AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು […]

ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ
KUSHAL V
| Edited By: |

Updated on:Nov 23, 2020 | 12:10 PM

Share

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು ಹುಡುಕುತ್ತಿದ್ದರು. ಆಗಲೇ ನೋಡಿ ಹುಟ್ಟಿದ್ದು ಕಂಪ್ಯೂಟರ್​ ಮೌಸ್​.

ಡಗ್​ ರಚಿಸಿದ ಮೌಸ್​ನ ವಿನ್ಯಾಸಕ್ಕೆ ರೂಪರೇಷೆ ನೀಡಿದ್ದು ವಿಲಿಯಮ್. ಮರದಿಂದ ಮಾಡಿರುವ ಪುಟ್ಟ ಡಬ್ಬಿಯಂತೆ ಹೋಲುತ್ತಿದ ಮೊದಲ ಮೌಸ್​ನಲ್ಲಿ ಕೇವಲ ಒಂದೇ ಬಟನ್​ ಹಾಗೂ ಎರಡು ಗಾಲಿಗಳನ್ನ ಲಂಬಕೋನಾಕಾರದಲ್ಲಿ (90 degrees) ಅಳವಡಿಸಲಾಗಿತ್ತು. ಇದರಿಂದ ಬಹು ಸುಲಭವಾಗಿ ಸ್ಕ್ರೀನ್​ ಮೇಲೆ ಪದಗಳನ್ನ ಸೆಲೆಕ್ಟ್​ ಮಾಡಲು ಸಾಧ್ಯವಾಗಿತ್ತು.

ಅಂದು ಸರಳವಾಗಿ ಬಳಕೆಗೆ ಮೌಸ್​ ಇದೀಗ ಹೊಸ ಹೊಸ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಾಧನಕ್ಕೆ ಮೌಸ್​ ಎಂದು ಯಾರು ಹೆಸರಿಟ್ಟರು ಅನ್ನೋದು ಡಗ್​ ಮತ್ತು ವಿಲಿಯಮ್​ಗೆ ಗೊತ್ತೇಯಾಗಲಿಲ್ಲ. ಆದರೆ, ವಿಪರ್ಯಾಸವೆಂದರೆ, ಈ ಜೋಡಿ ತಮ್ಮ ಆವಿಷ್ಕಾರದಿಂದ ಒಂದು ನಯಾ ಪೈಸೆ ಗಳಿಸಲಿಲ್ಲವಂತೆ. ಆದರೂ, ತಮ್ಮ ಆವಿಷ್ಕಾರದ ಮೂಲಕ ಜನರ ಮನಸ್ಸಲ್ಲಿ ಶಾಶ್ವತವಾಗಿ ಗೌರವ ಪಡೆದಿದ್ದಾರೆ.

Published On - 12:57 pm, Tue, 4 August 20

Follow Us
KUSHAL V
KUSHAL V
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ