AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ದುರ್ಮುಹೂರ್ತ? ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು?

ಪಂಚಾಂಗದಲ್ಲಿ ರಾಹುಕಾಲದಷ್ಟೇ ಪ್ರಾಮುಖ್ಯತೆ ಹೊಂದಿರುವ ಮತ್ತೊಂದು ಅಶುಭ ಸಮಯವೇ 'ದುರ್ಮುಹೂರ್ತ'. ಇದು ಸುಮಾರು 48 ನಿಮಿಷಗಳ ಕಾಲ ಇರುವ ನಕಾರಾತ್ಮಕ ಶಕ್ತಿಯ ಅವಧಿಯಾಗಿದ್ದು, ಶುಭ ಕಾರ್ಯಗಳಿಗೆ ಅಡೆತಡೆ ಉಂಟುಮಾಡುತ್ತದೆ. ಮದುವೆ, ಗೃಹಪ್ರವೇಶ, ಹೊಸ ವ್ಯವಹಾರದಂತಹ ಪ್ರಮುಖ ಕೆಲಸಗಳನ್ನು ದುರ್ಮುಹೂರ್ತದಲ್ಲಿ ಮಾಡುವುದನ್ನು ತಪ್ಪಿಸಿ. ನಿಖರ ಸಮಯಕ್ಕೆ ಪ್ರತಿದಿನದ ಪಂಚಾಂಗ ಪರಿಶೀಲಿಸಿ.

ಏನಿದು ದುರ್ಮುಹೂರ್ತ? ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು?
ದುರ್ಮುಹೂರ್ತImage Credit source: shutterstock.com
ಅಕ್ಷತಾ ವರ್ಕಾಡಿ
|

Updated on: Sep 18, 2026 | 9:20 AM

Share

ಪ್ರತಿದಿನ ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳ ಜೊತೆಗೆ ಶುಭ ಹಾಗೂ ಅಶುಭ ಸಮಯಗಳನ್ನು ಸೂಚಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ರಾಹುಕಾಲದ ಬಗ್ಗೆ ತಿಳಿದಿದ್ದು, ಆ ಅವಧಿಯಲ್ಲಿ ಶುಭ ಕಾರ್ಯಗಳನ್ನು ಮಾಡಲು ಹಿಂಜರಿಯುತ್ತಾರೆ. ಆದರೆ ಪಂಚಾಂಗದ ಪ್ರಕಾರ ರಾಹುಕಾಲದಷ್ಟೇ ಪ್ರಾಮುಖ್ಯತೆ ಹೊಂದಿರುವ ಮತ್ತೊಂದು ಅಶುಭ ಸಮಯ ಎಂದರೆ ಅದು ‘ದುರ್ಮುಹೂರ್ತ’. ಜ್ಯೋತಿಷ್ಯ ಸಂಪ್ರದಾಯದ ಪ್ರಕಾರ ಈ ಸಮಯದಲ್ಲಿ ಕೈಗೊಳ್ಳುವ ಯಾವುದೇ ಶುಭ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆಯಿರುತ್ತದೆ.

ಏನಿದು ದುರ್ಮುಹೂರ್ತ?

ಜ್ಯೋತಿಷ್ಯದ ಪ್ರಕಾರ ದಿನದ ಕೆಲವು ನಿರ್ದಿಷ್ಟ ಅವಧಿಗಳನ್ನು ನಕಾರಾತ್ಮಕ ಶಕ್ತಿಯಿಂದ ಕೂಡಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಮಯಗಳಲ್ಲಿ ದುರ್ಮುಹೂರ್ತವೂ ಒಂದು. ಸಾಮಾನ್ಯವಾಗಿ ದುರ್ಮುಹೂರ್ತದ ಅವಧಿಯು ಸುಮಾರು 48 ನಿಮಿಷಗಳ ಕಾಲ ಇರುತ್ತದೆ. ಕೆಲವು ದಿನಗಳಲ್ಲಿ ಇದು ದಿನಕ್ಕೆ ಎರಡು ಬಾರಿಯೂ ಸಂಭವಿಸಬಹುದು. ದುರ್ಮುಹೂರ್ತದ ಸಮಯವು ಪ್ರತಿದಿನ ಒಂದೇ ರೀತಿ ಇರುವುದಿಲ್ಲ; ಸ್ಥಳೀಯ ಸೂರ್ಯೋದಯ ಮತ್ತು ಸೂರ್ಯಾಸ್ತದ ಆಧಾರದ ಮೇಲೆ ವ್ಯತ್ಯಾಸವಾಗುತ್ತದೆ.

ವಾರದ ವಿವಿಧ ದಿನಗಳಲ್ಲಿ ದುರ್ಮುಹೂರ್ತದ ಲೆಕ್ಕಾಚಾರ:

ಸಾಂಪ್ರದಾಯಿಕ ಪಂಚಾಂಗದ ಪ್ರಕಾರ ಸೂರ್ಯೋದಯವನ್ನು ಆಧರಿಸಿ ವಾರದ ದಿನಗಳಲ್ಲಿ ದುರ್ಮುಹೂರ್ತದ ಸಮಯ ಬದಲಾಗುತ್ತದೆ. ಭಾನುವಾರ ಸೂರ್ಯೋದಯದ ಸುಮಾರು 10 ಗಂಟೆ 24 ನಿಮಿಷಗಳ ನಂತರ ದುರ್ಮುಹೂರ್ತ ಪ್ರಾರಂಭವಾಗುತ್ತದೆ. ಸೋಮವಾರ ಸೂರ್ಯೋದಯದ ನಂತರ ಸರಿಸುಮಾರು 6 ಗಂಟೆ 24 ನಿಮಿಷಕ್ಕೆ ಹಾಗೂ 8 ಗಂಟೆ 48 ನಿಮಿಷಕ್ಕೆ ಇದು ಸಂಭವಿಸುತ್ತದೆ. ಮಂಗಳವಾರ ಸೂರ್ಯೋದಯದ 2 ಗಂಟೆ 24 ನಿಮಿಷಗಳ ನಂತರ ಮತ್ತು ಸೂರ್ಯಾಸ್ತದ 5 ಗಂಟೆ 36 ನಿಮಿಷಗಳ ನಂತರ ದುರ್ಮುಹೂರ್ತ ಇರುತ್ತದೆ. ಬುಧವಾರ ಸೂರ್ಯೋದಯದ ಸುಮಾರು 5 ಗಂಟೆ 36 ನಿಮಿಷಗಳ ನಂತರ, ಗುರುವಾರ ಸೂರ್ಯೋದಯದ 4 ಗಂಟೆಗಳ ನಂತರ ಹಾಗೂ 8 ಗಂಟೆ 48 ನಿಮಿಷಕ್ಕೆ, ಶುಕ್ರವಾರ ಸೂರ್ಯೋದಯಕ್ಕೆ 2 ಗಂಟೆ 24 ನಿಮಿಷಗಳ ಮೊದಲು ಮತ್ತು ಸೂರ್ಯೋದಯದ 8 ಗಂಟೆ 48 ನಿಮಿಷಗಳ ನಂತರ ಹಾಗೂ ಶನಿವಾರ ಸೂರ್ಯೋದಯದ ಸಮಯದಲ್ಲೇ ಪ್ರಾರಂಭವಾಗಿ ಸುಮಾರು 1 ಗಂಟೆ 36 ನಿಮಿಷಗಳ ಕಾಲ ಇರುತ್ತದೆ.

ದುರ್ಮುಹೂರ್ತದಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು?

ಭಾರತೀಯ ಸಾಂಪ್ರದಾಯಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ಅನುಕೂಲಕರ ಸ್ಥಾನವಿದ್ದಾಗ ಪ್ರಾರಂಭಿಸುವ ಕಾರ್ಯಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಆದರೆ ದುರ್ಮುಹೂರ್ತದ ಸಮಯದಲ್ಲಿ ಗ್ರಹಗಳ ಪ್ರಭಾವವು ನಕಾರಾತ್ಮಕವಾಗಿರುತ್ತದೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ಕಾರ್ಯವಿಘ್ನ, ವಿಳಂಬ ಹಾಗೂ ಅಪೇಕ್ಷಿತ ಫಲಿತಾಂಶ ಸಿಗದೆ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!

ಈ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡುವುದು ವರ್ಜ್ಯ?

ದುರ್ಮುಹೂರ್ತದ ಅವಧಿಯಲ್ಲಿ ಯಾವುದೇ ಪ್ರಮುಖ ಶುಭ ಚಟುವಟಿಕೆಗಳು ಹಾಗೂ ಹೊಸ ಯೋಜನೆಗಳನ್ನು ಆರಂಭಿಸುವುದನ್ನು ತಪ್ಪಿಸಲಾಗುತ್ತದೆ. ವಿಶೇಷವಾಗಿ ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ, ಹೊಸ ಮನೆ ಅಥವಾ ಅಂಗಡಿ ಉದ್ಘಾಟನೆ ಮತ್ತು ಉಪನಯನ ಹಾಗೂ ಮುಂಡನ ಮುಂತಾದ ಧಾರ್ಮಿಕ ಸಂಸ್ಕಾರಗಳನ್ನು ಈ ಸಮಯದಲ್ಲಿ ಮಾಡುವುದಿಲ್ಲ. ಇದಲ್ಲದೆ ಹೊಸ ವ್ಯವಹಾರ ಪ್ರಾರಂಭಿಸುವುದು, ವಾಹನ, ಮನೆ, ಭೂಮಿಯಂತಹ ಆಸ್ತಿಗಳನ್ನು ಖರೀದಿಸುವುದು, ದೊಡ್ಡ ಮಟ್ಟದ ಹಣಕಾಸು ಹೂಡಿಕೆ ಮಾಡುವುದು ಹಾಗೂ ಹೊಸ ಒಪ್ಪಂದಗಳಿಗೆ ಸಹಿ ಹಾಕುವಂತಹ ಪ್ರಮುಖ ಕೆಲಸಗಳನ್ನು ದುರ್ಮುಹೂರ್ತದ ಸಮಯದಲ್ಲಿ ಮಾಡಬಾರದು.

ನಿಖರವಾದ ದುರ್ಮುಹೂರ್ತದ ಸಮಯವು ಆಯಾ ಪ್ರದೇಶದ ಸೂರ್ಯೋದಯವನ್ನು ಆಧರಿಸಿ ಬದಲಾಗುವುದರಿಂದ, ಪ್ರಮುಖ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಅಂದಿನ ದೈನಂದಿನ ಪಂಚಾಂಗವನ್ನು ಪರಿಶೀಲಿಸುವುದು ಸೂಕ್ತ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ