AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು […]

ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ
KUSHAL V
| Edited By: ಆಯೇಷಾ ಬಾನು|

Updated on:Nov 23, 2020 | 12:10 PM

Share

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು ಹುಡುಕುತ್ತಿದ್ದರು. ಆಗಲೇ ನೋಡಿ ಹುಟ್ಟಿದ್ದು ಕಂಪ್ಯೂಟರ್​ ಮೌಸ್​.

ಡಗ್​ ರಚಿಸಿದ ಮೌಸ್​ನ ವಿನ್ಯಾಸಕ್ಕೆ ರೂಪರೇಷೆ ನೀಡಿದ್ದು ವಿಲಿಯಮ್. ಮರದಿಂದ ಮಾಡಿರುವ ಪುಟ್ಟ ಡಬ್ಬಿಯಂತೆ ಹೋಲುತ್ತಿದ ಮೊದಲ ಮೌಸ್​ನಲ್ಲಿ ಕೇವಲ ಒಂದೇ ಬಟನ್​ ಹಾಗೂ ಎರಡು ಗಾಲಿಗಳನ್ನ ಲಂಬಕೋನಾಕಾರದಲ್ಲಿ (90 degrees) ಅಳವಡಿಸಲಾಗಿತ್ತು. ಇದರಿಂದ ಬಹು ಸುಲಭವಾಗಿ ಸ್ಕ್ರೀನ್​ ಮೇಲೆ ಪದಗಳನ್ನ ಸೆಲೆಕ್ಟ್​ ಮಾಡಲು ಸಾಧ್ಯವಾಗಿತ್ತು.

ಅಂದು ಸರಳವಾಗಿ ಬಳಕೆಗೆ ಮೌಸ್​ ಇದೀಗ ಹೊಸ ಹೊಸ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಾಧನಕ್ಕೆ ಮೌಸ್​ ಎಂದು ಯಾರು ಹೆಸರಿಟ್ಟರು ಅನ್ನೋದು ಡಗ್​ ಮತ್ತು ವಿಲಿಯಮ್​ಗೆ ಗೊತ್ತೇಯಾಗಲಿಲ್ಲ. ಆದರೆ, ವಿಪರ್ಯಾಸವೆಂದರೆ, ಈ ಜೋಡಿ ತಮ್ಮ ಆವಿಷ್ಕಾರದಿಂದ ಒಂದು ನಯಾ ಪೈಸೆ ಗಳಿಸಲಿಲ್ಲವಂತೆ. ಆದರೂ, ತಮ್ಮ ಆವಿಷ್ಕಾರದ ಮೂಲಕ ಜನರ ಮನಸ್ಸಲ್ಲಿ ಶಾಶ್ವತವಾಗಿ ಗೌರವ ಪಡೆದಿದ್ದಾರೆ.

Published On - 12:57 pm, Tue, 4 August 20

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ