AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಡ್ರಾ ಆದರೆ ಚಾಂಪಿಯನ್ ತಂಡದ ಆಯ್ಕೆ ಹೇಗೆ?

ಈ ನಿಟ್ಟಿನಲ್ಲಿ ಐಸಿಸಿ ಇನ್ನೂ ಯಾವುದೇ ಸೂತ್ರವನ್ನು ಸೂಚಿಸಿಲ್ಲ. ಇದರರ್ಥ ಪಂದ್ಯವನ್ನು ಡ್ರಾ ಅಥವಾ ಸಮಬಲಗೊಳಿಸಿದರೆ, ಎರಡೂ ತಂಡಗಳು ಜಂಟಿ ಚಾಂಪಿಯನ್ ಆಗುತ್ತವೆ.

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಡ್ರಾ ಆದರೆ ಚಾಂಪಿಯನ್ ತಂಡದ ಆಯ್ಕೆ ಹೇಗೆ?
ಭಾರತ ಮತ್ತು ನ್ಯೂಜಿಲೆಂಡ್ ತಂಡದ ನಾಯಕರು
ಪೃಥ್ವಿಶಂಕರ
|

Updated on: May 14, 2021 | 3:46 PM

Share

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಜೂನ್ 18 ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಪಂದ್ಯ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಸಿದ್ಧವಾಗಿವೆ. ಸುಮಾರು ಎರಡು ವರ್ಷಗಳ ಕಾಲ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಾವಳಿಗಳ ನಂತರ ಭಾರತ ಮತ್ತು ನ್ಯೂಜಿಲೆಂಡ್ ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ. ಆರು ಸರಣಿಯಲ್ಲಿ ಟೀಮ್ ಇಂಡಿಯಾ 12 ಟೆಸ್ಟ್ ಗೆಲುವುಗಳು, ನಾಲ್ಕು ಸೋಲುಗಳು ಮತ್ತು ಒಂದು ಡ್ರಾ ಸಾಧಿಸಿ ಅಗ್ರಸ್ಥಾನದಲ್ಲಿದೆ. ಜೊತೆಗೆ 520 ಅಂಕಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಐದು ಸರಣಿಗಳಲ್ಲಿ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ ಮತ್ತು ನಾಲ್ಕು ಸೋತಿದೆ. ಅವರು 420 ಅಂಕಗಳನ್ನು ಹೊಂದಿದ್ದಾರೆ.

ಚಾಂಪಿಯನ್‌ಶಿಪ್ ಬಹಳಷ್ಟು ಸಮಸ್ಯೆಗಳನ್ನು ಅನುಭವಿಸಿತು ಕೊರೊನಾದಿಂದಾಗಿ ಕಿವಿ ತಂಡದ ಸರಣಿಯನ್ನು ನಡೆಸಲು ಸಾಧ್ಯವಾಗಲಿಲ್ಲ. ಟೆಸ್ಟ್ ಕ್ರಿಕೆಟ್ ಅನ್ನು ರೋಚಕವಾಗಿಸಲು ಐಸಿಸಿ ಇದನ್ನು ಪ್ರಾರಂಭಿಸಿತು. ಆದರೆ ಕೊರೊನಾ ವೈರಸ್‌ನಿಂದಾಗಿ, ಈ ಚಾಂಪಿಯನ್‌ಶಿಪ್ ಬಹಳಷ್ಟು ಸಮಸ್ಯೆಗಳನ್ನು ಅನುಭವಿಸಿತು. ಈ ಕಾರಣದಿಂದಾಗಿ, ಅನೇಕ ಸರಣಿಗಳನ್ನು ರದ್ದುಪಡಿಸಲಾಯಿತು ಮತ್ತು ಅನೇಕ ಬಾರಿ ಸರಣಿಯನ್ನು ಮುಂದೂಡಬೇಕಾಯಿತು. ಆದರೆ ಎಲ್ಲಾ ಸರಣಿಯ ಚಾಂಪಿಯನ್‌ಶಿಪ್‌ ಪಂದ್ಯಗಳು ಪೂರ್ಣಗೊಂಡ ನಂತರ, ಭಾರತ ಮತ್ತು ನ್ಯೂಜಿಲೆಂಡ್ ಫೈನಲ್​ಗೆ ಸಿದ್ಧವಾಗಿವೆ.

ಎರಡೂ ತಂಡಗಳು ಜಂಟಿ ಚಾಂಪಿಯನ್ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಂದ್ಯದ ಅಂತಿಮ ಪಲಿತಾಂಶ ಡ್ರಾ ಅಥವಾ ಟೈ ಆದರೆ ಚಾಂಪಿಯನ್ ಯಾರು ಎಂಬ ಪ್ರಶ್ನೆ ಈಗ ಉದ್ಭವಿಸುತ್ತಿದೆ. ಈ ನಿಟ್ಟಿನಲ್ಲಿ ಐಸಿಸಿ ಇನ್ನೂ ಯಾವುದೇ ಸೂತ್ರವನ್ನು ಸೂಚಿಸಿಲ್ಲ. ಇದರರ್ಥ ಪಂದ್ಯವನ್ನು ಡ್ರಾ ಅಥವಾ ಸಮಬಲಗೊಳಿಸಿದರೆ, ಎರಡೂ ತಂಡಗಳು ಜಂಟಿ ಚಾಂಪಿಯನ್ ಆಗುತ್ತವೆ. ಪಂದ್ಯಕ್ಕೆ ಸಂಬಂಧಿಸಿದಂತೆ ಐಸಿಸಿ ಮೀಸಲು ದಿನವನ್ನು ಘೋಷಿಸಿದೆ. ಈ ಮೀಸಲು ದಿನವನ್ನು ಯಾವುದಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಐಸಿಸಿ ಸ್ಪಷ್ಟನೇ ನೀಡಿದೆ

ಮೀಸಲು ದಿನವನ್ನು ಈ ರೀತಿ ಬಳಸಲಾಗುತ್ತದೆ ಫಲಿತಾಂಶಗಳಿಗಾಗಿ ಮೀಸಲು ದಿನವನ್ನು ಬಳಸಲಾಗುವುದಿಲ್ಲ. ಓವರ್‌ಗಳ ನಷ್ಟವನ್ನು ಸರಿದೂಗಿಸಲು ಮಾತ್ರ ಇದನ್ನು ಬಳಸಬಹುದು. ಕೆಟ್ಟ ಹವಾಮಾನ ಅಥವಾ ಬೆಳಕಿನಿಂದಾಗಿ ಓವರ್‌ಗಳ ನಷ್ಟವಿದ್ದರೆ, ಕಳೆದುಹೋದ ಎಲ್ಲಾ ಓವರ್‌ಗಳು ಕೊನೆಯ ದಿನದಂದು ಆಡಲ್ಪಡುತ್ತವೆ. ಆದರೆ ಇದು ಪೂರ್ಣ ದಿನದ ಆಟವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮತ್ತೆ ವಿವಾದ ಉಂಟಾಗುತ್ತದೆಯೇ? ಈ ಕಾರಣದಿಂದಾಗಿ, ಒಂದು ತಂಡವು ಗೆಲ್ಲದಿದ್ದರೆ ಮತ್ತು ಪಂದ್ಯವನ್ನು ಡ್ರಾ ಮಾಡಿದರೆ, ಮತ್ತೊಮ್ಮೆ ಜಂಟಿ ಚಾಂಪಿಯನ್ ಫಲಿತಾಂಶವು ಜನರನ್ನು ನಿರಾಶೆಗೊಳಿಸಬಹುದು. ಏಕೆಂದರೆ ಆಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಯಾವುದೇ ಅರ್ಥವಿರುವುದಿಲ್ಲ. 2019 ರ ವಿಶ್ವಕಪ್‌ನಲ್ಲಿ, ಸೂಪರ್ ಓವರ್‌ನ ಸಮಬಲದಿಂದಾಗಿ ಹೆಚ್ಚಿನ ಬೌಂಡರಿಗಳ ಕಾರಣದಿಂದಾಗಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಆಗಿ ಆಯ್ಕೆ ಮಾಡಿದಾಗ ಸಾಕಷ್ಟು ವಿವಾದಗಳು ಕೇಳಿಬಂದವು. ಈ ಕಾರಣದಿಂದಾಗಿ, ಸೂಪರ್ ಓವರ್ ಟೈ ಆದಾಗ, ಪಂದ್ಯದ ಫಲಿತಾಂಶವನ್ನು ತಲುಪುವವರೆಗೆ ಸೂಪರ್ ಓವರ್ ಮುಂದುವರಿಯುತ್ತದೆ ಎಂಬ ಹೊಸ ನಿಯಮವನ್ನು ತರಲಾಯಿತು.

ಇದನ್ನೂ ಓದಿ:ಕ್ರಿಕೆಟ್ ದುನಿಯಾಕ್ಕೆ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ್ದು ಧೋನಿಯಲ್ಲ! ವಿಡಿಯೋ ನೋಡಿ

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ