ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್​ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು

Ukraine War : ಈ ಜೋಗುಳದ ಸಾಹಿತ್ಯದೆಡೆ ಲಕ್ಷ್ಯ ಕೊಡದೆ ಹಲವಾರು ಬಾರಿ ಕೇಳಿದೆ. ಇದು ಪ್ರೀತಿಯಿಂದ ಎರಕ ಹೊಯ್ದಿದೆ. ಖಂಡಿತ ಈ ಧ್ವನಿ, ದೃಶ್ಯ ಕದಡಿದ ನೀರನ್ನು ತಿಳಿಗೊಳಿಸುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಿದ್ದಾರೆ ಅನೇಕ ನೆಟ್ಟಿಗರು.

ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್​ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು
ತನ್ನ ಮಗುವಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್ ಯೋಧ
Follow us
| Updated By: ಶ್ರೀದೇವಿ ಕಳಸದ

Updated on:Jan 03, 2023 | 6:22 PM

Viral Video : ಕಳೆದ ವರ್ಷವು ರಷ್ಯಾ-ಉಕ್ರೇನ್​ ಯುದ್ಧದ ಕರಾಳ ನೆನಪಲ್ಲೇ ಕಳೆದು ಹೋಯಿತು. ಹೊಸ ವರ್ಷದ ಆರಂಭದಲ್ಲಿ ಈ ವಿಡಿಯೋ ಆಶಾಭಾವನೆಯನ್ನು ತರಲಿ ಎಂಬ ಆಶಯದಿಂದ ಉಕ್ರೇನಿನ ಆಂತರಿಕ ವ್ಯವಹಾರಗಳ ಸಚಿವರಿಗೆ ಸಲಹೆಗಾರರಾಗಿರುವ ಆ್ಯಂಟನ್​ ಗೆರಾಶ್ಚೆಂಕೋ ಈ ಮುದ್ದಾದ ವಿಡಿಯೋ ಟ್ವೀಟ್ ಮಾಡಿದ್ದಾರೆ. ಉಕ್ರೇನಿನ ಯೋಧ ತನ್ನ ಎಳೆಗೂಸನ್ನು ಗಿಟಾರಿನ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ್ತಿರುವ ವಿಡಿಯೋ ಇದಾಗಿದೆ. ಈ ಯೋಧ ಹಾಡಿರುವ ಜೋಗುಳವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ ಆ್ಯಂಟನ್.

ರಷ್ಯಾದ ದಾಳಿ ನಡೆದು ಇಷ್ಟು ತಿಂಗಳಾದರೂ ಉಕ್ರೇನ್ ಇನ್ನೂ ಕತ್ತಲೆಯಲ್ಲಿಯೇ ಇದೆ ಎಂಬ ಬೇಸರ ಜಗತ್ತಿನ ಅನೇಕರನ್ನು ನೋಯಿಸುತ್ತಿದೆ. ಹಾಗಾಗಿ ಅಲ್ಲಿ ಬೆಳಕು ಸೂಸಲೆಂದು ಅನೇಕ ಬಗೆಯ ಪ್ರಯತ್ನಗಳನ್ನು ಕೆಲವರಾದರೂ ನಡೆಸುತ್ತಿದ್ಧಾರೆ ಎನ್ನುವುದೇ ಈ ಹೊತ್ತಿನ ಭರವಸೆ. ​ಇಂಥ ವಿಡಿಯೋಗಳು ಹಲವಾರು ಜನರ ಮನದಲ್ಲಿ ಮೂಡಿರುವ ಭಯವನ್ನು ಹೊಡೆದೋಡಿಸಲಿ, ಮತ್ತೆ ಹೊಸ ಕಾಲ ಅರಳಲಿ ಎಂದು ಅನೇಕ ನೆಟ್ಟಿಗರು  ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!

ಈ ವಿಡಿಯೋದಲ್ಲಿರುವ ಯೋಧನ ಹೆಸರು ಒಲೆಗ್ ಬೆರೆಸ್ಟೋವಿ. ಗಿಟಾರಿನ ಮೇಲೆ ಹಸುಗೂಸನ್ನು ಮಲಗಿಸಿಕೊಂಡು ಹಾಡುತ್ತಿರುವ ಈ ವಿಡಿಯೋ ಎಂಥವರ ಮನಸ್ಸನ್ನೂ ಅಲ್ಲಾಡಿಸುವಂತಿದೆ. ಸಂಗೀತಕ್ಕೆ ಮನಸೋಲದವರು ಯಾರಿದ್ಧಾರೆ? ಮಗು ಶಾಂತವಾಗಿ ನಿದ್ರಿಸುತ್ತಿದೆ. ಈ ಕ್ಲಿಪ್​ನ ಪೂರ್ತಿ ವಿಡಿಯೋ ಇಲ್ಲಿದೆ ಕೇಳಿ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಈತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. ಹೀಗೆ ಸಂಗೀತವನ್ನು ಕೇಳುತ್ತ ಬೆಳೆಯುತ್ತಿರುವ ಮಗು ಖಂಡಿತ ಸ್ವತಂತ್ರ್ಯ ವ್ಯಕ್ತಿತ್ವನ್ನು ಹೊಂದುತ್ತದೆ ಎಂದು ಹೇಳಿದ್ಧಾರೆ ಅನೇಕರು. ಈ ಭಾಷೆ ಮತ್ತು ಅದರ ಅರ್ಥದ ಕಡೆ ಗಮನ ಕೊಡದೆ ಹಲವಾರು ಬಾರಿ ಈ ವಿಡಿಯೋ ನೋಡಿದೆ, ಜೋಗುಳವನ್ನೂ ಕೇಳಿದೆ. ಪ್ರೀತಿಯಿಂದ ಎರಕ ಹೊಯ್ದಿದೆ. ಖಂಡಿತ ಈ ಧ್ವನಿಯು, ದೃಶ್ಯವು ಕದಡಿದ ನೀರನ್ನು ತಿಳಿಗೊಳಿಸುತ್ತದೆ ಎಂದಿದ್ದಾರೆ ಒಬ್ಬರು. ಅನೇಕರು ಈ ಕುರಿತು ಇದೇ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:25 pm, Tue, 3 January 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ