Rajinikanth
ರಜನಿಕಾಂತ್ ಅವರು ಕಾಲಿವುಡ್ನ ಸ್ಟಾರ್ ಹೀರೋ. ಅವರು 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಜನಿಸಿದರು. ಆರಂಭದಲ್ಲಿ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆ ಬಳಿಕ ಹೀರೋ ಆಗಬೇಕು ಎಂದು ತಮಿಳುನಾಡಿಗೆ ತೆರಳಿದರು. ತಮಿಳು ಚಲನಚಿತ್ರಗಳಲ್ಲಿನ ವಿವಿಧ ಪಾತ್ರಗಳೊಂದಿಗೆ ಖ್ಯಾತಿಗೆ ಪಡೆದರು. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ‘ಎಂದಿರನ್’, ‘ಜೈಲರ್’ ಅಂಥ ಸಿನಿಮಾ ಮಾಡಿ ಅವರು ಗಮನ ಸೆಳೆದಿದ್ದಾರೆ. ವೃತ್ತಿಜೀವನವು ನಾಲ್ಕು ದಶಕ ಕಳೆದಿದ್ದಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿಂದ ಪೂಜಿಸಲ್ಪಟ್ಟ ಅವರನ್ನು ‘ಸೂಪರ್ ಸ್ಟಾರ್’ ಎಂದು ಕರೆಯಲಾಗುತ್ತದೆ. ಅವರು ಆಧ್ಯಾತ್ಮಿಕದ ಕಡೆಗೆ ಆಕರ್ಷಿಸಲ್ಪಟ್ಟಿದ್ದಾರೆ
ಇನ್ನೂ ಹೆಚ್ಚು ಓದಿ‘ಜೈಲರ್ 2’ ಬಿಡುಗಡೆ ದಿನಾಂಕ ಮುಂದೂಡಿಕೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ನಿರ್ಮಾಪಕರು
‘ಜೈಲರ್ 2’ ಸಿನಿಮಾ ಮೇಲೆ ರಜನಿಕಾಂತ್ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ರಿಲೀಸ್ ದಿನಾಂಕದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆ ಬಗ್ಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Sep 2, 2026
- 6:45 pm
‘ಜೈಲರ್ 2’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ? ದಸರಾ ಅಖಾಡಕ್ಕೆ ಧನುಷ್ ಹಾಗೂ ನಿಖಿಲ್ ಎಂಟ್ರಿ
ರಜನಿಕಾಂತ್ ಅಭಿನಯದ ಜೈಲರ್ 2 ಪೋಸ್ಟ್ ಪ್ರೊಡಕ್ಷನ್ ತಡವಾಗುವ ಸಾಧ್ಯತೆಯಿದ್ದು ರಿಲೀಸ್ ದಿನಾಂಕ ದೀಪಾವಳಿಗೆ ಮುಂದೂಡಲ್ಪಡುವ ಲಕ್ಷಣಗಳಿವೆ. ಹೀಗಾಗಿ ಅಕ್ಟೋಬರ್ 15 ರ ದಸರಾ ರೇಸ್ಗೆ ಧನುಷ್ ಅವರ'ಓಮ್: ಚಾಪ್ಟರ್ 1 ಉಧಿರಾಮ್: ದಿ ಬ್ಲಡ್ ವುಡ್' ಮತ್ತು ನಿಖಿಲ್ ಅವರ ಸ್ವಯಂಭೂ ಸಿನಿಮಾಗಳು ಧುಮುಕಲು ಸಿದ್ಧವಾಗಿವೆ.
- Rajesh Duggumane
- Updated on: Aug 31, 2026
- 3:01 pm
ವಿಜಯ್ ಸಿಎಂ ಆಗಿ ಕಳೆಯಿತು 100 ದಿನ: ಮಾಧ್ಯಮದ ಪ್ರಶ್ನೆಗೆ ಮುಗುಳ್ನಕ್ಕು ಹೊರಟ ರಜನಿಕಾಂತ್
ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಕ್ಕೆ ತಮಗೆ ಯಾವುದೇ ಅಸೂಯೆ ಇಲ್ಲ ಎಂದು ರಜನಿಕಾಂತ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದರು. ಆದರೆ ವಿಜಯ್ ಅವರು ಸಿಎಂ ಆಗಿ 100 ದಿನ ಪೂರೈಸಿರುವುದರ ಬಗ್ಗೆ ಕೇಳಿದ್ದಕ್ಕೆ ರಜನಿಕಾಂತ್ ಅವರು ಪ್ರತಿಕ್ರಿಯೆ ನೀಡಿಲ್ಲ. ವಿಡಿಯೋ ವೈರಲ್ ಆಗಿದೆ.
- Madan Kumar
- Updated on: Aug 26, 2026
- 3:48 pm
ರಜನೀಕಾಂತ್ಗಾಗಿ ವಿಲನ್ ಆಗಲಿದ್ದಾರೆ ತೆಲುಗಿನ ಸ್ಟಾರ್ ಹೀರೋ
Rajinikanth movie: ರಜನೀಕಾಂತ್ ಅವರು ‘ಜೈಲರ್ 2’ ಮತ್ತು ‘ಧರ್ಮನ್’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಜನೀಕಾಂತ್ ನಟಿಸುತ್ತಿರುವ ‘ಧರ್ಮನ್’ ಸಿನಿಮಾ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಈ ಸಿನಿಮಾ ಅನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ವೈದ್ಯನ ಪಾತ್ರದಲ್ಲಿ ರಜನೀಕಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಿನಿಮಾಕ್ಕೆ ವಿಲನ್ ಆಗಿ, ತೆಲುಗಿನ ಸ್ಟಾರ್ ಹೀರೋ ಎಂಟ್ರಿ ಕೊಟ್ಟಿದ್ದಾರೆ.
- Manjunatha C
- Updated on: Aug 20, 2026
- 3:40 pm
ಹೊಸ ದಾಖಲೆ ಬರೆದ ರಜನಿಕಾಂತ್: ‘ಜೈಲರ್ 2’ ಒಟಿಟಿ ಹಕ್ಕು ಎಷ್ಟು ಕೋಟಿಗೆ ಸೇಲ್?
ಬಿಡುಗಡೆಗೆ ಹಲವು ದಿನಗಳು ಬಾಕಿ ಇರುವಾಗಲೇ ‘ಜೈಲರ್ 2’ ಸಿನಿಮಾ ಸಖತ್ ಸುದ್ದಿ ಆಗುತ್ತಿದೆ. ರಜನಿಕಾಂತ್ ನಟಿಸಿರುವ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿವೆ ಎನ್ನಲಾಗಿದೆ. ಆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.
- Madan Kumar
- Updated on: Aug 18, 2026
- 10:48 pm
ರಜನಿಕಾಂತ್ ಸಿನಿಮಾಗೆ ನಟಿ ಶ್ರೀಲೀಲಾ ನಾಯಕಿ? ಸತತ ಸೋಲಿನ ಬಳಿಕವೂ ಬಿಗ್ ಆಫರ್
ನಟಿ ಶ್ರೀಲೀಲಾ ಅವರು ಪರಭಾಷೆಯಲ್ಲೂ ಫೇಮಸ್ ಆಗಿದ್ದಾರೆ. ಆದರೆ, ಅವರ ಇತ್ತೀಚಿನ ಸಿನಿಮಾಗಳು ಹಿಟ್ ಆಗಿಲ್ಲ. ಒಂದು ದೊಡ್ಡ ಗೆಲುವಿಗಾಗಿ ಅವರು ಕಾದಿದ್ದಾರೆ. ಈಗ ಅವರಿಗೆ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Aug 6, 2026
- 9:31 pm
ರಜನೀಕಾಂತ್ಗಾಗಿ ನಿಯಮ ಮುರಿದ ನಟ ವಿಜಯ್ ಸೇತುಪತಿ
Vijay Sethupathi: ವಿಜಯ್ ಸೇತುಪತಿ ಈ ಮೊದಲೆಲ್ಲ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು. ಸಣ್ಣ-ಪುಟ್ಟ ಸಿನಿಮಾಗಳಲ್ಲಿಯೂ ವಿಜಯ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಕೆಲ ವರ್ಷಗಳಿಂದ ಯಾವುದೇ ಸಿನಿಮಾನಲ್ಲೂ ಅತಿಥಿ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ನಿಯಮ ಹೇರಿಕೊಂಡಿದ್ದರು. ಆದರೆ ಈಗ ಆ ನಿಯಮವನ್ನು ರಜನೀಕಾಂತ್ ಅವರಿಗಾಗಿ ಮುರಿದಿದ್ದಾರೆ.
- Manjunatha C
- Updated on: Aug 2, 2026
- 2:48 pm
ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್
ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಖ್ಯಾತ ನಟರಾದ ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
- Madan Kumar
- Updated on: Jul 13, 2026
- 12:06 pm
ರಜನಿಕಾಂತ್ ನಟನೆಯ ‘ಜೈಲರ್ 2’ ಅಕ್ಟೋಬರ್ 15ರಂದು ಬಿಡುಗಡೆ ಆಗೋದು ಖಚಿತ
2023ರಲ್ಲಿ ಬಿಡುಗಡೆಯಾಗಿದ್ದ ‘ಜೈಲರ್’ ಸಿನಿಮಾ ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿತ್ತು. ಆ ಸಿನಿಮಾದ ಯಶಸ್ಸಿನ ಬಳಿಕ ‘ಜೈಲರ್ 2’ ಘೋಷಿಸಲಾಯಿತು. ಈಗ ಈ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಲಾಗಿದೆ. ರಜನಿಕಾಂತ್ ಜೊತೆ ಅನೇಕ ಘಟಾನುಘಟಿ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
- Madan Kumar
- Updated on: Jul 2, 2026
- 9:02 pm
ವಿಜಯ್ ಜನ್ಮದಿನಕ್ಕೆ ರಜನಿಕಾಂತ್ ಸಾರ್ವಜನಿಕವಾಗಿ ವಿಶ್ ಮಾಡಿಲ್ಲ ಯಾಕೆ? ಸಿಕ್ತು ಉತ್ತರ
ರಜನಿಕಾಂತ್ ಮತ್ತು ದಳಪತಿ ವಿಜಯ್ ನಡುವೆ ಮುನಿಸು ಇದೆಯಾ ಎಂಬ ಪ್ರಶ್ನೆ ಆಗಾಗ ಎದುರಾಗುತ್ತದೆ. ಅದಕ್ಕೆ ರಜನಿಕಾಂತ್ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಎಂ ವಿಜಯ್ ಜನ್ಮದಿನಕ್ಕೆ ರಜನಿಕಾಂತ್ ಅವರು ಯಾಕೆ ವಿಶ್ ಮಾಡಿಲ್ಲ ಎಂಬ ಚರ್ಚೆಗೆ ಈಗ ಸ್ವತಃ ರಜನಿಕಾಂತ್ ಅವರು ಪೂರ್ಣವಿರಾಮ ಇಟ್ಟಿದ್ದಾರೆ.
- Madan Kumar
- Updated on: Jun 24, 2026
- 4:08 pm
ರಜನಿಕಾಂತ್ 173ನೇ ಚಿತ್ರದ ಟೈಟಲ್ ರಿವೀಲ್; ರಕ್ತಸಿಕ್ತ ಚಾಕು ಹಿಡಿದು ಬಂದ ‘ಧರ್ಮನ್’
ಸೂಪರ್ಸ್ಟಾರ್ ರಜನಿಕಾಂತ್ ಅವರ 173ನೇ ಚಿತ್ರಕ್ಕೆ 'ಧರ್ಮನ್' ಎಂದು ಹೆಸರಿಡಲಾಗಿದ್ದು, ಪೋಸ್ಟರ್ ಬಿಡುಗಡೆಯಾಗಿದೆ. ರಕ್ತಸಿಕ್ತ ಚಾಕುವಿನೊಂದಿಗೆ ರಗಡ್ ಲುಕ್ನಲ್ಲಿ ರಜನಿಕಾಂತ್ ಗಮನ ಸೆಳೆದಿದ್ದಾರೆ. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಶ್ವತ್ ಮಾರಿಮುತ್ತು ನಿರ್ದೇಶನ, ಅನಿರುದ್ಧ್ ಸಂಗೀತವಿದೆ. 'ಜೈಲರ್ 2' ಮುಗಿದ ನಂತರ 'ಧರ್ಮನ್' ಚಿತ್ರೀಕರಣ ಆರಂಭವಾಗಲಿದೆ.
- Rajesh Duggumane
- Updated on: Jun 24, 2026
- 10:53 am
‘ಕ್ಯಾಬ್ಗೆ ಕೊಡಲು ರಜನಿ ಬಳಿ ಹಣ ಇರಲಿಲ್ಲ’; ಹಳೆಯ ಘಟನೆ ನೆನೆದ ನಿರ್ದೇಶಕ
ನಿರ್ದೇಶಕ ಕೆ.ಸಿ. ಬೊಕಾಡಿಯಾ ರಜನಿಕಾಂತ್ ಅವರ ಅಪಾರ ಸರಳತೆ ಮತ್ತು ನಮ್ರತೆಯನ್ನು ಶ್ಲಾಘಿಸಿದ್ದಾರೆ. ಸೆಟ್ಗೆ ಯಾರೂ ಕರೆತರಲು ಬರದಿದ್ದಾಗ, ರಜನಿಕಾಂತ್ ಸ್ವತಃ ಟ್ಯಾಕ್ಸಿಯಲ್ಲಿ ಬಂದು ಬಾಡಿಗೆ ನೀಡಲು ಕೇಳಿದ ಪ್ರಸಂಗವನ್ನು ಬೊಕಾಡಿಯಾ ಹಂಚಿಕೊಂಡಿದ್ದಾರೆ. ಇಷ್ಟು ದೊಡ್ಡ ಸೂಪರ್ಸ್ಟಾರ್ಗೂ ಅಹಂ ಇಲ್ಲದಿರುವುದು ಅವರನ್ನು ಎತ್ತರಕ್ಕೆ ಬೆಳೆಸಿದೆ. ಈ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- Rajesh Duggumane
- Updated on: Jun 24, 2026
- 9:33 am