AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pakistan: ಪಾಕ್ ತಂಡಕ್ಕೆ ಬರ್ಗರ್ ಬೇಕಿದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ ಝೊಮಾಟೊ

India vs Pakistan T20 World Cup 2021: ಝೊಮಾಟೊ ಹಾಗೂ ಕರೀಮ್ ಪಾಕಿಸ್ತಾನ್ ಟ್ವೀಟ್​ಗಳು ವೈರಲ್ ಆಗಿದೆ. ಅದರಲ್ಲೂ ಕರೀಮ್ ಪಾಕಿಸ್ತಾನ್ ಮಾಲೀಕನಿಗೆ ಪಾಕಿಸ್ತಾನ್ ಸೋಲೋದು ಖಚಿತ ಎಂಬುದು ಗೊತ್ತಿದೆ.

India vs Pakistan: ಪಾಕ್ ತಂಡಕ್ಕೆ ಬರ್ಗರ್ ಬೇಕಿದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ  ಝೊಮಾಟೊ
Pak team
TV9 Web
| Updated By: ಝಾಹಿರ್ ಯೂಸುಫ್|

Updated on: Oct 24, 2021 | 6:39 PM

Share

ಒಂದೆಡೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಕಾವೇರುತ್ತಿದ್ದರೆ, ಅತ್ತ ಫುಡ್​ ಡೆಲಿವರಿ ಕಂಪೆನಿ ಝೊಮಾಟೊ ಪಾಕ್ ತಂಡದ ಕಾಲೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಪಾಕಿಸ್ತಾನ್ ತಂಡಕ್ಕೆ ಇಂದು ರಾತ್ರಿ ಬರ್ಗರ್ ಅಥವಾ ಪಿಜ್ಜಾ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಪಾಕ್ ತಂಡದ ಅಧಿಕೃತ ಟ್ವಿಟರ್​ ಅಕೌಂಟ್​ಗೆ ಟ್ಯಾಗ್​ ಮಾಡಿ ಕಿಚಾಯಿಸಿದ್ದಾರೆ.

ಝೊಮಾಟೊ ಈ ರೀತಿಯಾಗಿ ಪಾಕ್ ತಂಡವನ್ನು ಕಿಚಾಯಿಸಲು ಮುಖ್ಯ ಕಾರಣ 2019 ರ ಏಕದಿನ ವಿಶ್ವಕಪ್. ಹೌದು, ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಪಾಕ್ ಆಟಗಾರರು ಟೀಮ್ ಇಂಡಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಪಿಜ್ಜಾ-ಬರ್ಗರ್ ಸೇವಿಸುತ್ತಾ ಸಮಯ ಕಳೆದಿದ್ದರು ಎಂದು ಆರೋಪಿಸಲಾಗಿತ್ತು.

ಹೀಗಾಗಿ ಅದನ್ನೇ ಪ್ರಸ್ತಾಪಿಸಿ ಇಂದು ಭಾರತದ ವಿರುದ್ದ ಸೋತ ಬಳಿಕ ಪಾಕ್ ತಂಡಕ್ಕೆ ಪಿಜ್ಜಾ ಅಥವಾ ಬರ್ಗರ್ ಬೇಕಿದ್ದರೆ ಝೊಮಾಟೊವನ್ನು ಸಂಪರ್ಕಿಸಿ ಎಂದು ಕಾಲೆಳೆದಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನದ ಫುಡ್​ ಡೆಲಿವರಿ ಕಂಪೆನಿ ಕರೀಮ್ ಪಾಕಿಸ್ತಾನ್ ಕೂಡ ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.

“ಮುಫ್ತ್ ಖನೇ ಕಾ ಮೌಕಾ ಭೀ ಔರ್ ಜೀತ್ನೆ ಕಾ ಮೌಕಾ ಭಿ (ಉಚಿತವಾಗಿ ತಿನ್ನುವ ಅವಕಾಶ ಮತ್ತು ಗೆಲ್ಲುವ ಅವಕಾಶ) ಎಂದು ಟ್ವೀಟ್ ಮಾಡಿ ಆಫರ್ ನೀಡಿದೆ. ಪಾಕಿಸ್ತಾನ-ಭಾರತ ನಡುವಣ ಪಂದ್ಯದ ವೇಳೆ ಫುಡ್​ ಆರ್ಡರ್​ ಮಾಡಿ. ಭಾರತದ ವಿರುದ್ದ ಪಾಕ್ ಗೆದ್ದರೆ ನೀವು ಆರ್ಡರ್ ಮಾಡಿದ ಮೊತ್ತವನ್ನು ಹಿಂತಿರುಗಿಸುತ್ತೇವೆ ಎಂದು ಘೋಷಿಸಿದ್ದಾರೆ.

ಇದೀಗ ಝೊಮಾಟೊ ಹಾಗೂ ಕರೀಮ್ ಪಾಕಿಸ್ತಾನ್ ಟ್ವೀಟ್​ಗಳು ವೈರಲ್ ಆಗಿದೆ. ಅದರಲ್ಲೂ ಕರೀಮ್ ಪಾಕಿಸ್ತಾನ್ ಮಾಲೀಕನಿಗೆ ಪಾಕಿಸ್ತಾನ್ ಸೋಲೋದು ಖಚಿತ ಎಂಬುದು ಗೊತ್ತಿದೆ. ಹೀಗಾಗಿಯೇ ಇಂತಹ ಆಫರ್ ನೀಡಿದ್ದಾರೆ ಎಂದು ಭಾರತೀಯ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Zomato Trolls PCB Ahead Of Ind vs Pak T20 World Cup Clash)

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ