AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puri Jagannath Temple: ಪುರಿ ಜಗನ್ನಾಥ ದೇವಾಲಯಕ್ಕೆ ಅವಿವಾಹಿತ ಜೋಡಿ ಒಟ್ಟಿಗೆ ಭೇಟಿ ನೀಡಬಾರದು ಯಾಕೆ? ಇಲ್ಲಿದೆ ನಿಗೂಢ ರಹಸ್ಯ!

ಪುರಿ ಜಗನ್ನಾಥ ದೇವಾಲಯದಲ್ಲಿ ಅವಿವಾಹಿತ ಜೋಡಿ ಒಟ್ಟಾಗಿ ಗರ್ಭಗುಡಿ ಪ್ರವೇಶಿಸಬಾರದು ಎಂಬ ವಿಶಿಷ್ಟ ನಂಬಿಕೆಯಿದೆ. ಒಟ್ಟಾಗಿ ಭೇಟಿ ನೀಡಿದರೆ ಪ್ರೇಮ ಸಂಬಂಧದಲ್ಲಿ ಬಿರುಕು ಅಥವಾ ಮದುವೆಗೆ ಅಡೆತಡೆ ಉಂಟಾಗಬಹುದು. ರಾಧಾ ರಾಣಿಯ ಶಾಪದಿಂದ ಇದು ಬಂದಿದೆ ಎಂದು ಪುರಾಣಗಳು ಹೇಳುತ್ತವೆ. ಆದರೆ ದೇವಾಲಯದಲ್ಲಿ ಯಾವುದೇ ನಿಯಮವಿಲ್ಲ. ಇದು ಭಕ್ತರ ವೈಯಕ್ತಿಕ ನಂಬಿಕೆಗೆ ಬಿಟ್ಟ ವಿಷಯ.

Puri Jagannath Temple: ಪುರಿ ಜಗನ್ನಾಥ ದೇವಾಲಯಕ್ಕೆ ಅವಿವಾಹಿತ ಜೋಡಿ ಒಟ್ಟಿಗೆ ಭೇಟಿ ನೀಡಬಾರದು ಯಾಕೆ? ಇಲ್ಲಿದೆ ನಿಗೂಢ ರಹಸ್ಯ!
ಪುರಿ ಜಗನ್ನಾಥ ದೇವಸ್ಥಾನImage Credit source: Getty Images
ಅಕ್ಷತಾ ವರ್ಕಾಡಿ
|

Updated on: Jul 17, 2026 | 7:16 AM

Share

ಪುರಿ ಜಗನ್ನಾಥ ದೇವಸ್ಥಾನಕ್ಕೆ ಸಂಬಂಧಿಸಿದ ಜಾನಪದ ಕಥೆಗಳ ಪ್ರಕಾರ, ಅವಿವಾಹಿತ ಜೋಡಿ ಒಟ್ಟಿಗೆ ದೇವಾಲಯದ ಗರ್ಭಗುಡಿಗೆ ಭೇಟಿ ನೀಡಬಾರದು ಎಂಬ ವಿಶಿಷ್ಟ ನಂಬಿಕೆಯಿದೆ. ಒಂದು ವೇಳೆ ಅವಿವಾಹಿತ ಜೋಡಿ ಒಟ್ಟಿಗೆ ಜಗನ್ನಾಥ ಸ್ವಾಮಿಯ ದರ್ಶನ ಪಡೆದರೆ, ಅದು ಅವರ ಪ್ರೇಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು ಅಥವಾ ಅವರ ಮದುವೆಗೆ ದೊಡ್ಡ ಅಡೆತಡೆಗಳನ್ನು ತಂದೊಡ್ಡಬಹುದು ಎಂದು ನಂಬಲಾಗಿದೆ. ಈ ನಂಬಿಕೆಯು ತಲೆಮಾರುಗಳಿಂದ ಸ್ಥಳೀಯರಲ್ಲಿ ಪ್ರಚಲಿತದಲ್ಲಿದ್ದು, ಇಂದಿಗೂ ಅನೇಕ ಅವಿವಾಹಿತ ದಂಪತಿಗಳು ಈ ಸಂಪ್ರದಾಯವನ್ನು ಗೌರವಿಸಿ, ಪ್ರತ್ಯೇಕವಾಗಿಯೇ ದೇವಸ್ಥಾನದೊಳಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ.

ತಾಯಿ ರಾಧಾ ರಾಣಿಯ ಶಾಪದ ಪೌರಾಣಿಕ ಹಿನ್ನೆಲೆ:

ಈ ಜಾನಪದ ಕಥೆಯು ತಾಯಿ ರಾಧಾ ರಾಣಿಯ ಶಾಪಕ್ಕೆ ಸಂಬಂಧಿಸಿದೆ ಎಂದು ದಂತಕಥೆಗಳು ಹೇಳುತ್ತವೆ. ಪುರಾಣಗಳ ಪ್ರಕಾರ, ರಾಧಾ ರಾಣಿಯು ಒಮ್ಮೆ ಪುರಿಯಲ್ಲಿರುವ ಶ್ರೀಕೃಷ್ಣನನ್ನು (ಜಗನ್ನಾಥ) ಭೇಟಿ ಮಾಡಲು ಬಂದಿದ್ದಳು. ಆದರೆ ದೇವಾಲಯದ ಪುರೋಹಿತರು ಅವಳನ್ನು ಒಳಗೆ ಪ್ರವೇಶಿಸದಂತೆ ತಡೆದು, ಭಗವಂತ ಮತ್ತು ಅವನ ಪತ್ನಿಗೆ ಮಾತ್ರ ಒಳಗೆ ಹೋಗಲು ಅವಕಾಶವಿದೆ ಎಂದು ಹೇಳಿದರು. ಇದರಿಂದ ತೀವ್ರವಾಗಿ ನೊಂದ ರಾಧಾ, ಈ ದೇವಾಲಯವನ್ನು ಒಟ್ಟಿಗೆ ಪ್ರವೇಶಿಸುವ ಯಾವುದೇ ಅವಿವಾಹಿತ ಜೋಡಿ ಎಂದಿಗೂ ಒಂದಾಗಲ್ಲ ಎಂದು ಶಾಪ ನೀಡಿದಳು. ಈ ಶಾಪದ ಭೀತಿಯಿಂದಾಗಿ ಇಂದಿಗೂ ಭಕ್ತರು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.

ದೇವಾಲಯದ ಆಡಳಿತ ಮಂಡಳಿ ಹೇಳುವುದೇನು?

ಈ ನಂಬಿಕೆಯು ಕೇವಲ ಜಾನಪದ ಕಥೆಯಾಗಿದ್ದು, ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು ಅವಿವಾಹಿತ ದಂಪತಿಗಳು ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಯಾವುದೇ ಕಾನೂನು ಅಥವಾ ಅಧಿಕೃತ ನಿರ್ಬಂಧಗಳನ್ನು ವಿಧಿಸಿಲ್ಲ. ದೇವಾಲಯದ ನಿಯಮಾವಳಿಗಳಲ್ಲಿ ಪ್ರೇಮಿಗಳು ಒಟ್ಟಿಗೆ ಪ್ರವೇಶಿಸಬಾರದು ಎಂಬ ಯಾವುದೇ ಷರತ್ತುಗಳಿಲ್ಲ. ಇದು ಸಂಪೂರ್ಣವಾಗಿ ಭಕ್ತರ ವೈಯಕ್ತಿಕ ನಂಬಿಕೆಯ ವಿಷಯವಾಗಿದ್ದು, ನಂಬುವವರು ಇದನ್ನು ಪಾಲಿಸಿದರೆ, ಇನ್ನುಳಿದ ಅನೇಕ ಭಕ್ತರು ಸಾಮಾನ್ಯವಾಗಿ ಒಟ್ಟಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಥಯಾತ್ರೆಯ ಸಂದರ್ಭದಲ್ಲಿ ಹರಿಯುವ ಭಕ್ತಿ ಸಾಗರ:

ಜಗನ್ನಾಥ ದೇವರ ರಥಯಾತ್ರೆಯನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಒಂಬತ್ತು ದಿನಗಳ ಮೆರವಣಿಗೆಯ ಸಮಯದಲ್ಲಿ, ಜಗನ್ನಾಥ ದೇವರು, ಅವರ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರಾ ದೇವಿ ಭವ್ಯವಾದ ರಥಗಳನ್ನೇರಿ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ಅದ್ಭುತ ಮತ್ತು ದೈವಿಕ ಪ್ರಯಾಣವನ್ನು ಕಣ್ಣುತುಂಬಿಕೊಳ್ಳಲು ಭಾರತದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಆಗಮಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ