- Kannada News Photo gallery Post Office for raksha bandhan Festival: Staff on duty on holiday, delivering rakhi door to door, taja suddi
ರಕ್ಷಾ ಹಬ್ಬಕ್ಕೆ ಅಂಚೆ ಕಚೇರಿ ಸಾಥ್: ರಜೆ ದಿನದಂದು ಕರ್ತವ್ಯ, ಮನೆ ಮನೆಗೆ ರಾಖಿ ತಲುಪಿಸಿದ ಸಿಬ್ಬಂದಿ
ಸೋಮವಾರದಂದು ಎಲ್ಲೆಡೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ರಕ್ಷಾ ಬಂಧನ ಹಬ್ಬಕ್ಕೆ ಬಾಗಲಕೋಟೆಯಲ್ಲಿ 25 ಅಂಚೆ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಸೋಮವಾರ ರಕ್ಷಾ ಬಂಧನ ಹಿನ್ನೆಲೆ ರವಿವಾರ ರಜೆ ದಿನವಾಗಿದ್ದರೂ ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ರಾಖಿಗಳನ್ನು ವಿಳಾಸಕ್ಕೆ ತಲುಪಿಸುತ್ತಿದ್ದಾರೆ.
Updated on: Aug 18, 2024 | 10:03 PM

ಅಣ್ಣ ತಂಗಿಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ. ನಾಳೆ ಅಂದರೆ ಸೋಮವಾರದಂದು ಎಲ್ಲೆಡೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ರಕ್ಷಾ ಬಂಧನ ಹಬ್ಬಕ್ಕೆ ಬಾಗಲಕೋಟೆಯಲ್ಲಿ 25 ಅಂಚೆ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ.

ಹೌದು. ಸೋಮವಾರ ರಕ್ಷಾ ಬಂಧನ ಹಿನ್ನೆಲೆ ರವಿವಾರ ರಜೆ ದಿನವಾಗಿದ್ದರೂ ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ರಾಖಿಗಳನ್ನು ವಿಳಾಸಕ್ಕೆ ತಲುಪಿಸುತ್ತಿದ್ದಾರೆ.

ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಸಹೋದರಿಯರ ರಾಖಿಯನ್ನು ಸಹೋದರರಿಗೆ ತಲುಪಿಸಿದ್ದಾರೆ.

ರಜೆ ದಿನವೂ ಕೆಲಸ ಮಾಡುವ ಮೂಲಕ ಸಹೋದರ ಸಹೋದರಿಯರ ಬಾಂಧವ್ಯವನ್ನು ಸಿಬ್ಬಂದಿಗಳು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ 25 ಜನ ಅಂಚೆ ಸಿಬ್ಬಂದಿಗಳು ಬಂದ ರಾಖಿಗಳನ್ನು ವಿಳಾಸಕ್ಕೆ ತಲುಪಿಸಿದ್ದಾರೆ. ಆ ಮೂಲಕ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.
Read More
