AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಿ ಜಗನ್ನಾಥ ದೇವರ ರಥಯಾತ್ರೆಗೆ 435 ಬೆಂಕಿ ಕಡ್ಡಿಗಳನ್ನು ಬಳಸಿ ರಥ ತಯಾರಿಸಿದ ಕಲಾವಿದ

ಈಶ್ವರ್​ ರಾವ್​ ಅವರು ಮರದ ಕಡ್ಡಿ, ಪೆನ್ಸಿಲ್​, ಸೀಸ, ರಬ್ಬರ್​ ಹೀಗೆ ಎಲ್ಲಾ ವಸ್ತುಗಳಲ್ಲಿಯೂ ವಿಗ್ರಹಗಳನ್ನು ತಯಾರಿಸುತ್ತಾರೆ. ಆರ್ಟ್ ಮತ್ತು ಕ್ರಾಫ್ಟ್​ ಸೋಷಿಯಲ್​ ಫೌಂಡೇಶನ್​ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಮಕ್ಕಳಿಗಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಪುರಿ ಜಗನ್ನಾಥ ದೇವರ ರಥಯಾತ್ರೆಗೆ 435 ಬೆಂಕಿ ಕಡ್ಡಿಗಳನ್ನು ಬಳಸಿ ರಥ ತಯಾರಿಸಿದ ಕಲಾವಿದ
ಬೆಂಕಿ ಕಡ್ಡಿಗಳನ್ನು ಬಳಸಿ ರಥ ತಯಾರಿಸಿದ ಕಲಾವಿದ
TV9 Web
| Edited By: |

Updated on:Jul 09, 2021 | 12:57 PM

Share

ಒಡಿಶಾದ ಎಲ್.​ ಈಶ್ವರ್​ ರಾವ್​ ಜನಪ್ರಿಯ ಚಿಕಣಿ ಕಲಾವಿದ. ಈ ಮೊದಲು ಜೂನ್​ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪೆನ್ಸಿಲ್​ ನಿಬ್​ನಿಂದ ಯೋಗ ಭಂಗಿಯನ್ನು ಪ್ರದರ್ಶಿಸುತ್ತಿರುವ ವ್ಯಕ್ತಿಯ ಚಿಕಣಿ ಶಿಲ್ಪವನ್ನು ರಚಿಸಿದ್ದರು. ಇದೀಗ ಒಡಿಶಾ ಪುರಿಯಲ್ಲಿ ರಥ ಯಾತ್ರೆಗೆ ಮುಂಚಿತವಾಗಿ ಬೆಂಕಿಕಡ್ಡಿಗಳನ್ನು ಬಳಸಿ, ಮೂರು ದೇವತೆಗಳ ವಿಗ್ರಹದೊಂದಿಗೆ ಚಿಕ್ಕ ರಥವನ್ನು ತಯಾರಿಸಿದ್ದಾರೆ. ರಥ 4.5 ಇಂಚುಗಳಷ್ಟು ಎತ್ತರವಿದೆ.

ಜುಲೈ 12ರಿಂದ ಒಡಿಶಾದಲ್ಲಿ ರಥಯಾತ್ರೆ ಪ್ರಾರಂಭವಾಗಲಿದೆ. ಎಲ್. ಈಶ್ವರ್​ ರಾವ್​ ಅವರು ಕಳೆದ 25 ವರ್ಷಗಳಿಂದ ಚಿಕಣಿ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಆಕರ್ಷಕವಾದ ಚಿಕಣಿ ಚಿತ್ರಕಲೆಯನ್ನು ಕೆತ್ತುವ ಮೂಲಕ ತಮ್ಮ ಪ್ರತಿಭೆಯಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂಡಿಯಾ ಟು ಡೇ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಈಶ್ವರ್​ ರಾವ್, ನಾನು ಭಗವಾನ್​ ಜಗನ್ನಾಥರ ಭಕ್ತನು. ನನ್ನ ಕರಕುಶಲ ಪ್ರತಿಭೆಯ ಮೂಲಕ ದೇವರಿಗೆ ಪ್ರಾರ್ಥನೆಯನ್ನು ಅರ್ಪಿಸುತ್ತಿದ್ದೇನೆ. ಬೆಂಕಿ ಕಡ್ಡಿಗಳನ್ನು ಬಳಸಿ ರಥವನ್ನು ಪೂರ್ಣಗೊಳಿಸಲು ನನಗೆ ಒಂಭತ್ತು ದಿನಗಳು ಬೇಕಾಯಿತು. ಒಟ್ಟು 435 ಬೆಂಕಿ ಕಡ್ಡಿಗಳನ್ನು ಬಳಸಿ ರಥವನ್ನು ತಯಾರಿಸಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವರದಿ ತಿಳಿಸಿದೆ.

ಈಶ್ವರ್​ ರಾವ್​ ಅವರು ಮರದ ಕಡ್ಡಿ, ಪೆನ್ಸಿಲ್​, ಸೀಸ, ರಬ್ಬರ್​ ಹೀಗೆ ಎಲ್ಲಾ ವಸ್ತುಗಳಲ್ಲಿಯೂ ವಿಗ್ರಹಗಳನ್ನು ತಯಾರಿಸುತ್ತಾರೆ. ಆರ್ಟ್ ಮತ್ತು ಕ್ರಾಫ್ಟ್​ ಸೋಷಿಯಲ್​ ಫೌಂಡೇಶನ್​ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಮಕ್ಕಳಿಗಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. 37 ವರ್ಷದವರಾದ ಈಶ್ವರ್​ ರಾವ್​ ಅವರು ತಮ್ಮದೇ ವಸ್ತು ಸಂಗ್ರಹಾಲಯವನ್ನು ರೂಪಿಸಿದ್ದು ತಾವು ತಯಾರಿಸಿದ ಎಲ್ಲಾ ಆಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಇದನ್ನೂ ಓದಿ:

ಪುರಿ ಜಗನ್ನಾಥನ ವಿಗ್ರಹವನ್ನು 1475 ಐಸ್​ಕ್ರೀಮ್​ ಕಡ್ಡಿಗಳಿಂದ ತಯಾರಿಸಿದ ಯುವಕ; ಕರಕುಶಲ ಪ್ರತಿಭೆಗೆ ಮೆಚ್ಚುಗೆ

Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?

Published On - 12:51 pm, Fri, 9 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ