AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ನಿಮ್ಮ ಲಗ್ನಕ್ಕೆ ಅನುಗುಣವಾಗಿ ಅದೃಷ್ಟ ದೇವತೆ ತಿಳಿಯಿರಿ; ಜ್ಯೋತಿಷ್ಯ ಸಲಹೆ ಇಲ್ಲಿದೆ

ಪ್ರತಿಯೊಬ್ಬರ ಜಾತಕದಲ್ಲಿ ಲಗ್ನವು ಪ್ರಮುಖವಾಗಿದ್ದು, ಲಗ್ನದಿಂದ ಪಂಚಮ ಸ್ಥಾನದ ಅಧಿಪತಿಯೇ ನಿಮ್ಮ ಜೀವನದ ಅದೃಷ್ಟ ದೇವತೆಯಾಗಿರುತ್ತದೆ. ನಿಮ್ಮ ಲಗ್ನಕ್ಕೆ ಸಂಬಂಧಿಸಿದ ಪಂಚಮಾಧಿಪತಿ ದೇವರನ್ನು ಆರಾಧಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ. ಯಾವ ಲಗ್ನಕ್ಕೆ ಯಾವ ದೇವತೆ ಸೂಕ್ತ ಎಂಬುದರ ಬಗ್ಗೆ ಡಾ. ಬಸವರಾಜ್ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

Daily Devotional: ನಿಮ್ಮ ಲಗ್ನಕ್ಕೆ ಅನುಗುಣವಾಗಿ ಅದೃಷ್ಟ ದೇವತೆ ತಿಳಿಯಿರಿ; ಜ್ಯೋತಿಷ್ಯ ಸಲಹೆ ಇಲ್ಲಿದೆ
ಅದೃಷ್ಟ ದೇವತೆ
ಅಕ್ಷತಾ ವರ್ಕಾಡಿ
|

Updated on: Feb 03, 2026 | 10:18 AM

Share

ಜ್ಯೋತಿಷ್ಯ ಶಾಸ್ತ್ರದಲ್ಲಿ, ಲಗ್ನ, ರಾಶಿ ಮತ್ತು ನಕ್ಷತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿ ಲಗ್ನವು ಅತ್ಯಂತ ಮೂಲಭೂತವಾಗಿದ್ದು, ವ್ಯಕ್ತಿಯ ಜನನದ ಸಮಯದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಪ್ರತಿ ಲಗ್ನಕ್ಕೂ ಒಂದು ನಿರ್ದಿಷ್ಟ ಅದೃಷ್ಟ ದೇವತೆ ಇರುತ್ತದೆ. ಈ ಅದೃಷ್ಟ ದೇವತೆಯನ್ನು ಲಗ್ನದಿಂದ ಪಂಚಮ ಸ್ಥಾನದ ಅಧಿಪತಿಯ ಮೂಲಕ ಗುರುತಿಸಲಾಗುತ್ತದೆ. ಪಂಚಮಾಧಿಪತಿಯು ನಿಮ್ಮ ಜೀವನಪೂರ್ತಿ ನಿಮ್ಮ ಅದೃಷ್ಟ ದೇವತೆಯಾಗಿರುತ್ತಾನೆ. ಈ ದೇವತೆಯನ್ನು ನಿಯಮಿತವಾಗಿ ಆರಾಧಿಸುವುದರಿಂದ ಶುಭ ಫಲಗಳು ಲಭಿಸುತ್ತವೆ ಮತ್ತು ಅದೃಷ್ಟ ಕೂಡಿಬರುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವಿವಿಧ ಲಗ್ನಗಳಿಗೆ ಅದೃಷ್ಟ ದೇವತೆಗಳು:

ಮೇಷ ಲಗ್ನ:

ಮೇಷ ಲಗ್ನದಲ್ಲಿ ಜನಿಸಿದವರಿಗೆ ಪಂಚಮ ಸ್ಥಾನವು ಸಿಂಹ ರಾಶಿಯಾಗಿರುತ್ತದೆ. ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ. ಆದ್ದರಿಂದ, ಮೇಷ ಲಗ್ನದವರು ಪ್ರತಿದಿನ ಸೂರ್ಯ ದೇವನನ್ನು ಆರಾಧಿಸುವುದರಿಂದ ಅದೃಷ್ಟ ಲಭಿಸುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ.

ವೃಷಭ ಲಗ್ನ:

ವೃಷಭ ಲಗ್ನಕ್ಕೆ ಪಂಚಮ ಸ್ಥಾನವು ಕನ್ಯಾ ರಾಶಿಯಾಗಿರುತ್ತದೆ. ಕನ್ಯಾ ರಾಶಿಯ ಅಧಿಪತಿ ಬುಧ. ವೃಷಭ ಲಗ್ನದವರು ವಿಷ್ಣುವನ್ನು ಆರಾಧಿಸುವುದರಿಂದ ಸಾಕಷ್ಟು ಶುಭವಾಗುತ್ತದೆ.

ಮಿಥುನ ಲಗ್ನ:

ಮಿಥುನ ಲಗ್ನಕ್ಕೆ ಪಂಚಮ ಸ್ಥಾನವು ತುಲಾ ರಾಶಿಯಾಗಿರುತ್ತದೆ. ತುಲಾ ರಾಶಿಯ ಅಧಿಪತಿ ಶುಕ್ರ. ಈ ಲಗ್ನದವರು ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ.

ಕರ್ಕ ಲಗ್ನ:

ಕರ್ಕ ಲಗ್ನದವರಿಗೆ ವೃಶ್ಚಿಕ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದ ಅದೃಷ್ಟ ದೇವತೆ ಸುಬ್ರಹ್ಮಣ್ಯ ಸ್ವಾಮಿ. ಸುಬ್ರಹ್ಮಣ್ಯನನ್ನು ಆರಾಧಿಸುವುದರಿಂದ ಅದೃಷ್ಟ ವೃದ್ಧಿಯಾಗುತ್ತದೆ.

ಸಿಂಹ ಲಗ್ನ:

ಸಿಂಹ ಲಗ್ನದವರಿಗೆ ಧನುಸ್ಸು ರಾಶಿಯು ಪಂಚಮ ಸ್ಥಾನವಾಗಿರುತ್ತದೆ. ಧನುಸ್ಸಿನ ಅಧಿಪತಿ ಗುರು. ಸಿಂಹ ಲಗ್ನದವರು ಶಿವನನ್ನು ಆರಾಧಿಸುವುದರಿಂದ ಸಾಕಷ್ಟು ಶುಭವಾಗುತ್ತದೆ.

ಕನ್ಯಾ ಲಗ್ನ:

ಕನ್ಯಾ ಲಗ್ನದವರಿಗೆ ಮಕರ ರಾಶಿಯು ಪಂಚಮ ಸ್ಥಾನವಾಗಿರುತ್ತದೆ. ಮಕರದ ಅಧಿಪತಿ ಶನಿ. ಕನ್ಯಾ ಲಗ್ನದವರು ಶಿವನನ್ನು ಆರಾಧಿಸುವುದರಿಂದ ಶುಭ ಫಲಗಳನ್ನು ಪಡೆಯುತ್ತಾರೆ.

ತುಲಾ ಲಗ್ನ:

ತುಲಾ ಲಗ್ನದವರು ರುದ್ರನನ್ನು ಆರಾಧಿಸುವುದು ಅತ್ಯಂತ ಶುಭಕರ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಶ್ಚಿಕ ಲಗ್ನ:

ವೃಶ್ಚಿಕ ಲಗ್ನದವರು ಶಿವನನ್ನು ಆರಾಧಿಸುವುದರಿಂದ ಶುಭವಾಗುತ್ತದೆ.

ಧನು ಲಗ್ನ:

ಧನು ಲಗ್ನದವರು ನರಸಿಂಹನನ್ನು ಆರಾಧಿಸುವುದರಿಂದ ಸಾಕಷ್ಟು ಶುಭ ಫಲಗಳು ಪ್ರಾಪ್ತವಾಗುತ್ತವೆ.

ಮಕರ ಲಗ್ನ:

ಮಕರ ಲಗ್ನದವರಿಗೆ ವೃಷಭ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದವರು ದೇವಿಯನ್ನು ಆರಾಧಿಸುವುದು ಬಹಳ ಒಳ್ಳೆಯದು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಕುಂಭ ಲಗ್ನ:

ಕುಂಭ ಲಗ್ನದವರಿಗೆ ಮಿಥುನ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದವರು ವಿಷ್ಣುವನ್ನು ಆರಾಧಿಸುವುದರಿಂದ ಶುಭವಾಗುತ್ತದೆ.

ಮೀನ ಲಗ್ನ:

ಮೀನ ಲಗ್ನದವರಿಗೆ ಕರ್ಕಾಟಕ ರಾಶಿಯು ಪಂಚಮ ಸ್ಥಾನವಾಗುತ್ತದೆ. ಈ ಲಗ್ನದವರು ದುರ್ಗಾ ದೇವಿಯನ್ನು ಆರಾಧಿಸುವುದರಿಂದ ಸಾಕಷ್ಟು ಶುಭ.

ಹೀಗೆ, ನಿಮ್ಮ ಲಗ್ನಕ್ಕೆ ಅನುಗುಣವಾದ ಅದೃಷ್ಟ ದೇವತೆಯನ್ನು ತಿಳಿದು, ಅವರನ್ನು ಶ್ರದ್ಧೆಯಿಂದ ಪೂಜಿಸುವುದರಿಂದ ಆ ದೇವರ ಕೃಪೆಯು ದೊರೆತು ಜೀವನದಲ್ಲಿ ಅದೃಷ್ಟ ಮತ್ತು ಸನ್ಮಂಗಳಗಳು ಕೂಡಿಬರುತ್ತವೆ. ಇದು ನಂಬಿಕೆ ಮತ್ತು ಶಾಸ್ತ್ರದ ಆಧಾರವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ