AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಪೈರ್‌ಗೆ ಜೀವಭಯ ಹುಟ್ಟಿಸಿದ ಮೊಹಮ್ಮದ್ ಸಿರಾಜ್ ಬುಲೆಟ್ ಥ್ರೋ!

Sri Lanka vs India, 1st Test: ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ತನ್ನ ಮೊದಲ ಇನಿಂಗ್ಸ್‌ನಲ್ಲಿ 462 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಗಿದೆ. ಭಾರತದ ಈ ಬೃಹತ್ ಸ್ಕೋರ್‌ಗೆ ಉತ್ತರವಾಗಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ ತಂಡ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ನಲುಗಿ ಕೇವಲ 284 ರನ್‌ಗಳಿಗೆ ಸರ್ವಪತನ ಕಂಡಿದೆ.

ಅಂಪೈರ್‌ಗೆ ಜೀವಭಯ ಹುಟ್ಟಿಸಿದ ಮೊಹಮ್ಮದ್ ಸಿರಾಜ್ ಬುಲೆಟ್ ಥ್ರೋ!
Mohammed SirajImage Credit source: GettyImages
ಝಾಹಿರ್ ಯೂಸುಫ್
|

Updated on: Aug 18, 2026 | 8:06 AM

Share

ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಜಿದ್ದಾಜಿದ್ದಿ ಮಾಮೂಲು. ಆದರೆ ಕೆಲವೊಮ್ಮೆ ಫೀಲ್ಡರ್‌ಗಳ ಅತಿವೇಗದ ಆಟವೇ ಮೈದಾನದಲ್ಲಿರುವವರ ಜೀವಕ್ಕೆ ಆಪತ್ತು ತಂದೊಡ್ಡುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇಂತಹದ್ದೇ ಒಂದು ರೋಮಾಂಚಕ ಮತ್ತು ಅಷ್ಟೇ ಆಘಾತಕಾರಿ ಘಟನೆಗೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಎಸೆದ ಕರಾರುವಾಕ್ “ಬುಲೆಟ್ ಥ್ರೋ” ನೇರವಾಗಿ ಅನ್-ಫೀಲ್ಡ್ ಅಂಪೈರ್ ಕಡೆಗೇ ನುಗ್ಗಿ ಬಂದಿದೆ! ಕ್ಷಣಾರ್ಧದಲ್ಲಿ ಅಂಪೈರ್ ಜೀವಭಯದಿಂದ ಕೆಳಗೆ ಬಗ್ಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಮೈದಾನದಲ್ಲಿ ನಡೆದಿದ್ದೇನು?

ಶ್ರೀಲಂಕಾ ಇನ್ನಿಂಗ್ಸ್‌ನ 69ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡುತ್ತಿದ್ದರು. ಲಂಕಾ ಬ್ಯಾಟರ್ ಸೋನಲ್ ದಿನುಶಾ ರಿವರ್ಸ್ ಸ್ವೀಪ್ ಮಾಡಿ ಡೀಪ್ ಪಾಯಿಂಟ್ ಕಡೆಗೆ ಚೆಂಡನ್ನು ಅಟ್ಟಿದರು. ಬೌಂಡರಿ ಲೈನ್‌ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಅತ್ಯಂತ ವೇಗವಾಗಿ ಓಡಿಬಂದು ಚೆಂಡನ್ನು ತಡೆದರು. ಅಲ್ಲದೆ ಬ್ಯಾಟರ್‌ಗಳು ಎರಡನೇ ರನ್ ಓಡುವುದನ್ನು ತಡೆಯುವ ಗಡಿಬಿಡಿಯಲ್ಲಿ ಸಿರಾಜ್, ನಾನ್-ಸ್ಟ್ರೈಕರ್ ಎಂಡ್‌ ಕಡೆಗೆ ರಾಕೆಟ್ ವೇಗದಲ್ಲಿ ಚೆಂಡನ್ನು ಎಸೆದರು.

ಆದರೆ, ಸಿರಾಜ್ ಎಸೆದ ಆ ಥ್ರೋ ನೇರವಾಗಿ ಅಲ್ಲೇ ನಿಂತಿದ್ದ ಲೆಗ್ ಅಂಪೈರ್ ಅಹ್ಸಾನ್ ರಾಝ ಅವರ ತಲೆಯ ಕಡೆಗೇ ನುಗ್ಗಿ ಬಂದಿತು. ಕ್ಷಣಾರ್ಧದಲ್ಲಿ ಎಚ್ಚೆತ್ತುಕೊಂಡ ಅಂಪೈರ್ ಅಹ್ಸಾನ್, ಅದ್ಭುತ ರಿಫ್ಲೆಕ್ಸ್ ಪ್ರದರ್ಶಿಸಿ ತಲೆಯನ್ನು ಕೆಳಗೆ ಬಗ್ಗಿಸಿ ಪಾರಾದರು. ಒಂದು ವೇಳೆ ಅವರು ಸ್ವಲ್ಪ ತಡ ಮಾಡಿದ್ದರೂ ತಲೆಗೆ ಬಲವಾದ ಪೆಟ್ಟು ಬೀಳುವುದು ಖಚಿತವಾಗಿತ್ತು.

ಜಡೇಜಾ ರಿಯಾಕ್ಷನ್, ಅಂಪೈರ್ ನಗು!

ಈ ಘಟನೆ ನಡೆಯುತ್ತಿದ್ದಂತೆ ಬೌಲಿಂಗ್ ಎಂಡ್‌ನಲ್ಲಿದ್ದ ರವೀಂದ್ರ ಜಡೇಜಾ ಅವರ ರಿಯಾಕ್ಷನ್ ಎಲ್ಲರ ಗಮನ ಸೆಳೆಯಿತು. ಸಿರಾಜ್ ಅವರ ವೈಲ್ಡ್ ಥ್ರೋ ನೋಡಿ ಜಡೇಜಾ ಮೈದಾನದಲ್ಲೇ ಜಸ್ಟ್ ಮಿಸ್ ಎಂಬಾರ್ಥದಲ್ಲಿ ಸಿರಾಜ್​ನತ್ತ ಕೈ ಸನ್ನೆ ಮಾಡಿದರು. ಇತ್ತ ಜೀವ ಕೈಯಲ್ಲಿ ಹಿಡಿದು ಬಚಾವಾಗಿದ್ದ ಅಂಪೈರ್ ಅಹ್ಸಾನ್ ರಾಝ ಕೂಡ ಜಡೇಜಾರನ್ನು ನೋಡಿ, ತಮ್ಮ ಹೆದರಿಕೆಯನ್ನು ಮರೆತು ಮುಗುಳ್ನಕ್ಕರು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, “ಸಿರಾಜ್ ಭಾಯ್, ಸ್ವಲ್ಪ ನಿಧಾನ! ಈಗಾಗಲೇ ಒಬ್ಬ ಅಂಪೈರ್ ಬದಲಾಗಿದ್ದಾರೆ, ಇವರನ್ನೂ ಆಸ್ಪತ್ರೆಗೆ ಕಳುಹಿಸಬೇಡಿ” ಎಂದು ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಟೀಮ್ ಇಂಡಿಯಾ ಮೇಲುಗೈ!

ಈ ಆಘಾತಕಾರಿ ಘಟನೆಯ ನಡುವೆಯೂ ಭಾರತ ಪಂದ್ಯದ ಮೇಲೆ ಭರ್ಜರಿ ಹಿಡಿತ ಸಾಧಿಸಿದೆ. ಇದೇ ಪಂದ್ಯದಲ್ಲಿ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದ 350 ವಿಕೆಟ್‌ಗಳ ಐತಿಹಾಸಿಕ ಮೈಲಿಗಲ್ಲು ತಲುಪಿದರು. ಯುವ ಆಟಗಾರ ಮಾನವ್ ಸುತಾರ್ ಅವರ 4 ವಿಕೆಟ್‌ಗಳ ಸಾಹಸದಿಂದ ಶ್ರೀಲಂಕಾ ತಂಡವನ್ನು 284 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 178 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ ಸುಸ್ಥಿತಿಯಲ್ಲಿದೆ.

Follow Us
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!