Axar Patel: ಸಿಎಸ್ಕೆ ವಿರುದ್ಧದ ಗೆಲುವಿನ ಬಳಿಕ ದೊಡ್ಡ ಹೇಳಿಕೆ ನೀಡಿದ ಡೆಲ್ಲಿ ನಾಯಕ ಅಕ್ಷರ್ ಪಟೇಲ್
Axar Patel post match presentation: ಸಿಎಸ್ಕೆ ವಿರುದ್ಧದ ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಅಕ್ಷರ್ ಪಟೇಲ್, ನಮಗೆ ಇಷ್ಟೊಂದು ಸುಲಭ ಗೆಲುವು ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಮೂರರಲ್ಲಿ ಮೂರು ಗೆಲುವುಗಳು ನಿಜಕ್ಕೂ ಒಳ್ಳೆಯ ಭಾವನೆ. ನಮ್ಮ ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು (ಏ. 06): ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ 15 ವರ್ಷಗಳ ನಂತರ ಐಪಿಎಲ್ ಪಂದ್ಯವನ್ನು ಗೆದ್ದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ (Delhi Capitals) ನಾಯಕ ಅಕ್ಷರ್ ಪಟೇಲ್, ನಮಗೆ ಗೆಲುವು ಇಷ್ಟು ಸುಲಭವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ದೊಡ್ಡ ವಿಚಾರವನ್ನು ಹೇಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಆರು ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು ಮತ್ತು ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ವಿಕೆಟ್ ನಷ್ಟಕ್ಕೆ 158 ರನ್ ಗಳಿಗೆ ಸೀಮಿತಗೊಳಿಸಿ 25 ರನ್ ಗಳಿಂದ ಗೆದ್ದು ಐಪಿಎಲ್ 2025 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು.
ಗೆದ್ದ ನಂತರ ಅಕ್ಷರ್ ಹೇಳಿದ್ದೇನು?
ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಅಕ್ಷರ್ ಪಟೇಲ್, ‘‘ನಮಗೆ ಇಷ್ಟೊಂದು ಸುಲಭ ಗೆಲುವು ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಮೂರರಲ್ಲಿ ಮೂರು ಗೆಲುವುಗಳು ನಿಜಕ್ಕೂ ಒಳ್ಳೆಯ ಭಾವನೆ. ನಮ್ಮ ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಿಮ್ಮ ಪ್ರದರ್ಶನ ತಂಡದ ಗೆಲುವಿಗೆ ಸಹಾಯ ಮಾಡದಿದ್ದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿಯೇ ನಮ್ಮ ಯೋಜನೆಯು ನಮ್ಮ ಕೆಲಸದ ಸಹಾಯದಿಂದ ಕಾರ್ಯರೂಪಕ್ಕೆ ಬರಬೇಕು’’ ಎಂದು ಹೇಳಿದ್ದಾರೆ.
ಅಕ್ಷರ್ ಪಟೇಲ್ ಕೇವಲ ಒಂದೇ ಓವರ್ ಬೌಲ್ ಮಾಡಿದ್ದು ಏಕೆ?:
ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ತನ್ನ ಬೆರಳಿಗೆ ಗಾಯವಾಗಿದ್ದರಿಂದ ಹೀಗೆ ಮಾಡಿದೆ ಎಂದು ಅವರು ಹೇಳಿದ್ದಾರೆ. ‘‘ನಾನು ನನ್ನನ್ನು ಇಂಜುರಿಯಿಂದ ಕಾಪಾಡಿಕೊಳ್ಳುತ್ತಿದ್ದೆ, ನನ್ನ ಬೆರಳಿಗೂ ಗಾಯವಾಗಿದೆ. ನನಗೆ ಬೌಲಿಂಗ್ ಮಾಡಬೇಕೆಂಬ ಆಸೆ ಇತ್ತು ಆದರೆ ಇದು ದೀರ್ಘ ಪಂದ್ಯಾವಳಿಯಾದ್ದರಿಂದ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಇಂತಹ ಮಹತ್ವದ ಟೂರ್ನಿಯಲ್ಲಿ ನೀವು ಹಾದಿ ತಪ್ಪದಿರುವುದು ಮುಖ್ಯ’’ ಎಂದಿದ್ದಾರೆ.
MS Dhoni Retirement: ಧೋನಿ ನಿವೃತ್ತಿ ಆಗಲ್ವಂತೆ: ಊಹಾಪೋಹಗಳಿಗೆ ತೆರೆ ಎಳೆದ ಸಿಎಸ್ಕೆ ಕೋಚ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಆದರೆ, ತಮ್ಮ ತಂಡ ಇನ್ನೂ ಪರಿಪೂರ್ಣ ಪಂದ್ಯವನ್ನು ಆಡಿಲ್ಲ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. ‘‘ಪ್ರತಿ ಪಂದ್ಯದಲ್ಲೂ ಕೆಲವು ಉತ್ತಮ ಕ್ಯಾಚ್ಗಳು ಮತ್ತು ಕೆಲವು ಡ್ರಾಪ್ಗಳು ಕೂಡ ಇರುತ್ತವೆ. ನಾಯಕನಾಗಿ, ನಾವು ಇನ್ನೂ ಪರಿಪೂರ್ಣ ಪಂದ್ಯವನ್ನು ಆಡಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಚೆನ್ನಾಗಿ ಆರಂಭಿಸಿದ್ದೇವೆ ಆದರೆ ಐಪಿಎಲ್ ದೀರ್ಘ ಪಂದ್ಯಾವಳಿ, ಈವೇಗ ಹೀಗೆ ಮುಂದುವರೆಯಬೇಕು.. ಯಾವತ್ತೂ ಬದಲಾಗದಂತೆ ನೋಡಿಕೊಳ್ಳಬೇಕು’’ ಎಂದು ಅಕ್ಷರ್ ಮಾತು.
2008 ರ ನಂತರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ತವರಿನಲ್ಲಿ ಸಿಎಸ್ಕೆ ವಿರುದ್ಧ ಜಯಗಳಿಸಿತ್ತು. ಈಗ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಚೆನ್ನೈನ ತವರಿನಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದೆ. 2010 ರ ನಂತರ ಚೆಪಾಕ್ ಕ್ರೀಡಾಂಗಣದಲ್ಲಿ ತಂಡವು ಗೆದ್ದ ಮೊದಲ ಪಂದ್ಯ ಇದಾಗಿದೆ. ಇದರೊಂದಿಗೆ, ಅಕ್ಷರ್ ಪಟೇಲ್ ತಂಡವು ಐಪಿಎಲ್ 2025 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 183 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗೆ 158 ರನ್ ಗಳಿಸಿ 25 ರನ್ಗಳಿಂದ ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ