AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಕರಗಿಸಿ ಹಣವನ್ನು ನೇರ ಖಾತೆಗೆ ಜಮಾ ಮಾಡುತ್ತೆ ಗೋಲ್ಡ್ ಎಟಿಎಂ ಮೆಷಿನ್

ಹಣದ ಸಮಸ್ಯೆ ಎಂದ ಕೂಡಲೇ ಮೊದಲು ನೆನಪಾಗುವುದೇ ಈ ಚಿನ್ನ. ಹೌದು ಚಿನ್ನವನ್ನು ಬ್ಯಾಂಕ್ ಅಥವಾ ಸೊಸೈಟಿಯಲ್ಲಿ ಗಿರವಿ ಇಟ್ಟು ಹಣವನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಬ್ಯಾಂಕ್ ಗೆ ಹೋಗಿ ಎಷ್ಟೋ ಹೊತ್ತು ಕಾಯಬೇಕಾಗುತ್ತದೆ. ಆದರೆ ಚೀನಾದಲ್ಲಿ ಹೊಸ ಟೆಕ್ನಾಲಜಿಯೊಂದು ಬಂದಿದ್ದು, ಚಿನ್ನ ಗಿರವಿ ಇಟ್ಟು ಹಣ ಪಡೆಯಲು ಬ್ಯಾಂಕ್ ಗೆ ಅಲೆಯಬೇಕಾಗಿಲ್ಲ. ಈ ಮೆಷಿನ್ ಯೊಳಗೆ ಚಿನ್ನವಿಟ್ಟರೆ, ಅದಕ್ಕೆ ಸರಿಸಮಾನವಾದ ಮೊತ್ತವು ನೇರವಾಗಿ ಬ್ಯಾಂಕ್ ಖಾತೆಗೆ ಬಂದು ಸೇರುತ್ತದೆ. ಹೌದು, ಚಿನ್ನ ಕರಗಿಸಿ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಯಂತ್ರದ ವಿಡಿಯೋವೊಂದು ವೈರಲ್ ಆಗಿದೆ.

ಚಿನ್ನ ಕರಗಿಸಿ ಹಣವನ್ನು ನೇರ ಖಾತೆಗೆ ಜಮಾ ಮಾಡುತ್ತೆ ಗೋಲ್ಡ್ ಎಟಿಎಂ ಮೆಷಿನ್
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on: Apr 29, 2025 | 11:00 AM

Share

ಆಭರಣ (gold) ವೆಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಆದರೆ ಇದೀಗ ಚಿನ್ನದ ಬೆಲೆಯೂ ಗಗನಕ್ಕೇರುತ್ತಿದ್ದು ಖರೀದಿ ಮಾಡುವುದು ಬಿಡಿ, ತಮ್ಮಲ್ಲಿರುವ ಅಷ್ಟೋ ಇಷ್ಟೋ ಇರುವ ಆಭರಣಗಳನ್ನು ನೋಡಿಯೇ ಖುಷಿ ಪಡುವ ಕಾಲಕ್ಕೇ ಬಂದು ತಲುಪಿದ್ದೇವೆ. ಕಷ್ಟ ಕಾಲಕ್ಕೆ ಉಪಯೋಗಕ್ಕೇ ಬರುವ ಈ ಒಡವೆಗಳನ್ನು ಬ್ಯಾಂಕ್ ನಲ್ಲಿ ಗಿರವಿ ಹಣವನ್ನು ಪಡೆದುಕೊಳ್ಳುತ್ತೇವೆ. ಆದರೆ ಚೀನಾದಲ್ಲಿ ಬ್ಯಾಂಕ್ ಗೆಂದು ಅಲೆಯಬೇಕಿಲ್ಲ. ಬದಲಾಗಿ ಚಿನ್ನವನ್ನು ಈ ಮೆಷಿನ್ ನಲ್ಲಿ ಇಟ್ಟರೆ ಕ್ಷಣಾರ್ಧದಲ್ಲಿ ಹಣವು ನಿಮ್ಮ ಕೈ ಸೇರುತ್ತದೆ. ಚೀನಾದ ಶಾಂಘೈ (Shanghai of China) ನಲ್ಲಿ ಈ ಗೋಲ್ಡ್ ಎಟಿಎಂ ಮೆಷಿನ್ (gold atm mechine) ಬಂದಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದೆ.

Tansu Yegen ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಎಟಿಎಂ ನಂತೆಯೇ ಇರುವ ಯಂತ್ರವನ್ನು ಕಾಣಬಹುದು. ಮಹಿಳೆಯೊಬ್ಬರು ಈ ಮೆಷಿನ್ ಯೊಳಗೆ ತಮ್ಮ ಬಳಿಯಿದ್ದ ಚಿನ್ನವನ್ನು ಇಟ್ಟು ಹಣ ಪಡೆದುಕೊಳ್ಳುವುದನ್ನು ಕಾಣಬಹುದು. ಮಹಿಳೆಯೊಬ್ಬರು ಮೆಷಿನ್ ಯೊಳಗೆ ಚಿನ್ನವನ್ನು ಇಟ್ಟಿದ್ದು, ಆ ಚಿನ್ನದ ತೂಕ ಎಷ್ಟಿದೆ ಎಂದು ಅಳೆದಿದ್ದು, ಅದನ್ನು ಸ್ಕ್ರೀನ್ ಮೇಲೆ ಕಾಣಿಸುತ್ತಿದೆ. ಆ ಬಳಿಕ ಚಿನ್ನವು ಎಷ್ಟು ಬೆಲೆ ಬಾಳುತ್ತದೆಯೋ ಅಷ್ಟೇ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಇರುವೆಗಳು ದಿನಕ್ಕೆ ಇಷ್ಟು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆಯಂತೆ
Image
ಮನೆಗೆ ಬಂತು ಹೊಸ ಫ್ಯಾನ್, ಮನೆ ಮಂದಿಯ ಸಂಭ್ರಮ ನೋಡಿ
Image
ಆಟೋ ಬಳಸಿ ಗದ್ದೆ ಉಳುಮೆ ಮಾಡಿದ ವ್ಯಕ್ತಿ, ವಿಡಿಯೋ ವೈರಲ್
Image
ಇದೆಂಥಾ ಹುಚ್ಚಾಟ, ಮರದ ತುತ್ತ ತುದಿಯಲ್ಲಿ ನಿಂತು ಮಹಿಳೆಯ ಡಾನ್ಸ್

ವೈರಲ್ ವಿಡಿಯೋ ಇಲ್ಲಿದೆ ನೋಡಿ</h3

> ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗಾಗಲೇ 1.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಚಿನ್ನ ಮೆಷಿನ್ ಒಳಗೆ ಇಟ್ಟು ಹಣ ಪಡೆಯುವ ಈ ಹೊಸ ಟೆಕ್ನಾಲಜಿಗೆ ಎಲ್ಲರೂ ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು, ‘ಇದು ಬೆಸ್ಟ್ ಆವಿಷ್ಕಾರಗಳಲ್ಲಿ ಒಂದು. ಇದರಿಂದ ವ್ಯಕ್ತಿಯ ಸಮಯವು ಉಳಿಯುತ್ತದೆ, ತುರ್ತು ಪರಿಸ್ಥಿತಿಯಲ್ಲಿ ಹಣವು ಕೈ ಸೇರುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ : ಇರುವೆಗಳು ದಿನಕ್ಕೆ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತವೆ? ಇಲ್ಲಿದೆ ಮಾಹಿತಿ

ಮತ್ತೊಬ್ಬ ಬಳಕೆದಾರರು, ‘ನಿಜಕ್ಕೂ ಅದ್ಭುತ, ನಿಮ್ಮ ಚಿನ್ನವನ್ನು ಕರಗಿಸಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಚಿನ್ನದ ಎಟಿಎಂ. ಚೀನಾವು ತಂತ್ರಜ್ಞಾನದಲ್ಲಿ ಎಷ್ಟು ವೇಗ ಹಾಗೂ ಶಕ್ತಿಶಾಲಿಯಾಗಿದೆ ಎಂದು ಇದರಲ್ಲಿ ತಿಳಿಯುತ್ತದೆ. ಹಳೆಯ ಮೌಲ್ಯಯುತ ಸಂಪತ್ತನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆರೆಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿರುವುದು ಅತ್ಯದ್ಭುತವಾಗಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ವಾವ್, ಭಾರತದಲ್ಲಿ ಶೀಘ್ರದಲ್ಲೇ ಚಿನ್ನ ಕರಗಿಸಿ ಹಣ ನೀಡುವ ಚಿನ್ನದ ಎಟಿಎಂ ನೋಡುತ್ತೇವೆ ಎಂದು ಭಾವಿಸುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ