Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf du Plessis: ‘ಅದು ನಮಗೆ ದುಬಾರಿ ಆಯಿತು’; ಸೋಲಿನ ಬಳಿಕ ಆರ್​ಸಿಬಿ ನಾಯಕನ ಬೇಸರದ ಮಾತು

‘ನಮ್ಮಿಂದ ಉತ್ತಮ ಪ್ರದರ್ಶನ ಸಿಕ್ಕಿದೆ. 280 ಅನ್ನೋದು ದೊಡ್ಡ ಮೊತ್ತ. ಅದರ ಸಮೀಪ ಹೋಗಲು ಪ್ರಯತ್ನಿಸಿದೆವು. ಇಲ್ಲಿ ನಮ್ಮ ವೇಗಿಗಳು ಬೌಲ್ ಮಾಡಲು ಕಷ್ಟಪಟ್ಟರು. ಬ್ಯಾಟಿಂಗ್ ಕ್ಷೇತ್ರದಲ್ಲೂ ನಾವು ಕೆಲವು ಕಡೆ ಇನ್ನಷ್ಟು ಶ್ರಮ ಹಾಕಬೇಕಿದೆ’ ಎಂದಿದ್ದಾರೆ ಡುಪ್ಲೆಸಿಸ್.

Faf du Plessis: ‘ಅದು ನಮಗೆ ದುಬಾರಿ ಆಯಿತು’; ಸೋಲಿನ ಬಳಿಕ ಆರ್​ಸಿಬಿ ನಾಯಕನ ಬೇಸರದ ಮಾತು
ಆರ್​ಸಿಬಿ
Follow us
ರಾಜೇಶ್ ದುಗ್ಗುಮನೆ
|

Updated on:Apr 16, 2024 | 8:14 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸನ್​ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದೆ. 288 ರನ್​ಗಳ ಬೃಹತ್ ಟಾರ್ಗೆಟ್​ ಬೆನ್ನು ಹತ್ತಿದ ಆರ್​ಸಿಬಿ ಸುಲಭದಲ್ಲಿ ಸೋಲೊಪ್ಪಲಿಲ್ಲ. 262 ರನ್​ಗಳ ಮೊತ್ತ ಕಲೆ ಹಾಕಿ ಕೇವಲ 25 ರನ್​ಗಳಲ್ಲಿ ಸೋತಿತು. ಆರ್​ಸಿಬಿ ಆರನೇ ಸೋಲಿನ ಬಳಿಕ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಅವರು ಮಾತನಾಡಿದ್ದಾರೆ. ಈ ಪಂದ್ಯವನ್ನು ನಾವು ಗೆಲ್ಲಬಹುದಿತ್ತು ಎಂದು ಅವರು ಹೇಳಿದ್ದಾರೆ.

ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಪಿಚ್ ಹಾಗೂ ಆರ್​ಸಿಬಿ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಹೈದರಾಬಾದ್ ತಂಡ 287 ರನ್ ಕಲೆ ಹಾಕಿತು. ಹೆಡ್ 41 ಬೌಲ್​ಗೆ 101 ರನ್ ಕಲೆ ಹಾಕಿದರು. ಅಬ್ದುಲ್ ಸಮಾದ್ ಹಾಗೂ ಮಕ್ರಮ್ ಅನುಕ್ರವಾಗಿ 37 ರನ್ ಹಾಗೂ 32 ರನ್ ಬಾರಿಸಿದರು. ಕ್ಲಾಸನ್ 31 ಬೌಲ್​ಗೆ 67 ರನ್ ಸಿಡಿಸಿದರು. ಇದನ್ನು ಬೆನ್ನು ಹತ್ತಿದ ಆರ್​ಸಿಬಿ ಉತ್ತಮ ಆರಂಭ ಕಂಡಿತು. ವಿರಾಟ್ ಕೊಹ್ಲಿ 20 ಬೌಲ್​ಗೆ 42 ರನ್ ಸಿಡಿಸಿದರು. ಫಾಪ್ 28 ಬೌಲ್​ಗೆ 62 ರನ್ ಬಾರಿಸಿದರು. ಕಾರ್ತಿಕ್ 35 ಬೌಲ್​ಗೆ 83 ಸಿಡಿಸಿ ತಂಡಕ್ಕೆ ಆಸರೆ ಆದರು.

ಪಂದ್ಯ ಮುಗಿದ ಬಳಿಕ ಫಾಪ್ ಮಾತನಾಡಿದ್ದಾರೆ. ‘ನಮ್ಮಿಂದ ಉತ್ತಮ ಪ್ರದರ್ಶನ ಸಿಕ್ಕಿದೆ. 280 ಅನ್ನೋದು ದೊಡ್ಡ ಮೊತ್ತ. ಅದರ ಸಮೀಪ ಹೋಗಲು ಪ್ರಯತ್ನಿಸಿದೆವು. ಇಲ್ಲಿ ನಮ್ಮ ವೇಗಿಗಳು ಬೌಲ್ ಮಾಡಲು ಕಷ್ಟಪಟ್ಟರು. ಬ್ಯಾಟಿಂಗ್ ಕ್ಷೇತ್ರದಲ್ಲೂ ನಾವು ಕೆಲವು ಕಡೆ ಇನ್ನಷ್ಟು ಶ್ರಮ ಹಾಕಬೇಕಿದೆ. ಪವರ್​ಪ್ಲೇ ಬಳಿಕವೂ ರನ್​ರೇಟ್ ಕಡಿಮೆ ಆಗದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ ಫಾಪ್.

ಇದನ್ನೂ ಓದಿ: ಆರ್​ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ; ಈ ಪಂದ್ಯಗಳಿಂದ ಆಗುತ್ತೆ ನಿರ್ಧಾರ

‘ನಮ್ಮ ಬಾಯ್ಸ್ ಕೈ ಜೋಡಿಸಿದರು ಮತ್ತು ಬಿಟ್ಟುಕೊಡಲಿಲ್ಲ. ಫೈಟ್ ನೋಡಲು ಖುಷಿ ಆಯಿತು. ಬೌಲಿಂಗ್ ದೃಷ್ಟಿಯಿಂದ ನೋಡೋದಾದರೆ ನಮ್ಮಿಂದ 30-40 ರನ್ ಹೆಚ್ಚುವರಿಯಾಗಿ ಬಂದಿದೆ. ಅದು ನಮಗೆ ದುಬಾರಿ ಆಯಿತು. ಮರಳಿ ಪೆವಿಲಿಯನ್ ಹೋಗಿ ಮನಸ್ಸನ್ನು ತಿಳಿ ಗೊಳಿಸಿಕೊಂಡುಬರೋದು ಮುಖ್ಯ. ಇದು ಮನಸ್ಸಿನ ಆಟ. ಕೆಲವೊಮ್ಮೆ ನಿಮ್ಮ ತಲೆ ಸಿಡಿದಂತೆ ಅನಿಸುತ್ತದೆ. ಆದರೆ, ಮ್ಯಾಚ್ ಎಂಬುದು ಬಂದಾಗ ಶೇ. 100 ನೀಡಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:14 am, Tue, 16 April 24

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ