
Rajinikanth
ರಜನಿಕಾಂತ್ ಅವರು ಕಾಲಿವುಡ್ನ ಸ್ಟಾರ್ ಹೀರೋ. ಅವರು 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಜನಿಸಿದರು. ಆರಂಭದಲ್ಲಿ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆ ಬಳಿಕ ಹೀರೋ ಆಗಬೇಕು ಎಂದು ತಮಿಳುನಾಡಿಗೆ ತೆರಳಿದರು. ತಮಿಳು ಚಲನಚಿತ್ರಗಳಲ್ಲಿನ ವಿವಿಧ ಪಾತ್ರಗಳೊಂದಿಗೆ ಖ್ಯಾತಿಗೆ ಪಡೆದರು. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ‘ಎಂದಿರನ್’, ‘ಜೈಲರ್’ ಅಂಥ ಸಿನಿಮಾ ಮಾಡಿ ಅವರು ಗಮನ ಸೆಳೆದಿದ್ದಾರೆ. ವೃತ್ತಿಜೀವನವು ನಾಲ್ಕು ದಶಕ ಕಳೆದಿದ್ದಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿಂದ ಪೂಜಿಸಲ್ಪಟ್ಟ ಅವರನ್ನು ‘ಸೂಪರ್ ಸ್ಟಾರ್’ ಎಂದು ಕರೆಯಲಾಗುತ್ತದೆ. ಅವರು ಆಧ್ಯಾತ್ಮಿಕದ ಕಡೆಗೆ ಆಕರ್ಷಿಸಲ್ಪಟ್ಟಿದ್ದಾರೆ
ಪತ್ನಿ ಲತಾ ಜೊತೆ ರಜನಿಕಾಂತ್ ನಟಿಸಿದ ಏಕೈಕ ಚಿತ್ರವಿದು..
ರಜನಿಕಾಂತ್ ಅವರ ಮುಂಬರುವ ಚಿತ್ರ 'ಕೂಲಿ' ಆಗಸ್ಟ್ 14ರಂದು ಬಿಡುಗಡೆಯಾಗಲಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದ ನಂತರ, ಅವರು 'ಜೈಲರ್ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪತ್ನಿ ಲತಾ ಅವರ ಜೊತೆಗೆ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದರು ಎಂಬುದು ಗಮನಾರ್ಹ .
- Shreelaxmi H
- Updated on: May 18, 2025
- 6:30 am
ರಜನಿಕಾಂತ್ ಮುಂದಿನ ಸಿನಿಮಾಗೆ ನಿರ್ದೇಶಕನಾರು? ಸಿಕ್ತು ಉತ್ತರ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿನೋದ್ ಮತ್ತು ಎಸ್.ಯು. ಅರುಣ್ ಕುಮಾರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.'ಕೂಲಿ' ಚಿತ್ರದ ಬಳಿಕ 'ಜೈಲರ್ 2' ಚಿತ್ರದಲ್ಲಿ ಬ್ಯುಸಿ ಇರುವ ರಜನಿಕಾಂತ್, ತಮ್ಮ ಭವಿಷ್ಯದ ಚಿತ್ರಗಳ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
- Shreelaxmi H
- Updated on: May 14, 2025
- 11:18 am
‘ಕೂಲಿ’ ಸಿನಿಮಾದ ಬಹುತೇಕ ಶೂಟ್ನ ಬಾಡಿ ಡಬಲ್ ಮೂಲಕವೇ ಮುಗಿಸಿದ ನಿರ್ದೇಶಕ
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಚಿತ್ರೀಕರಣದಲ್ಲಿ, ರಜನಿಕಾಂತ್ ಅವರ 70 ದಿನಗಳ ಶೂಟಿಂಗ್ನಲ್ಲಿ 45 ದಿನಗಳಷ್ಟು ಬಾಡಿ ಡಬಲ್ ಬಳಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ವಯಸ್ಸಾದ ಕಾರಣ ಮತ್ತು ಆಕ್ಷನ್ ದೃಶ್ಯಗಳಿಗಾಗಿ ಈ ತಂತ್ರ ಅನುಸರಿಸಲಾಗಿದೆ.
- Rajesh Duggumane
- Updated on: May 13, 2025
- 7:32 am
‘ನಾನು ಕಲಾವಿದರ ಮೂರು ವರ್ಷ ಕೂರಿಸಲ್ಲ’; ರಾಜಮೌಳಿಗೆ ಟಾಂಗ್ ಕೊಟ್ಟ ‘ಕೂಲಿ’ ನಿರ್ದೇಶಕ
ಲೋಕೇಶ್ ಕನಗರಾಜ್ ಅವರ ಮುಂಬರುವ ಚಿತ್ರ 'ಕೂಲಿ' ರಜನಿಕಾಂತ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಅವರಂತಹ ಬಹುಭಾಷಾ ತಾರಾಗಣವನ್ನು ಒಳಗೊಂಡಿದೆ. ಚಿತ್ರವನ್ನು 6-8 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಲೋಕೇಶ್ ಅವರು ರಾಜಮೌಳಿ ಅವರ ಚಿತ್ರಗಳಿಗೆ ಹೋಲಿಸಿದರೆ ತಮ್ಮ ಚಿತ್ರಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ವಿಧಾನವನ್ನು ವಿವರಿಸಿದ್ದಾರೆ
- Shreelaxmi H
- Updated on: May 17, 2025
- 1:23 pm
ರಜನಿಕಾಂತ್ ಜೊತೆ ಅತಿಥಿ ಪಾತ್ರ ಮಾಡಲು 50 ಕೋಟಿ ರೂಪಾಯಿ ಕೇಳಿದ ಬಾಲಯ್ಯ
‘ಜೈಲರ್ 2’ ಸಿನಿಮಾದಲ್ಲಿ ಬಾಲಕೃಷ್ಣ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಅವರಿಗೆ 50 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆಯಲಿದೆ ಮತ್ತು ರಜನಿಕಾಂತ್ ಮುಖ್ಯ ಪಾತ್ರದಲ್ಲಿದ್ದಾರೆ. ಜೈಲರ್ ಚಿತ್ರದ ಯಶಸ್ಸಿನ ನಂತರ, ನಿರ್ದೇಶಕರು ಅತಿಥಿ ಪಾತ್ರಗಳನ್ನು ಬಳಸಿಕೊಂಡು ಚಿತ್ರದ ತೂಕ ಹೆಚ್ಚಿಸೋ ಆಲೋಚನೆಯಲ್ಲಿದ್ದಾರೆ.
- Shreelaxmi H
- Updated on: May 17, 2025
- 1:22 pm
‘ಕೂಲಿ’ ಚಿತ್ರಕ್ಕೆ ರಜನಿಕಾಂತ್ ತೆಗೆದುಕೊಂಡ ಸಂಭಾವನೆಯಲ್ಲಿ ಮೂರು ಕೆಜಿಎಫ್ ಸಿನಿಮಾ ಮಾಡಬಹುದು
ರಜನಿಕಾಂತ್ ನಟಿಸಿರುವ 'ಕೂಲಿ' ಚಿತ್ರದ ಬಜೆಟ್ 400 ಕೋಟಿ ರೂಪಾಯಿಗಳನ್ನು ಮೀರಿದೆ. ರಜನಿಕಾಂತ್ ಅವರ 260 ಕೋಟಿ ರೂಪಾಯಿ ಸಂಭಾವನೆಯೇ ಇದಕ್ಕೆ ಪ್ರಮುಖ ಕಾರಣ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದಾರೆ .
- Rajesh Duggumane
- Updated on: May 8, 2025
- 9:45 am
ರಜನಿಕಾಂತ್ ತಾಯಿ, ಸಹೋದರಿ ಮತ್ತು ಗೆಳತಿಯಾಗಿ ನಟಿಸಿದ ಏಕೈಕ ನಾಯಕಿ ಇವರು
ರಜನಿಕಾಂತ್ ಮತ್ತು ಶ್ರೀದೇವಿ ಅವರ ನಡುವಿನ ಅಪರೂಪದ ಬಾಂಧವ್ಯದ ಬಗ್ಗೆ ನಾವು ಹೇಳುತ್ತಿದ್ದೇವೆ. ಶ್ರೀದೇವಿ ಅವರು ರಜನಿಕಾಂತ್ ಅವರ ತಾಯಿ, ಸಹೋದರಿ ಮತ್ತು ಪ್ರೇಮಿಯ ಪಾತ್ರಗಳನ್ನು ನಿರ್ವಹಿಸಿದ ಏಕೈಕ ನಟಿ ಎಂಬುದು ಅಚ್ಚರಿಯ ಸಂಗತಿ. 'ಮೂಂಡ್ರು ಮುಡಿಚು' ಸಿನಿಮಾದಿಂದ ಆರಂಭಗೊಂಡು ಅವರು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
- Shreelaxmi H
- Updated on: May 8, 2025
- 7:43 am
ಭಾರತದ ಯುವ ಜನತೆ ಬಗ್ಗೆ ರಜನಿಕಾಂತ್ಗೆ ಶುರುವಾಗಿದೆ ಆತಂಕ; ಪಾಶ್ಚಿಮಾತ್ಯರನ್ನು ಹೊಗಳಿದ ನಟ
ರಜನಿಕಾಂತ್ ಅವರು ಇತ್ತೀಚೆಗೆ ಯುವ ಜನತೆಯು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಒಲವು ತೋರುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಮಹತ್ವವನ್ನು ಅವರು ಎತ್ತಿ ಹಿಡಿದಿದ್ದಾರೆ. ಪಾಶ್ಚಿಮಾತ್ಯರು ಭಾರತೀಯ ಆಧ್ಯಾತ್ಮದಲ್ಲಿ ಆಸಕ್ತಿ ತೋರುತ್ತಿರುವುದರ ಬಗ್ಗೆ ಹೇಳಿದ್ದಾರೆ. ಅವರ ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ.
- Rajesh Duggumane
- Updated on: May 2, 2025
- 8:51 am
ಕಂಡಕ್ಟರ್ ಆಗಿದ್ದಾಗಲೇ ಸ್ಟೈಲ್ ಕಲಿತಿದ್ದ ರಜನಿಕಾಂತ್; ಯುವತಿಯರನ್ನು ಹೇಗೆ ಇಂಪ್ರೆಸ್ ಮಾಡುತ್ತಿದ್ದರು ಗೊತ್ತಾ?
ರಜನಿಕಾಂತ್ ಅವರ ಸ್ಟೈಲಿಶ್ ವ್ಯಕ್ತಿತ್ವವು ಬೆಂಗಳೂರಿನ ಬಸ್ ಕಂಡಕ್ಟರ್ ಆಗಿದ್ದ ಅವರ ಆರಂಭಿಕ ಜೀವನದಿಂದಲೇ ರೂಪುಗೊಂಡಿದೆ. ಅವರು ತ್ವರಿತವಾಗಿ ಟಿಕೆಟ್ ನೀಡುತ್ತಿದ್ದರು ಮತ್ತು ಮಹಿಳೆಯರಿಗೆ ಗೌರವ ತೋರಿಸುತ್ತಿದ್ದರು. ಈ ವರ್ತನೆ ಅವರ ಸ್ಟಾರ್ ಡಮ್ಗೆ ಕಾರಣವಾಯಿತು. ಅವರ ಚಿತ್ರರಂಗದ ಪ್ರಯಾಣ ಮತ್ತು ಯಶಸ್ಸಿನ ಕುರಿತು ಈ ಲೇಖನ ವಿವರಿಸುತ್ತದೆ. ಅವರು ಈಗ ಲೋಕೇಶ್ ಕನಗರಾಜ್ ಅವರ 'ಕೂಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
- Shreelaxmi H
- Updated on: Mar 12, 2025
- 10:57 am
ನಿಜವಾದ ಫ್ಯಾನ್ಸ್ ಇಂಥ ಕೆಲಸ ಮಾಡಲ್ಲ: ಎಚ್ಚರಿಕೆ ನೀಡಿದ ರಜನಿಕಾಂತ್ ಟೀಮ್
ದಳಪತಿ ವಿಜಯ್ ಬಗ್ಗೆ ರಜನಿಕಾಂತ್ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಮಾತನಾಡಿದ್ದಾನೆ. ಅದನ್ನು ರಜನಿ ಟೀಮ್ ಖಂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಹೆಚ್ಚಾಗದೇ ಇರಲಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಲಾಗಿದೆ. ಫ್ಯಾನ್ಸ್ ಸರಿಯಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
- Madan Kumar
- Updated on: Feb 12, 2025
- 8:02 pm