AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುತುಬ್ ಮಿನಾರ್‌ಗಿಂತ ಭವ್ಯವಾದ 600 ವರ್ಷ ಹಳೆಯ ವಿಜಯ ಸ್ತಂಭ ಅಲ್ಲಿದೆ! ಯಾವೂರು ಅದು? ವಿಡಿಯೋ ನೋಡಿ

Vijay Stambh or Victory Fort: ವಿಜಯ ಸ್ತಂಭ ಅಥವಾ ವಿಕ್ಟರಿ ಫೋರ್ಟ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಬೃಹತ್ ಗೋಪುರವನ್ನು ಕ್ರಿ.ಶ 1442 ಮತ್ತು 1449 ರ ನಡುವೆ ರಾಣಾ ಕುಂಭ ಅವರಿಂದ ರಾಜಸ್ಥಾನದ ಚಿತ್ತೋರಗಢದಲ್ಲಿ ನಿರ್ಮಿಸಲಾಯಿತು. ಕುತುಬ್ ಮಿನಾರ್‌ಗಿಂತ ಭವ್ಯವಾದ ಈ ಗೋಪುರವು ಹಿಂದೂ ರಜಪೂತ ವಾಸ್ತುಶಿಲ್ಪದ ಅತ್ಯುತ್ತಮ ಕೆತ್ತನೆ ಎಂದು ಪರಿಗಣಿಸಲಾಗಿದೆ. ನೂರಾರು ಅಡಿ ಎತ್ತರದ ಈ ಭವ್ಯ ಕಟ್ಟಡವು ಜೆಸಿಬಿ ಯಂತ್ರಗಳಿಲ್ಲದೆ ಹೇಗೆ ನಿರ್ಮಿಸಲಾಯಿತು ಎಂಬುದು ಇಂದಿಗೂ ಸೋಜಿಗವಾಗಿದೆ.

ಕುತುಬ್ ಮಿನಾರ್‌ಗಿಂತ ಭವ್ಯವಾದ 600 ವರ್ಷ ಹಳೆಯ ವಿಜಯ ಸ್ತಂಭ ಅಲ್ಲಿದೆ! ಯಾವೂರು ಅದು? ವಿಡಿಯೋ ನೋಡಿ
ಕುತುಬ್ ಮಿನಾರ್‌ಗಿಂತ ಭವ್ಯವಾದ ಬೃಹತ್​​​ ವಿಜಯ ಸ್ತಂಭ
ಸಾಧು ಶ್ರೀನಾಥ್​
|

Updated on: Sep 27, 2024 | 3:04 AM

Share

Vijay Stambh or Victory Fort: ವಿಜಯ ಸ್ತಂಭ ಅಥವಾ ವಿಕ್ಟರಿ ಫೋರ್ಟ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಬೃಹತ್ ಗೋಪುರವನ್ನು ಕ್ರಿ.ಶ 1442 ಮತ್ತು 1449 ರ ನಡುವೆ ರಾಣಾ ಕುಂಭ ಅವರಿಂದ ರಾಜಸ್ಥಾನದ ಚಿತ್ತೋರಗಢದಲ್ಲಿ ನಿರ್ಮಿಸಲಾಯಿತು. ಇದು ರಜಪೂತ ವಿಜಯದ ಸ್ಮಾರಕವಾಗಿದೆ. ಕುತುಬ್ ಮಿನಾರ್‌ಗಿಂತ ಭವ್ಯವಾದ ಈ ಗೋಪುರವು ಹಿಂದೂ ರಜಪೂತ ವಾಸ್ತುಶಿಲ್ಪದ ಅತ್ಯುತ್ತಮ ಕೆತ್ತನೆ ಎಂದು ಪರಿಗಣಿಸಲಾಗಿದೆ.

ಮಹಮೂದ್ ಖಿಲ್ಜಿಯ ಮೇಲೆ ರಾಣಾ ಕುಂಭದ ವಿಜಯದ ಸಂಭ್ರಮವಾಗಿ/ ಗೌರವವಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ. ನೂರಾರು ಅಡಿ ಉದ್ದದ ಗೋಪುರವು ಎರಡು ಬಂಡೆಗಳ ಸಂಯೋಜನೆಯಿಂದ ಮಾಡಲ್ಪಟ್ಟಿದೆ- ಕೆಂಪು ಮರಳುಗಲ್ಲು ಮತ್ತು ಅಮೃತಶಿಲೆ.

ಈ ಕೋಟೆಯಲ್ಲಿ ಒಂಬತ್ತು ಮಹಡಿಗಳಿವೆ. ಪ್ರತಿಯೊಂದು ಮಹಡಿಯೂ ತನ್ನದೇ ಆದ ಪ್ರತ್ಯೇಕ ಬಾಲ್ಕನಿ ಹೊರಕ್ಕೆ ಚಾಚಿಕೊಂಡಿದೆ. ಮೆಟ್ಟಿಲುಗಳ ಮೂಲಕ ಹೋಗುವಾಗ ಕೇಂದ್ರ ಕೊಠಡಿ ಅಥವಾ ಪಕ್ಕದ ಗ್ಯಾಲರಿಯ ಪರ್ಯಾಯ ನೋಟವನ್ನು ಕಾಣಬಹುದು. ಭಾರತೀಯ ಅಂಚೆ ಇಲಾಖೆಯು ವಿಜಯ ಸ್ತಂಭದ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ.

ವಿಜಯ ಸ್ತಂಭವು ಭಾರತದ ರಾಜಸ್ಥಾನದ ಚಿತ್ತೋರ್‌ಗಢದಲ್ಲಿರುವ ಚಿತ್ತೋರ್ ಕೋಟೆಯೊಳಗೆ ನೆಲೆಗೊಂಡಿರುವ ಒಂದು ಭವ್ಯವಾದ ವಿಜಯದ ಸ್ಮಾರಕವಾಗಿದೆ. ಗೋಪುರವನ್ನು ಮೇವಾರ್ ರಾಜ ರಾಣಾ ಕುಂಭ ಅವರು 1448 ರಲ್ಲಿ ಮಹಮೂದ್ ಖಿಲ್ಜಿ ನೇತೃತ್ವದ ಮಾಲ್ವಾ ಮತ್ತು ಗುಜರಾತ್‌ನ ಸಂಯೋಜಿತ ಸೈನ್ಯದ ಮೇಲೆ ಸಾರಂಗಪುರ ಕದನದಲ್ಲಿ ಗೆಲುವು ಸಾಧಿಸಿದಾಗ, ವಿಜಯದ ಸ್ಮರಣಾರ್ಥವಾಗಿ ನಿರ್ಮಿಸಿದರು. ಗೋಪುರವನ್ನು ಹಿಂದೂ ದೇವರಾದ ಭಗವಂತ ವಿಷ್ಣುವಿಗೆ ಸಮರ್ಪಿಸಲಾಗಿದೆ.

ಶಾಸನಗಳು ಈ ಮಹಾನ್ ವಿಜಯದ ಸ್ಮರಣಾರ್ಥವಾಗಿ ರಾಣಾ ಕುಂಭನು ಚಿತ್ತೋರ್ ಕೋಟೆಯಲ್ಲಿ ದೊಡ್ಡ ವಿಜಯ ಸ್ತಂಭವನ್ನು (ವಿಜಯದ ಗೋಪುರ) ನಿರ್ಮಿಸಿದನು. ಆದಾಗ್ಯೂ, ಈ ಗೋಪುರವು ಪೂರ್ಣಗೊಳ್ಳುವ ಮೊದಲು, ರಾಣಾ ಆ ಸಮಯದಲ್ಲಿ ಭಾರತದಲ್ಲಿದ್ದ ಎರಡು ಅತ್ಯಂತ ಶಕ್ತಿಶಾಲಿ ಗುಜರಾತ್ ಮತ್ತು ಮಾಲ್ವಾ ರಾಜ್ಯಗಳ ಜಂಟಿ ಸೈನ್ಯವನ್ನು ಎದುರಿಸಿ, ಜಯಿಸಿದರು. ಈ ಅದ್ಭುತ ಘಟನೆಗಳನ್ನು ಪ್ರಸಿದ್ಧ ಗೋಪುರದ ಮೇಲೆ ಕೆತ್ತಲಾಗಿದೆ.

ಸುಲ್ತಾನ್ ಮಹಮೂದ್ ಖಿಲ್ಜಿ ಆರು ತಿಂಗಳ ಕಾಲ ಚಿತ್ತೋರಿನಲ್ಲಿ ಸೆರೆಯಾಳಾಗಿ ಉಳಿದ. ಚಿತ್ತೋರ್​​ನ ದೊರೆಗಳು ಮತ್ತು ಅವರ ಕಾರ್ಯಗಳ ವಿವರವಾದ ವಂಶಾವಳಿಯನ್ನು ಒಳಗೊಂಡಿರುವ ಮೇಲಿನ ಅಂತಸ್ತಿನಲ್ಲಿ ಚಪ್ಪಡಿಗಳ ಮೇಲೆ ಕೆತ್ತಲಾಗಿದೆ. ರಾಣಾ ಕುಂಭ ಆಸ್ಥಾನದ ವಿದ್ವಾಂಸರಾದ ಅತ್ರಿ ಮತ್ತು ಅವರ ಮಗ ಮಹೇಶ್‌ಗೆ ಮೀಸಲಿಡಲಾಗಿದೆ. ಗೋಪುರದ ಐದನೇ ಮಹಡಿಯಲ್ಲಿ ವಾಸ್ತುಶಿಲ್ಪಿ, ಸೂತ್ರಧರ್ ಜೈತಾ ಮತ್ತು ಅವರಿಗೆ ಸಹಾಯ ಮಾಡಿದ ಅವರ ಮೂವರು ಪುತ್ರರಾದ ನಾಪ, ಪೂಜೆ ಮತ್ತು ಪೋಮಾ ಅವರ ಹೆಸರುಗಳನ್ನು ಕೆತ್ತಲಾಗಿದೆ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ