AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thanjavur Brihadeeswara Temple: ಸಾವಿರ ವರ್ಷಗಳಷ್ಟು ಹಳೆಯ ಈ ದೇವಾಲಯದಲ್ಲಿ ಅಡಗಿದೆ ಊಹಿಸಲೂ ಆಗದಷ್ಟು ವಿಸ್ಮಯ

ವಿಸ್ಮಯಗಳ ಭಂಡಾರ ತಂಜಾವೂರಿನ ಬೃಹದೀಶ್ವರ ದೇವಾಲಯ. ಇದು ಬೆಣಚು ಕಲ್ಲಿನಿಂದ ನಿರ್ಮಾಣಗೊಂಡ ವಿಶ್ವದ ಏಕೈಕ ದೇಗುಲ. ಸಾವಿರ ವರ್ಷಗಳ ಇತಿಹಾಸ ಹೊಂದಿರುವ, 216 ಅಡಿ ಎತ್ತರವಿರುವ ಈ ದೇವಾಲಯವನ್ನು ಅಡಿಪಾಯ ಇಲ್ಲದೆ ಕಟ್ಟಲಾಗಿದೆ. ಗೋಪುರದ ಮೇಲ್ಭಾಗದಲ್ಲಿ ಕೂರಿಸಿರುವ 80 ಟನ್ ತೂಕದ ಕಲ್ಲು ಆಧಾರವಿಲ್ಲದೇ ನಿಂತಿರೋದು ದೇವರ ಲೀಲೆ ಎನ್ನಲಾಗುತ್ತೆ. ಇಲ್ಲಿ ಪಾತಾಳ ಲೋಕಕ್ಕೆ ದಾರಿ ಇದೆ. ರಹಸ್ಯ ಕೋಣೆಯಲ್ಲಿ ಕೇರಳದ ಅನಂತ ಪದ್ಮನಾಭನನ್ನೇ ಮೀರಿಸುವ ಸಂಪತ್ತಿದೆ. ವಾಸ್ತು ಶಿಲ್ಪದ ಮೂಲಕ ಚಕಿತಗೊಳಿಸಿರುವ ಈ ದೇವಾಲಯವು ಹಲವು ವಿಸ್ಮಯಗಳನ್ನು ತನ್ನ ಮಡಿಲಲ್ಲಿ ಅಡಗಿಸಿಟ್ಟುಕೊಂಡಿದೆ. ಇದರ ವಿವರ ಇಲ್ಲಿ ಓದಿ.

Thanjavur Brihadeeswara Temple: ಸಾವಿರ ವರ್ಷಗಳಷ್ಟು ಹಳೆಯ ಈ ದೇವಾಲಯದಲ್ಲಿ ಅಡಗಿದೆ ಊಹಿಸಲೂ ಆಗದಷ್ಟು ವಿಸ್ಮಯ
ತಂಜಾವೂರಿನ ಬೃಹದೀಶ್ವರ ದೇವಾಲಯ
ಆಯೇಷಾ ಬಾನು
|

Updated on: Aug 20, 2024 | 2:28 PM

Share

ಜಗತ್ತಿನಲ್ಲಿ ಶಿವನನ್ನು ಪೂಜಿಸುವ ಲಕ್ಷಾಂತರ ದೇವಾಲಯಗಳನ್ನು ನೀವು ನೋಡಿರುತ್ತೀರಾ. ಆದರೆ ಇದು ಅಂತಿಂತ ದೇವಸ್ಥಾನವಲ್ಲ. ಕುತೂಹಲ, ಚಮತ್ಕಾರಿಕ, ಊಹೆಗೂ ಮೀರಿದ ವಿಸ್ಮಯವನ್ನು ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿದೆ. ಎಷ್ಟೇ ಆಧುನೀಕರಣ ಆದರೂ ಈ ವಿಸ್ಮಯವನ್ನು ಭೇದಿಸಲಾಗಿಲ್ಲ. ಸಂಶೋಧಕರಿಗೆ, ಇತಿಹಾಸ ತಜ್ಞರಿಗೆ ಈ ದೇವಸ್ಥಾನವೊಂದು ಜ್ಞಾನ ಭಂಡಾರವಾಗಿದೆ. ಈ ದೇವಾಲಯದ ನೆರಳು ಭೂಮಿ ಮೇಲೆ ಬೀಳಲ್ಲ ಅದು ಸಾವಿರ ವರ್ಷಗಳಷ್ಟು ಹಳೆಯ ದೇವಸ್ಥಾನ. ಕಾವೇರಿ ನದಿಯ ತಟದಲ್ಲಿ ಪರ್ವತದಂತೆ ಎದ್ದು ನಿಂತಿದೆ. ಅಡಿಪಾಯವಿಲ್ಲದೆ (ಫೌಂಡೇಶನ್​) ತನ್ನ ನೆರಳನ್ನೂ ಭೂಮಿಗೆ ಸೋಕಿಸದೆ, 216 ಅಡಿ ಎತ್ತರವಿರುವ ಬೃಹತ್​ ಆಕಾರದಲ್ಲಿರುವ ಈ ದೇವಸ್ಥಾನವು ತನ್ನ ಅಮೋಘ ವಾಸ್ತುಶಿಲ್ಪ, ಕೆತ್ತನೆಗಳಿಂದ ಇಂದಿಗೂ ಲಕ್ಷಾಂತರ ಜನರನ್ನು ಸೆಳೆಯುತ್ತಿದೆ. ಆಧುನಿಕ ಆರ್ಕಿಟೆಕ್ಚರ್​​​ಗಳಿಗೆ ಇಂದಿಗೂ ಅದೊಂದು ವಿಸ್ಮಯದ ಗೂಡಾಗಿದೆ. ಹತ್ತಾರು ಆರ್ಕಿಟೆಕ್ಚರುಗಳು ದಿನಾಲೂ ಈ ದೇವಸ್ಥಾನವನ್ನು ಎಡತಾಕುತ್ತಿರುತ್ತಾರೆ. ಅದೆಷ್ಟು ಸಲ ಇಲ್ಲಿ ಪ್ರವಾಹ ಬಂದಿದೆಯೋ, ಅದೆಷ್ಟು ರಾಜ, ಮಹಾರಾಜರು ಇದರ ಮೇಲೆ ದಾಳಿ ಮಾಡಿದ್ದಾರೋ… ಆದರೆ ಈ ದೇವಸ್ಥಾನದ ಯಾವ ಭಾಗವೂ ಕುಸಿದಿಲ್ಲ. ವಿಶ್ವದ ಏಕೈಕ ಏಕ ಶಿಲಾ ಶಿವ ಲಿಂಗ, ಹಾಗೂ ಪ್ರಪಂಚದ 2ನೇ ಏಕ ಶಿಲಾ ನಂದಿಯನ್ನು ಇಲ್ಲಿ ನೋಡಬಹುದು. (function(v,d,o,ai){ ai=d.createElement("script"); ai.defer=true; ai.async=true; ai.src=v.location.protocol+o; d.head.appendChild(ai); })(window, document, "//a.vdo.ai/core/v-tv9kannada-v0/vdo.ai.js"); ಹೌದು, ನಾನು ಇಷ್ಟೊತ್ತು ಹೇಳಿದ್ದು ಬೆಂಗಳೂರಿನಿಂದ ಕೇವಲ 390 ಕಿಲೋ ಮೀಟರ್ ದೂರದಲ್ಲಿರುವ ತಂಜಾವೂರಿನ ಬೃಹದೀಶ್ವರ ದೇವಾಲಯದ ಬಗ್ಗೆ. ಇದು ತಮಿಳುನಾಡಿನಲ್ಲಿದೆ. ಕಾವೇರಿ ನದಿಯ ತಟದಲ್ಲಿರುವ ತಂಜಾವೂರಿನ ಬೃಹದೀಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯ. ಇದನ್ನು ಪೆರಿಯ ಕೋವಿಲ್, ರಾಜರಾಜೇಶ್ವರ ದೇವಸ್ಥಾನ ಮತ್ತು...

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು