AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಕೋಟಿ ರೂ. ಕೊಟ್ಟರು ಕೊಹ್ಲಿ ನೀಡಿದ ಉಡುಗೂರೆಯನ್ನು ಮಾರುವುದಿಲ್ಲ ಎಂದ ಪಾಕಿಸ್ತಾನಿ ಅಭಿಮಾನಿ..!

ಟೀಂ ಇಂಡಿಯಾ ಆಟಗಾರರು ನಿಮಗೆ ಯಾಕೆ ಇಷ್ಟು ಎಂದು ಪಾಕಿಸ್ತಾನದ ಅಭಿಮಾನಿಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಅಭಿಮಾನಿ, 'ನಮ್ಮ ಸಂಸ್ಕೃತಿ ಮತ್ತು ಭಾರತದ ಸಂಸ್ಕೃತಿ ಒಂದೇ ಆಗಿದ್ದು, ಅವರು ತಮ್ಮಂತೆಯೇ ಕಾಣುತ್ತಾರೆ.

1 ಕೋಟಿ ರೂ. ಕೊಟ್ಟರು ಕೊಹ್ಲಿ ನೀಡಿದ ಉಡುಗೂರೆಯನ್ನು ಮಾರುವುದಿಲ್ಲ ಎಂದ ಪಾಕಿಸ್ತಾನಿ ಅಭಿಮಾನಿ..!
ಅಭಿಮಾನಿಗಳೊಂದಿಗೆ ಕೊಹ್ಲಿ
TV9 Web
| Edited By: |

Updated on: Sep 09, 2022 | 10:00 PM

Share

ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತದ ಅಭಿಮಾನಿಗಳು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ 71 ನೇ ಶತಕವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಕೊಹ್ಲಿಗೆ ಅಭಿಮಾನಿಗಳ ದಂಡೆ ಇದ್ದು, ಪಾಕಿಸ್ತಾನದಲ್ಲೂ ಇಂತಹ ಅಭಿಮಾನಿಗಳ ಸಂಖ್ಯೆ ಬಹಳ ದೊಡ್ಡದಿದೆ. ಇದೇ ಕಾರಣಕ್ಕೆ ಯುಎಇಯಲ್ಲಿ ಕೊಹ್ಲಿಯನ್ನು ನೋಡಲು ಬಂದಿದ್ದ ಅಭಿಮಾನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿಗಳು ಸೇರಿದ್ದರು. 71ನೇ ಶತಕ ಬಾರಿಸಿದ ಬಳಿಕ ಕೊಹ್ಲಿ ಅಂತಹ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ಕೊಹ್ಲಿಯ ಬ್ಯಾಟ್ ಮಾರಲು ಒಪ್ಪದ ಪಾಕಿಸ್ತಾನದ ಅಭಿಮಾನಿ

ಕೊಹ್ಲಿಯಿಂದ ವಿಶೇಷ ಉಡುಗೊರೆ ಪಡೆದ ಅಭಿಮಾನಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡುತ್ತಿದ್ದ ಅಭಿಮಾನಿ, ‘ನನ್ನ ಕೈಯಲ್ಲಿದ್ದ ಬ್ಯಾಟ್‌ಗೆ ವಿರಾಟ್ ಕೊಹ್ಲಿ ಭಯ್ಯಾ ಸಹಿ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ನಾನು ತುಂಬಾ ಅದೃಷ್ಟಶಾಲಿ, ಅವರು ಇಂದು ಶತಕ ಬಾರಿಸಿದ್ದಾರೆ. ಅದು ನನಗೆ ತುಂಬಾ ಸಂತೋಷ ನೀಡಿದೆ. ಪಂದ್ಯ ಮುಗಿದ ಬಳಿಕ ನಾನು ಕೊಹ್ಲಿ ಬಳಿ ವಿಶೇಷ ಮನವಿ ಮಾಡಿದ್ದೇ, ಅದನ್ನು ಒಪ್ಪಿಕೊಂಡಿದ್ದ ಅವರು ನನಗೆ ಬ್ಯಾಟ್ ಮೇಲೆ ಸಹಿ ಮಾಡಿ ಉಡುಗೂರೆಯಾಗಿ ನೀಡಿದ್ದರು.

ಈಗ ಕೊಹ್ಲಿ ಸಹಿ ಮಾಡಿದ ಬ್ಯಾಟನ್ನು ಇಲ್ಲಿನ ನಾಗರೀಕರೊಬ್ಬರು ಭಾರಿ ಬೆಲೆ ನೀಡಿ ಖರೀದಿಸಲು ಮುಂದಾಗಿದ್ದರು. ಆದರೆ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ ಎಂದು ಈ ಅಭಿಮಾನಿ ಹೇಳಿಕೊಂಡಿದ್ದಾರೆ. ಇಲ್ಲಿ ನಿಂತಿದ್ದ ಸಹೋದರರೊಬ್ಬರು ನನಗೆ 4000-5000 ದಿರ್ಹಮ್ (1 ದಿರ್ಹಾಮ್ = INR 21.68) ನೀಡುತ್ತೇನೆ ಈ ಬ್ಯಾಟ್ ನೀಡುವಂತೆ ಕೇಳಿಕೊಂಡರು. ಆದರೆ ನಾನು ಅದನ್ನು ಮಾರಾಟ ಮಾಡಲು ಬಯಸುವುದಿಲ್ಲ. ಅಲ್ಲದೆ ಯಾರಾದರೂ ಐದು ಲಕ್ಷ ದಿರ್ಹಮ್ (INR 1.08 ಕೋಟಿ) ನೀಡಿತ್ತೇನೆಂದರು ನಾನು ಈ ಬ್ಯಾಟನ್ನು ಮಾರಾಟ ಮಾಡುವುದಿಲ್ಲ ಎಂದು ಈ ಅಭಿಮಾನಿ ಹೇಳಿಕೊಂಡಿದ್ದಾರೆ.

ಭಾರತೀಯ ಆಟಗಾರರೆಂದರೆ ಪಾಕಿಗಳಿಗೆ ತುಂಬಾ ಇಷ್ಟ

ಟೀಂ ಇಂಡಿಯಾ ಆಟಗಾರರು ನಿಮಗೆ ಯಾಕೆ ಇಷ್ಟು ಎಂದು ಪಾಕಿಸ್ತಾನದ ಅಭಿಮಾನಿಯನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಅಭಿಮಾನಿ, ‘ನಮ್ಮ ಸಂಸ್ಕೃತಿ ಮತ್ತು ಭಾರತದ ಸಂಸ್ಕೃತಿ ಒಂದೇ ಆಗಿದ್ದು, ಅವರು ತಮ್ಮಂತೆಯೇ ಕಾಣುತ್ತಾರೆ. ನಮಗೆ ಕೊಹ್ಲಿ, ರೋಹಿತ್ ಮತ್ತು ಧೋನಿ ಎಂದರೆ ತುಂಬಾ ಇಷ್ಟ. ಇಸ್ಲಾಮಾಬಾದ್‌ನಲ್ಲಿ ವಾಸಿಸುವ ಅಭಿಮಾನಿ, 150 ಬ್ಯಾಟ್‌ಗಳ ಸಂಗ್ರಹವನ್ನು ಹೊಂದಿದ್ದು, ಅದರ ಮೇಲೆ ಅವರು ಪ್ರಪಂಚದಾದ್ಯಂತದ ಆಟಗಾರರ ಹಸ್ತಾಕ್ಷರಗಳನ್ನು ತೆಗೆದುಕೊಂಡಿದ್ದಾರೆ. ಅವರು ಭಾರತದ ಮಾಜಿ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅವರ ಹಸ್ತಾಕ್ಷರಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಹಸ್ತಾಕ್ಷರದ ಬ್ಯಾಟ್‌ಗಳೂ ಇವೆ ಎಂದಿದ್ದಾರೆ.

ವಿರಾಟ್ ಕೊಹ್ಲಿಗೆ ಗುರುವಾರ ಅತ್ಯಂತ ಮಹತ್ವದ ದಿನವಾಗಿತ್ತು. ಸುಮಾರು ಮೂರು ವರ್ಷಗಳ ನಂತರ, ಅವರ ಬ್ಯಾಟ್ ಶತಕ ಗಳಿಸಿತು. ಏಷ್ಯಾಕಪ್‌ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 122 ರನ್ ಗಳಿಸಿದ್ದರು. ಇದು ಅವರ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನದ ಮೊದಲ ಶತಕವಾಗಿದೆ. ಟಿ20ಯಲ್ಲಿ ಭಾರತದ ಪರ ಒಬ್ಬ ಆಟಗಾರ ಆಡಿದ ಅತಿ ದೊಡ್ಡ ಇನ್ನಿಂಗ್ಸ್ ಕೂಡ ಇದಾಗಿದೆ.

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು