MS Dhoni: ಪಂತ್-ದುಬೆ ಅಲ್ಲ: ಕೇವಲ 26 ರನ್ ಗಳಿಸಿದ ಧೋನಿಗೆ ಪಂದ್ಯಶ್ರೇಷ್ಠ ಸಿಕ್ಕಿದ್ದು ಏಕೆ ಗೊತ್ತೇ?

LSG vs CSK, IPL 2025: ಎಂ ಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದಾಗ್ಯೂ, ಇದರೊಂದಿಗೆ, ಧೋನಿಯ ಬಗ್ಗೆಯೂ ಒಂದು ಪ್ರಶ್ನೆ ಉದ್ಭವಿಸಲು ಪ್ರಾರಂಭಿಸಿದೆ. ವಾಸ್ತವವಾಗಿ, ಧೋನಿ ಹೊರತುಪಡಿಸಿ, ಇನ್ನೂ ಇಬ್ಬರು ಆಟಗಾರರು ಪಂದ್ಯಶ್ರೇಷ್ಠರಾಗುವ ಸ್ಪರ್ಧೆಯಲ್ಲಿದ್ದರು.

MS Dhoni: ಪಂತ್-ದುಬೆ ಅಲ್ಲ: ಕೇವಲ 26 ರನ್ ಗಳಿಸಿದ ಧೋನಿಗೆ ಪಂದ್ಯಶ್ರೇಷ್ಠ ಸಿಕ್ಕಿದ್ದು ಏಕೆ ಗೊತ್ತೇ?
Pant Ms Dhoni And Shivam Dube

Updated on: Apr 15, 2025 | 7:59 AM

(ಬೆಂಗಳೂರು ಏ, 15): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 30 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants vs Chennai Super Kings) ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಈ ಋತುವಿನಲ್ಲಿ ಸಿಎಸ್‌ಕೆ ಆಡಿದ 7 ಪಂದ್ಯಗಳಲ್ಲಿ ಇದು ಎರಡನೇ ಗೆಲುವು. ಈ ಮೂಲಕ ಕೊನೆಗೂ ಸಿಎಸ್​ಕೆ ಗೆಲುವಿನ ಹಳಿಗೆ ಮರಳಿದೆ. ಕೊನೆಯ ಓವರ್​ನಲ್ಲಿ ಜಯ ಸಿಕ್ಕ ನಂತರ, ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ತಂಡಕ್ಕಾಗಿ ಧೋನಿ 11 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ ಪಂದ್ಯವನ್ನು ಮುಗಿಸಿದರು.

ಇದರೊಂದಿಗೆ, ಎಂ ಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದಾಗ್ಯೂ, ಇದರೊಂದಿಗೆ, ಧೋನಿಯ ಬಗ್ಗೆಯೂ ಒಂದು ಪ್ರಶ್ನೆ ಉದ್ಭವಿಸಲು ಪ್ರಾರಂಭಿಸಿದೆ. ವಾಸ್ತವವಾಗಿ, ಧೋನಿ ಹೊರತುಪಡಿಸಿ, ಇನ್ನೂ ಇಬ್ಬರು ಆಟಗಾರರು ಪಂದ್ಯಶ್ರೇಷ್ಠರಾಗುವ ಸ್ಪರ್ಧೆಯಲ್ಲಿದ್ದರು. ಇದರಲ್ಲಿ ಲಕ್ನೋ ಸೂಪರ್ ಜೇಂಟ್ಸ್ ನಾಯಕ ರಿಷಭ್ ಪಂತ್ ಮತ್ತು ಸಿಎಸ್‌ಕೆ ತಂಡದ ಶಿವಂ ದುಬೆ ಸೇರಿದ್ದಾರೆ.

ಇದನ್ನೂ ಓದಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಐಪಿಎಲ್​ನಿಂದ ಹೊರಬಿದ್ದ ಪಂಜಾಬ್ ತಂಡದ ಸ್ಟಾರ್ ವೇಗಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ

ರಿಷಭ್ ಪಂತ್ 49 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್​ನೊಂದಿಗೆ 63 ರನ್ ಚಚ್ಚಿದರು. ಸಾಮಾನ್ಯವಾಗಿ, ಪಂದ್ಯದ ಆಟಗಾರನನ್ನು ಗೆದ್ದ ತಂಡದಿಂದ ಮಾತ್ರ ಆಯ್ಕೆ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಂತ್ ಅವರ ತಂಡ ಸೋತ ನಂತರ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿಲ್ಲ ಎಂದು ಹೇಳಬಹುದು, ಆದರೆ ಇಲ್ಲಿ ಶಿವಂ ದುಬೆಗೆ ಎಲ್ಲೋ ಅನ್ಯಾಯವಾಗಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

Virat Kohli: ದ್ರಾವಿಡ್ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ

43 ರನ್​ಗಳ ಕೊಡುಗೆ ನೀಡಿದ ಶಿವಂ ದುಬೆ:

ಲಕ್ನೋ ವಿರುದ್ಧದ ಪಂದ್ಯದಲ್ಲಿ, ತಂಡವು 76 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಾಗ ಶಿವಂ ದುಬೆ ಸಿಎಸ್‌ಕೆ ಪರ ಇನ್ನಿಂಗ್ಸ್ ಆಡಲು ಬಂದರು. ಇಲ್ಲಿಯ ವರೆಗೆ ಲಕ್ನೋ ಬೌಲರ್‌ಗಳು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು, ಆದರೆ ಶಿವಂ ದುಬೆ ಬಂದ ಕೂಡಲೇ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿ ಚೆನ್ನೈ ತಂಡವನ್ನು ಮತ್ತೆ ಪಂದ್ಯಕ್ಕೆ ಕರೆತಂದರು. ದುಬೆ ಯೋಜಿತ ಇನ್ನಿಂಗ್ಸ್ ಆಡಿದರು ಮತ್ತು 37 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್​ನೊಂದಿಗೆ ಅಜೇಯ 43 ರನ್ ಗಳಿಸಿದರು.

 

ದುಬೆ ಬ್ಯಾಟಿಂಗ್ ಮಾಡುತ್ತಿರುವಾಗ, ರವೀಂದ್ರ ಜಡೇಜಾ ಮತ್ತು ವಿಜಯ್ ಶಂಕರ್ ಅವರ ವಿಕೆಟ್‌ಗಳು ಬೇಗನೆ ಪತನಗೊಂಡವು. ಪರಿಣಾಮ ಚೆನ್ನೈ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಬಳಿಕ ದುಬೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು ಮತ್ತು ನಾಯಕ ಎಂಎಸ್ ಧೋನಿ ಇವರಿಗೆ ಉತ್ತಮ ಬೆಂಬಲ ನೀಡಿದರು. ತಂಡದ ಪರ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು. ಇದಲ್ಲದೆ, ಅವರು ವಿಕೆಟ್ ಕೀಪಿಂಗ್‌ನಲ್ಲಿ ಕೆಲವು ಕ್ಯಾಚ್‌ಗಳನ್ನು ಪಡೆದರು, ಅದ್ಭುತ ಸ್ಟಂಪಿಂಗ್‌ಗಳ ಜೊತೆಗೆ ಒಂದು ಪ್ರಮುಖ ರನ್ ಔಟ್‌ಗಳನ್ನು ಕೂಡ ಮಾಡಿದರು. ಬಹುಶಃ ಅದಕ್ಕಾಗಿಯೇ ಧೋನಿ ಅವರನ್ನು ಲಕ್ನೋ ವಿರುದ್ಧದ ಪಂದ್ಯದ ಆಟಗಾರನಾಗಿ ಆಯ್ಕೆ ಮಾಡಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ