ದೈವಾರಾಧನೆ ಎಂಬ ವಿಸ್ಮಯ ಜಗತ್ತಿನ ಒಂದು ನೋಟ; ಯಾರು ಈ ದೈವಗಳು?
Daivaradhane: ಓ.... ದೈವ ಬೇಕಲ್ಲ ನಿನಗೆ, ಪಂಜುರ್ಲಿ ದೈವ ಬೇಕಲ್ಲ ನಿನಗೆ ಎಂದು ಕಾಂತಾರ ಸಿನಿಮಾದಲ್ಲಿ ದೈವ ನರ್ತಕ ರಾಜನನ್ನು ಕೇಳುವ ಪರಿಯ ನೋಡಿದ ಎಲ್ಲರೂ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಇದು ಕರಾವಳಿ ಜನರನ್ನು ಹೊರತು ಪಡಿಸಿ ಬೇರೆಲ್ಲರಿಗೂ ದೈವದ ಬಗ್ಗೆ ಕುತೂಹಲ ಮೂಡುವಂತೆ ಮಾಡಿತ್ತು. ದೈವಾರಾಧನೆ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಆಧ್ಯಾತ್ಮಿಕ ನೃತ್ಯ ಮತ್ತು ಪೂಜಾ ವಿಧಾನ. ಕನ್ನಡದ ಕಾಂತರಾ ಸಿನಿಮಾದ ನಂತರ ಭೂತ ಕೋಲ, ಧೈವಾರಾಧನೆ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ದೈವಾರಾಧನೆ ಹುಟ್ಟಿ ಬಂದದ್ದು ಹೇಗೆ? ತುಳು ನಾಡಿದ ಜನ ದೈವಗಳಿಗೆ ಇಷ್ಟೊಂದು ಮಹತ್ವ ನೀಡುವುದೇಕೆ? ಇಲ್ಲಿದೆ ಮಾಹಿತಿ.

ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈ ದಕ್ಷಿಣಮ್| ಈ ಸಾಲು ವಿವರಿಸುವಂತೆ, ದಕ್ಷಿಣ ಸಮುದ್ರದ ಉತ್ತರಕ್ಕೆ ಹಾಗೂ ಹಿಮವತ್ ಪರ್ವತದ ದಕ್ಷಿಣಕ್ಕೆ ಇರುವ ಭಾರತ ದೇಶದ ಬೇರೆಲ್ಲ ಪ್ರಾಂತ್ಯಗಳಿಗಿಂತ ನಮ್ಮ ತುಳುನಾಡು ಎಲ್ಲಾ ರೀತಿಯಲ್ಲೂ ವಿಭಿನ್ನ. ಇಲ್ಲಿನ ಜನರಲ್ಲಿ ದೇವರ ಆರಾಧನೆ ಜೊತೆಗೆ ದೈವಾರಾಧನೆ, ಯಕ್ಷಗಾನದಂತಹ ಸಂಸ್ಕೃತಿ, ಆಚರಣೆಗಳು ಹುಟ್ಟಿನಿಂದಲೇ ಮೈಗಂಟಿಕೊಂಡು ಬಂದಿವೆ. ಅದರಲ್ಲೂ ಇಲ್ಲಿನ ಜನರನ್ನು ಮಾತನಾಡಿಸಿದರೆ ಸಾಕು, ಅವರ ಬಾಯಲ್ಲಿ ಬರುವ ಉತ್ತರ ಒಂದೇ. ಎಲ್ಲವೂ ನಾವು ನಂಬಿದ ಭೂತ, ನಾಗ, ದೈವದೇವರುಗಳ ದಯೆ ಎನ್ನುತ್ತಾರೆ. ದೈವಾರಾಧನೆ ಇಲ್ಲಿನ ಜನರ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ದೈವಗಳನ್ನು ತುಳುನಾಡಿನ ರಕ್ಷಕರು ಎಂದು ಭಾವಿಸಲಾಗಿದೆ. ದೈವಾರಾಧನೆ ಸ್ವರೂಪ ಕಳೆದುಕೊಳ್ಳುತ್ತಿದೆಯಾ? ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ್ದ ಕಾಂತಾರ ಸಿನಿಮಾದ ನಂತರ ದೈವಾರಾಧನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ದೈವಗಳ ಮೇಲೆ ಜನ ಆಸಕ್ತಿ ಬೆಳೆಸಿಕೊಂಡರು. ರೀಲ್ಸ್, ನಾಟಕ, ಧಾರವಾಹಿಗಳಲೆಲ್ಲ ದೈವನರ್ತನದ ಚಿತ್ರೀಕರಣ ನಡೆಯಲು ಶುರುವಾಯ್ತು. ಇದೇ ವೇಳೆ ದೈವಾರಾಧನೆಯ ಬಗ್ಗೆ ಒಂದಷ್ಟು ವಾದ, ಪ್ರತಿವಾದಗಳು ಕೂಡ ಕೇಳಿ ಬಂದವು. ನಮ್ಮ ತುಳುವ ಆರಾಧನೆ ಪ್ರಕೃತಿ ಕೇಂದ್ರಿತ, ಅವೈದಿಕ ಆಚರಣೆ, ನಮ್ಮ ಆರಾಧನೆ ಜಾನಪದ, ಪುರೋಹಿತಶಾಹಿಗಳು ಈ ಆರಾಧನಾ ಕ್ರಮದ ದಿಕ್ಕು ತಪ್ಪಿಸಿ ವೈದಿಕ ಪದ್ಧತಿಯನ್ನು ಇದರ ಮೇಲೆ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ದೈವಾರಾಧನೆಯನ್ನು ಇಷ್ಟ ಬಂದಂಗೆ ಯಾರು ಬೇಕಾದ್ರು ನಟಿಸುವಂತಿಲ್ಲ. ಅದಕ್ಕೆ ಆದರದೇ ಆದ ಕೆಲವು ಕ್ರಮಗಳನ್ನು ಪಾಲಿಸಬೇಕು ಎಂದು ದೈವಾರಾಧಕರು ವಾದಿಸಿದರು. ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಈ ಆರಾಧನೆ ಕಾಲದಿಂದ ಕಾಲಕ್ಕೆ ಸರ್ವೇಸಹಜವಾದ ಅಲ್ಪಸ್ವಲ್ಪ ಬದಲಾವಣೆಗಳನ್ನು ಕಂಡಿರಬಹುದಾದರೂ ಆರಾಧನೆಯ...
Published On - 1:44 pm, Thu, 4 July 24




