AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯ ದ್ವಾರಕ್ಕೆ ಕಟ್ಟುವ ಬೂದು ಕುಂಬಳಕಾಯಿಯನ್ನು ನೀರಿನಿಂದ ತೊಳೆಯಬಾರದು ಏಕೆ? ಶಾಸ್ತ್ರ ಹೇಳುವುದೇನು?

ಹೊಸ ಮನೆ ಅಥವಾ ವ್ಯಾಪಾರ ಸ್ಥಳಕ್ಕೆ ಬೂದು ಕುಂಬಳಕಾಯಿ ಕಟ್ಟುವಾಗ ಸಾಂಪ್ರದಾಯಿಕ ನಿಯಮಗಳನ್ನು ಪಾಲಿಸುವುದು ಮುಖ್ಯ. ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿ ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಕುಂಬಳಕಾಯಿಯನ್ನು ನೀರಿನಿಂದ ತೊಳೆಯಬಾರದು, ಒಣ ಬಟ್ಟೆಯಿಂದ ಒರೆಸಿ ಅರಿಶಿನ-ಕುಂಕುಮ ಹಚ್ಚಿ ಪೂಜಿಸಬೇಕು. ತೊಟ್ಟು ಇರುವ, ಅಖಂಡ ಕುಂಬಳಕಾಯಿ ಬಳಸಿ. ಅಮಾವಾಸ್ಯೆ, ಬುಧವಾರ ಅಥವಾ ಶನಿವಾರದಂದು ಕಟ್ಟಲು ಶುಭ. ಈ ಕ್ರಮಗಳು ಧನಾತ್ಮಕ ಶಕ್ತಿ ಹೆಚ್ಚಿಸುತ್ತವೆ.

ಮುಖ್ಯ ದ್ವಾರಕ್ಕೆ ಕಟ್ಟುವ ಬೂದು ಕುಂಬಳಕಾಯಿಯನ್ನು ನೀರಿನಿಂದ ತೊಳೆಯಬಾರದು ಏಕೆ? ಶಾಸ್ತ್ರ ಹೇಳುವುದೇನು?
ಬೂದಿ ಕುಂಬಳಕಾಯಿ
ಅಕ್ಷತಾ ವರ್ಕಾಡಿ
|

Updated on: Sep 08, 2026 | 10:34 AM

Share

ಹೊಸ ಮನೆ ಕಟ್ಟುವಾಗ ಅಥವಾ ಹೊಸ ವ್ಯಾಪಾರ ಪ್ರಾರಂಭಿಸುವಾಗ, ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಪಡೆಯಲು ಬೂದಿ ಕುಂಬಳಕಾಯಿಯನ್ನು ಕಟ್ಟುವ ಸಂಪ್ರದಾಯ ನಮ್ಮಲ್ಲಿದೆ. ಆದರೆ, ಈ ರೀತಿ ಬೂದಿ ಕುಂಬಳಕಾಯಿಯನ್ನು ನೇತುಹಾಕುವಾಗ ಕೆಲವು ಸಾಂಪ್ರದಾಯಿಕ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ವಿದ್ವಾಂಸರು ಹೇಳುತ್ತಾರೆ. ಮನೆಯ ಮುಂದೆ ಕಟ್ಟು ಉದ್ಧೇಶದಿಂದ ತಂದ ಬೂದಿ ಕುಂಬಳಕಾಯಿಯನ್ನು ಯಾವುದೇ ಕಾರಣಕ್ಕೂ ನೀರಿನಿಂದ ತೊಳೆಯಬಾರದು. ಹೀಗೆ ಮಾಡುವುದರಿಂದ ಅದರ ಆಧ್ಯಾತ್ಮಿಕ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಸ್ವಚ್ಛಗೊಳಿಸುವ ಬದಲು, ಅದನ್ನು ಒಣ ಬಟ್ಟೆಯಿಂದ ಒರೆಸಿ, ಅರಿಶಿನ ಮತ್ತು ಕುಂಕುಮವನ್ನು ಸಿಂಪಡಿಸಿ ಪೂಜಿಸಿದ ನಂತರವೇ ನೇತುಹಾಕಬೇಕು.

ತೊಟ್ಟು ಮುರಿದ ಕುಂಬಳಕಾಯಿ ಬಳಸಬೇಡಿ:

ನೇತುಹಾಕಲು ಆಯ್ಕೆ ಮಾಡುವ ಕುಂಬಳಕಾಯಿಗೆ ತೊಟ್ಟು ಇರುವುದು ಕಡ್ಡಾಯ. ಮನೆಗೆ ತರುವಾಗ ತೊಟ್ಟ ಹಿಡಿದು ಎಳೆಯುವುದು ಅಥವಾ ತೂಗಾಡಿಸುವುದರಿಂದ ಅದು ಮುರಿದುಬೀಳುವ ಸಾಧ್ಯತೆ ಇರುತ್ತದೆ. ತೊಟ್ಟು ಇಲ್ಲದ ಅಥವಾ ಹಾನಿಗೊಳಗಾದ ಕುಂಬಳಕಾಯಿಯನ್ನು ಮನೆಯ ಮುಂಭಾಗದಲ್ಲಿ ಕಟ್ಟುವುದು ಶುಭವಲ್ಲ ಎಂದು ನಂಬಲಾಗಿದೆ.

ತರುವಾಗ ಮತ್ತು ಕಟ್ಟುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು:

ಕುಂಬಳಕಾಯಿಯನ್ನು ಮನೆಗೆ ತರುವಾಗ ಅದನ್ನು ತಲೆಕೆಳಗಾಗಿ ಹಿಡಿಯಬಾರದು. ಅದರ ತೊಟ್ಟು ಯಾವಾಗಲೂ ಮೇಲ್ಭಾಗದಲ್ಲಿರುವಂತೆ ನೇರವಾಗಿ ಹಿಡಿದುಕೊಂಡು ಬರಬೇಕು. ಈ ರೀತಿ ತರುವುದರಿಂದ ಅದರಲ್ಲಿರುವ ಧನಾತ್ಮಕ ಶಕ್ತಿ ಮತ್ತು ಕೆಟ್ಟ ದೃಷ್ಟಿಯನ್ನು ದೂರವಿಡುವ ಸಾಮರ್ಥ್ಯ ಸಂರಕ್ಷಿಸಲ್ಪಡುತ್ತದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!

ಕುಂಬಳಕಾಯಿ ಕಟ್ಟಲು ಸೂಕ್ತ ಸಮಯ ಯಾವುದು?

ಯಾವುದೇ ದಿನ ಕುಂಬಳಕಾಯಿ ಕಟ್ಟುವುದಕ್ಕಿಂತ ಅಮಾವಾಸ್ಯೆಯ ದಿನದಂದು ಕಟ್ಟುವುದು ಅತ್ಯಂತ ಶುಭ. ಅಮಾವಾಸ್ಯೆಯಂದು ಕಟ್ಟುವುದರಿಂದ ನಕಾರಾತ್ಮಕ ಪರಿಣಾಮಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಅಮಾವಾಸ್ಯೆಯಂದು ಸಾಧ್ಯವಾಗದಿದ್ದರೆ, ಬುಧವಾರ ಅಥವಾ ಶನಿವಾರದಂದು ಸೂರ್ಯೋದಯಕ್ಕೆ ಮುಂಚಿತವಾಗಿ ಮುಂಜಾನೆ ಸಮಯದಲ್ಲಿ ಕಟ್ಟುವುದು ಉತ್ತಮ.

ಪೂಜಾ ವಿಧಾನ ಹಾಗೂ ಧಾರ್ಮಿಕ ಚೌಕಟ್ಟು:

ಬೂದಿ ಕುಂಬಳಕಾಯಿಯನ್ನು ಕಟ್ಟುವ ಮೊದಲು, ಅದನ್ನು ಒಂದು ದೊಡ್ಡ ತಟ್ಟೆಯಲ್ಲಿಟ್ಟು ಅರಿಶಿನದ ಲೇಪನ ಮಾಡಿ, ಕುಂಕುಮದ ಬೊಟ್ಟುಗಳನ್ನು ಇಡಬೇಕು. ನಂತರ ಧೂಪ-ದೀಪಗಳಿಂದ ಪೂಜಿಸಿ, ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ನೇತುಹಾಕಬೇಕು. ಇವೆಲ್ಲವೂ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಗೆ ಸಂಬಂಧಿಸಿದ ವಿಷಯಗಳಾಗಿದ್ದು, ಇವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಜನರು ತಮ್ಮ ಕುಟುಂಬದ ಪದ್ಧತಿಗೆ ಅನುಗುಣವಾಗಿ ಇವುಗಳನ್ನು ಅನುಸರಿಸಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us