AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adhik Maas Amavasya 2023: ಅಧಿಕ ಶ್ರಾವಣ ಮಾಸದ ಅಮಾವಾಸ್ಯೆಯ ಮುಹೂರ್ತ, ಪೂಜೆ ವಿಧಾನ ಬಗ್ಗೆ ತಿಳಿದಿದೆಯಾ?

ಅಮವಾಸ್ಯೆ ಮೂಲಕ ಅಂದರೆ ಆಗಸ್ಟ್ 16 ರಂದು ಈ ತಿಂಗಳು ಮುಕ್ತಾಯಗೊಂಡು ನಿಜ ಶ್ರಾವಣ ಮಾಸ ಆರಂಭವಾಗಲಿದೆ. ಈ ಅಮವಾಸ್ಯೆಯಂದು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಜೊತೆಗೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಪೂರ್ವಜರನ್ನು ಸಂತೃಪ್ತಿಪಡಿಸಲು ತರ್ಪಣ, ಪಿಂಡದಾನ ಮಾಡಿದರೆ ಪಿತೃದೋಷವೂ ನಿವಾರಣೆಯಾಗುತ್ತದೆ.

Adhik Maas Amavasya 2023: ಅಧಿಕ ಶ್ರಾವಣ ಮಾಸದ ಅಮಾವಾಸ್ಯೆಯ ಮುಹೂರ್ತ, ಪೂಜೆ ವಿಧಾನ ಬಗ್ಗೆ ತಿಳಿದಿದೆಯಾ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 16, 2023 | 5:02 AM

Share

ಚಾತುರ್ಮಾಸದ ಮೊದಲ ತಿಂಗಳು ಶ್ರಾವಣ ಮಾಸ. ಅದರಲ್ಲಿಯೂ ಈ ಬಾರಿ ಅಧಿಕ ಶ್ರಾವಣ ಮಾಸ ಬಂದಿರುವುದರಿಂದ ವ್ರತಾಚರಣೆ ಮಾಡುವವರಿಗೆ ಶುಭವಾಗಿದೆ. ಅಮವಾಸ್ಯೆ ಮೂಲಕ ಅಂದರೆ ಆಗಸ್ಟ್ 16 ರಂದು ಬುಧವಾರ, ಈ ತಿಂಗಳು ಮುಕ್ತಾಯ ಗೊಂಡು ನಿಜ ಶ್ರಾವಣ ಮಾಸ ಆರಂಭವಾಗಲಿದೆ. ಈ ಅಮವಾಸ್ಯೆಯಂದು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಜೊತೆಗೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಪೂರ್ವಜರನ್ನು ಸಂತೃಪ್ತಿಪಡಿಸಲು ತರ್ಪಣ, ಪಿಂಡದಾನ ಮಾಡಿದರೆ ಪಿತೃದೋಷವೂ ನಿವಾರಣೆಯಾಗುತ್ತದೆ.

ಅಮವಾಸ್ಯೆಯ ದಿನ ಸ್ನಾನ ಮಾಡಿ ಶ್ರದ್ದೆಯಿಂದ ದಾನ ಮಾಡಿದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಜೊತೆಗೆ ನಿಮ್ಮ ಜಾತಕದಲ್ಲಿರುವ ಕಂಟಕಗಳಿಂದ ಮುಕ್ತಿ ದೊರೆಯುತ್ತದೆ. ಆದರೆ ಈ ದಿನ ವ್ರತಾಚರಣೆ, ದೇವಸ್ಥಾನಗಳಿಗೆ ಹೋಗುವವರು ಕಪ್ಪು ಬಟ್ಟೆಯನ್ನು ಧರಿಸಬಾರದು. ಇದೆಲ್ಲದರ ಜೊತೆಗೆ ಅರಳಿ ಮರವನ್ನು ಪೂಜಿಸಿ, 5, 11 ಅಥವಾ 21 ಸುತ್ತು ಸುತ್ತಿ ಬರುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.

ಸಮಯ, ಆಚರಣೆ ಯಾವಾಗ?

ಅಧಿಕ ಮಾಸದ ಅಮಾವಾಸ್ಯೆ ತಿಥಿ ಆರಂಭವಾಗುವುದು ಆಗಸ್ಟ್ 15 ರಂದು ಮಂಗಳವಾರ ಮಧ್ಯಾಹ್ನ 12.42ರಿಂದ. ತಿಥಿ ಮುಕ್ತಾಯವಾಗುವುದು, ಆಗಸ್ಟ್ 16 ರಂದು ಬುಧವಾರ ಮಧ್ಯಾಹ್ನ 03.07 ಕ್ಕೆ. ಯಾವ ತಿಥಿಯಲ್ಲಿ ಸೂರ್ಯ ಉದಯದ ಮೂಹೂರ್ತ ವಿರುತ್ತದೆಯೋ ಅದೇ ದಿನ ಆಚರಣೆ ಮಾಡಲಾಗುತ್ತದೆ. ಹಾಗಾಗಿ ಇದರ ಅನುಗುಣವಾಗಿ ಅಧಿಕ ಅಮಾವಾಸ್ಯೆಯನ್ನು ಆಗಸ್ಟ್‌ 16 ರಂದು ಬುಧವಾರ ಆಚರಿಸಲಾಗುವುದು.

ಇದನ್ನೂ ಓದಿ: ಅಧಿಕ ಶ್ರಾವಣ ಮಾಸದಲ್ಲಿ ಸೋಮವಾರದ ವ್ರತಾಚರಣೆಯ ಫಲಗಳೇನು? ಯಾವ ಮಂತ್ರವನ್ನು ಪಠಿಸಬೇಕು?

ಯಾವ ರೀತಿಯಲ್ಲಿ ಆಚರಣೆ ಮಾಡಬೇಕು?

ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಬಳಿಕ ಉಪವಾಸ ಆರಂಭಿಸಬೇಕು. ಯಾವುದೇ ರೀತಿಯ ಮಾಂಸಾಹಾರ ಮತ್ತು ಅಕ್ಕಿ ಬೆರೆಸಿದ ಆಹಾರಗಳನ್ನು ಸೇವಿಸಬಾರದು. ಹಣ್ಣು, ತರಕಾರಿ ರವೆ ಸೇರಿಸಿದ ಆಹಾರಗಳನ್ನು ಸೇವಿಸಬಹುದು. ಪೂಜೆ ಮುಗಿಸಿ, ದೇವಸ್ಥಾನಗಳಿಗೆ ಹೋಗಿ ಬರಬಹುದು. ಇಲ್ಲವಾದಲ್ಲಿ ಹಸುವಿಗೆ ಪ್ರಸಾದ ನೀಡಿ, ನೀವು ನೀರು ಆಹಾರ ಸೇವಿಸಬಹುದು. ನಿಮಗೆ ಆಗುವುದಾದರೆ ಹತ್ತಿರದಲ್ಲಿರುವ ಬಡವರ ಮನೆಗೆ ಬಟ್ಟೆ, ಎಳ್ಳು, ಹೆಸರುಕಾಳು, ಸಿಹಿತಿಂಡಿಗಳನ್ನು ಕೊಟ್ಟು ಬರಬಹುದು. ಗಂಡಸರು ಗಾಯತ್ರಿ ಮಂತ್ರ ಪಠಿಸಿದರೆ ಒಳಿತು. ಹೆಂಗಸರು ಶಿವನ ನಾಮದೇಯದಿಂದ ಆರಂಭವಾಗುವ ಯಾವ ಶ್ಲೋಕವನ್ನಾದರೂ ಹೇಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ