AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಗಿಲ್, ಗಂಭೀರ್ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಇಲ್ಲಿದೆ

Team India's England Tour: ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದ್ದು, ಶುಭ್ಮನ್ ಗಿಲ್ ನಾಯಕತ್ವ ವಹಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗಾಗಿ ತಂಡ ಸಜ್ಜಾಗಿದೆ. ಆದರೆ ಈ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಿಲ್ ಮತ್ತು ಗೌತಮ್ ಗಂಭೀರ್ ಭಾಗವಹಿಸಿದ್ದರು. ಇದೇ ವೇಳೆ ತಂಡದ ಯುವ ಆಟಗಾರರ ವಿಶ್ವಾಸ, ಬೌಲಿಂಗ್ ವಿಭಾಗದ ಶಕ್ತಿ, ಮತ್ತು ನಾಯಕತ್ವದ ಬಗ್ಗೆ ಚರ್ಚಿಸಲಾಯಿತು. ಬುಮ್ರಾ ಅವರ ಅನುಪಸ್ಥಿತಿಯನ್ನು ನಿಭಾಯಿಸುವ ಬಗ್ಗೆಯೂ ಮಾತನಾಡಲಾಯಿತು.

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಗಿಲ್, ಗಂಭೀರ್ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಇಲ್ಲಿದೆ
Gambhir, Gill
ಪೃಥ್ವಿಶಂಕರ
|

Updated on: Jun 05, 2025 | 10:53 PM

Share

ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ. ಟೆಸ್ಟ್ ತಂಡದ ನಾಯಕತ್ವ ಹೊಸ ಮತ್ತು ಯುವ ಆಟಗಾರ ಶುಭ್​ಮನ್ ಗಿಲ್ (Shubman Gill) ಅವರ ಕೈಸೇರಿದೆ. ಇದೀಗ ಭಾರತ ಯುವ ಪಡೆ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಚೊಚ್ಚಲ ಪ್ರವಾಸಕ್ಕೆ ಸಜ್ಜಾಗಿದೆ. ಐಪಿಎಲ್ (IPL 2025) ಆಡಿ ಮುಗಿಸಿರುವ ಟೀಂ ಇಂಡಿಯಾ ಆಟಗಾರರು ಹೊಡಿಬಡಿ ಆಟದಿಂದ ತಾಳ್ಮೆಯನ್ನೇ ಬಯಸುವ ಟೆಸ್ಟ್ ಕ್ರಿಕೆಟ್​ನತ್ತ ಮುಖ ಮಾಡಬೇಕಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡುತ್ತಿದೆ. ಆದರೆ ಈ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ನೂತನ ನಾಯಕ ಶುಭ್​ಮನ್ ಗಿಲ್ ಹಾಗೂ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮೊದಲ ಬಾರಿಗೆ ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಗಿಲ್ ಮತ್ತು ಗಂಭೀರ್ ಪತ್ರಿಕಾಗೋಷ್ಠಿ ಹೈಲೈಟ್ಸ್

  • ವಿರಾಟ್ ಮತ್ತು ರೋಹಿತ್ ಅನುಪಸ್ಥಿತಿಯ ಬಗ್ಗೆ ಮಾತನಾಡಿದ ಗಿಲ್, ‘ಪ್ರತಿ ಪ್ರವಾಸದಲ್ಲೂ ಒತ್ತಡವಿರುತ್ತದೆ. ಗೆಲ್ಲಲೇಬೇಕಾದ ಒತ್ತಡವಿರುತ್ತದೆ. ದೀರ್ಘಕಾಲದಿಂದ ಆಡುತ್ತಿದ್ದ ಇಬ್ಬರು ದಿಗ್ಗಜ ಆಟಗಾರರು ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರ ಸ್ಥಾನವನ್ನು ತುಂಬುವುದು ತುಂಬಾ ಕಷ್ಟ. ಆದರೆ ನಮಗೆ ಯಾವುದೇ ಒತ್ತಡವಿಲ್ಲ. ಒತ್ತಡದಲ್ಲಿ ಹೇಗೆ ಆಡಬೇಕು ಎಂಬುದು ಎಲ್ಲಾ ಆಟಗಾರರಿಗೂ ತಿಳಿದಿದೆ. ನಮ್ಮ ತಂಡದಲ್ಲಿರುವ ಬ್ಯಾಟಿಂಗ್ ಮತ್ತು ಬೌಲಿಂಗ್ ಸಂಯೋಜನೆಗಳ ಬಗ್ಗೆ ನಮಗೆ ವಿಶ್ವಾಸವಿದೆ’ ಎಂದು ಹೇಳಿದರು.
  • ಈ ಪ್ರಶ್ನೆಗೆ ಉತ್ತರಿಸಿದ ಗೌತಮ್ ಗಂಭೀರ್: ಇನ್ನೊಂದು ಪ್ರವಾಸವಿದೆ, ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಅವಕಾಶವಿದೆ. ನಮ್ಮಲ್ಲಿ ಗುಣಮಟ್ಟದ ಆಟಗಾರರಿದ್ದಾರೆ. ನಾವು ವಿಶೇಷವಾದದ್ದನ್ನು ಮಾಡಲು ಬಯಸುತ್ತೇವೆ ಎಂದರು.
  • ಇನ್ನು ತಮ್ಮ ನಾಯಕತ್ವದ ಬಗ್ಗೆ ಮಾತನಾಡಿದ ಶುಭ್​ಮನ್ ಗಿಲ್, ‘ನಾನು ಟೆಸ್ಟ್ ನಾಯಕನಾಗಲಿದ್ದೇನೆ ಎಂದು ತಿಳಿದಾಗ, ನನಗೆ ತುಂಬಾ ಸಂತೋಷವಾಯಿತು. ಇದು ಒಂದು ದೊಡ್ಡ ಸವಾಲು. ನಮಗೆ ಸಮಯವಿದೆ, ಲಂಡನ್‌ನಲ್ಲಿ 10 ದಿನಗಳ ಶಿಬಿರವಿದೆ. ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಲಾಗುತ್ತದೆ ಎಂದರು.
  • ಟೀಂ ಇಂಡಿಯಾ ಬೌಲಿಂಗ್ ಬಗ್ಗೆ ಮಾತನಾಡಿದ ಗಿಲ್, ‘ನಮ್ಮದು ಅತ್ಯುತ್ತಮ ವೇಗದ ಬೌಲಿಂಗ್ ವಿಭಾಗ. ನಮ್ಮ ವೇಗಿಗಳು ಎಲ್ಲಿಂದಲಾದರೂ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬುಮ್ರಾ ಅವರು ಆಡುವ ಯಾವುದೇ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಬುಮ್ರಾ ಅವರನ್ನು ಬದಲಾಯಿಸುವುದು ಕಷ್ಟ. ಆದರೆ ನಮ್ಮಲ್ಲಿ ಗುಣಮಟ್ಟದ ಬೌಲರ್‌ಗಳಿದ್ದಾರೆ ಎಂದರು.
  • ಬುಮ್ರಾ ಆಡುವ ಬಗ್ಗೆ ಮಾತನಾಡಿದ ಗಂಭೀರ್,‘ ಬುಮ್ರಾ ಯಾವ ಮೂರು ಪಂದ್ಯಗಳನ್ನು ಆಡುತ್ತಾರೆ ಎಂಬುದರ ಕುರಿತು ನಾವು ಚರ್ಚಿಸಿಲ್ಲ. ಇದು ಸರಣಿಗೆ ಅನುಗುಣವಾಗಿರುತ್ತದೆ ಎಂದರು.
  • ತಮ್ಮ ನಾಯಕತ್ವ ಶೈಲಿಯ ಬಗ್ಗೆ ಮಾತನಾಡಿದ ಗಿಲ್, ‘ನನಗೆ ಯಾವುದೇ ಶೈಲಿ ಇಲ್ಲ. ಆಡುವಾಗ ನಾನು ಅದನ್ನು ಕಲಿಯುತ್ತೇನೆ. ಆಟಗಾರರನ್ನು ಸುರಕ್ಷಿತವಾಗಿರಿಸುವುದು, ಅವರೊಂದಿಗೆ ಸಂವಹನ ನಡೆಸುವುದು. ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅವರಿಗೆ ಹೇಳುವುದು. ಆಟಗಾರರೊಂದಿಗೆ ಬಾಂಧವ್ಯವನ್ನು ಬೆಳೆಸುವುದು ಮುಖ್ಯ. ಯಾವುದೇ ತಂಡದ ನಾಯಕನಿಗೆ ಆಟಗಾರರು ಸುರಕ್ಷಿತವಾಗಿರುವುದು ಮುಖ್ಯ, ಆಗ ಮಾತ್ರ ಅವರು ತಮ್ಮ 100 ಪ್ರತಿಶತವನ್ನು ನೀಡಲು ಸಾಧ್ಯವಾಗುತ್ತದೆ.
  • ಇಂಗ್ಲೆಂಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್: ಇಂಗ್ಲೆಂಡ್‌ನಲ್ಲಿ, ನೆಲ ಮಾತ್ರವಲ್ಲ, ಆಕಾಶವೂ ಮುಖ್ಯ, 1000 ರನ್ ಗಳಿಸಿದರೂ ಗೆಲುವಿನ ಖಾತರಿಯಿರಲ್ಲ. 20 ವಿಕೆಟ್‌ಗಳನ್ನು ಪಡೆದರೆ ಮಾತ್ರ ನೀವು ಗೆಲ್ಲುತ್ತೀರಿ.
  • ಬೆಂಗಳೂರು ಘಟನೆಯ ಬಗ್ಗೆ ಮಾತನಾಡಿದ ಗಂಭೀರ್: ನಾನು ಎಂದಿಗೂ ರೋಡ್ ಶೋಗಳ ಪರವಾಗಿಲ್ಲ. 2007 ರಲ್ಲಿಯೂ ನಾನು ಅದರ ಪರವಾಗಿ ಇರಲಿಲ್ಲ ಮತ್ತು ನಾನು ಕೆಕೆಆರ್‌ನಲ್ಲೂ ಇರಲಿಲ್ಲ. ನೀವು ಅದಕ್ಕೆ ಸಿದ್ಧರಿಲ್ಲದಿದ್ದರೆ ನೀವು ಅಂತಹ ಆಚರಣೆಗಳನ್ನು ಮಾಡಬಾರದು. ಆಚರಣೆಗಳಿಗಿಂತ ಜನರ ಜೀವಗಳು ಮುಖ್ಯ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ