ಪಂದ್ಯ ಆರಂಭಕ್ಕೂ ಮೊದಲೇ ಆರ್​​ಸಿಬಿಗೆ ಬಿಗ್ ಶಾಕ್; ಈ ಸ್ಟಾರ್ ಪ್ಲೇಯರ್ ಡೌಟ್

CKS Vs RCB: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ಭುವನೇಶ್ವರ್ ಕುಮಾರ್ ಅವರ ಗಾಯದಿಂದ ಆರ್​ಸಿಬಿಗೆ ಆತಂಕ ಎದುರಾಗಿದೆ. ಚೆಪಾಕ್‌ನಲ್ಲಿ ಆರ್​ಸಿಬಿ ಈವರೆಗೆ ಗೆದ್ದಿರೋದು ಒಂದೇ ಪಂದ್ಯ. ಹೀಗಾಗಿ ಇದು ಸವಾಲಾಗಿ ಪರಿಣಮಿಸಿದೆ.

ಪಂದ್ಯ ಆರಂಭಕ್ಕೂ ಮೊದಲೇ ಆರ್​​ಸಿಬಿಗೆ ಬಿಗ್ ಶಾಕ್; ಈ ಸ್ಟಾರ್ ಪ್ಲೇಯರ್ ಡೌಟ್
Rcb

Updated on: Mar 28, 2025 | 11:48 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು (ಮಾರ್ಚ್​ 28) ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮುಖಾ ಮುಖಿ ಆಗುತ್ತಿವೆ. ಕಳೆದ ಸೀಸನ್​ನಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಆರ್​ಸಿಬಿ ಕ್ವಾಲಿಫೈಯರ್​ ಪಂದ್ಯಕ್ಕೆ ಅವಕಾಶ ಪಡೆಯಿತು. ಈ ಸೇಡನ್ನು ಚೆನ್ನೈ ತೀರಿಸಿಕೊಳ್ಳಲು ಸಂಚು ರೂಪಿಸಿದೆ. ಇತ್ತ ಆರ್​ಸಿಬಿ ತಂಡವು ಇದಕ್ಕೆ ಪ್ರತಿ ತಂತ್ರ ರೂಪಿಸಿದೆ. ರಾತ್ರಿ 7 ಗಂಟೆಗೆ ಟಾಸ್ ನಡೆಯಲಿದ್ದು, 7.30ಕ್ಕೆ ಪಂದ್ಯ ಆರಂಭ ಆಗಲಿದೆ.

ಇಂದಿನ ಪಂದ್ಯದಲ್ಲೂ ಆರ್​ಸಿಬಿ ವೇಗಿ ಭುವನೇಶ್ವರ್ ಕುಮಾರ್ ಅವರು ಆಡೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಗಾಯದ ಸಮಸ್ಯೆಯಿಂದ ಅವರು ಹಿಂದಿನ ಪಂದ್ಯದಲ್ಲೂ ಇರಲಿಲ್ಲ. ಈ ಪಂದ್ಯದಲ್ಲೂ ಅವರ ಇರುವಿಕೆ ಇನ್ನೂ ಖಚಿತವಾಗಿಲ್ಲ. ಸ್ಟಾರ್ ಬೌಲರ್ ಇಲ್ಲದೆ ಇರುವುದು ಆರ್​ಸಿಬಿಗೆ ಕಷ್ಟ ಆಗಲಿದೆ.

ಭುವನೇಶ್ವರ್ ಕುಮಾರ್ ಬದಲು ರಸಿಕ್ ದಾರ್ ಸಲಾಮ್ ಅವರು ಬಂದಿದ್ದರು. ಅವರು ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯೇ ಆಗಿದ್ದರು. ಆದಾರೆ, ಭುವನೇಶ್ವರ್ ಅವರು ಫಿಟ್ ಆಗಿಲ್ಲ ಎಂದರೆ ರಸಿಕ್ ಅವರಿಗೆ ಅವಕಾಶ ಸಿಗೋದು ಪಕ್ಕಾ ಎನ್ನಲಾಗುತ್ತಿದೆ. ಟಾಸ್ ಬಳಿಕವೇ ಅವರ ಇರುವಿಕೆ ಖಾತ್ರಿ ಆಗಲಿದೆ.

ಇದನ್ನೂ ಓದಿ
ಉತ್ತಮ TRP ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಈ ಸೂಪರ್ ಹಿಟ್ ಧಾರಾವಾಹಿ?
ದಂಡಿಗೆ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
ಗಳಿಕೆಯಲ್ಲಿ ಇತಿಹಾಸ; ಮೊದಲ ದಿನ ಗರಿಷ್ಠ ಕಲೆಕ್ಷನ್ ಮಾಡಿದ ಎಲ್​2: ಎಂಪುರಾನ್
ಚಿತ್ರಮಂದಿರದ ಬಾಗಿಲು, ಕಿಟಕಿ, ಕುರ್ಚಿ ಒಡೆದು ಹಾಕಿದ ದರ್ಶನ್ ಫ್ಯಾನ್ಸ್​

ಸ್ವಪ್ನಿಲ್ ಸಿಂಗ್ ಅವರನ್ನು ಕೂಡ ಒಂದು ಆಯ್ಕೆ ಆಗಿ ಆರ್​ಸಿಬಿ ಇಟ್ಟುಕೊಂಡಿದೆ. ಅವರು ಕಳೆದ ಸೀಸನ್​ನಲ್ಲಿ ಉತ್ತಮ ಆಟ ಪ್ರದರ್ಶನ ನೀಡಿದ್ದರು. ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಆರ್​ಸಿಬಿಗೆ ಇದೆ. ಭುವನೇಶ್ವರ್ ಬೇಗ ರಿಕವರಿ ಆದರೆ ಆರ್​ಸಿಬಿಗೆ ಬಲ ಸಿಕ್ಕಂತೆ ಆಗಲಿದೆ.

ಭುವನೇಶ್ವರ್ ಕುಮಾರ್ ರೆಕಾರ್ಡ್

ಭುವನೇಶ್ವರ್ ಕುಮಾರ್ ಅವರು ಸಿಎಸ್​ಕೆ ವಿರುದ್ಧ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಚೆನ್ನೈ ವಿರುದ್ಧ ಆಡಿರುವ 20 ಪಂದ್ಯಗಳಲ್ಲಿ 13 ವಿಕೆಟ್ ತೆಗೆದಿರುವ ಅವರು, 6.90 ಎಕಾನಮಿ ಹೊಂದಿದ್ದಾರೆ. ಹೀಗಾಗಿ, ಹೆಚ್ಚು ವಿಕೆಟ್ ಕೀಳದೇ ಇದ್ದರೂ ರನ್ ನಿಯಂತ್ರಣ ತಂಡಕ್ಕೆ ಸಹಕಾರಿ ಆಗಲಿದೆ. ಪವರ್​ಪ್ಲೇನ್​ಲ್ಲಿ ಎರಡು ಓವರ್​ನ ಭುವನೇಶ್ವರ್ ಮಾಡಿದರೆ ಚೆನ್ನೈನ ಕಡಿಮೆ ಮೊತ್ತಕ್ಕೆ ಕಟ್ಟು ಹಾಕಬಹುದು.

ಇದನ್ನೂ ಓದಿ: ನೋವು, ಬೇಸರ, ಹತಾಶೆ; ಹೈದರಾಬಾದ್ ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್​ಪ್ರೆಷನ್ ನೋಡಿ

ಚೆಪಾಕ್ ಸ್ಟೇಡಿಯಂನಲ್ಲಿ ಆರ್​ಸಿಬಿ ಆಡಲು ತುಂಬಾನೇ ಕಷ್ಟಪಡುತ್ತಿದೆ. ಈ ಸ್ಟೇಡಿಯಂನಲ್ಲಿ ಆರ್​ಸಿಬಿ ವಿನ್​ ಆಗಿದ್ದರು 2008ರಲ್ಲೇ ಕೊನೆ! ಆ ಬಳಿಕ ತಂಡಕ್ಕೆ ಇಲ್ಲಿ ಗೆಲುವು ಸಿಕ್ಕೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Fri, 28 March 25

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us