AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: RCB ಕೈಬಿಟ್ರು, ಗುಜರಾತ್​ ಟೈಟಾನ್ಸ್​ನ ಚಾಂಪಿಯನ್ ಮಾಡಿದ್ರು..!

Gary Kirsten And Ashish Nehra: ಗುಜರಾತ್ ಟೈಟಾನ್ಸ್​ ತಂಡದ ಘೋಷಣೆಯಾದಾಗ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್​ಮನ್​ಗಳ ಆಯ್ಕೆ ಮತ್ತು ಪಾಂಡ್ಯಗೆ ನಾಯಕನ ಸ್ಥಾನ ನೀಡಿರುವ ಬಗ್ಗೆ ನೆಹ್ರಾ ಅವರನ್ನು ಟ್ರೋಲ್ ಮಾಡಿದವರೇ ಹೆಚ್ಚು.

IPL 2022: RCB ಕೈಬಿಟ್ರು, ಗುಜರಾತ್​ ಟೈಟಾನ್ಸ್​ನ ಚಾಂಪಿಯನ್ ಮಾಡಿದ್ರು..!
Gary Kirsten And Ashish Nehra
TV9 Web
| Edited By: |

Updated on: May 30, 2022 | 5:45 PM

Share

IPL 2022: ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಎತ್ತಿ ಹಿಡಿದು ತಂಡದೊಂದಿಗೆ ಸಂಭ್ರಮಿಸುತ್ತಿರುವಾಗ ಅಲ್ಲೇ ತುಸು ದೂರದಲ್ಲಿ ನಿಂತು ಇಬ್ಬರು ಮಾಜಿ ಆಟಗಾರರು ಮುಗುಳು ನಗುತ್ತಿದ್ದರು. ಅವರು ಮತ್ಯಾರೂ ಅಲ್ಲ, ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್.

ಐಪಿಎಲ್​ ಸೀಸನ್ 15ಗೆ ಗುಜರಾತ್ ಟೈಟಾನ್ಸ್ ಘೋಷಣೆಯಾದ ಬಳಿಕ ತಂಡದ ಸಿಬ್ಬಂದಿಗಳ ಆಯ್ಕೆ ಮಾಡಲಾಗಿತ್ತು. ಈ ವೇಳೆ ಗುಜರಾತ್ ಫ್ರಾಂಚೈಸಿ ಮೊದಲು ಆಯ್ಕೆ ಮಾಡಿದ್ದು ಆಶಿಶ್ ನೆಹ್ರಾ ಹಾಗೂ ಗ್ಯಾರಿ ಕರ್ಸ್ಟನ್ ಅವರನ್ನು. ಈ ಇಬ್ಬರ ಆಯ್ಕೆ ನೋಡಿ ನಕ್ಕವರೇ ಹೆಚ್ಚು. ಏಕೆಂದರೆ ಈ ಇಬ್ಬರು ಮಾಜಿ ಆಟಗಾರರು ಈ ಹಿಂದೆ ಕೂಡ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು. ಅಂದಿನ ಫಲಿತಾಂಶವನ್ನು ಪ್ರದರ್ಶಿಸಿ ಇಬ್ಬರ ಸಾಮರ್ಥ್ಯದ ಬಗ್ಗೆ ಹಲವು ಟ್ರೋಲ್​ಗಳು ಹರಿದಾಡಿದ್ದವು.

ಹೌದು, ನೆಹ್ರಾ ಹಾಗೂ ಕಸ್ಟರ್ನ್​ ಅವರ ಕೋಚಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಲು ಮುಖ್ಯ ಕಾರಣ ಆರ್​ಸಿಬಿ ಫ್ರಾಂಚೈಸಿ. ಏಕೆಂದರೆ 2019 ರ ಬಳಿಕ ಆರ್​ಸಿಬಿ ಫ್ರಾಂಚೈಸಿ ಇಬ್ಬರು ಸಿಬ್ಬಂದಿ ವರ್ಗದಿಂದ ಏಕಾಏಕಿ ವಜಾಗೊಳಿಸಿದ್ದರು. ಅಂದರೆ ಐಪಿಎಲ್ ಸೀಸನ್ 12 ನಲ್ಲಿ ಆರ್​ಸಿಬಿ ತಂಡದ ಕೋಚ್ ಗ್ಯಾರಿ ಕಸ್ಟರ್ನ್​ ಕಾರ್ಯ ನಿರ್ವಹಿಸಿದ್ದರು. ಇನ್ನು ಬೌಲಿಂಗ್ ಕೋಚ್ ಆಗಿ ಆಶಿಶ್ ನೆಹ್ರಾ ಇದ್ದರು. ಆದರೆ ಆ ಸೀಸನ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಆರ್​ಸಿಬಿ ತಂಡ 14 ಪಂದ್ಯಗಳಲ್ಲಿ ಕೇವಲ 5 ಮ್ಯಾಚ್​ನಲ್ಲಿ ಮಾತ್ರ ಗೆದ್ದಿದ್ದರು. ಇನ್ನು ಒಂದು ಪಂದ್ಯ ಡ್ರಾ ಆಗಿದ್ದರೆ, ಉಳಿದ 8 ಮ್ಯಾಚ್​ನಲ್ಲಿ ಆರ್​ಸಿಬಿ ಸೋಲುಂಡಿತ್ತು. ಪರಿಣಾಮ ಆರ್​ಸಿಬಿ 2019 ರ ಐಪಿಎಲ್ ಸೀಸನ್​ನಲ್ಲಿ ಕೊನೆಯ ಸ್ಥಾನ ಅಲಂಕರಿಸಿತು.

ಇದನ್ನೂ ಓದಿ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Image
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ಆರ್​ಸಿಬಿ ತಂಡದ ಕೋಚಿಂಗ್ ಸಿಬ್ಬಂದಿಗಳಾದ ಆಶಿಶ್ ನೆಹ್ರಾ ಹಾಗೂ ಗ್ಯಾರಿ ಕರ್ಸ್ಟನ್ ಅವರ ತಲೆದಂಡವಾಗಿತ್ತು. ಇಬ್ಬರು ಮಾಜಿ ಆಟಗಾರರಿಗೆ ಕಳಪೆ ಕೋಚಿಂಗ್ ಸ್ಟಾಫ್ ಎಂಬ ಹಣೆಪಟ್ಟಿ ಸಿಗಲು ಇಷ್ಟು ಸಾಕಾಗಿತ್ತು. ಇದಾದ ಬಳಿಕ ಈ ಜೋಡಿಯನ್ನು ಮತ್ತೆ ಕೋಚಿಂಗ್ ಸಿಬ್ಬಂದಿಗಳಾಗಿ ಆಯ್ಕೆ ಮಾಡಿದ್ದು ಗುಜರಾತ್ ಟೈಟಾನ್ಸ್.

ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್​ ಫ್ರಾಂಚೈಸಿಯ ನಡೆಯ ಬಗ್ಗೆ ಹಲವು ವಿಮರ್ಶೆಗಳು ಮೂಡಿಬಂತು. ಅದರಲ್ಲೂ ಖುದ್ದು ನೆಹ್ರಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡು ಬಿಡ್ಡಿಂಗ್ ನಡೆಸಿದ್ದರು. ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಂಡರು. ಮುಖ್ಯವಾಗಿ ನೆಹ್ರಾ ತಮಗೆ ಸೂಕ್ತವಾದ ಬೌಲರ್​ಗಳನ್ನು ಆರಿಸಿಕೊಂಡಿದ್ದರು. ಇನ್ನೊಂದೆಡೆ ಕಸ್ಟರ್ನ್​ ಬ್ಯಾಟ್ಸ್​ಮನ್​ಗಳನ್ನು ಆಯ್ಕೆ ಮಾಡಿದರು.

ಗುಜರಾತ್ ಟೈಟಾನ್ಸ್​ ತಂಡದ ಘೋಷಣೆಯಾದಾಗ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್​ಮನ್​ಗಳ ಆಯ್ಕೆ ಮತ್ತು ಪಾಂಡ್ಯಗೆ ನಾಯಕನ ಸ್ಥಾನ ನೀಡಿರುವುದು ಅತೀ ಹೆಚ್ಚು ಚರ್ಚೆಯಾಯಿತು. ವಿಶೇಷ ಎಂದರೆ ಟೀಕೆ ಟಿಪ್ಪಣಿಗಳಿಗೆ ಗುಜರಾತ್ ಟೈಟಾನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳೇ ಉತ್ತರ ನೀಡಿದ್ದರು. ಏಕೆಂದರೆ ಈ ಬಾರಿ ಗುಜರಾತ್ ಟೈಟಾನ್ಸ್ ಏಳು ಪಂದ್ಯಗಳನ್ನು ಕೊನೆಯ ಓವರ್​ನಲ್ಲಿ ಗೆದ್ದಿದೆ. ಈ ಮೂಲಕ ಅತ್ಯಧಿಕ ಬಾರಿ ಅಂತಿಮ ಓವರ್​ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ತಂಡ ಎಂಬ ದಾಖಲೆಯನ್ನು ಗುಜರಾತ್ ಟೈಟಾನ್ಸ್ ನಿರ್ಮಿಸಿದೆ.

ಇನ್ನು ನಾಯಕನ ಬಗ್ಗೆ ಹೇಳಬೇಕೆಂದಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಈ ಮೂಲಕ ಚೊಚ್ಚಲ ಸೀಸನ್​ನಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದಾರೆ.

ಹೌದು, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಎತ್ತಿ ಹಿಡಿದು ತಂಡದೊಂದಿಗೆ ಸಂಭ್ರಮಿಸುತ್ತಿರುವಾಗ ಇಬ್ಬರು ಮಾಜಿ ಆಟಗಾರರು ಮುಗುಳು ನಗುತ್ತಾ ತುಸು ದೂರದಲ್ಲಿ ನಿಂತು ಸಂಭ್ರಮಿಸುತ್ತಿದ್ದರು. ಅವರು ಮತ್ಯಾರೂ ಅಲ್ಲ, ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಗ್ಯಾರಿ ಕರ್ಸ್ಟನ್. ಅದೇ 2019 ರಲ್ಲಿ ಆರ್​ಸಿಬಿ ತಂಡದ ವಜಾಗೊಳಿಸಿದ ನೆಹ್ರಾ ಹಾಗೂ ಕಸ್ಟರ್ನ್​.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್