ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಆರತಿಯನ್ನು ಮಾಡಬೇಕು. ತದನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ, ಆಶೀರ್ವಾದ ಪಡೆಯಿರಿ. ತೆಂಗಿನಕಾಯಿ, ವೀಳ್ಯದೆಲೆ, ಬಾಳೆಹಣ್ಣು, ಅರಿಶಿನ, ಕುಂಕುಮ ಮತ್ತು ರವಿಕೆ ಕಣ ನೀಡಬೇಕು. ನೆನೆಸಿದ ಕಡಲೆಯನ್ನು ನೈವೇದ್ಯ ಮಾಡುವ ಮೂಲಕ ಶ್ರೀ ವರಲಕ್ಷ್ಮೀ ದೇವತಾಯೈ ನಮ: ವಾಯನ ದಾನಂ ಸಮರ್ಪಯಾಮಿ ಎಂದು ಸ್ಮರಿಸಬೇಕು.