AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಅರ್ಜಿದಾರರು ಈ ಷರತ್ತುಗಳನ್ನು ಪೂರೈಸಬೇಕು

ಶಾಸ್ತ್ರಿಯವರ ಸ್ಥಾನವನ್ನು ಭರ್ತಿ ಮಾಡಲು ಆಹ್ವಾನಿಸಲಾದ ಈ ಅರ್ಜಿಗಳು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದೆ. ಏಕೆಂದರೆ ಈ ಪಾತ್ರಕ್ಕಾಗಿ ಮಂಡಳಿಯು ಮಾಜಿ ಅನುಭವಿ ಮತ್ತು ಪ್ರಸ್ತುತ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಹೆಸರನ್ನು ಒಪ್ಪಿಕೊಂಡಿದೆ.

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಅರ್ಜಿದಾರರು ಈ ಷರತ್ತುಗಳನ್ನು ಪೂರೈಸಬೇಕು
ಟಿ20 ವಿಶ್ವಕಪ್​
TV9 Web
| Edited By: |

Updated on:Oct 17, 2021 | 4:57 PM

Share

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಹೊಸ ನೇಮಕಾತಿಗೆ ಔಪಚಾರಿಕ ಪ್ರಕ್ರಿಯೆ ಆರಂಭವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 17, ಭಾನುವಾರ, ಬಿಸಿಸಿಐ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುವ ಜಾಹೀರಾತನ್ನು ನೀಡಿತು. ಬಿಸಿಸಿಐ ಪ್ರಕಾರ, ಈ ಹುದ್ದೆಗೆ ಸ್ಪರ್ಧಿಸುವವರು ತಮ್ಮ ಅರ್ಜಿಯನ್ನು ಬಿಸಿಸಿಐಗೆ ಅಕ್ಟೋಬರ್ 26 ರ ಸಂಜೆ 5 ಗಂಟೆಗೆ ಕಳುಹಿಸಬೇಕು. ಇದರೊಂದಿಗೆ, ಬಿಸಿಸಿಐನ ಸಂವಿಧಾನದ ಪ್ರಕಾರ ರಾಹುಲ್ ದ್ರಾವಿಡ್ ಅವರನ್ನು ತರಬೇತುದಾರರನ್ನಾಗಿ ಮಾಡಲು ಔಪಚಾರಿಕತೆಗಳು ಆರಂಭವಾಗಿವೆ. ಮುಖ್ಯ ತರಬೇತುದಾರರಲ್ಲದೆ, ಬೌಲಿಂಗ್ ತರಬೇತುದಾರ, ಬ್ಯಾಟಿಂಗ್ ತರಬೇತುದಾರ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಫೀಲ್ಡಿಂಗ್ ತರಬೇತುದಾರರಿಗೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿಸಿಸಿಐ ಜಾಹೀರಾತಿನ ಪ್ರಕಾರ, ಮುಖ್ಯ ಕೋಚ್ ಮತ್ತು ಸಹಾಯಕ ಸಿಬ್ಬಂದಿಯ ಅಧಿಕಾರಾವಧಿ ಎರಡು ವರ್ಷಗಳು. ಇದರೊಂದಿಗೆ, ಮಂಡಳಿಯು ಅರ್ಹ ಅಭ್ಯರ್ಥಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಇದರ ಪ್ರಕಾರ, ಮುಖ್ಯ ಕೋಚ್‌ಗಾಗಿ ಅರ್ಜಿದಾರರು ಕನಿಷ್ಠ 30 ಟೆಸ್ಟ್ ಪಂದ್ಯಗಳು ಅಥವಾ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳ ಅನುಭವವನ್ನು ಹೊಂದಿರಬೇಕು. ಅಥವಾ ಅವರು ಎರಡು ವರ್ಷಗಳ ಕಾಲ ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರದ ರಾಷ್ಟ್ರೀಯ ತಂಡದ ಕೋಚ್ ಆಗಿರಬೇಕು. ಅಥವಾ 3 ವರ್ಷಗಳ ಕಾಲ ಯಾವುದೇ ಸಹವರ್ತಿ ತಂಡ ಅಥವಾ ಐಪಿಎಲ್ ತಂಡ ಅಥವಾ ಇತರ ವಿದೇಶಿ ಲೀಗ್ ಅಥವಾ ಪ್ರಥಮ ದರ್ಜೆ ತಂಡದ ಕೋಚ್ ಆಗಿರಬೇಕು. ಅಥವಾ ಬಿಸಿಸಿಐನಿಂದ ಲೆವೆಲ್ -3 ಸರ್ಟಿಫಿಕೇಟ್ (ಕೋಚಿಂಗ್) ಪಡೆದಿರಬೇಕು. ಇದೆಲ್ಲದರ ಹೊರತಾಗಿ, ನೇಮಕಾತಿಯ ಸಮಯದಲ್ಲಿ ಸಂಬಂಧಪಟ್ಟ ವ್ಯಕ್ತಿಯ ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರಬೇಕು.

ಸಹಾಯಕ ಸಿಬ್ಬಂದಿಗೆ ಷರತ್ತುಗಳು ಇದೆಲ್ಲದರ ಹೊರತಾಗಿ, ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಕೋಚ್‌ಗಳಿಗಾಗಿ ಬೋರ್ಡ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 3 ರಿಂದ ಸಂಜೆ 5 ರವರೆಗೆ. ಎಲ್ಲಾ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಜನರು ಕನಿಷ್ಟ 10 ಟೆಸ್ಟ್ ಅಥವಾ 25 ಏಕದಿನಗಳ ಅನುಭವ ಹೊಂದಿರಬೇಕು. ಎಲ್ಲಾ ಇತರ ಷರತ್ತುಗಳು ಮುಖ್ಯ ಕೋಚ್‌ಗಾಗಿ ಅರ್ಜಿದಾರರಂತೆಯೇ ಇರುತ್ತವೆ. ಈ ನಾಲ್ಕು ಹುದ್ದೆಗಳ ಹೊರತಾಗಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ಮುಖ್ಯ ಫಿಸಿಶಿಯನ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಕೂಡ ಅರ್ಜಿಯನ್ನು ನವೆಂಬರ್ 3 ರೊಳಗೆ ಸಲ್ಲಿಸಬೇಕು.

ಶಾಸ್ತ್ರಿ ಮತ್ತು ಕಂಪನಿಯ ಅಧಿಕಾರಾವಧಿ ಮುಗಿಯುತ್ತಿದೆ ಭಾರತೀಯ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಅವರ ಸಹಾಯಕ ಸಿಬ್ಬಂದಿ; ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಟೀಂ ಇಂಡಿಯಾ ಜೊತೆಗಿನ ಒಪ್ಪಂದಗಳು ಮುಂದಿನ ತಿಂಗಳು ಟಿ 20 ವಿಶ್ವಕಪ್ ನಂತರ ಮುಕ್ತಾಯಗೊಳ್ಳಲಿದೆ. ರವಿಶಾಸ್ತ್ರಿ 2017 ರಿಂದ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದು, ಈ ಸಮಯದಲ್ಲಿ ಅವರು 2-2 ವರ್ಷಗಳ ಎರಡು ಅವಧಿಗಳನ್ನು ಪೂರೈಸಿದ್ದಾರೆ.

ರಾಹುಲ್ ದ್ರಾವಿಡ್ ಅವರ ನೇಮಕಾತಿಯ ವಿಧಿವಿಧಾನಗಳು ಶಾಸ್ತ್ರಿಯವರ ಸ್ಥಾನವನ್ನು ಭರ್ತಿ ಮಾಡಲು ಆಹ್ವಾನಿಸಲಾದ ಈ ಅರ್ಜಿಗಳು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದೆ. ಏಕೆಂದರೆ ಈ ಪಾತ್ರಕ್ಕಾಗಿ ಮಂಡಳಿಯು ಮಾಜಿ ಅನುಭವಿ ಮತ್ತು ಪ್ರಸ್ತುತ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಹೆಸರನ್ನು ಒಪ್ಪಿಕೊಂಡಿದೆ. ಆದಾಗ್ಯೂ, ಮಂಡಳಿಯ ಸಂವಿಧಾನದ ಅಡಿಯಲ್ಲಿ, ತರಬೇತುದಾರರ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಕ್ರಿಕೆಟ್ ಸಲಹಾ ಸಮಿತಿಯಿಂದ ಅರ್ಜಿದಾರರನ್ನು ಸಂದರ್ಶಿಸುವ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿದೆ. ಈ ರೀತಿಯಾಗಿ ಇದನ್ನು ದ್ರಾವಿಡ್ ನೇಮಕಾತಿಯ ಔಪಚಾರಿಕ ಪ್ರಕ್ರಿಯೆ ಎಂದು ಕರೆಯಬಹುದು.

Published On - 4:54 pm, Sun, 17 October 21

ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಮಹಿಳೆಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಗುಂಡಿನ ದಾಳಿ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು
ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ