AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌; ಪಟ್ಟಿಯಲ್ಲಿ ಮೈಸೂರು..!

IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್​ ನಿರ್ಮಿಸುವುದಾಗಿ ಬಿಸಿಸಿಐ ಘೋಷಿಸಿದೆ. ಸದ್ಯಕ್ಕೆ ಮೊದಲ 22 ಪಂದ್ಯಗಳ ಅಂದರೆ ಮೊದಲಾರ್ಧದ ಐಪಿಎಲ್​ನಲ್ಲಿ ನಡೆಯಲ್ಲಿರುವ ಪಂದ್ಯಗಳಿಗೆ ಯಾವ್ಯಾವ ಸ್ಥಳದಲ್ಲಿ ಯಾವ್ಯಾವ ದಿನಾಂಕದಂದು ಫ್ಯಾನ್ ಪಾರ್ಕ್​ ಆಯೋಜಿಸಲಿದೆ ಎಂಬುದನ್ನು ಬಿಸಿಸಿಐ ಪ್ರಕಟಿಸಿದೆ.

IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌; ಪಟ್ಟಿಯಲ್ಲಿ ಮೈಸೂರು..!
ಐಪಿಎಲ್ ಫ್ಯಾನ್ ಪಾರ್ಕ್​
ಪೃಥ್ವಿಶಂಕರ
|

Updated on:Mar 20, 2024 | 9:43 PM

Share

ಇದೇ ಮಾರ್ಚ್​ 22 ರಿಂದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭವಾಗಲಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಇದುವರೆಗೆ ಮೊದಲ 22 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಇಷ್ಟರಲ್ಲೇ ಬಿಡುಗಡೆ ಮಾಡಲು ಬಿಸಿಸಿಐ (BCCI) ತಯಾರಿ ನಡೆಸಿದೆ. ಈ ನಡುವೆ ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿರುವ ಮಂಡಳಿ, ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ (IPL 2024 Fan Park)​ ನಿರ್ಮಿಸುವುದಾಗಿ ಘೋಷಿಸಿದೆ. ಸದ್ಯಕ್ಕೆ ಮೊದಲ 22 ಪಂದ್ಯಗಳ ಅಂದರೆ ಮೊದಲಾರ್ಧದ ಐಪಿಎಲ್​ನಲ್ಲಿ ನಡೆಯಲ್ಲಿರುವ ಪಂದ್ಯಗಳಿಗೆ ಯಾವ್ಯಾವ ಸ್ಥಳದಲ್ಲಿ ಯಾವ್ಯಾವ ದಿನಾಂಕದಂದು ಫ್ಯಾನ್ ಪಾರ್ಕ್​ ಆಯೋಜಿಸಲಿದೆ ಎಂಬುದನ್ನು ಬಿಸಿಸಿಐ ಪ್ರಕಟಿಸಿದೆ.

15 ಫ್ಯಾನ್ ಪಾರ್ಕ್‌

ಐಪಿಎಲ್​ ಅನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಸಲುವಾಗಿ ಬಿಸಿಸಿಐ 2015 ರ ಆವೃತ್ತಿಯಿಂದ ಈ ಫ್ಯಾನ್ ಪಾರ್ಕ್​ ಅನ್ನು ಆಯೋಜಿಸುತ್ತಿದೆ. ಯಾರಿಗೆ ಮೈದಾನಕ್ಕೆ ಹೋಗಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲವೋ ಅಂತಹವರು ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸಿದ ಅನುಭವವನ್ನು ಈ ಫ್ಯಾನ್ ಪಾರ್ಕ್​ನಲ್ಲಿ ಪಡೆದುಕೊಳ್ಳಬಹುದಾಗಿದೆ. ಮೇಲೆ ಹೇಳಿದಂತೆ ಮೊದಲ ಎರಡು ವಾರಗಳಲ್ಲಿ ಅಂದರೆ 22 ಮಾರ್ಚ್ 2024 ರಿಂದ 7 ಏಪ್ರಿಲ್ 2024 ರವರೆಗೆ ಮೊದಲ ಹಂತದಲ್ಲಿ 15 ಫ್ಯಾನ್ ಪಾರ್ಕ್‌ಗಳು ಇರುತ್ತವೆ. ಐಪಿಎಲ್ ಉದ್ಘಾಟನಾ ಪಂದ್ಯದಿಂದಲೇ ಈ ಫ್ಯಾನ್ ಪಾರ್ಕ್​ ಇರಲಿದೆ.

IPL 2024: ಐಪಿಎಲ್​ನಲ್ಲಿ ಈ ಐದು ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ..!

11 ರಾಜ್ಯಗಳಲ್ಲಿ ಫ್ಯಾನ್ ಪಾರ್ಕ್‌

ಅಂದರೆ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ನಡೆಯಲ್ಲಿರುವ ಉದ್ಘಾಟನಾ ಪಂದ್ಯಕ್ಕೆ ಮಧುರೈನಲ್ಲಿ ಈ ಫ್ಯಾನ್ ಪಾರ್ಕ್ ಆಯೋಜಿಸಲಾಗುವುದು. ಭಾರತದ 11 ರಾಜ್ಯಗಳಲ್ಲಿ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಅವುಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ಗುಜರಾತ್, ಕರ್ನಾಟಕ, ಜಾರ್ಖಂಡ್, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳು ಸೇರಿವೆ. ಪ್ರತಿ ವಾರ ಒಂದೇ ಬಾರಿಗೆ ಒಟ್ಟು ಐದು ಸ್ಥಳಗಳಲ್ಲಿ ಫ್ಯಾನ್ ಪಾರ್ಕ್‌ಗಳು ಇರುತ್ತವೆ. ಮುಂದಿನ ಫ್ಯಾನ್ ಪಾರ್ಕ್‌ಗಳ ಸ್ಥಳಗಳನ್ನು ಉಳಿದಾರ್ಧದ ವೇಳಾಪಟ್ಟಿಯ ಪ್ರಕಾರ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಫ್ಯಾನ್ ಪಾರ್ಕ್ ನಗರಗಳ ಸಂಪೂರ್ಣ ಪಟ್ಟಿ

  • ಮಾರ್ಚ್ 23, 24: ಮೀರತ್ (ಉತ್ತರ ಪ್ರದೇಶ)
  • ಏಪ್ರಿಲ್ 6, 7: ವಾರಣಾಸಿ (ಉತ್ತರ ಪ್ರದೇಶ)
  • ಮಾರ್ಚ್ 23, 24: ಬಿಕಾನೇರ್ (ರಾಜಸ್ಥಾನ)
  • ಮಾರ್ಚ್ 23, 24: ಮಿಡ್ನಾಪುರ (ಪಶ್ಚಿಮ ಬಂಗಾಳ)
  • ಮಾರ್ಚ್ 23, 24: ಸೋಲಾಪುರ (ಮಹಾರಾಷ್ಟ್ರ)
  • ಏಪ್ರಿಲ್ 6, 7: ನಾಗ್ಪುರ (ಮಹಾರಾಷ್ಟ್ರ)
  • ಮಾರ್ಚ್ 22, 23: ಮಧುರೈ (ತಮಿಳುನಾಡು)
  • ಮಾರ್ಚ್ 30, 31: ಕೊಯಮತ್ತೂರು (ತಮಿಳುನಾಡು)
  • ಏಪ್ರಿಲ್ 6, 7: ಡೆಹ್ರಾಡೂನ್ (ಉತ್ತರಾಖಂಡ)
  • ಏಪ್ರಿಲ್ 6, 7: ರಾಜ್‌ಕೋಟ್ (ಗುಜರಾತ್)
  • ಮಾರ್ಚ್ 30, 31: ನಾಡಿಯಾಡ್ (ಗುಜರಾತ್)
  • ಏಪ್ರಿಲ್ 6, 7: ಮೈಸೂರು (ಕರ್ನಾಟಕ)
  • ಮಾರ್ಚ್ 30, 31: ಜಮ್ಶೆಡ್ಪುರ (ಜಾರ್ಖಂಡ್)
  • ಮಾರ್ಚ್ 30, 31: ಪಟಿಯಾಲ (ಪಂಜಾಬ್)
  • ಮಾರ್ಚ್ 30, 31: ನಿಜಾಮಾಬಾದ್ (ತೆಲಂಗಾಣ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Wed, 20 March 24

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?