AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಪರಿಸ್ಥಿತಿ ಕೈಮೀರಿದೆ ಅಲ್ಲಿ ಟಿ20 ವಿಶ್ವಕಪ್ ಆಯೋಜಿಸುವುದು ಬೇಡ: ಆಸಿಸ್ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್

ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಈ ವಿಷಯದಲ್ಲಿ ಭಾರತದಲ್ಲಿ ಪರಿಸ್ಥಿತಿಗಳು ಸರಿಯಾಗದಿದ್ದರೆ, ಪಂದ್ಯಾವಳಿಯನ್ನು ಬೇರೆಡೆ ಆಯೋಜಿಸಬೇಕು ಎಂದು ಹೇಳಿದ್ದಾರೆ.

ಭಾರತದಲ್ಲಿ ಪರಿಸ್ಥಿತಿ ಕೈಮೀರಿದೆ ಅಲ್ಲಿ ಟಿ20 ವಿಶ್ವಕಪ್ ಆಯೋಜಿಸುವುದು ಬೇಡ: ಆಸಿಸ್ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್
ಪ್ಯಾಟ್ ಕಮ್ಮಿನ್ಸ್
ಪೃಥ್ವಿಶಂಕರ
| Edited By: |

Updated on:May 08, 2021 | 7:57 AM

Share

ಕೊರೊನಾ ವೈರಸ್ ಕಾರಣ, ಭಾರತದಲ್ಲಿ ಐಪಿಎಲ್ 2021 (IPL 2021) ಋತುವನ್ನು ನಿಲ್ಲಿಸಬೇಕಾಯಿತು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯಾವಳಿಯನ್ನು ಮಧ್ಯದಲ್ಲಿ ಅನಿರ್ದಿಷ್ಟವಾಗಿ ಮುಂದೂಡಿದೆ, ಆದರೆ ಇದು ಐಸಿಸಿ ಟಿ 20 ವಿಶ್ವಕಪ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತೋರುತ್ತದೆ. ಜೂನ್‌ನಲ್ಲಿ ಐಸಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಕುರಿತು ಮಾತನಾಡುತ್ತಿರಬಹುದು, ಆದರೆ ಈಗ ಆಟಗಾರರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಈ ವಿಷಯದಲ್ಲಿ ಭಾರತದಲ್ಲಿ ಪರಿಸ್ಥಿತಿಗಳು ಸರಿಯಾಗದಿದ್ದರೆ, ಪಂದ್ಯಾವಳಿಯನ್ನು ಬೇರೆಡೆ ಆಯೋಜಿಸಬೇಕು ಎಂದು ಹೇಳಿದ್ದಾರೆ. ಕಮ್ಮಿನ್ಸ್ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನ ಭಾಗವಾಗಿದ್ದರು ಮತ್ತು ಪ್ರಸ್ತುತ ತಮ್ಮ ಆಸ್ಟ್ರೇಲಿಯಾ ತಂಡದ ಸಹ ಆಟಗಾರರೊಂದಿಗೆ ಮಾಲ್ಡೀವ್ಸ್‌ನಲ್ಲಿದ್ದಾರೆ.

ಐಪಿಎಲ್ 2021 ಗಾಗಿ ಬಿಸಿಸಿಐ ರಚಿಸಿದ ಸುರಕ್ಷಿತ ಬಯೋ ಬಬಲ್​ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ಇದರಿಂದಾಗಿ ಆಟಗಾರರಲ್ಲಿ ಭೀತಿ ಉಂಟಾಯಿತು. ಅದೇ ಸಮಯದಲ್ಲಿ, ಭಾರತದ ಎರಡನೇ ಅಲೆಯ ಕೊರೊನಾದ ಹಾನಿ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ವಿದೇಶಿ ಆಟಗಾರರನ್ನು ತೊಂದರೆಗೊಳಿಸಿತು. ಅಂತಹ ಆಟಗಾರರಲ್ಲಿ ಭಾರತಕ್ಕೆ ಸಹಾಯ ಮಾಡಲು 50 ಸಾವಿರ ಡಾಲರ್​ ದೇಣಿಗೆ ನೀಡಿದ್ದ ಪ್ಯಾಟ್ ಕಮ್ಮಿನ್ಸ್ ಕೂಡ ಇದ್ದರು.

ಭಾರತದಲ್ಲಿ ಸಂಘಟಿಸುವ ನಿರ್ಧಾರವನ್ನು ಪರಿಶೀಲಿಸಬೇಕು ಐಪಿಎಲ್ ಮುಂದೂಡಲ್ಪಟ್ಟಿದ್ದರೂ, ಈಗ ವಿಶ್ವಕಪ್‌ನತ್ತ ಕಣ್ಣು ಹೋಗಿದೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ಪಂದ್ಯಾವಳಿಯನ್ನು ಆಯೋಜಿಸಬೇಕಿದೆ. ಆದರೆ, ಈಗ ಅದು ಮುಂದಿನ ದಿನಗಳಲ್ಲಿ ದೇಶದಲ್ಲಿ ಕೊರೊನಾದ ಪರಿಸ್ಥಿತಿ ಏನು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪರಿಸ್ಥಿತಿಯನ್ನು ಗಮನಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಪಷ್ಟಪಡಿಸಿದ್ದಾರೆ.

ಟಿ20 ವಿಶ್ವಕಪ್ ಭಾರತೀಯ ಸಂಪನ್ಮೂಲಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದರೆ ಅಥವಾ ಅದನ್ನು ಅಲ್ಲಿ ಸಂಘಟಿಸುವುದು ಸುರಕ್ಷಿತವಲ್ಲದಿದ್ದರೆ, ಪಂದ್ಯಾವಳಿಯನ್ನು ಸಂಘಟಿಸುವುದು ಸರಿಯೆಂದು ನಾನು ಭಾವಿಸುವುದಿಲ್ಲ. ಇದು ಉತ್ತರಿಸಬೇಕಾದ ಮೊದಲ ಪ್ರಶ್ನೆ. ಇನ್ನೂ 6 ತಿಂಗಳಿದೆ ಪಂದ್ಯಾವಳಿಗೆ, ಭಾರತೀಯ ಜನರಿಗೆ ಯಾವುದು ಉತ್ತಮ ಎಂದು ನೋಡಲು ಕ್ರಿಕೆಟ್ ಅಧಿಕಾರಿಗಳು ಭಾರತ ಸರ್ಕಾರದೊಂದಿಗೆ ಮಾತನಾಡುವುದು ಆದ್ಯತೆಯಾಗಿರಬೇಕು ಎಂದರು.

ಐಪಿಎಲ್ ಈವೆಂಟ್ ಬಗ್ಗೆ ಕಮ್ಮಿನ್ಸ್ ಏನು ಹೇಳಿದರು? ಈ ಬಾರಿ ಭಾರತದಲ್ಲಿ ಐಪಿಎಲ್ ನಡೆಸುವ ಪ್ರಶ್ನೆಗೆ ಕಮ್ಮಿನ್ಸ್, ಉತ್ತಮ ಸಲಹೆಯ ನಂತರವೇ ಸಂಘಟಕರು ಭಾರತದಲ್ಲಿ ಆತಿಥ್ಯ ವಹಿಸಲು ನಿರ್ಧರಿಸಿದ್ದರು ಎಂದು ಹೇಳಿದರು. ಕಳೆದ ವರ್ಷ ಯುಎಇಯಲ್ಲಿ ಐಪಿಎಲ್ ಅದ್ಭುತವಾಗಿ ನಡೆದಿತ್ತು. ಆದರೆ ಈ ಬಾರಿ ಭಾರತದಲ್ಲಿ ಆಡಬೇಕು ಎಂದು ಲಕ್ಷಾಂತರ ಜನರು ಒತ್ತಾಯಿಸಿದ್ದರು. ಆದ್ದರಿಂದ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿತು ಎಂದರು.

ಬಿಸಿಸಿಐ ಮುಂದೆ ದೊಡ್ಡ ಸವಾಲು ಎರಡೂ ಪಂದ್ಯಾವಳಿಗಳ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಗೆ ಕಳವಳವಿದೆ. ಐಪಿಎಲ್ ಪೂರ್ಣಗೊಳಿಸಲು ಮಂಡಳಿಯು ಉತ್ತಮ ದಾರಿಯನ್ನು ಹುಡುಕುತ್ತಿದೆ. ಪ್ರಸ್ತುತ, ಈ ದಿಕ್ಕಿನಲ್ಲಿ ಯಾವುದೇ ಯಶಸ್ಸನ್ನು ಸಾಧಿಸಲಾಗಿಲ್ಲ. ಇಂಗ್ಲೆಂಡ್ ಮತ್ತು ಶ್ರೀಲಂಕಾದ ಕೆಲವು ಕೌಂಟಿ ಕ್ಲಬ್‌ಗಳು ಪಂದ್ಯಾವಳಿಯನ್ನು ಆಯೋಜಿಸಲು ಪ್ರಸ್ತಾಪಿಸಿವೆ. ಅದೇ ಸಮಯದಲ್ಲಿ, ವಿಶ್ವಕಪ್​ಗೆ ಸಂಬಂಧಿಸಿದಂತೆ ಈ ಗೊಂದಲ ಪರಿಹರಿಸಲು ಮಂಡಳಿಗೆ ಸಹ ಸಮಸ್ಯೆ ಇದೆ.

ಇದನ್ನೂ ಓದಿ: ಕೊರೊನಾದ ನಡುವೆ ಒಲಿಂಪಿಕ್ಸ್ ಆಯೋಜಿಸುವುದು ಬೇಡ; ಕ್ರೀಡಾಕೂಟದ ವಿರುದ್ಧ ಜಪಾನಿಗರ ದಾಖಲೆಯ ಆನ್‌ಲೈನ್ ಅಭಿಯಾನ

Published On - 7:56 am, Sat, 8 May 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?