾದ ಆ ಸಿನಿಮಾಗೆ ಗಿರೀಶ್ ಕಾರ್ನಾಡ್​ ಅವರ ನಿರ್ದೇಶನವಿದೆ.

1 / 8
ಎಂ.ವಿ. ವಾಸುದೇವ ರಾವ್​ ಅವರು 1975ರಲ್ಲಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದರು. ಬಿ.ವಿ. ಕಾರಂತ್​ ಅವರು ನಿರ್ದೇಶನ ಮಾಡಿದ ‘ಚೋಮನ ದುಡಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಎಂ.ವಿ. ವಾಸುದೇವ ರಾವ್​ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತು. ಇದು ಶಿವರಾಮ ಕಾರಂತರ ಕಾದಂಬರಿ ಆಧಾರಿತ ಸಿನಿಮಾ.

ಎಂ.ವಿ. ವಾಸುದೇವ ರಾವ್​ ಅವರು 1975ರಲ್ಲಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದರು. ಬಿ.ವಿ. ಕಾರಂತ್​ ಅವರು ನಿರ್ದೇಶನ ಮಾಡಿದ ‘ಚೋಮನ ದುಡಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಎಂ.ವಿ. ವಾಸುದೇವ ರಾವ್​ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತು. ಇದು ಶಿವರಾಮ ಕಾರಂತರ ಕಾದಂಬರಿ ಆಧಾರಿತ ಸಿನಿಮಾ.

2 / 8
1986ರಲ್ಲಿ ನಟ ಚಾರುಹಾ​ಸನ್ ಅವರು ‘ತರಬನ ಕಥೆ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಪಡೆದುಕೊಂಡರು. ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಗಿರೀಶ್​ ಕಾಸರವಳ್ಳಿ. ಮೂಲತಃ ತಮಿಳು ಚಿತ್ರರಂಗದ ನಟರಾದ ಚಾರುಹಾಸನ್​​ ಅವರು ಕನ್ನಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

1986ರಲ್ಲಿ ನಟ ಚಾರುಹಾ​ಸನ್ ಅವರು ‘ತರಬನ ಕಥೆ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಪಡೆದುಕೊಂಡರು. ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಗಿರೀಶ್​ ಕಾಸರವಳ್ಳಿ. ಮೂಲತಃ ತಮಿಳು ಚಿತ್ರರಂಗದ ನಟರಾದ ಚಾರುಹಾಸನ್​​ ಅವರು ಕನ್ನಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

3 / 8
2004ರಲ್ಲಿ ನಟಿ ತಾರಾ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಲಭಿಸಿತು. ಗಿರೀಶ್​ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ‘ಹಸೀನಾ’ ಚಿತ್ರಕ್ಕಾಗಿ ತಾರಾ ಅವರು ಈ ಪ್ರಶಸ್ತಿ ಪಡೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ತಾರಾ ಅವರು ತಮ್ಮದೇ ಛಾಪು ಮೂಡಿಸಿ, ಬೇಡಿಕೆಯ ಕಲಾವಿದೆ ಆಗಿದ್ದಾರೆ.

2004ರಲ್ಲಿ ನಟಿ ತಾರಾ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಲಭಿಸಿತು. ಗಿರೀಶ್​ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ‘ಹಸೀನಾ’ ಚಿತ್ರಕ್ಕಾಗಿ ತಾರಾ ಅವರು ಈ ಪ್ರಶಸ್ತಿ ಪಡೆದುಕೊಂಡರು. ಕನ್ನಡ ಚಿತ್ರರಂಗದಲ್ಲಿ ತಾರಾ ಅವರು ತಮ್ಮದೇ ಛಾಪು ಮೂಡಿಸಿ, ಬೇಡಿಕೆಯ ಕಲಾವಿದೆ ಆಗಿದ್ದಾರೆ.

4 / 8
ಕನ್ನಡದ ಮತ್ತೋರ್ವ ಪ್ರತಿಭಾವಂತ ನಟಿ ಉಮಾಶ್ರೀ ಅವರು ಕೂಡ ‘ಅತ್ಯುತ್ತಮ ನಟಿ’ ನ್ಯಾಷನಲ್​ ಅವಾರ್ಡ್​​ ಪಡೆದಿದ್ದಾರೆ. ಗಿರೀಶ್​ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ‘ಗುಲಾಬಿ ಟಾಕೀಸ್​’ ಚಿತ್ರದಲ್ಲಿನ ಅಭಿನಯಕ್ಕಾಗಿ 2007ರಲ್ಲಿ ಉಮಾಶ್ರೀ ಅವರಿಗೆ ಈ ಪ್ರಶಸ್ತಿ ಸಿಕ್ಕಿತು.

ಕನ್ನಡದ ಮತ್ತೋರ್ವ ಪ್ರತಿಭಾವಂತ ನಟಿ ಉಮಾಶ್ರೀ ಅವರು ಕೂಡ ‘ಅತ್ಯುತ್ತಮ ನಟಿ’ ನ್ಯಾಷನಲ್​ ಅವಾರ್ಡ್​​ ಪಡೆದಿದ್ದಾರೆ. ಗಿರೀಶ್​ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ‘ಗುಲಾಬಿ ಟಾಕೀಸ್​’ ಚಿತ್ರದಲ್ಲಿನ ಅಭಿನಯಕ್ಕಾಗಿ 2007ರಲ್ಲಿ ಉಮಾಶ್ರೀ ಅವರಿಗೆ ಈ ಪ್ರಶಸ್ತಿ ಸಿಕ್ಕಿತು.

5 / 8
2014ರಲ್ಲಿ ನಟ ಸಂಚಾರಿ ವಿಜಯ್​ ಅವರು ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ‘ಬೆಸ್ಟ್​ ಆ್ಯಕ್ಟರ್​’ ನ್ಯಾಷನಲ್ ಅವಾರ್ಡ್​ ಪಡೆದುಕೊಂಡರು. ತೃತೀಯ ಲಿಂಗಿಯ ಪಾತ್ರದಲ್ಲಿ ಅವರ ನಟನೆ ಎಲ್ಲರ ಮೆಚ್ಚುಗೆ ಪಡೆಯಿತು. ಬಿ.ಎಸ್​. ಲಿಂಗದೇವರು ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

2014ರಲ್ಲಿ ನಟ ಸಂಚಾರಿ ವಿಜಯ್​ ಅವರು ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ‘ಬೆಸ್ಟ್​ ಆ್ಯಕ್ಟರ್​’ ನ್ಯಾಷನಲ್ ಅವಾರ್ಡ್​ ಪಡೆದುಕೊಂಡರು. ತೃತೀಯ ಲಿಂಗಿಯ ಪಾತ್ರದಲ್ಲಿ ಅವರ ನಟನೆ ಎಲ್ಲರ ಮೆಚ್ಚುಗೆ ಪಡೆಯಿತು. ಬಿ.ಎಸ್​. ಲಿಂಗದೇವರು ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

6 / 8
2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಿಷಬ್​ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. 2024ರ ಆಗಸ್ಟ್​ 16ರಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ರಿಷಬ್​ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದಾರೆ.

2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಿಷಬ್​ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. 2024ರ ಆಗಸ್ಟ್​ 16ರಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ರಿಷಬ್​ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದಾರೆ.

7 / 8
ಈ ಕಲಾವಿದರು ಮಾತ್ರವಲ್ಲದೇ ‘ಸ್ಪೆಷಲ್​ ಮೆನ್ಷನ್​ ಅವಾರ್ಡ್​​’, ‘ಸ್ಪೆಷಲ್​ ಜ್ಯೂರಿ ಅವಾರ್ಡ್​’ ವಿಭಾಗಗಳಲ್ಲಿ ಜಯಮಾಲಾ (1997), ಎಚ್​.ಜಿ. ದತ್ತಾತ್ರೆಯ (2003, 2012), ಶ್ರುತಿ ಹರಿಹರನ್​ (2018) ಅವರು ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಕನ್ನಡ ಚಿತ್ರರಂಗದ ಗರಿಮೆ ಹೆಚ್ಚಿಸಿದ್ದಾರೆ.

ಈ ಕಲಾವಿದರು ಮಾತ್ರವಲ್ಲದೇ ‘ಸ್ಪೆಷಲ್​ ಮೆನ್ಷನ್​ ಅವಾರ್ಡ್​​’, ‘ಸ್ಪೆಷಲ್​ ಜ್ಯೂರಿ ಅವಾರ್ಡ್​’ ವಿಭಾಗಗಳಲ್ಲಿ ಜಯಮಾಲಾ (1997), ಎಚ್​.ಜಿ. ದತ್ತಾತ್ರೆಯ (2003, 2012), ಶ್ರುತಿ ಹರಿಹರನ್​ (2018) ಅವರು ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಕನ್ನಡ ಚಿತ್ರರಂಗದ ಗರಿಮೆ ಹೆಚ್ಚಿಸಿದ್ದಾರೆ.

8 / 8
Follow us
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?