
ಸನಾತನ ಧರ್ಮದಲ್ಲಿ ಮದುವೆಯ ನಂತರ ಮಹಿಳೆಯರು ಕಾಲ್ಬೆರಳುಗಳಿಗೆ ಉಂಗುರ ಧರಿಸುತ್ತಾರೆ. ಈ ಕಾಲುಂಗುರ ವಿವಾಹಿತ ಮಹಿಳೆಯರಿಗೆ ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿನ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳು ಪಾದಗಳಿಗೆ ಸಂಬಂಧಿಸಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲ್ಬೆರಳುಗಳನ್ನು ಚಂದ್ರನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಮಹಿಳೆಯರನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಯಾವಾಗಲೂ ಆಭರಣಗಳಿಂದ ಅಲಂಕರಿಸಲ್ಪಡುವ ಹಾಗೆ ಮಹಿಳೆಯರ ಜೀವನದಲ್ಲಿ ಆಭರಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ.
ಆದರೆ ಕಾಲುಂಗುರ ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅಂದರೆ ಕಳೆದು ಹೋದರೆ ಏನಾಗುತ್ತದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಲ್ಲದೆ, ಈ ಘಟನೆಯು ಜೀವನದಲ್ಲಿ ಏನೋ ಕೆಟ್ಟದ್ದರ ಸೂಚಿನೆ ಎಂದು ನಂಬಲಾಗಿದೆ. ನಂಬಿಕೆಗಳ ಪ್ರಕಾರ ಕಾಲುಂಗುರ ಕಳೆದು ಹೋದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇದನ್ನೂ ಓದಿ: ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ
ಮಹಿಳೆಯರು ಧರಿಸುವ ಕಾಲುಂಗುರಗಳು ಕೇವಲ ಆಭರಣವಲ್ಲ. ನಂಬಿಕೆಗಳು ಮತ್ತು ಸಂಪ್ರದಾಯಗಳ ರೂಪ. ಆದ್ದರಿಂದ ಮಹಿಳೆಯರು ತಮ್ಮ ಕಾಲ್ಬೆರಳುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಅವುಗಳನ್ನು ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು. ಕಳೆದು ಹೋದರೆ ಹುಡುಕಲು ಪ್ರಯತ್ನಿಸಿ. ನಿಮಗೆ ಅದು ಸಿಗದಿದ್ದರೆ, ತಕ್ಷಣ ಹೊಸ ಕಾಲುಂಗುರ ಧರಿಸಿ. ನಿಮ್ಮ ಕಾಲುಂಗುರಗಳನ್ನು ಆಗಾಗ್ಗೆ ಬದಲಾಯಿಸುವುದು ಸಹ ಒಳ್ಳೆಯದಲ್ಲ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 am, Fri, 25 April 25