AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಅಪಾಯಗಳೇ ಎದುರಾಗಲಿ, ಈ ಸರಳ ಉಪಾಯ ಒಂದು ಸಾಕು! ಯಾವುದದು?

Miracles of Sri Vishnu Sahasranama Strotra: ದಂಪತಿಗಳ ಅನೋನ್ಯತೆಗೆ, ಮಕ್ಕಳ ಯಶಸ್ಸಿಗಾಗಿ, ಸುಖ ಪ್ರಸವಕ್ಕೆ, ಕೊನೆಯ ದಿನಗಳಲ್ಲಿ.. ಸದ್ಗತಿಗಾಗಿ ಹೀಗೆ ನಾನಾ ಸಂಕಷ್ಟ ಸಂದರ್ಭಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಕೈಹಿಡಿದು ಸಂತೈಸುತ್ತದೆ

ಕೋಟಿ ಅಪಾಯಗಳೇ ಎದುರಾಗಲಿ, ಈ ಸರಳ ಉಪಾಯ ಒಂದು ಸಾಕು! ಯಾವುದದು?
ಕೋಟಿ ಅಪಾಯಗಳೇ ಎದುರಾಗಲಿ ಈ ಸರಳ ಉಪಾಯ ಒಂದು ಸಾಕು! ಯಾವುದದು?
TV9 Web
| Updated By: ಸಾಧು ಶ್ರೀನಾಥ್​|

Updated on: Mar 05, 2022 | 6:06 AM

Share

ಮಾನವ ಕುಲವನ್ನು ಆಗಾಗ್ಗೆ ಅನೇಕಾನೇಕ ಅಪಾಯಗಳು-ಸಂಕಟಗಳು ಕಾಡುತ್ತಾ ಇರುತ್ತವೆ. ಆದರೆ ಸನಾತನ ಧರ್ಮದಲ್ಲಿ (Spiritual) ಅದಕ್ಕೆ ಸರಳ ಪರಿಹಾರೋಪಾಯಗ ಇವೆ. ಇಷ್ಟಾರ್ಥ ಸಿದ್ಧಿಗಾಗಿ ಈ ಮಂತ್ರಗಳನ್ನು ಜಪಿಸಿದರೆ/ ಪಠಿಸಿದರೆ ಸಾಕು. ಈ ಕೆಳಗಿನವು ಕೆಲವು ಉದಾಹರಣೆ ಮಾತ್ರ. ಪ್ರತಿನಿತ್ಯವೂ, ಕುಟುಂಬದಲ್ಲಿನ ಎಲ್ಲರೂ ದಿನಕ್ಕೆ ಒಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಣಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ (Miracles of Sri Vishnu Sahasranama Strotra).

ದಂಪತಿಗಳ ಅನೋನ್ಯತೆಗೆ, ಮಕ್ಕಳ ಯಶಸ್ಸಿಗಾಗಿ, ಸುಖ ಪ್ರಸವಕ್ಕೆ, ಕೊನೆಯ ದಿನಗಳಲ್ಲಿ.. ಸದ್ಗತಿಗಾಗಿ ಹೀಗೆ ನಾನಾ ಸಂಕಷ್ಟ ಸಂದರ್ಭಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಕೈಹಿಡಿದು ಸಂತೈಸುತ್ತದೆ: 

  1. ಸಂಸ್ಕೃತಿ ಸಂವರ್ಧನ ಸ್ತೋತ್ರ – ಮಕ್ಕಳ ಯಶಸ್ಸಿಗಾಗಿ: ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ | ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್‌ ಕವಿಃ || 14 ||
  2. ಸಿದ್ಧಿಸಂಕಲ್ಪ ಸ್ತೋತ್ರ – ಸಂಕಲ್ಪ ಸಿದ್ಧಿಗಾಗಿ: ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ | ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || 27 ||
  3.  ದಂಪತಿಗಳ ಅನೋನ್ಯತೆಗೆ: ಭೂತಭವ್ಯಭವನ್ನಾಥಃ ಪವನಃ ಪಾವನೋಽನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || 32 ||
  4.  ಉದ್ಯೋಗ ಪ್ರಾಪ್ತಿಗಾಗಿ: ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ || 42 ||
  5. ದಾರಿದ್ರ್ಯನಾಶನ, ಧನಪ್ರಾಪ್ತಿಗೆ: ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ | ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || 46 ||
  6. ಐಶ್ವರ್ಯ ಪ್ರಾಪ್ತಿಗೆ: ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ | ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || 65 ||
  7. ವಿದ್ಯಾ ಪ್ರಾಪ್ತಿಗೆ: ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ | ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || 19 || ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ | ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || 80 ||
  8. ಸಂತಾನ ಪ್ರಾಪ್ತಿಗೆ: ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ | ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || 90 ||
  9. ಸರ್ವ ರೋಗ ನಿವಾರಣೆಗೆ: ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ | ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || 103 ||
  10. ಪಾಪ ನಾಶನಕ್ಕೆ: ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ | ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || 106 ||
  11. ಸುಖ ಪ್ರಸವಕ್ಕೆ: ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ | ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || 107 ||
  12. ಪ್ರೀತಿವರ್ಧನ ಸ್ತೋತ್ರ – ಕೌಟುಂಬಿಕ ಸಾಮರಸ್ಯಕ್ಕೆ: ಸತ್ತ್ವವಾನ್‌ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ | ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || 93 ||
  13. ಭಯನಾಶನ ಸ್ತೋತ್ರ: ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ | ಅಮೂರ್ತಿರನಘೋಽಚಿಂತ್ಯೋ(ಽ)ಭಯಕೃದ್ಭಯನಾಶನಃ || 89 ||
  14. ದುಸ್ವಪ್ನನಾಶನ ಸ್ತೋತ್ರ: ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ | ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || 99 |
  15. ಸ್ವಸ್ತಿ ಮಂತ್ರ – ಮನಸ್ಸಿನಲ್ಲಿ ಮೂಡುವ ಆಸೆಗಳ ಸಿದ್ಧಿಗಾಗಿ: ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ | ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || 96 ||
  16. ಕೊನೆಯ ದಿನಗಳಲ್ಲಿ – ಸದ್ಗತಿಗಾಗಿ: ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ | ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || 44 || ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ | ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || 74 || (ಬರಹ – ವಾಟ್ಸ್​ಅಪ್​ ಸಂದೇಶ)