AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ಚರಿತಂ’ ನಾಟಕ ವೀಕ್ಷಿಸಿ ಐದು ನಿಮಿಷ ಚಪ್ಪಾಳೆ ತಟ್ಟಿದ ಪ್ರೇಕ್ಷಕರು

ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ‘ಸೀತಾ ಚರಿತಂ’ ನಾಟಕದ ಭವ್ಯ ಪ್ರದರ್ಶನ ನಡೆಯಿತು. 513 ಕಲಾವಿದರ ಭಾಗವಹಿಸುವಿಕೆಯೊಂದಿಗೆ, ಈ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಪ್ರದರ್ಶನದ ಅಂತ್ಯದಲ್ಲಿ, ಪ್ರೇಕ್ಷಕರು ಐದು ನಿಮಿಷಗಳ ಕಾಲ ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jul 08, 2025 | 11:12 AM

Share
ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಗ್ರ್ಯಾಂಡ್ ಥಿಯೇಟರ್‌ನಲ್ಲಿ ‘ಸೀತಾ ಚರಿತಂ’ ನಾಟಕದ ಪ್ರಥಮ ಪ್ರದರ್ಶನ ನಡೆಯಿತು. ಸುಮಾರು 513 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಈ ಪ್ರಥಮ ಪ್ರದರ್ಶನದ ನಂತರ, ಪ್ರೇಕ್ಷಕರು ಎದ್ದು ನಿಂತು 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. ನರ್ತಕಿ ಶ್ರೀವಿದ್ಯಾ ಪ್ರೇಮ್ವಿ ಸೀತಾ ಚರಿತಂ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಗ್ರ್ಯಾಂಡ್ ಥಿಯೇಟರ್‌ನಲ್ಲಿ ‘ಸೀತಾ ಚರಿತಂ’ ನಾಟಕದ ಪ್ರಥಮ ಪ್ರದರ್ಶನ ನಡೆಯಿತು. ಸುಮಾರು 513 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಈ ಪ್ರಥಮ ಪ್ರದರ್ಶನದ ನಂತರ, ಪ್ರೇಕ್ಷಕರು ಎದ್ದು ನಿಂತು 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. ನರ್ತಕಿ ಶ್ರೀವಿದ್ಯಾ ಪ್ರೇಮ್ವಿ ಸೀತಾ ಚರಿತಂ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

1 / 5
ಈ ನಾಟಕ ವೀಕ್ಷಣೆಗೆ ಪ್ರಸಿದ್ಧ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಕೂಡ ಆಗಮಿಸಿದ್ದರು. ನಾಟಕ ನೋಡಿ ಖುಷಿ ಆದರು.  ‘ನಾನು ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ. ಶ್ರೀವಿದ್ಯಾ ನಿರ್ದೇಶಕಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು. ಜನಪ್ರಿಯ ನಟಿ ಹಿನಾ ಖಾನ್ ‘ನನಗೆ ಕಾರ್ಯಕ್ರಮ ತುಂಬಾ ಇಷ್ಟವಾಯಿತು. ಇಡೀ ಕಾರ್ಯಕ್ರಮದ ಉದ್ದಕ್ಕೂ ನಾನು ರೋಮಾಂಚನಗೊಂಡೆ. ಶ್ರೀವಿದ್ಯಾ ಸೀತೆಯ ವ್ಯಕ್ತಿತ್ವದಂತೆ ಕಾಣುತ್ತಿದ್ದರು. ಎಲ್ಲಾ ನಟರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚಿಕೊಂಡರು.

ಈ ನಾಟಕ ವೀಕ್ಷಣೆಗೆ ಪ್ರಸಿದ್ಧ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಕೂಡ ಆಗಮಿಸಿದ್ದರು. ನಾಟಕ ನೋಡಿ ಖುಷಿ ಆದರು.  ‘ನಾನು ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ. ಶ್ರೀವಿದ್ಯಾ ನಿರ್ದೇಶಕಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು. ಜನಪ್ರಿಯ ನಟಿ ಹಿನಾ ಖಾನ್ ‘ನನಗೆ ಕಾರ್ಯಕ್ರಮ ತುಂಬಾ ಇಷ್ಟವಾಯಿತು. ಇಡೀ ಕಾರ್ಯಕ್ರಮದ ಉದ್ದಕ್ಕೂ ನಾನು ರೋಮಾಂಚನಗೊಂಡೆ. ಶ್ರೀವಿದ್ಯಾ ಸೀತೆಯ ವ್ಯಕ್ತಿತ್ವದಂತೆ ಕಾಣುತ್ತಿದ್ದರು. ಎಲ್ಲಾ ನಟರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚಿಕೊಂಡರು.

2 / 5
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ಗಾಯಕಿ ಅನುರಾಧಾ ಪೌಡ್ವಾಲ್, ಹಿರಿಯ ನಟರಾದ ಪಂಕಜ್ ಬೆರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಧಾರಾವಿಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಉಚಿತ ಶಾಲೆಯ 50 ಕ್ಕೂ ಹೆಚ್ಚು ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ಗಾಯಕಿ ಅನುರಾಧಾ ಪೌಡ್ವಾಲ್, ಹಿರಿಯ ನಟರಾದ ಪಂಕಜ್ ಬೆರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಧಾರಾವಿಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಉಚಿತ ಶಾಲೆಯ 50 ಕ್ಕೂ ಹೆಚ್ಚು ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

3 / 5
‘ಸೀತಾ ಚರಿತಂ’ ಕಾರ್ಯಕ್ರಮದ ಬಗ್ಗೆ ಅನುರಾಧಾ ಪೌಡ್ವಾಲ್ ಮಾತನಾಡಿದ್ದಾರೆ. ‘ಇದು ನಮಗೆ ಅದ್ಭುತ ಅನುಭವವಾಗಿತ್ತು. ಇದಕ್ಕಾಗಿ ಬಹಳಷ್ಟು ಶ್ರಮ ಬೇಕಾಯಿತು. ನಮ್ಮ ಸಂಸ್ಕೃತಿಯನ್ನು ಹರಡಲು ಮತ್ತು ಮಕ್ಕಳಲ್ಲಿ ಧರ್ಮದ ಬಗ್ಗೆ ಆಸಕ್ತಿ ಮೂಡಿಸಲು ಇದು ಒಂದು ಪ್ರಮುಖ ಮಾರ್ಗವಾಗಿದೆ’ ಎಂದಿದ್ದಾರೆ.

‘ಸೀತಾ ಚರಿತಂ’ ಕಾರ್ಯಕ್ರಮದ ಬಗ್ಗೆ ಅನುರಾಧಾ ಪೌಡ್ವಾಲ್ ಮಾತನಾಡಿದ್ದಾರೆ. ‘ಇದು ನಮಗೆ ಅದ್ಭುತ ಅನುಭವವಾಗಿತ್ತು. ಇದಕ್ಕಾಗಿ ಬಹಳಷ್ಟು ಶ್ರಮ ಬೇಕಾಯಿತು. ನಮ್ಮ ಸಂಸ್ಕೃತಿಯನ್ನು ಹರಡಲು ಮತ್ತು ಮಕ್ಕಳಲ್ಲಿ ಧರ್ಮದ ಬಗ್ಗೆ ಆಸಕ್ತಿ ಮೂಡಿಸಲು ಇದು ಒಂದು ಪ್ರಮುಖ ಮಾರ್ಗವಾಗಿದೆ’ ಎಂದಿದ್ದಾರೆ.

4 / 5
‘ಸೀತಾ ಚರಿತಂ’  ನಾಟಕವನ್ನು ರಾಮಾಯಣದ 20 ಕ್ಕೂ ಹೆಚ್ಚು ಆವೃತ್ತಿಗಳನ್ನು ಅಧ್ಯಯನ ಮಾಡಿ ರಚಿಸಲಾಗಿದೆ. ಶ್ರೀ ಶ್ರೀ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಬರೆಯಲಾಗಿದೆ. ಈ ಪ್ರದರ್ಶನವು ಶಾಸ್ತ್ರೀಯ ನೃತ್ಯ, ಜಾನಪದ ಕಲೆ, ಬೊಂಬೆಯಾಟ, ಮೂಲ ಸಂಗೀತ ಮತ್ತು ಡಿಜಿಟಲ್ ಯುಗದ ಮಿಶ್ರಣದ ಮೂಲಕ ಸೀತೆಯ ಜೀವನದ ಪ್ರೀತಿ, ತ್ಯಾಗ, ಜ್ಞಾನ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. 1327 ಆರ್ಟ್ ಆಫ್ ಲಿವಿಂಗ್ ಉಚಿತ ಶಾಲೆಗಳಲ್ಲಿ ಕಲಿಯುತ್ತಿರುವ 1 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಇದರಲ್ಲಿ ಸಂಗ್ರಹಿಸಿದ ಹಣ ಬಳಕೆ ಆಗಲಿದೆ.

‘ಸೀತಾ ಚರಿತಂ’  ನಾಟಕವನ್ನು ರಾಮಾಯಣದ 20 ಕ್ಕೂ ಹೆಚ್ಚು ಆವೃತ್ತಿಗಳನ್ನು ಅಧ್ಯಯನ ಮಾಡಿ ರಚಿಸಲಾಗಿದೆ. ಶ್ರೀ ಶ್ರೀ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಬರೆಯಲಾಗಿದೆ. ಈ ಪ್ರದರ್ಶನವು ಶಾಸ್ತ್ರೀಯ ನೃತ್ಯ, ಜಾನಪದ ಕಲೆ, ಬೊಂಬೆಯಾಟ, ಮೂಲ ಸಂಗೀತ ಮತ್ತು ಡಿಜಿಟಲ್ ಯುಗದ ಮಿಶ್ರಣದ ಮೂಲಕ ಸೀತೆಯ ಜೀವನದ ಪ್ರೀತಿ, ತ್ಯಾಗ, ಜ್ಞಾನ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. 1327 ಆರ್ಟ್ ಆಫ್ ಲಿವಿಂಗ್ ಉಚಿತ ಶಾಲೆಗಳಲ್ಲಿ ಕಲಿಯುತ್ತಿರುವ 1 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಇದರಲ್ಲಿ ಸಂಗ್ರಹಿಸಿದ ಹಣ ಬಳಕೆ ಆಗಲಿದೆ.

5 / 5

Published On - 11:07 am, Tue, 8 July 25

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ