AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima 2026: ಜಾತಕದಲ್ಲಿ ಗುರು ಬಲ ಹೆಚ್ಚಿಸಲು ಗುರು ಪೂರ್ಣಿಮೆಯಂದು ಈ ರೀತಿ ಮಾಡಿ

ನಿಮ್ಮ ಜನ್ಮ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲವಾಗಿದ್ದು, ಉದ್ಯೋಗ, ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಗುರು ಪೂರ್ಣಿಮೆಯಂದು ಪರಿಹಾರವನ್ನು ಮಾಡುವುದು ಶುಭ. ಆರ್ಥಿಕ ಸ್ಥಿರತೆಗಾಗಿ ಶ್ರೀ ವಿಷ್ಣು ಪೂಜೆ, 'ಓಂ ಬೃಂ ಬೃಹಸ್ಪತೇ ನಮಃ' ಮಂತ್ರ ಜಪ, ಸತ್ಯನಾರಾಯಣ ವ್ರತ ಹಾಗೂ ಚಂದ್ರನಿಗೆ ಅರ್ಘ್ಯ ಅರ್ಪಿಸಿ. ಜೀವನದಲ್ಲಿ ಸೌಭಾಗ್ಯ ಮತ್ತು ಸಮೃದ್ಧಿ ಪಡೆಯಿರಿ.

Guru Purnima 2026: ಜಾತಕದಲ್ಲಿ ಗುರು ಬಲ ಹೆಚ್ಚಿಸಲು ಗುರು ಪೂರ್ಣಿಮೆಯಂದು ಈ ರೀತಿ ಮಾಡಿ
ಗುರು ಪೂರ್ಣಿಮೆಯ ವಿಶೇಷImage Credit source: vecteezy.com
ಅಕ್ಷತಾ ವರ್ಕಾಡಿ
| Edited By: |

Updated on:Jul 22, 2026 | 11:23 AM

Share

ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯಂದು (ಹುಣ್ಣಿಮೆ) ಅತ್ಯಂತ ಪವಿತ್ರವಾದ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜ್ಞಾನ, ಬುದ್ಧಿವಂತಿಕೆ, ಶಿಕ್ಷಣ, ಸದಾಚಾರ ಮತ್ತು ಉನ್ನತ ಸ್ಥಾನಮಾನಗಳಿಗೆ ಅಧಿಪತಿಯಾದ ಬೃಹಸ್ಪತಿ ಅಂದರೆ ಗುರು ಗ್ರಹಕ್ಕೂ ಈ ದಿನಕ್ಕೂ ನೇರ ಸಂಪರ್ಕವಿದೆ.

ಗುರು ಗ್ರಹವು ದುರ್ಬಲವಾಗಿದ್ದರೆ ಈ ಪರಿಹಾರ ಮಾಡಿ:

ನಿಮ್ಮ ಜನ್ಮ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲವಾಗಿದ್ದು, ಜೀವನದಲ್ಲಿ ಸತತ ಅಡೆತಡೆಗಳು ಎದುರಾಗುತ್ತಿದ್ದರೆ ಗುರು ಪೂರ್ಣಿಮೆಯ ದಿನ ಮಾಡುವ ಕೆಲವು ಸಾಂಪ್ರದಾಯಿಕ ಪರಿಹಾರಗಳು ಅತ್ಯಂತ ಫಲಪ್ರದವಾಗುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಉದ್ಯೋಗದಲ್ಲಿ ಬಡ್ತಿ ಸಿಗದಿರುವುದು, ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಹಾಗೂ ಅನಗತ್ಯ ಆರ್ಥಿಕ ನಷ್ಟಗಳನ್ನು ಅನುಭವಿಸುತ್ತಿರುವವರು ಈ ದಿನ ಕೆಲವೊಂದು ಪ್ರಮುಖ ನಿಯಮಗಳನ್ನು ಅನುಸರಿಸುವುದು ಶ್ರೇಷ್ಠ.

ವೈದಿಕ ಜ್ಯೋತಿಷ್ಯದಲ್ಲಿ ಬೃಹಸ್ಪತಿಯ ಮಹತ್ವ:

ಮೊದಲನೆಯದಾಗಿ, ವೈದಿಕ ಜ್ಯೋತಿಷ್ಯದಲ್ಲಿ ದೇವಗುರು ಬೃಹಸ್ಪತಿ ಹಾಗೂ ಶ್ರೀಮನ್ನಾರಾಯಣನನ್ನು ಒಟ್ಟಿಗೆ ಆರಾಧಿಸುವುದಕ್ಕೆ ವಿಶೇಷ ಮಹತ್ವವಿದೆ. ಗುರು ಪೂರ್ಣಿಮೆಯ ಪವಿತ್ರ ದಿನದಂದು ಜಗನ್ನಿಯಾಮಕನಾದ ವಿಷ್ಣುವಿಗೆ ಹಳದಿ ವರ್ಣದ ಹೂವುಗಳನ್ನು ಅರ್ಪಿಸಿ, ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ವೃತ್ತಿಜೀವನದಲ್ಲಿ ಎದುರಾಗುವ ವಿಘ್ನಗಳು ನಿವಾರಣೆಯಾಗಿ, ಕೆಲಸದಲ್ಲಿ ಬಡ್ತಿ (ಪ್ರಮೋಷನ್) ದೊರೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಗುರು ಪೂರ್ಣಿಮೆಯಂದು ಈ ಮಂತ್ರ ಪಠಿಸಿ:

ಮನಸ್ಸಿನ ಏಕಾಗ್ರತೆ ಹಾಗೂ ಜೀವನದಲ್ಲಿ ಶುಭ ಫಲಗಳನ್ನು ಪಡೆಯಲು ಮಂತ್ರ ಜಪವು ಅತ್ಯಂತ ಪರಿಣಾಮಕಾರಿ. ಗುರು ಪೂರ್ಣಿಮೆಯಂದು ಇಷ್ಟದೇವತೆಯನ್ನು ಧ್ಯಾನಿಸುತ್ತಾ, “ಓಂ ಬೃಂ ಬೃಹಸ್ಪತೇ ನಮಃ” ಎಂಬ ಗುರು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಈ ಮಂತ್ರದ ಜಪವು ಜಾತಕದಲ್ಲಿರುವ ಗುರು ದೋಷವನ್ನು ಶಮನಗೊಳಿಸಿ, ಜೀವನದಲ್ಲಿ ಹೊಸ ಸೌಭಾಗ್ಯ ಮತ್ತು ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಈ ರೀತಿ ಮಾಡಿ:

ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಕಥಾಪಠಣವು ಮನೆಗೆ ದೈವಿಕ ಕಳೆಯನ್ನು ತರುತ್ತದೆ. ಗುರು ಪೂರ್ಣಿಮೆಯ ದಿನದಂದು ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಥಾ ಶ್ರವಣವನ್ನು ಆಯೋಜಿಸುವುದು ಅಥವಾ ತಾವೇ ಸ್ವತಃ ಕಥೆಯನ್ನು ಪಠಿಸುವುದರಿಂದ ಜೀವನದ ದೊಡ್ಡ ದೊಡ್ಡ ಸವಾಲುಗಳು ಸುಲಭವಾಗಿ ಬಗೆಹರಿಯುತ್ತವೆ. ಇದು ಆರ್ಥಿಕ ಸ್ಥಿರತೆಯನ್ನು ತರುವುದರ ಜೊತೆಗೆ ವೃತ್ತಿ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸನ್ನು ನೀಡುತ್ತದೆ.

ಚಂದ್ರದೇವನಿಗೆ ಅರ್ಘ್ಯ ಅರ್ಪಿಸಿ:

ಗುರು ಪೂರ್ಣಿಮೆಯ ರಾತ್ರಿ ಚಂದ್ರನು ತನ್ನ ಪೂರ್ಣ ಕಳೆಯಿಂದ ಶೋಭಿಸುತ್ತಿರುತ್ತಾನೆ. ಈ ಶುಭ ರಾತ್ರಿಯಂದು ಚಂದ್ರದೇವನಿಗೆ ಅರ್ಘ್ಯವನ್ನು ಅರ್ಪಿಸುವುದು ವಿಶೇಷ ಫಲವನ್ನು ನೀಡುತ್ತದೆ. ನೀರಿಗೆ ಕೆಲವು ಹನಿ ಹಸಿ ಹಾಲನ್ನು ಬೆರೆಸಿ ಚಂದ್ರನಿಗೆ ಅರ್ಪಿಸುವುದರಿಂದ ಮಾನಸಿಕ ಒತ್ತಡ ಕರಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ, ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಬಿಕ್ಕಟ್ಟುಗಳು ನಿವಾರಣೆಯಾಗಿ ಧನಲಾಭವಾಗುತ್ತದೆ. ಇಂತಹ ಸರಳ ಹಾಗೂ ಪವಿತ್ರ ಪರಿಹಾರಗಳನ್ನು ಅನುಸರಿಸುವ ಮೂಲಕ ಗುರು ಪೂರ್ಣಿಮೆಯಂದು ದೈವಿಕ ಆಶೀರ್ವಾದವನ್ನು ಪಡೆಯಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:37 am, Wed, 22 July 26

Follow Us
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ