Vasthu Tips: ರಾತ್ರಿ ಮಲಗುವ ಮುನ್ನ ಈ 3 ವಸ್ತು ನೋಡಬೇಡಿ; ಆರ್ಥಿಕ ನಷ್ಟ ಹಾಗೂ ನಿದ್ರಾಹೀನತೆಗೆ ಇದೇ ಕಾರಣ!
ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ನಿದ್ರೆಗೆ ಜಾರುವ ಮುನ್ನ ಕೆಲವು ವಸ್ತುಗಳನ್ನು ನೋಡುವುದನ್ನು ತಪ್ಪಿಸಬೇಕು. ಇವು ನಿದ್ರಾಭಂಗ, ದುಃಸ್ವಪ್ನ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಸಿಂಕ್ನಲ್ಲಿರುವ ಕೊಳಕು ಪಾತ್ರೆಗಳು, ಮಲಗುವ ಕೋಣೆಯ ಕನ್ನಡಿ, ಮತ್ತು ದಿಂಬಿನ ಬಳಿ ನೀರಿಡುವುದು – ಇವು ವಾಸ್ತು ದೋಷಗಳನ್ನು ಉಂಟುಮಾಡಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ನೆಮ್ಮದಿಯ ನಿದ್ರೆ, ಮಾನಸಿಕ ಶಾಂತಿ ಹಾಗೂ ಆರ್ಥಿಕ ಸಮೃದ್ಧಿಗೆ ಈ ವಾಸ್ತು ಸಲಹೆಗಳನ್ನು ಪಾಲಿಸಿ.

ವಾಸ್ತು ಶಾಸ್ತ್ರವು ಮಾನವ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಾವು ಮನೆಯಲ್ಲಿ ವಾಸಿಸುವ, ತಿನ್ನುವ, ಕುಡಿಯುವ ಹಾಗೂ ಮಲಗುವ ಸರಿಯಾದ ವಿಧಾನ ಮತ್ತು ನಿಯಮಗಳನ್ನು ವಿವರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ನಿದ್ರೆಗೆ ಜಾರುವ ಮುನ್ನ ಕೆಲವು ವಸ್ತುಗಳನ್ನು ನೋಡುವುದನ್ನು ತಪ್ಪಿಸಬೇಕು. ಇವುಗಳನ್ನು ನೋಡುವುದರಿಂದ ನಿದ್ರೆಗೆ ಭಂಗ ಉಂಟಾಗುವುದು ಮಾತ್ರವಲ್ಲದೆ, ದುಃಸ್ವಪ್ನಗಳು ಹಾಗೂ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಸಾಮಾನ್ಯವಾಗಿ ನಮ್ಮ ಮಲಗುವ ಕೋಣೆ, ಅಡುಗೆಮನೆ ಅಥವಾ ಸ್ನಾನಗೃಹದಲ್ಲಿ ಕಂಡುಬರುವ ಮತ್ತು ಮಲಗುವ ಮುನ್ನ ನೋಡಬಾರದ ಆ 3 ಪ್ರಮುಖ ವಸ್ತುಗಳು ಯಾವುವು ಎಂಬ ವಿವರ ಇಲ್ಲಿದೆ.
ಸಿಂಕ್ನಲ್ಲಿರುವ ಕೊಳಕು (ಎಂಜಲು) ಪಾತ್ರೆಗಳು:
ಅನೇಕರು ರಾತ್ರಿ ಊಟದ ನಂತರ ಪಾತ್ರೆಗಳನ್ನು ತೊಳೆಯದೆ ಸಿಂಕ್ನಲ್ಲಿಯೇ ಬಿಟ್ಟು ಮಲಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಡುಗೆಮನೆಯ ಸಿಂಕ್ನಲ್ಲಿ ಉಳಿಯುವ ಕೊಳಕು ಪಾತ್ರೆಗಳಿಂದ ರಾಹು ಮತ್ತು ಕೇತು ದೋಷಗಳು ಪ್ರಭಾವಿತವಾಗುತ್ತವೆ. ರಾತ್ರಿ ಈ ಕೊಳಕು ಪಾತ್ರೆಗಳನ್ನು ನೋಡಿ ಮಲಗುವುದರಿಂದ ಮಾನಸಿಕ ಅಶಾಂತಿ, ತಲೆಯಲ್ಲಿ ಭಾರವಾದ ಭಾವನೆ ಹಾಗೂ ನಿದ್ರಾಹೀನತೆ ಕಾಡುತ್ತದೆ. ಜೊತೆಗೆ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ತಪ್ಪಿ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ.
ಮಲಗುವ ಕೋಣೆಯಲ್ಲಿರುವ ಕನ್ನಡಿ:
ಪ್ರತಿಯೊಬ್ಬರ ಮಲಗುವ ಕೋಣೆಯಲ್ಲೂ ಕನ್ನಡಿ ಇರುವುದು ಸಹಜ, ಆದರೆ ರಾತ್ರಿ ಮಲಗುವ ಸಮಯದಲ್ಲಿ ಕನ್ನಡಿಯನ್ನು ನೋಡಬಾರದು. ಕನ್ನಡಿಯು ಧನಾತ್ಮಕ ಮತ್ತು ಋಣಾತ್ಮಕ (ಸಕಾರಾತ್ಮಕ ಮತ್ತು ನಕಾರಾತ್ಮಕ) ಶಕ್ತಿಗಳೆರಡನ್ನೂ ಹೀರಿಕೊಂಡು ಪ್ರತಿಫಲಿಸುತ್ತದೆ. ರಾತ್ರಿಯ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ರಾತ್ರಿ ಕನ್ನಡಿಯನ್ನು ನೋಡಿದಾಗ ಈ ನಕಾರಾತ್ಮಕ ಶಕ್ತಿಯು ದೇಹವನ್ನು ಪ್ರವೇಶಿಸಿ, ಅನಗತ್ಯ ಭಯ, ಒತ್ತಡ ಹಾಗೂ ಆತಂಕಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ
ದಿಂಬಿನ ಬಳಿ ನೀರು ಇಡುವುದು:
ನೀರು ಅತ್ಯಂತ ಚಂಚಲವಾದ ತತ್ವವಾಗಿದೆ. ರಾತ್ರಿಯಲ್ಲಿ ನೀರನ್ನು ನೋಡುವುದು ಅಥವಾ ಮಲಗುವಾಗ ದಿಂಬಿನ ತಲೆಯ ಬಳಿ ನೀರಿನ ಪಾತ್ರೆ/ಬಾಟಲಿಯನ್ನು ಇಟ್ಟುಕೊಂಡು ಮಲಗುವುದು ವಾಸ್ತುವಿನಲ್ಲಿ ನಿಷೇಧಿಸಲಾಗಿದೆ. ಮನಸ್ಸಿನ ಕಾರಕನಾದ ಚಂದ್ರ ಮತ್ತು ನೀರಿನ ಅಂಶ ಒಂದಕ್ಕೊಂದು ಸಂಬಂಧಿಸಿರುವುದರಿಂದ, ದಿಂಬಿನ ಬಳಿ ನೀರಿಟ್ಟುಕೊಳ್ಳುವುದು ಮನಸ್ಸಿನ ಹಂಚಲತೆಯನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ತೊಂದರೆಗೆ ಕಾರಣವಾಗಿ, ನೆಮ್ಮದಿಯ ಮತ್ತು ಆಳವಾದ ನಿದ್ರೆಗೆ ಅಡ್ಡಿಪಡಿಸುತ್ತದೆ.
ಆದ್ದರಿಂದ ಉತ್ತಮ ಆರೋಗ್ಯ, ಶಾಂತಿಯುತ ನಿದ್ರೆ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸಲು ರಾತ್ರಿ ಮಲಗುವ ಮುನ್ನ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟು, ಮಲಗುವ ಕೋಣೆಯ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ ಮಲಗುವುದು ಶ್ರೇಯಸ್ಕರ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




